Advertisment

ಮೈಸೂರು ದಸರಾ ಸಂಭ್ರಮ -ನಾಳೆಯಿಂದ ಅರಮನೆಯಲ್ಲಿ ಏನೆಲ್ಲ ದರ್ಬಾರ್ ನಡೆಯುತ್ತೆ..?

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಯದುವಂಶದ ಖಾಸಗಿ ದರ್ಬಾರ್​​ಗೂ ಕ್ಷಣಗಣನೆ ಆರಂಭವಾಗಿದೆ. ಅರಮನೆಯಲ್ಲಿ ಏನೆಲ್ಲ ನಡೆಯಲಿದೆ ಅನ್ನೋದ್ರ ವಿವರ ಹೀಗಿದೆ..

author-image
Ganesh Kerekuli
Mysore dasara (1)
Advertisment

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಯದುವಂಶದ ಖಾಸಗಿ ದರ್ಬಾರ್​​ಗೂ ಕ್ಷಣಗಣನೆ ಆರಂಭವಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್​ಗೆ ಭರದ ಸಿದ್ಧತೆ ನಡೆದಿದೆ. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದಾರೆ. ಅರಮನೆಯಲ್ಲಿ ಏನೆಲ್ಲ ನಡೆಯಲಿದೆ ಅನ್ನೋದ್ರ ವಿವರ ಹೀಗಿದೆ..

Advertisment

ಇದನ್ನೂ ಓದಿ:ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ.. ಪ್ರಸಿದ್ಧ ಬೇಲೂರಿನಲ್ಲಿ ನೀಚತನ

Mysore dasara

ಅರಮನೆಯಲ್ಲಿ ಖಾಸಗಿ ದರ್ಬಾರ್ 

  • ಸೆಪ್ಟೆಂಬರ್ 22 ರಂದು (ನಾಳೆ) ದಸರಾ ಉದ್ಘಾಟನೆಯ ದಿನದಂದು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. 
  • ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ
  • ಸಿಂಹಾಸನವನ್ನ ಅರಮನೆಯ ಸ್ಟ್ರಾಂಗ್ ರೂಮ್​ನಿಂದ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ
  • ಸೆಪ್ಟೆಂಬರ್ 22 ರಂದು ಬೆಳಗ್ಗೆ 5:30 ರಿಂದ 5: 45 ರೊಳಗೆ ಸಿಂಹಾಸನ ಜೋಡಣೆ ನಡೆಯಲಿದೆ.
  • ಸೆಪ್ಟೆಂಬರ್ 22 ರಂದು ಬೆಳಗ್ಗೆ 9:55 ರಿಂದ 10 : 15ರೊಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್​ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ನಡೆಯಲಿದೆ
  • ಸೆಪ್ಟೆಂಬರ್ ಬೆಳಗ್ಗೆ 11: 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿಕ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಕಳಸ ಹೊತ್ತು ಮಹಿಳೆಯರು ಬರುತ್ತಾರೆ
  • ಮಂಗಳವಾದ್ಯದೊಂದಿಗೆ ಸವಾರ್ ತೊಟ್ಟಿಯ ಬಳಿ ಪೂಜಾ ಕಂಕೈರ್ಯಗಳು ನೆರವೇರಲಿವೆ
  • ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12: 42 ರಿಂದ 12:58ರೊಳಗೆ ರತ್ನ ಖಚಿತ ಸಿಂಹಾಸನ ಅಲಂಕರಿಸಲಿದ್ದಾರೆ
  • ಸೆಪ್ಟೆಂಬರ್ 22 ರಂದು ಮಧ್ಯಾಹ್ನ 2:05ರೊಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ವಿಜಯ ಯಾತ್ರೆ ನಡೆಯಲಿದೆ
  • ಸೆಪ್ಟೆಂಬರ್ 23 ರಿಂದ 29ರವರೆಗೆ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ.
  • ಸೆಪ್ಟೆಂಬರ್ 29 ರಂದು ಬೆಳಗ್ಗೆ 10: 10 ರಿಂದ 10:30 ರೊಳಗೆ ಒಡೆಯರ್ ಇಂದ ಸರಸ್ವತಿ ಪೂಜೆ ನಡೆಯಲಿದೆ
  • ಸೆಪ್ಟೆಂಬರ್ 29 ರಂದು ರಾತ್ರಿ ಖಾಸಗಿ ದರ್ಬಾರ್ ಕೊನೆಕೊಳ್ಳಲಿದೆ, ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನಡೆಯಲಿದೆ.
  • ಆಯುಧ ಪೂಜೆಯ ದಿನದಂದು ಬೆಳಿಗ್ಗೆ 6 ಗಂಟೆಗೆ ಚಂಡಿ ಹೋಮ ಆರಂಭ ಆಗಲಿದೆ
  • ಬೆಳಗ್ಗೆ 7: 30 ರಿಂದ 7: 42 ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸ ಆಯುಧಗಳನ್ನ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನದ ಕಳುಹಿಸಿ ಪೂಜೆ ನಡೆಯಲಿದೆ.
  • 8 ರಿಂದ 8: 40 ರ ಒಳಗೆ ಕತ್ತಿ ಹಾಗೂ ಖಾಸ ಆಯುಧಗಳನ್ನ ಕಲ್ಯಾಣ ಮಂಟಪಕ್ಕೆ ಕರೆದಂತೆ ಪೂಜೆ
    10: 35 ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ
  • ಅಂದಿನ ಸಂಜೆ ಸಿಂಹ ಹಾಗೂ ಯದುವೀರ್ ತ್ರಿಷಿಕಾ ಕುಮಾರಿ ಒಡೆಯರ್ ಕಂಕಣ ವಿಸರ್ಜನೆ ನಡೆಯಲಿದೆ
  • ಅಕ್ಟೋಬರ್ 2 ರಂದು 10 ಗಂಟೆಗೆ ವಿಜಯ ದಶಮಿ ಪೂಜೆ ಪೂಜೆ ನಡೆಯಲಿದೆ
  • ಅಕ್ಟೋಬರ್ 10:55 ರಿಂದ ವಿಜಯಯಾತ್ರೆ ಆರಂಭವಾಗಲಿದೆ
  • ಎಲ್ಲಾ ಪೂಜೆ ಬಳಿಕ ಜಂಬೂಸವಾರಿಗೆ ಚಾಲನೆ ಸಿಗಲಿದೆ

ಇದನ್ನೂ ಓದಿ:ಇವತ್ತು ವಿಶ್ವಶಾಂತಿ ದಿನ.. ಹಿಂಸೆಯಿಂದಾದ ಗಾಯ ಗುಣಪಡಿಸಲು ಗುರುದೇವರಿಂದ ಅವಿಶ್ರಾಂತ ಶ್ರಮ

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yaduveer Krishnadatta Chamaraja Wadiyar Kannada News Mysore Mysore Dasara
Advertisment
Advertisment
Advertisment