Advertisment

ರಾಯಚೂರಲ್ಲಿ ದಾರುಣ ಘಟನೆ.. ಒಂದೇ ಮನೆಯ ಮೂವರು ಯುವತಿಯರು ವಿಷ ಸೇವನೆ

ಒಂದೇ ಮನೆಯ ಮೂವರು ಯುವತಿಯರು ವಿಷ ಸೇವಿಸಿ ಆ*ಹತ್ಯೆಗೆ ಯತ್ನಿಸಿರೋ ಘಟನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ನಡೆದಿದೆ. ಇವರು ಯಾಕೆ ಈ ನಿರ್ಧಾರ ತಗೊಂಡ್ರು ಅನ್ನೋದು ನಿಗೂಢವಾಗಿದೆ.

author-image
Ganesh Kerekuli
Raichuru (5)
Advertisment

ಒಂದೇ ಮನೆಯ ಮೂವರು ಯುವತಿಯರು ವಿಷ ಸೇವಿಸಿ ಆ*ಹತ್ಯೆಗೆ ಯತ್ನಿಸಿರೋ ಘಟನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ನಡೆದಿದೆ. ಇವರು ಯಾಕೆ ಈ ನಿರ್ಧಾರ ತಗೊಂಡ್ರು ಅನ್ನೋದು ಕುಟುಂಬಸ್ಥರಿಗೆ ಗೊತ್ತಿಲ್ಲ. 

Advertisment

ರೇಣುಕಾ (17), ತಿಮ್ಮವ್ವ(18) ಹಾಗೂ ಸುನಿತಾ (17) ಆ*ಹತ್ಯೆಗೆ ಯತ್ನಿಸಿದ ಯುವತಿಯರು. ವಿ*ಷ ಸೇವಿಸಿದ ನಂತರ ರೇಣುಕಾ ಬಾವಿಗೆ ಹಾರಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನಿಬ್ಬರನ್ನು ದೇವದುರ್ಗ ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ದೇವದುರ್ಗ ಠಾಣೆಯಲ್ಲಿ ಕೇಸ್​ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಶುರು ಮಾಡಿದ್ದಾರೆ. 

ಇದನ್ನೂ ಓದಿ:ವೈರಲ್ ಹುಡುಗಿಗೆ ಬ್ಯಾಡ್​ ಕಾಮೆಂಟ್ಸ್ ಕಾಟ​.. ಏನಂದ್ರು ನಿತ್ಯಶ್ರೀ..?

ತಿಮ್ಮವ್ವಳನ್ನು ಐಸಿಯುಗೆ ವೈದ್ಯರು ದಾಖಲಿಸಿದ್ದಾರೆ. 24 ಗಂಟೆಗಳ ಕಾಲ ಏನು ಹೇಳಲು ಆಗಲ್ಲ ಎಂದಿದ್ದಾರೆ. ಸೇವಿಸಿದ ವಿ*ಷ ಇಡೀ ದೇಹಕ್ಕೆ, ಮೆದುಳಿಗೆ ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುನಿತಾರ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ತಿದ್ದಾರೆ. ಸಂಬಂಧಿ ಒಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಮೂವರು ಕೆಲಸಕ್ಕೆ ಹೋಗಿದ್ದಾರೆ. ಒಂದು ಗಂಟೆ ಸುಮಾರಿಗೆ ವಿ*ಷ ಸೇವನೆ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಕೀಟನಾಶಕ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ರೇಣುಕಾ ಎಂಬ ಹುಡುಗಿ ಬಾವಿಯಲ್ಲಿ ಬಿದ್ದಿದ್ರೆ, ಸುನಿತಾ ಬಾವಿ ಪಕ್ಕದಲ್ಲಿ ನರಳಾಡುತ್ತಿದ್ದಳು. ತಿಮ್ಮವ್ವ ತಮ್ಮದೇ ಹೊಲದಲ್ಲಿ ಬಿದ್ದಿದ್ದರು ಎಂದು ತಿಮ್ಮವ್ವ ಅಕ್ಕನ ಗಂಡ ರಾಮಣ್ಣ ಹೇಳಿ ಹೇಳಿದ್ದಾರೆ. 

Advertisment

ಇದನ್ನೂ ಓದಿ:ಬೆಂಗಳೂರು ಜನರಿಗೆ ಬಿಗ್ ಶಾಕ್​.. ಇಂದಿನಿಂದ ಮೂರು ದಿನ ಕಾವೇರಿ ನೀರು ಇಲ್ಲ; ಕಾರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Raichur
Advertisment
Advertisment
Advertisment