Advertisment

Today horoscope: ಪ್ರೇಮಿಗಳಿಗೆ ಸಂಕಷ್ಟ.. ನಿಮ್ಮದಲ್ಲದ ಕೆಲಸಕ್ಕೆ ಸಹಾಯ ಬೇಡ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣಪಕ್ಷ, ತೃತೀಯಾ ತಿಥಿ(ತದಿಗೆ), ಮೃಗಶಿರಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಇಂಡಿಯಾ A ತಂಡದಲ್ಲಿ ರೋಹಿತ್-ಕೊಹ್ಲಿ​ಗೆ ಸ್ಥಾನ ಇಲ್ಲ.. ಅರ್ಥವೇ ಆಗದ ಬಿಸಿಸಿಐ ನಡೆ..!

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮದಲ್ಲದಿರುವ ಕೆಲಸಕ್ಕೆ ಸಹಾಯ ಮಾಡಲು ಹೋಗಬೇಡಿ
  • ಇಂದು ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ
  • ಕಬ್ಬಿಣದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
  • ಈ ದಿನ ಹಿರಿಯರನ್ನ ಗೌರವಿಸಿ ಆಶೀರ್ವಾದವನ್ನು ಪಡೆಯಿರಿ
  • ಹಣದ ನಿರ್ವಹಣೆಯಲ್ಲಿ ಯಶಸ್ಸು ಕಾಣುತ್ತೀರಿ
  • ರಂಗಭೂಮಿ ಕಲಾವಿದರಿಗೆ ಗೌರವ ಸನ್ಮಾನಗಳು ಸಿಗುವ ದಿನ
  • ಶನೇಶ್ಚರನನ್ನು ಪ್ರಾರ್ಥಿಸಿ


ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮೊಬೈಲ್​ ಬಳಸಿ ವಾಹನ ಚಲಾಯಿಸುವಾಗ ಅವಘಡ ಆಗಬಹುದು, ಎಚ್ಚರಿಕೆ ಇರಲಿ
  • ನಿಮ್ಮ ಆರೋಗ್ಯದ ಏರುಪೇರಿನಿಂದಾಗಿ ಮನೆಯವರ ನೆಮ್ಮದಿ ಕೆಡಬಹುದು
  • ಕಷ್ಟ ನಿರ್ಮೂಲ ಮಾಡಲು ದೇವರ ಧ್ಯಾನ ಮಾಡಿ 
  • ಮರಗೆಲಸ ಮಾಡುವವರಿಗೆ ಉತ್ತಮ ದಿನ
  • ಯಾವುದೇ ರೀತಿಯ ಭಯ ತಾತ್ಸಾರ ಬೇಡ
  • ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
Advertisment


ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದಾಯಾದಿಗಳ ಮಾತಿನಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಹಳೆಯ ಜಗಳ, ವಿವಾದಗಳು ಇಂದು ರಾಜಿಯಾಗಬಹುದು
  • ಹೊಸ ಸಂಬಂಧಕ್ಕೆ ಒಳ್ಳೆಯ ದಿನ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ
  • ಮನೆಯಲ್ಲಿ ಉತ್ತಮ ವಾತಾವರಣ
  • ನಿಮ್ಮ ವಿವಾಹದ ಮಾತುಕತೆ ಸಾಧ್ಯತೆ
  • ಮನಸ್ಸಿಗೆ ಸಂಪೂರ್ಣ ನೆಮ್ಮದಿಯ ದಿನ
  • ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಬಹಳ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ
  • ಪ್ರಯಾಣಕ್ಕೆ ಅಡ್ಡಿ ಉಂಟಾಗಿ ಮುಂದೂಡಲ್ಪಡಬಹುದು
  • ಮನೆಯಿಂದ ಹೊರಡುವಾಗ ಜಗಳವಾಗುವ ಸಾಧ್ಯತೆ ಇದೆ
  • ವಿದ್ಯಾರ್ಥಿಗಳಿಗೆ ಶುಭವಾದ ದಿನ
  • ಪ್ರೇಮಿಗಳಿಗೆ ಸಮಸ್ಯೆಯಾಗುವ ದಿನ
  • ಗಂಡ ಹೆಂಡತಿ ನಡುವೆ ಜಗಳ ಮನಸ್ತಾಪ ಏರ್ಪಡುವ ಸಾಧ್ಯತೆ
  • ಜ್ವರದ ತಾಪವೂ ನಿಮ್ಮನ್ನು ಕಾಡಬಹುದು
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ


ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಸ್ಥಿರಾಸ್ತಿ, ಭೂಮಿ, ವಾಹನ, ಬೆಲೆ ಬಾಳುವ ಪದಾರ್ಥಗಳ ಖರೀದಿಯಲ್ಲಿ ಮೋಸ 
  • ಹೆಚ್ಚು ಹಣ ಕೊಟ್ಟು ಖರೀದಿಸಿದ ವಸ್ತು ರಿಪೇರಿಗೆ ಬರಬಹುದು
  • ಆಲಸ್ಯ ಮತ್ತು ಅತಿಯಾದ ನಂಬಿಕೆಯಿಂದ ಮೋಸ ಸಾಧ್ಯತೆ
  • ಸಂಬಂಧಪಟ್ಟವರ ಜೊತೆ ಜಗಳವಾಗಬಹುದು
  • ಕುಬೇರ ಲಕ್ಷ್ಮಿಯನ್ನು ಆರಾಧಿಸಿ
Advertisment

ಕನ್ಯಾ

ಪ್ರೇಮಿಗಳಿಗೆ ಶುಭ, ಮನೆ, ಜಮೀನು ಮಾರುವವರಿಗೆ ಲಾಭ ಸಿಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಇರಲಿದೆ
  • ವಿದ್ಯಾರ್ಥಿಗಳಿಗೆ ಓದು ಬರಹದ ಒತ್ತಡ ಹೆಚ್ಚಾಗುವುದರಿಂದ ನಿದ್ರಾಭಂಗ ಸಾಧ್ಯತೆ
  • ಆರೋಗ್ಯದಲ್ಲಿ ಏರುಪೇರು, ಬುದ್ಧಿ ಚಾಂಚಲ್ಯ, ಮಂದತ್ವ ಕಾಡಬಹುದು
  • ಇಂದು ವಿದ್ಯಾರ್ಥಿಗಳಿಗೆ ಅಶುಭ ಫಲ 
  • ಕೋರ್ಟ್ ಕಛೇರಿಗಳಲ್ಲಿ ಜಯ ಸಿಗಲಿದೆ
  • ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆಯಿದೆ ಎಚ್ಚರಿಕೆ ಇರಲಿ
  • ಧೂಮಾವತಿಯನ್ನು ಪ್ರಾರ್ಥಿಸಿ


ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉದ್ಯೋಗದಲ್ಲಿ ಅನುಕೂಲ, ಸಾಲದಿಂದ ಮುಕ್ತಿ ಸಾಧ್ಯತೆ
  • ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಗುರುಗಳಿಂದ ಮಾರ್ಗದರ್ಶನ ಪಡೆಯಿರಿ
  • ಶತ್ರುಗಳನ್ನು ತಡೆಯಲು ನಿಮಗೆ ಮಾತಿನ ಅಸ್ತ್ರಗಳು, ಉಪಾಯಗಳು ದೊರೆಯುತ್ತವೆ 
  • ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು 
  • ಮನೆಗೆ ಹೊಸ ವಸ್ತು ಖರೀದಿಸುತ್ತೀರಿ ಆದ್ರೆ ಖರೀದಿಸಿದ ವಸ್ತುವಿನಿಂದ ನಷ್ಟ ಸಾಧ್ಯತೆ
  • ಭೈರವನನ್ನು ಪ್ರಾರ್ಥಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ಅಥವಾ ತಮಗಿಂತ ಚಿಕ್ಕವರಿಂದ ತುಂಬಾ ಕಿರಿಕಿರಿಯಾಗಬಹುದು
  • ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ 
  • ಅಧಿಕ ಖರ್ಚು ವೆಚ್ಚದಿಂದಾಗಿ ತಾಳ್ಮೆ ಕೆಡುತ್ತದೆ 
  • ಕೆಲಸ ಕಾರ್ಯಗಳಲ್ಲಿ ವಿಘ್ನ ಆಗಬಹುದು
  • ಸಾಮಾಜಿಕ ಜನಪ್ರಿಯತೆಯಲ್ಲಿ ಅನುಮಾನ, ಅವಮಾನ ಹುಟ್ಟಿಕೊಳ್ಳುತ್ತವೆ
  •  ಭುವನೇಶ್ವರಿಯನ್ನು ಆರಾಧಿಸಿ
Advertisment

ಧನುಸ್

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಾನಸಿಕವಾಗಿ ತುಂಬಾ ಕಿರಿಕಿರಿ ಸಾಧ್ಯತೆ
  • ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯುತ್ತದೆ
  • ಸರ್ಕಾರಿ ಕೆಲಸಗಳು ಮಂದಗತಿಯಿಂದ ನಡೆಯಲಿದೆ
  • ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ ದೊರೆಯುತ್ತದೆ
  • ಸರ್ಕಾರಿ ನೌಕರರಿಗೆ ಒತ್ತಡ, ಹಿತಶತ್ರುಗಳ ಕಾಟ ಹೆಚ್ಚಾಗಿರುತ್ತದೆ 
  • ಅಘೋರ ರುದ್ರನನ್ನು ಪ್ರಾರ್ಥನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಶುಭ ಕಾರ್ಯಗಳನ್ನು ಮುಂದೂಡುವ ಪ್ರಸಂಗ ಬರಬಹುದು
  • ವ್ಯಾಪಾರದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ
  • ಅನಾರೋಗ್ಯ, ಕಲುಷಿತ ವಾತಾವರಣ, ಮಕ್ಕಳಿಂದ ಬೇಸರ ಸಾಧ್ಯತೆ
  • ನಿಮ್ಮ ಜಾಣ್ಮೆ, ಬುದ್ಧಿವಂತಿಕೆಗಳು ಕೆಲಸಕ್ಕೆ ಬರುವುದಿಲ್ಲ
  • ಈ ದಿನ ಬಂದದ್ದನ್ನು ನೀವು ಅನುಭವಿಸಲೇ ಬೇಕಾಗುತ್ತದೆ 
  • ಸ್ವಯಂವರ ಪಾರ್ವತಿ ದೇವಿಯನ್ನು ಆರಾಧನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಲಬಾಧೆಯಿಂದ ಮುಕ್ತಿ ಸಾಧ್ಯತೆ
  • ಹಣದ ವಿಚಾರಕ್ಕಾಗಿ ಕುಟುಂಬದಲ್ಲಿ ವಾಗ್ಯುದ್ಧ ನಡೆಯಬಹುದು
  • ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬಹುದು
  • ಇಂದು ಅನಿರೀಕ್ಷಿತವಾಗಿ ಹಣ ಬರುತ್ತದೆ
  • ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಕುಟುಂಬದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ
  • ಮಾತು ಮಿತವಾಗಿದ್ದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
Advertisment

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಚಿಕ್ಕಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ 
  • ಹಿರಿಯರ, ಗುರುಗಳ ಕೋಪಕ್ಕೆ ಒಳಗಾಗುವ ಸಾಧ್ಯತೆ ಇದೆ
  • ಇಂದು ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
  • ನೀವು ಸಂಕಲ್ಪ ಮಾಡಿದ ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ
  • ದಿನದ ಕೊನೆಯಲ್ಲಿ ಶುಭ ಫಲವಿದೆ
  • ಅರುಣಾಚಲೇಶ್ವರನನ್ನು ಪ್ರಾರ್ಥಿಸಿ

ಇದನ್ನೂ ಓದಿ:ಕಲ್ಲು ತೂರಾಟ, ಲಘು ಲಾಠಿ ಪ್ರಹಾರ.. ರೈತರ ಪ್ರತಿಭಟನೆಯ 5 ಬಿಗ್​ ಅಪ್​​ಡೇಟ್ಸ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment