Advertisment

ನೀವು ಅಂದ್ಕೊಂಡಿದ್ದು ಮಾತಾಡಲು ಒಳ್ಳೆಯ ದಿನ -ಯಾರಿಗೆ ಶುಭ, ಅಶುಭ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ..

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ನಾರಾಯಣ ಹೆಲ್ತ್ ಕೇರ್ ಲಗ್ಗೆ; UK ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಜತೆ ಕೈಜೋಡಿಸಿ ವಿಶ್ವಮಟ್ಟದಲ್ಲಿ ಸೇವೆ

ಮೇಷ 

RASHI_BHAVISHA_MESHA

  • ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
  • ಈ ದಿನ ಪ್ರೇಮಿಗಳಿಗೆ ಸಮಸ್ಯೆಯಾಗಬಹುದು
  • ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
  • ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
  • ಈಶ್ವರನ ಆರಾಧನೆ ಮಾಡಿ

ವೃಷಭ

RASHI_BHAVISHA_VRSHABA

  • ಕುಟುಂಬದ ಸದಸ್ಯರೊಂದಿಗೆ ಹಲವಾರು ವಿಚಾರ ಚರ್ಚೆಗೆ ಉತ್ತಮ ದಿನ
  • ನಿಮ್ಮ ಮನೆಯ ವಿಚಾರಗಳನ್ನು ಹೊರಗೆ ತರದೆ ನಿಮ್ಮ ಕುಟುಂಬದೊಳಗೆ ಬಗೆಹರಿಸಿಕೊಳ್ಳಿ 
  • ಮನೆ ವಿಚಾರ ಹೊರಗಡೆ ಬಂದರೆ ಅವಮಾನ ಸಾಧ್ಯತೆ 
  • ಸಗಟು ವ್ಯಾಪಾರಿಗಳಿಗೆ ಉತ್ತಮ ದಿನ
  • ಮದುವೆಯ ವಿಚಾರ ಪ್ರಸ್ತಾಪ ಆಗುವ ದಿನ
  • ಮನೆ ದೇವರನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ 

RASHI_BHAVISHA_MITHUNA

  • ಕಲಾಕಾರರಿಗೆ ಬಹಳ ಪ್ರಗತಿದಾಯಕ ದಿನ
  • ಯುವಕರು ತಮ್ಮ ಕಲೆಗೆ ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
  • ಯುವತಿಯರು ಪರೀಕ್ಷೆಗೆ ಒಳಗಾದ ನಂತರ ಶುಭ ಸೂಚನೆ ಸಿಗುತ್ತದೆ
  • ನಿಮ್ಮ ಕಲೆಗೆ ಹೆಚ್ಚು ಮಾನ್ಯತೆ ಗೌರವ ಸಿಗುತ್ತದೆ
  • ಕೋರ್ಟು ಕಚೇರಿಯ ಕೆಲಸ ಇದ್ದವರಿಗೆ ಶುಭವಿದೆ
  •  ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ 

RASHI_BHAVISHA_KATAKA

  • ವಾದ-ವಿವಾದಗಳಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ
  • ವೈಯ್ಯಕ್ತಿಕ ವಿಚಾರಗಳಿಂದ ಅಪಮಾನವಾಗುತ್ತದೆ
  • ವಿನಾಕಾರಣ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ
  • ರಾತ್ರಿ ವೇಳೆ ದೂರದ ಊರಿನಿಂದ ನಿಮಗೆ ಶುಭ ಸುದ್ದಿ ಬರುತ್ತದೆ
  •  ನಿಮ್ಮ ಕುಲದೇವತೆಯನ್ನ ಆರಾಧನೆ ಮಾಡಿ 

ಸಿಂಹ

RASHI_BHAVISHA_SIMHA

  • ನಿಮ್ಮ ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
  • ಎಲ್ಲರಿಂದ ಸಂಪೂರ್ಣ ಸಹಕಾರ ದೊರೆಯುವ ಸಮಯ
  • ಇದ್ದಕ್ಕಿದ್ದಂತೆ ಆರ್ಥಿಕ ಬದಲಾವಣೆ ಕಾಣುವ ದಿನ
  • ಹಣವನ್ನು ಠೇವಣಿ ಹೂಡಿಕೆ ಮಾಡಲು ಉತ್ತಮ ದಿನ
  • ಅಷ್ಟಲಕ್ಷ್ಮಿಯರನ್ನ ಪ್ರಾರ್ಥನೆ ಮಾಡಿ
Advertisment

ಕನ್ಯಾ 

RASHI_BHAVISHA_KANYA

  • ಸಣ್ಣ ಕೆಲಸಗಳಿಗೆ ಹೆಚ್ಚು ಆಸಕ್ತಿ ತೋರಿಸಿ ಸಮಯ ವ್ಯರ್ಥವಾಗುವ ಸಾಧ್ಯತೆ 
  • ವ್ಯಾಪಾರಿಗಳಿಗೆ ಗ್ರಾಹಕರ ವರ್ತನೆಯಿಂದ ಬೇಸರವಾಗುತ್ತದೆ
  • ಭವಿಷ್ಯದ ವಿಚಾರದಲ್ಲಿ ಆರ್ಥಿಕ ಚಿಂತನೆ ಕಾಡುತ್ತದೆ
  • ದೊಡ್ಡ ವ್ಯಕ್ತಿಗಳ ಸಲಹೆ ಸೂಚನೆ ಕೊಡುತ್ತಾರೆ
  • ನೀವು ಸಲಹೆ ಸೂಚನೆ  ತಿರಸ್ಕಾರ ಮಾಡುವ ಸಾಧ್ಯತೆ ಇದೆ
  • ಚಕ್ರರೂಪಿ ಸುದರ್ಶನನ್ನು ಪ್ರಾರ್ಥನೆ ಮಾಡಿ

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಉತ್ತಮ ದಿನ
  • ಯಾರನ್ನಾದರು ಕ್ಷಮೆ ಕೇಳಬೇಕು ಎಂದಿದ್ದರೆ ಇಂದು ಆ ಕೆಲಸ ಮಾಡಿ ಕ್ಷಮಿಸುತ್ತಾರೆ
  • ನಿಮ್ಮ ಮನಸ್ಸನ್ನು ಸರಿಪಡಿಸಿಕೊಂಡರೆ ಎಲ್ಲ ರೀತಿಯಲ್ಲಿ ಅನುಕೂಲ ಆಗುತ್ತದೆ
  • ಮಹಾವಿಷ್ಣುವನ್ನು ಸ್ಮರಣೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಕೆಲಸದಲ್ಲಿ ಬದಲಾವಣೆಯ ಅಲೆಯಿಂದ ಮಾನಸಿಕ ತೊಳಲಾಟ ಕಾಡುತ್ತದೆ
  • ಬೆಲೆ ಬಾಳುವ ವಸ್ತು ಖರೀದಿ ಸಾಧ್ಯತೆ ಆದರೆ ಜಾಗೃತೆ ಇರಲಿ
  • ವೈವಾಹಿಕ ವಿಚಾದಲ್ಲಿ ಒತ್ತಡ ಅನುಭವಿಸುವ ದಿನ 
  • ಮದುವೆಯ ಬಗ್ಗೆ ಹೆಚ್ಚು ಚಿಂತಿಸಿ ಗೊಂದಲಕ್ಕೆ ಒಳಗಾಗುತ್ತೀರಿ 
  • ಕುಲದೇವತಾ ಪ್ರಾರ್ಥನೆ ಮಾಡಿ
Advertisment

ಧನಸ್ಸು 

RASHI_BHAVISHA_DHANASU

  • ಸಮಾಜದಲ್ಲಿ ಗಣ್ಯವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
  • ಮಹತ್ವದ ವಿಚಾರಗಳಿದ್ದರೆ ಸಂಬಂಧಿಸಿದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಿರಿ
  • ನಿಮ್ಮ ಯಶಸ್ಸಿನ ಬಗ್ಗೆ ನಿಮಗೆ ತೃಪ್ತಿ ಸಿಗುವ ದಿನ
  • ಕುಟುಂಬದ ಸದಸ್ಯರು ಸ್ನೇಹಿತರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ
  • ನಿಮ್ಮ ಕುಲದೇವರ ಆರಾಧನೆ ಮಾಡಿ


ಮಕರ

RASHI_BHAVISHA_MAKARA

  • ನಿಮ್ಮ ಮನೆಯ ಸದಸ್ಯರಿಗೆ ಅನಾರೋಗ್ಯದ ಸಾಧ್ಯತೆ
  • ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ
  • ನಿಮಗೆ ಆಗದೆ ಇರುವವರು ನಿಮ್ಮ ಬಗ್ಗೆ ತಪ್ಪಾಗಿ ಪ್ರಚಾರ ಸಾಧ್ಯತೆ
  • ಆದಾಯ ಕಡಿಮೆಯಾಗಿ ಆತ್ಮವಿಶ್ವಾಸ ಕೊರತೆಯಾಗುವ ಸಾಧ್ಯತೆ
  •  ದುರ್ಗಾದೇವಿಯ ಆರಾಧನೆ ಮಾಡಿ

ಕುಂಭ 

RASHI_BHAVISHA_KUMBHA

  • ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ
  • ಇಂದು ವಿನಾಕಾರಣ ಕೋಪ ಮಾಡಿಕೊಳ್ಳುವುದು ಬೇಡ
  • ಸಾಲ ಮಾಡಿದ್ದರೆ ಅದನ್ನ ಇಂದು ಹಿಂದಿರುಗಿಸುವ ಪ್ರಯತ್ನ ಮಾಡಿ
  • ಜನರ ನಿರೀಕ್ಷೆಗೆ ತಕ್ಕಂತೆ ಬದಲಾಗಿ ನಿಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟವಾಗಿರಿ
  •  ಶ್ರೀ ಆಂಜನೇಯಸ್ವಾಮಿ ದರ್ಶನ ಮಾಡಿ
Advertisment

ಮೀನ 

RASHI_BHAVISHA_MEENA

  • ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
  • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಗಣಪತಿಯ ಪ್ರಾರ್ಥನೆ ಮಾಡಿ
  • ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
  • ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
  • ಈಶ್ವರನ ಆರಾಧನೆ ಮಾಡಿ

ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಗಳು : ಬುದ್ದಿವಾದ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment