/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಶಿರಸಿಯಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ಒಂದು ಅನಾಥಾಶ್ರಮ.. ಇವರ ಸೇವೆಗೆ ಸೆಲ್ಯೂಟ್ ಹೊಡೆಯಲೇಬೇಕು..!
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
- ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
- ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
- ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಿಗಲಿದೆ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
- ಇಂದು ಸರಿಯಾದ ಸಾತ್ವಿಕವಾದ ಆಹಾರವನ್ನು ಸೇವಿಸಿ
- ಶ್ರೀಸೂಕ್ತ ಹೋಮ ಮಾಡಿಸಿ ಒಳ್ಳೆದಾಗುತ್ತದೆ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದಿನ ನಿಮ್ಮ ದಿನಚರಿ ಶಿಸ್ತುಬಧ್ಧವಾಗಿ ಆರಂಭವಾಗುತ್ತದೆ
- ವಿದ್ಯಾರ್ಥಿಗಳಿಗೆ ತುಂಬಾ ಆತಂಕ ಉಂಟಾಗುವ ದಿನ
- ಸಂಜೆ ವೇಳೆಗೆ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
- ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
- ಇಂದು ದೇವರ ದರ್ಶನ ಪಡೆಯುತ್ತೀರಿ
- ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಸಾಧ್ಯತೆ
- ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
- ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
- ಜೀವನಕ್ಕಿಂತ ಜೀವಮುಖ್ಯ ಎಂದು ತಿಳಿದು ಕೆಲಸ ಮಾಡಿ
- ಈಶ್ವರನಿಗೆ ಬಿಲ್ವಪತ್ರೆ ಸಮರ್ಪಣೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
- ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
- ತಾವು ಪರಿಶ್ರಮದಿಂದ ಕಲೆಹಾಕಿದ ವಿಷಯಕ್ಕೆ ಮಾನ್ಯತೆ ಗೌರವ ದೊರೆಯುವ ದಿನ
- ನಿಮ್ಮ ಬೇಜವಾಬ್ದಾರಿಯಿಂದ ವಾಹನ ಅಪಘಾತವಾಗುವ ಸಾಧ್ಯತೆ ಎಚ್ಚರಿಕೆ ಇರಲಿ
- ಮೃತ್ಯುಂಜಯನನ್ನು ಆರಾಧಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ
- ವಿದೇಶದಲ್ಲಿ ಕೆಲಸ ಮಾಡುವವರಿಗೆ ತಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಬಹುದು
- ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಇಲ್ಲದಿದ್ದರೆ ತೊಂದರೆಯಾಗಬಹುದು
- ಯಾವುದೇ ವಿಚಾರವನ್ನು ಹೆಚ್ಚಿಗೆ ಚರ್ಚೆ ಮಾಡದಿದ್ದರೆ ಉತ್ತಮ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
- ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ ಸ್ಥಾನಬಲ ದೊರೆಯುತ್ತದೆ
- ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕಾಣುತ್ತದೆ
- ಆದರೆ ಯಾವ ಕೆಲಸವೂ ಆಗಿರುವುದಿಲ್ಲ ಎಚ್ಚರಿಕೆವಹಿಸಿ
- ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
- ಮೇಧಾ ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ತಾಳ್ಮೆಯಿಂದಿರಿ ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
- ಆದರೆ ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
- ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ
- ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಸಾಧ್ಯತೆ
- ನಿಮ್ಮ ಕೋಪದಿಂದ ಮನಸ್ತಾಪಗಳಾಗಬಹುದು
- ಭಗವಂತನ ದಶಾವತಾರ ಸ್ಮರಣೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಸಾಧ್ಯತೆ
- ನೀವೇ ಯಾವುದೇ ಆರೈಕೆ ಮಾಡಿಕೊಳ್ಳದೆ ಸರಿಯಾದ ವೈದ್ಯರ ಸಲಹೆ ಪಡೆಯಿರಿ
- ನಿದ್ರಾಹೀನತೆ ಮತ್ತು ನರಗಳ ನೋವು ನಿಮ್ಮನ್ನ ಕಾಡಬಹುದು
- ಇಂದು ನಿಮ್ಮ ಮಾತು ಮೃದುವಾಗಿರಲಿ
- ಪ್ರೇಮಿಗಳು ಪರಸ್ಪರ ಅಸಹನೆಯಿಂದ ಜಗಳವಾಗಬಹುದು ಎಚ್ಚರಿಕೆ
- ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಆಗಬಹುದು
- ಪ್ರೇಮಿಗಳ ಮದುವೆ ನಿಶ್ಚಯವಾಗಲಿದೆ
- ವೇಣುಗೋಪಾಲನನ್ನು ಪ್ರಾರ್ಥನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಉದ್ಯೋಗ ಬದಲಾಗಬಹುದು, ಬಡ್ತಿ ದೊರೆಯಬಹುದು, ಸಂಬಳ ಹೆಚ್ಚಾಗಬಹುದು
- ಹೊಸ ಮನೆ ಕಟ್ಟುವ ಯೋಗ ಒದಗಿ ಬರಲಿದೆ
- ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುತ್ತೀರಿ
- ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾಣೆಗಳಾಗುವ ಸಾಧ್ಯತೆ
- ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥವಾಗಿರುತ್ತೀರಿ
- ಮಾತಾ ಪಿತೃಗಳನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ಹಂಬಲಿಸುತ್ತೀರಿ
- ಶ್ರೀ ಕೃಷ್ಣನ ಆರಾಧನೆಯಿಂದ ಶುಭಯೋಗ ಲಭಿಸುವ ಸಾಧ್ಯತೆ ಇದೆ
- ಹಾಸ್ಯ ಕಲಾವಿದರು ಮಿಮಿಕ್ರಿ ಮಾಡುವ ಕಲಾವಿದವರಿಗೆ ಶುಭದಿನ
- ನಿಮ್ಮ ಮನೆಗೆ ಬಂಧುಗಳ ಆಗಮನ ಆಗಬಹುದು
- ಗಂಡ-ಹೆಂಡತಿಯ ನಡುವೆ ಮನಸ್ತಾಪ ಮೂಡಬಹುದು
- ನಂದೀಶ್ವರನನ್ನು ಪ್ರ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಂತ ಮನೆ ಕಟ್ಟುವ ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
- ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
- ಈ ದಿನ ತುಂಬಾ ಸಂತೋಷದ ವಾತಾವರಣ ಇರಲಿದೆ
- ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು ಎಚ್ಚರಿಕೆ ಇರಲಿ
- ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ ಸಾಧ್ಯತೆ
- ಭೂದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ನಿಮಗೆ ಆಲಸ್ಯ ಸೋಮಾರಿತನ ಕಾಡಬಹುದು
- ಆಲಸ್ಯವೆಂಬುದು ಮನುಷ್ಯನ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
- ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ತೋರಿಸಬೇಡಿ
- ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
- ಯಾವುದೋ ಕೀಟ ಕಚ್ಚಿ ಅಲರ್ಜಿ ನಿಮ್ಮನ್ನ ಕಾಡಬಹುದು ಜಾಗ್ರತೆ ಇರಲಿ
- ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ
ಇದನ್ನೂ ಓದಿ:‘ತಾಯಿ ತಿಮ್ಮಕ್ಕ..’ ಕವಿತೆ ಮೂಲಕ ನಮನ ಸಲ್ಲಿಸಿದ ಸಾಹಿತಿ ವಿ.ನಾಗೇಂದ್ರ ಪ್ರಸಾದ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us