/newsfirstlive-kannada/media/media_files/2025/08/08/cm-siddaramaiah-2025-08-08-16-35-30.jpg)
ಸಿಎಂ ಸಿದ್ದರಾಮಯ್ಯ Photograph: (@siddaramaiah)
ಬೆಂಗಳೂರು: ರಾಜ್ಯ ಸರ್ಕಾರದಿಂದ (Karnataka Govt) ರೈತರಿಗೆ ಗುಡ್ನ್ಯೂಸ್ ಸಿಕ್ಕಿದೆ. ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ.. ಸಚಿವ ಸಂಪುಟದ ಉಪ ಸಮಿತಿಯು ಒಂದು ನಿರ್ಧಾರ ಮಾಡಿದೆ. ಈ ಬಾರಿ ರೈತರಿಗೆ ಸಿಹಿ ಸುದ್ದಿಕೊಡಬೇಕು ಅಂದುಕೊಂಡಿದ್ದೇವೆ. ಹೀಗಾಗಿ 18 ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (minimum support price) ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ: ರಾತ್ರೋರಾತ್ರಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮ -ಅಸಲಿಗೆ ಆಗಿದ್ದೇನು..?
ರಾಗಿ, ಭತ್ತ, ಜೋಳ, ತೊಗರಿ, ಶೇಂಗಾ, ಹತ್ತಿ ಸೇರಿದಂತೆ ಹದಿನೆಂಟು ಬೆಳೆಗಳಿಗೆ ಸರ್ಕಾರದ ಬೆಂಬಲ ಬೆಲೆ ನೀಡಲಿದೆ. ಸರ್ಕಾರದಿಂದ 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಕೊಳ್ಳಲು ತೀರ್ಮಾನ ಮಾಡಲಾಗಿದೆ. ಅದರಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ತೀರ್ಮಾನ ಮಾಡಲಾಗಿದೆ. ಎಕರೆಗೆ 10 ಕ್ವಿಂಟಾಲ್ ಗರಿಷ್ಟ 50 ಕ್ವಿಂಟಲ್ ಖರೀದಿ ಮಾಡಲಾಗುವುದು. ಕ್ವಿಂಟಾಲ್ಗೆ 4886 ರೂಪಾಯಿಗೆ ಖರೀದಿ ಮಾಡಲಾಗುವುದು ಎಂದರು.
ಇನ್ನು ಸೆಪ್ಟೆಂಬರ್ನಿಂದ ರಿಜಿಸ್ಟ್ರೇಷನ್ ಆರಂಭವಾಗಲಿದೆ. 3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕ್ವಿಂಟಾಲ್ಗೆ 2369 ರೂಪಾಯಿಗೆ ಖರೀದಿ ಮಾಡ್ತೀವಿ. ಪ್ರತಿ ರೈತರಿಂದ ಗರಿಷ್ಠ 25 ಕ್ಷಿಂಟಾಲ್ ಖರೀದಿ ಮಾಡಲಾಗುವುದು. ಹಾಗೆಯೇ 3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿಗೆ ನಿರ್ಧಾರ ಮಾಡಲಾಗಿದೆ. ಗರಿಷ್ಟ ಒಬ್ಬ ರೈತರಿಂದ 150 ಕ್ವಿಂಟಲ್ ಖರೀದಿ ಮಾಡಲಾಗುವುದು. ಪ್ರತಿ ಕ್ವಿಂಟಲ್ಗೆ 3669 ರೂಪಾಯಿಯಂತೆ ಖರೀದಿಸಲಾಗುವುದು.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಹುಲಿ ಅಸಹಜ ಸಾವು; 7 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ
ಹಾಗೆಯೇ ಸಿರಿಧಾನ್ಯವನ್ನೂ ಸರ್ಕಾರ ಖರೀದಿ ಮಾಡಲಿದೆ. ನವಣೆ, ಸಾಮೆ, ಹಾರಕ ಮುಂದಾದ ಸಿರಧಾನ್ಯ ಖರೀದಿ ಆಗಲಿದೆ. ಕ್ವಿಂಟಾಲ್ಗೆ 4886 ರೂಪಾಯಿ ಬೆಂಬಲ ಬೆಲೆ ನೀಡಲಾಗುವುದು. ಇದಕ್ಕೆ 114 ರೂಪಾಯಿ ಉತ್ತೇಜನ ಮೊತ್ತ ಸೇರಿಸಿ ಒಟ್ಟು 5 ಸಾವಿರ ಕೊಡಲಾಗುತ್ತದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ