Advertisment

ವಿರೋಧಿಗಳಿಂದ ತೊಂದರೆ.. ಈ ರಾಶಿಯವರಿಗೆ ಇಂದು ಎಚ್ಚರಿಕೆ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ರೇವತಿ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಗಿಲ್ಲಿಗೆ ಹಲ್ಲೆ ಮಾಡಿದ ರಿಷಾ ಗೌಡ.. ಬಿಗ್​ಬಾಸ್ ಮನೆಯಿಂದ ಆಚೆ ಹೋಗ್ತಾರಾ..? VIDEO

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಒಟ್ಟಾರೆ ಒಬ್ಬಂಟಿಯಾಗಿ ಕುಳಿತು ತೀರಾ ಸಂಕಟ ಪಡುತ್ತೀರಿ
  • ನಿಮಗೆ ಸಾಂತ್ವನ ಹೇಳುವವರೂ ಯಾರು ಇರುವುದಿಲ್ಲ
  • ತುಂಬಾ ಪರಿಶ್ರಮದಿಂದ ಕಟ್ಟಿಕೊಂಡ ಆಸೆಗಳು ನುಚ್ಚು ನೂರಾಗುತ್ತವೆ
  • ಇಂದು  ಮನಸ್ಸು ನಿಮ್ಮ ಮಾತನ್ನು ಕೇಳುವುದಿಲ್ಲ
  • ನೀವು ಕೂಡ ಯಾರ ಮಾತನ್ನು ಕೇಳುವುದಿಲ್ಲ
  • ವೆಂಕಟರಮಣನನ್ನು ಆರಾಧಿಸಿ 

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರು ಅತಿಥಿಗಳು  ದಿಢೀರ್ ಅಂತ ಮನೆಗೆ  ಬರಬಹುದು
  • ಮಧ್ಯರಾತ್ರಿವರೆಗೂ ಮಾತುಕತೆ ಸಂತೋಷವನ್ನು ಹಂಚಿಕೊಳ್ಳುತ್ತೀರಿ
  • ಸ್ನೇಹಿತರ ಅತಿಥಿಗಳ ಉಪಚಾರದಲ್ಲಿ ಕಾಲ ಕಳೆದು ಹೋಗುತ್ತದೆ
  • ಇಂದು ನಿಮ್ಮದೇ ಲೋಕದಲ್ಲಿ ವಿಹರಿಸುತ್ತೀರಿ
  • ಯಾವುದನ್ನೂ ಸರಿಯಾದ ಸಮಯಕ್ಕೆ ಮಾಡುವುದಕ್ಕೆ ಮನಸ್ಸಿರುವುದಿಲ್ಲ
  • ಅನ್ನಪೂರ್ಣೇಶ್ವರೀ ಆರಾಧನೆ ಮಾಡಿ
Advertisment


ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮಿಂದ ಸಾಲ ಪಡೆದವರು ಈ ದಿನ ಹಣವನ್ನು ಹಿಂದಿರುಗಿಸುವ ಸಾಧ್ಯತೆ
  • ಓದಿನ ಕೊನೆಯ ಹಂತಕ್ಕೆ ಬಂದಿರುವವರಿಗೆ ಉದ್ಯೋಗದ ಅವಕಾಶ ಸಿಗುತ್ತದೆ
  • ಇಂಜಿನಿಯರಿಂಗ್ ಹಾಗೂ ಸಿ.ಎ. ವಿದ್ಯಾರ್ಥಿಗಳಿಗೆ ಶುಭ ದಿನ
  • ವ್ಯಾಪಾರ ವಹಿವಾಟು ಮಾಡುವವರಿಗೆ ಉತ್ತಮದಿನ
  • ಸರಸ್ವತಿದೇವಿಗೆ ಪಾರಿಜಾತ ಹೂ ಅರ್ಪಿಸಿ 


ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಾರೋಗ್ಯ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ವೈದ್ಯರ ಭೇಟಿ ಮಾಡಿ
  • ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ
  • ಮಕ್ಕಳು, ಮೊಮ್ಮಕಳಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
  • ಮನೆಯಿಂದ ಹೊರಗೆ ಆನಂದದ ಸಮಯವನ್ನು ಕಳೆಯುತ್ತೀರಿ
  • ವನದುರ್ಗಾದೇವಿ ಆರಾಧನೆ ಮಾಡಿ


ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಎಲ್ಲರೊಂದಿಗೆ ಬಹಳ ತಾಳ್ಮೆಯಿಂದ ಮಾತನಾಡಿ
  • ವಾಹನ ವಿಚಾರಕ್ಕೆ ಮನಸ್ತಾಪ ಜಗಳವಾಗಬಹುದು 
  • ಇಂದು ಕುಟುಂಬದ ಮತ್ತು ಸ್ನೇಹಿತರಿಗಾಗಿ ಹಣ ಖರ್ಚಾಗುತ್ತದೆ
  • ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಸಾಧ್ಯತೆ
  • ನೆರೆಹೊರೆಯವರೊಂದಿಗೆ ಸಣ್ಣ ಕಾರಣಗಳಿಗೆ ಜಗಳ ಸಾಧ್ಯತೆ
  • ಕೆಂಪು ಪುಷ್ಪದಿಂದ ದೇವಿಯ ಆರಾಧನೆ ಮಾಡಿ
Advertisment

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ
  • ನಂತರ ಬೇಸರ ಉಂಟಾಗುವ ಸಾಧ್ಯತೆ ಇದೆ
  • ಇವತ್ತು ದಿನದ ಆರಂಭ ಚೆನ್ನಾಗಿರುತ್ತದೆ
  • ನಿಮ್ಮ ಮತ್ತು ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಸಾಧ್ಯತೆ ಇದೆ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ
  • ವಿಷ್ಣು ಸಹಸ್ರನಾಮ ಕೇಳಿ

ತುಲಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ವಿವಾದಾತ್ಮಕ ಹೇಳಿಕೆಗಳಿಂದ ಅವಮಾನಿತರಾಗುತ್ತೀರಿ
  • ಇಂದು ಸಮಾಜದ ಗಣ್ಯರ ಪ್ರೋತ್ಸಾಹ ಮಾರ್ಗದರ್ಶನ ದೊರಕುತ್ತದೆ
  • ಕಚೇರಿಯ ಕೆಲಸಗಳನ್ನು ಮಧ್ಯಾಹ್ನದ ಒಳಗೆ ಪೂರೈಸಿಕೊಳ್ಳಿ
  • ಸಾಮಾಜಿಕವಾಗಿ ನಿಮ್ಮ ಆಸೆಗಳು ಈಡೇರುತ್ತವೆ
  • ಲಕ್ಷ್ಮೀ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣದ ವಿಚಾರ ಬಂದಾಗ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ
  • ಚಿತ್ತಚಾಂಚಲ್ಯ ಬಿಟ್ಟು ನಿಮ್ಮ ಕೆಲಸಗಳ ಕಡೆಗೆ ಗಮನ ಕೊಡಿ
  • ಇಂದು ಮಿಶ್ರಫಲ ಸಿಗುವ  ದಿನ
  • ನಿಮ್ಮ ಎಲ್ಲಾ ಕಾರ್ಯಗಳನ್ನು ಧೈರ್ಯ ದಕ್ಷತೆ ಮತ್ತು ಪ್ರಾಮಾಣಿಕತೆಗಳಿಂದ ಮಾಡಿ
  • ಇಂದು ಯಾವುದೇ ರೀತಿಯ ಸಾಲ ಮಾಡುವುದು ಬೇಡ
  • ದುರ್ಗಾ ಸಪ್ತಶತಿ ಪಾರಾಯಣ ಮಾಡಿ
Advertisment

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣ ಖರ್ಚು ಮಾಡಲು ಮನಸ್ಸಿರುವುದಿಲ್ಲ ಆದರೂ ಹಣ ಖರ್ಚಾಗುತ್ತದೆ
  •  ಕಷ್ಟಕರವಾದ ಕೆಲಸಗಳು ಸ್ನೇಹಿತರ ಸಹಾಯದಿಂದ ಸುಗಮವಾಗಿ ನೆರವೇರುತ್ತವೆ
  • ವಿಶೇಷ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಯೋಗವಿದೆ
  • ಇಂದು ಆದಾಯಕ್ಕಿಂತ ಖರ್ಚು ಹೆಚ್ಚು
  • ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವಿದೆ
  • ದೇವಿಯ ಆರಾಧನೆ ಮಾಡಿ ಮೊಸರನ್ನವನ್ನ ಅರ್ಪಿಸಿ

ಮಕರ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮನ್ನು ನೀವು ಹೆಚ್ಚು ಸಮರ್ಥನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ 
  • ಗಂಭೀರ ಚಿಂತನೆ, ತಾಳ್ಮೆಯಿಂದ ಮಾಡಿದ ಕೆಲಸಗಳು ಪರಿಪೂರ್ಣವಾಗಲಿದೆ
  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
  • ಸ್ನೇಹಿತರು ಬಂಧುಗಳು ಗಣ್ಯರು ನಿಮಗೆ ಅನುಕೂಲ ಮಾಡಲು ಚಿಂತನೆ ಮಾಡ್ತಾರೆ
  • ಭೂ ವ್ಯವಹಾರ ಮಾಡಲು ಉತ್ತಮ ದಿನ
  • ಗಣಪತಿ ಆರಾಧನೆ ಮಾಡಿ

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಅಂದುಕೊಂಡ ಕೆಲಸ ಆಗಬೇಕಾದರೆ ಕಷ್ಟವಿದೆ
  • ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶವಿದೆ
  • ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ ದಾರಿಯಲ್ಲಿ ಜಗಳವಾಗುವ ಸಾಧ್ಯತೆ
  • ಕುಟುಂಬ ಸದಸ್ಯರ ಜೊತೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು
  • ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಬರಬಹುದು
  • ಭದ್ರಕಾಳಿಯ ಆರಾಧನೆ ಮಾಡಿ
Advertisment

ಮೀನ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು ಎಚ್ಚರಿಕೆ ಇರಲಿ
  • ಇಂದು ಸಾಮಾಜಿಕ ವಲಯದಲ್ಲಿ ಹೆಸರು ಮಾಡುವ ಯೋಗವಿದೆ
  • ವಿರೋಧಿಗಳಿಂದ ಮಾನಸಿಕ ತಳಮಳ ಉಂಟಾಗಬಹುದು
  • ಅಗತ್ಯವಿರುವವರಿಗೆ ಬಂಧುಗಳಿಂದ ಸಹಾಯ ಸಿಗುತ್ತದೆ
  • ಇವತ್ತಿನ ದಿನ ಬಹಳ ಉತ್ತಮವಾಗಿರುತ್ತದೆ
  • ಹಲವಾರು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಕ್ಕೆ ಹೊಸ ರೂಪ ಬರುತ್ತದೆ
  • ದುರ್ಗಾದೇವಿಯ 32 ನಾಮಾವಳಿ ಪಠಿಸಿ

ಇದನ್ನೂ ಓದಿ: ಮತ್ತೆ ಜೈಲು ಸೇರಿದ ಬಳಿಕ ಮೊದಲ ಬಾರಿ ಮಾತುಕತೆ.. ಕೋರ್ಟ್​​ನಲ್ಲಿ ದರ್ಶನ್​​ಗೆ ಪವಿತ್ರ ಗೌಡ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment