Advertisment

Horoscope: ಆದಾಯಕ್ಕಿಂತ ಖರ್ಚು ಅಧಿಕ, ಪ್ರೇಮಿಗಳಿಗೆ ಶುಭ ದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರತ್ಯೇಕ ಸಭೆ: 2 ಸಮುದಾಯಗಳ ನಾಯಕರ ರಹಸ್ಯ ಮಾತುಕತೆ ಬಗ್ಗೆ ಚರ್ಚೆ

ಮೇಷ

  • ನಿಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಯೋಜನೆಯಂತೆ ಮಾಡಿ
  • ವಿದ್ಯಾರ್ಥಿಗಳಿಗೆ ಶುಭದಿನ
  • ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
  • ಈ ದಿನ ಉತ್ತಮ ಲಾಭವಿದೆ
  • ಕುಟುಂಬದ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗ ಅಥವಾ ವೃತ್ತಿಯಲ್ಲಿ ಆತಂಕ ಆಗಬಹುದು
  • ಬಂಧುಗಳಿಂದ ಟೀಕೆಗೆ ಒಳಗಾಗುತ್ತೀರಿ
  • ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಎಚ್ಚರಿಕೆವಹಿಸಿ
  • ಹಣಕ್ಕೆ ತೊಂದರೆಯಿಲ್ಲ ಅಧಿಕ ಖರ್ಚು
  • ಆತುರದ ಕ್ರಮದಿಂದ ನಷ್ಟ ಉಂಟಾಗಬಹುದು
  • ಸಮಯದ ಸದುಪಯೋಗವಾಗಲಿ
  • ಬಟ್ಟೆ ವ್ಯಾಪಾರಿಗಳು ನಷ್ಚವನ್ನು ಅನುಭವಿಸುತ್ತೀರಿ
  • ಗಣಪತಿಗೆ 21 ಗರಿಕೆ ಸಮರ್ಪಿಸಿ
Advertisment

ಮಿಥುನ

  • ಪೋಷಕರನ್ನು ನಿಂದಿಸಬೇಡಿ ಅವರ ಆಶೀರ್ವಾದ ಪಡೆಯಿರಿ
  • ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿ ಉಂಟಾಗಬಹುದು
  • ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಬಹುದು
  • ಸಹೋದರಿಯ ಚಿಂತೆ ಬೇಸರದ ದಿನ 
  • ಗಂಡ ಹೆಂಡತಿಯರ ನಡುವೆ ಪರಸ್ಪರ ಹೊಂದಾಣಿಕೆಯಿರಲಿ
  • ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
  • ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ

ಕಟಕ

  • ವಿದ್ಯಾರ್ಥಿ ಮತ್ತು ಉಪಾಧ್ಯಾಯರ ಮಧ್ಯೆ ವೈಮನಸ್ಸು
  • ಲಾಭವಿದ್ದರೂ ಎಚ್ಚರಿಕೆ ಇರಬೇಕು
  • ವೃತ್ತಿ ಅಥವಾ ನೌಕರಿಯಲ್ಲಿ ಒತ್ತಡದ ದಿನ
  • ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
  • ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
  • ನಂಬಿದವರಿಂದ ಹಣದ ದ್ರೋಹ 
  • ಉಮಾ ಮಹೇಶ್ವರರ ಆರಾಧನೆ ಮಾಡಿ

ಸಿಂಹ 

  • ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿದೆ
  • ಕುಟುಂಬದಲ್ಲಿ ಶುಭ ವಾತಾವರಣ
  • ಮನೋಬಲ ಹೆಚ್ಚಾಗುವ ದಿನ
  • ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
  • ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
  • ಎಲ್ಲರ ಜೊತೆಗೆ  ಸಂತೋಷವಾಗಿರಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
Advertisment

ಕನ್ಯಾ

  • ಈ ದಿನ ಆದಾಯಕ್ಕಿಂತ ಖರ್ಚು ಅಧಿಕ
  • ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗಲಿದೆ
  • ಅನುಪಯುಕ್ತ ಕೆಲಸಗಳಲ್ಲಿ ಹಣವ್ಯಯ
  • ಬ್ಯಾಂಕ್ ನೌಕರರಿಗೆ ಬಡ್ತಿ ಹೆಚ್ಚಾಗಲಿದೆ
  • ಮಾನಸಿಕ ಒತ್ತಡ ಹೆಚ್ಚಾಗುವ ದಿನ 
  • ಕಾಲ ಭೈರವನನ್ನು ಪೂಜಿಸಿ

ತುಲಾ

  • ಷೇರು ಮಾರುಕಟ್ಟೆಯಿಂದ ಲಾಭವಿದೆ
  • ನಿಮ್ಮ ನಾಯಕತ್ವ ನಿಮಗೆ ಗೌರವ ತಂದುಕೊಡುತ್ತದೆ
  • ಅಪಘಾತ ಸಂಭವಿಸಬಹುದು ಎಚ್ಚರಿಕೆವಹಿಸಿ
  • ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
  • ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ದಾಂಪತ್ಯದಲ್ಲಿ ಒಳಜಗಳ ಇದ್ದೇ ಇರುತ್ತದೆ ಸರಿದೂಗಿಸಿಕೊಳ್ಳಿ
  • ಕಲಾ ಪ್ರಪಂಚದ ಹಿರೀಕರಿಗೆ ಗೌರವ ಮನ್ನಣೆ ಸಿಗಲಿದೆ 
  • ಇಷ್ಟ ದೇವತಾ ಪ್ರಾರ್ಥನೆ

ವೃಶ್ಚಿಕ

  • ಸ್ಪರ್ಧಾತ್ಮಕ ಜೀವನದಿಂದ  ಬೇಸರ ಆಗಲಿದೆ
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು ಗಾಬರಿ ಬೇಡ
  • ಈ ದಿನ  ಹಣಹೂಡಿಕೆ ಬೇಡ
  • ಪ್ರೇಮಿಗಳಲ್ಲಿ ಪರಸ್ಪರ ಕಿತ್ತಾಟ ಆಗಬಹುದು
  • ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
  • ಇಂದು ನಿರಾಶಾಭಾವನೆ ಬೇಡ
  • ವಿದ್ಯಾರ್ಥಿಗಳಿಗೆ ವಿಚಲಿತವಾಗುವ ಮನಸ್ಸಿನಿಂದ ಅಧ್ಯಯನಕ್ಕೆ ತೊಂದರೆ
  • ಧ್ಯಾನ ಮಾಡಿ ಮನಸ್ಸನ್ನು ಕೇಂದ್ರಿಕರಿಸಿ
Advertisment

ಧನುಸ್ಸು

  • ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
  • ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯಯ ಆಗಬಹುದು
  • ಹಣದ ಅಭಾವ ಮಾನಸಿಕ ಒತ್ತಡ ಹೆಚ್ಚಾಗಬಹುದು
  • ಪ್ರೇಮಿಗಳು ವಿವಾಹಕ್ಕೆ ವಿಚಾರಮಾಡಿ
  • ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
  • ಮಕ್ಕಳ ಸಮಸ್ಯೆ ಬಗೆಹರಿಸಿ
  • ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ

ಮಕರ

  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
  • ನಿಮ್ಮ ಹಟ ಸ್ವಭಾವದಿಂದ ಅವಮಾನ
  • ಪ್ರಯಾಣದ ಆಯಾಸದಿಂದ ಕೆಲಸ ಮುಂದೂಡುತ್ತೀರಿ
  • ಮಕ್ಕಳ ಸಹಾಯಕರಿಂದ ವಂಚನೆ ಬೇಸರ
  • ತಾಯಿ ಮತ್ತು ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರಿಕೆ
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ಕುಂಭ

  • ಸ್ಥಳ ಬದಲಾವಣೆ ಆಗಬಹುದು
  • ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ 
  • ನಿಮ್ಮ ಪ್ರಯಾಣ ಸುಖಕರವಾಗಲಿದೆ
  • ಬಂಡವಾಳದಲ್ಲಿ ನಷ್ಟ  ಮೂಲಕ್ಕೆ ಧಕ್ಕೆ ಆಗಬಹುದು
  • ಅನಗತ್ಯ ಸಲಹೆ  ವಾದ ಬೇಡ
  • ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು
  • ಆದಾಯದಲ್ಲಿ ಇಳಿಕೆ ಬೇಸರ ಆತಂಕ
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ
Advertisment

ಮೀನ

  • ಆರೋಗ್ಯದಲ್ಲಿ ತಕ್ಷಣ ಏರು ಪೇರು ಉಂಟಾಗಬಹುದು
  • ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
  • ಹಳೆಯ ಸ್ನೇಹಿತರಿಂದ ಅಪಮಾನ
  • ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
  • ಸರ್ಕಾರದಿಂದ ಲಾಭದ ಸೂಚನೆ
  • ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿ ಕೋಪಬೇಡ
  • ಹಗುರವಾದ ಮಾತುಕತೆ  ಬೇಸರ ಆಗಬಹುದು
  • ವನದುರ್ಗಾ ಆರಾಧನೆ ಮಾಡಿ

ಇದನ್ನೂ ಓದಿ:ವಿಪರೀತ ಜ್ವರ, ಮೈತುಂಬಾ ಸುಸ್ತು.. 103 ಡಿಗ್ರಿ ಜ್ವರದ ನಡುವಿಯೂ ಬ್ಯಾಟ್ ಬೀಸಿದ ಗಟ್ಟಿಗಿತ್ತಿ ಮಂದಾನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment
Advertisment
Advertisment