Advertisment

Today horoscope: ಆದಾಯದಲ್ಲಿ ಏರುಪೇರು.. ವ್ಯಾಪಾರಸ್ಥರಿಗೆ ಶುಭ ದಿನ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ:ರಾಜಾರಾಣಿ ಖ್ಯಾತಿಯ ಹರ್ಷಿತಾ-ವಿನಯ್ ಬಾಳಲ್ಲಿ ಹೊಸ ಬೆಳಕು..!

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಮಾಜದ ಒಳಿತಿಗಾಗಿ ಶ್ರಮ ಪಡುತ್ತೀರಿ 
  • ನಿಮ್ಮ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ದಿನ
  • ವ್ಯಾಪರಸ್ಥರಿಗೆ ಗ್ರಾಹಕರಿಂದ ಮೆಚ್ಚುಗೆ ದೊರೆಯುತ್ತದೆ
  • ಸಹಕಾರ ಬ್ಯಾಂಕ್ ಫೈನಾನ್ಸ್​ ಬಡ್ಡಿ ವ್ಯಾಪಾರಸ್ಥರಿಗೆ ಶುಭ ದಿನ
  • ಇಂದಿನ ವ್ಯವಹಾರದಲ್ಲಿ ಮೇಲುಗೈ ಸಾಧಿಸುವ ಸೂಚನೆಯಿದೆ
  • ಕನಕದುರ್ಗಾ ಪ್ರಾರ್ಥನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪೆಟ್ರೋಲ್ ಬಂಕ್ ಗ್ಯಾಸ್ ಏಜೆನ್ಸಿ ಹೊಂದಿರುವವರಿಗೆ ಅನುಕೂಲಕರ
  • ಇಂದು ಕೆಲಸ ಕಾರ್ಯಗಳಲ್ಲಿ ತುಂಬಾ ವಿಳಂಬ ಸಾಧ್ಯತೆ
  • ಬ್ಯಾಂಕ್ ಸಾಲ ಮುಕ್ತಾಯವಾಗಲಿದೆ
  • ಹೊಸ ವ್ಯವಹಾರದ ಹಾದಿ ಸುಗಮವಾಗಲಿದೆ
  • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಶುಭಸುದ್ದಿ
  • ವಾಯುಸ್ತುತಿ ಪಠಣೆ ಮಾಡಿ

ಮಿಥುನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಮಾತಿನ ಚಕಮಕಿಯಿಂದ ಕೋಪ ಹೆಚ್ಚಾಗಬಹುದು ಕೋಪ ನಿಯಂತ್ರಣದಲ್ಲಿರಲಿ
  • ಭೂ-ವ್ಯವಹಾರ, ರಿಯಲ್ ಎಸ್ಟೇಟ್ ಮಾಡುವವರಿಗೆ ಇಂದು ಧನಲಾಭ
  • ನಿಮಗೆ ದೊರೆಯುವ ಹಣ ರಾತ್ರಿಯ ಸಮಯದಲ್ಲಿ ಸಿಗಬಹುದು
  • ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಹೆಚ್ಚು ಹಣ ಖರ್ಚಾಗಬಹುದು
  • ಮರಗೆಲಸ ಮಾಡುವವರಿಗೆ ಒಳ್ಳೆಯ ದಿನ, ರಾವಣಕೃತ ಶನಿ ಸ್ತೋತ್ರ ಪಠಿಸಿ
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಭೂಮಿ ಖರೀದಿ ಅಥವಾ ಮಾರಾಟ ಬೇಡ
  • ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಿ
  • ಕೋರ್ಟು ಕಚೇರಿಗಳಲ್ಲಿರುವ ಕಾರ್ಯ ಇವತ್ತು ಇತ್ಯರ್ಥ ಆಗುವ ಸೂಚನೆಗಳಿವೆ
  • ಹಲವು ದಿನಗಳಿಂದ ಮುಗಿಯದ ಕಾರ್ಯ ಇಂದು ತಿರುವು ಪಡೆಯುತ್ತದೆ
  • ವರಾಹ ಸ್ವಾಮಿಯನ್ನು ಆರಾಧಿಸಿ

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನೀವು ಬರಹಗಾರರಾಗಿದ್ದರೆ ದೂರದೂರಿಗೆ ಪ್ರಯಾಣ ಮಾಡ್ತೀರಿ
  • ವಾಹನ ಚಾಲನೆಯಿಂದ ನಷ್ಟ ಅನುಭವಿಸಬಹುದು
  • ವಿದೇಶಿ ಪ್ರಯಾಣ ಅರ್ಧಕ್ಕೆ ನಿಲ್ಲುವುದು
  • ಆರೋಗ್ಯ ಹದಗೆಡಬಹುದು ಎಚ್ಚರಿಕೆಯಿಂದಿರಿ
  • ಇಂದು ಪ್ರಯಾಣ ಮುಂದೂಡಿದರೆ ಒಳ್ಳೆಯದು 
  • ವಾಹನ ಅಪಘಾತ ವಾಹನ ಕೆಟ್ಟು ಹೋಗಬಹುದು ಜಾಗ್ರತೆ
  • ಗಣಪತಿಗೆ ಗರಿಕೆ ಅರ್ಪಿಸಿ

ಕನ್ಯಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಆತ್ಮೀಯರ ಮನೆಯಿಂದ ಶುಭ ಸುದ್ದಿ ಬರುತ್ತದೆ
  • ಸಮಾಜದಲ್ಲಿ ಗೌರವ ಮನ್ನಣೆ ದೊರೆಯುತ್ತದೆ
  • ಇಂದು ಸರಳವಾಗಿ ವರ್ತಿಸಿ ಅಹಂಕಾರ ಬೇಡ
  • ಕೆಲಸ ಕಾರ್ಯಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
  • ಪ್ರೇಮಿಗಳಿಗೆ ಶುಭಸುದ್ದಿ ಸಿಗಲಿದೆ
  • ಅಶ್ವತ್ಥ  ಮರಕ್ಕೆ 12 ಪ್ರದಕ್ಷಿಣೆ ಮಾಡಿ
Advertisment

ತುಲಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಹಿಂದಿನಿಂದ ಕೂಡಿಟ್ಟ ಹಣ ಇವತ್ತು ಹೆಚ್ಚು ಖರ್ಚಾಗುವ ಸಾಧ್ಯತೆ 
  • ಲೇವಾದೇವಿ ವ್ಯವಹಾರಗಳಲ್ಲಿ ಸ್ವಲ್ಪ ನಷ್ಟ ಸಂಭವಿಸಬಹುದು
  • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗುವುದಿಲ್ಲ
  • ವಿನಾಕಾರಣ ವಾದ ವಿವಾದಗಳು ಸೃಷ್ಟಿಯಾಗಬಹುದು
  • ನಿಮ್ಮ ಆದಾಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
  • ಪಾರ್ವತಿ ದೇವಿಯನ್ನು ಆರಾಧನೆ ಮಾಡಿ 

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವೈಯ್ಯಕ್ತಿಕ ಕೆಲಸಗಳಲ್ಲಿ ಸ್ವಲ್ಪ ಏರುಪೇರು ಕಾಣುಬಹುದು
  • ಇಂದು ನಿಮ್ಮ ಜನಸೇವೆಯ ಕೆಲಸಗಳಿಗೆ ಜನರು ಸ್ಪಂದಿಸುತ್ತಾರೆ
  • ನೀವು ಸಂಕಲ್ಪ ಮಾಡಿದ ಕೆಲಸಗಳಿಗೆ ವಿರೋಧಿಗಳಿಂದ ಅಡ್ಡಿಯಾಗಬಹುದು
  • ವಿರೋಧ ಮಾಡಿಕೊಂಡು ಕೆಲಸ ಸಾಧಿಸಲು ಆಗುವುದಿಲ್ಲ
  • ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
  • ಮೇಧಾ ದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮಗೆ ಅನಾರೋಗ್ಯ ಕಾಡಬಹುದು ತಾತ್ಸಾರ ಮಾಡದೆ ವೈದ್ಯರ ಸಲಹೆ ಪಡೆಯಿರಿ
  • ಎಲ್ಲಾ ಕಾರ್ಯಗಳಿಗೂ ಕಠಿಣ ಪರಿಶ್ರಮ ಬೇಕಾಗುತ್ತದೆ
  • ಸೂಕ್ಷ್ಮ ಕೆಲಸಗಳಲ್ಲಿ ಜಾಗ್ರತೆ ವಹಿಸಿ
  • ಈ ದಿನ ಎಲ್ಲಾ ರೀತಿಯಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ
  • ಶನೇಶ್ಚರನನ್ನು ಪ್ರಾರ್ಥನೆ ಮಾಡಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ದಿನ
  • ಚಿತ್ರೋದ್ಯಮದಲ್ಲಿ ನಾಟಕಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ
  • ಇಂದು ವಿದ್ಯಾರ್ಥಿಗಳಿಗೆ ಲಾಭದ ದಿನ
  • ಮದುವೆ ವಿಚಾರದಲ್ಲಿ ಗೊಂದಲ ಏರ್ಪಡಬಹುದು
  • ಹೊಸದಾಗಿ ಚಿತ್ರೋದ್ಯಮಕ್ಕೆ ಸೇರುವವರಿಗೆ ಅತ್ಯಂತ ಶುಭ ದಿನ
  • ಕೃಷಿಕರಿಗೆ ಉತ್ತಮ ಫಲ ಸಿಗುವ ದಿನ
  • ಕುಲದೇವತಾ ಆರಾಧನೆ ಮಾಡಿ 

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭವಿದೆ
  • ಇಂದು ಗೊಂದಲದ ಪರಿಸ್ಥಿತಿ ಸಾಧ್ಯತೆ
  • ಕಲಾವಿದರಿಗೆ ಸಮಾಜದಲ್ಲಿ ವಿಶೇಷವಾದ ಮನ್ನಣೆ ಸಿಗುತ್ತದೆ
  • ಇಂದು ಕೈಗೆ ಬರಬೇಕಾದ ಹಣ ಬರುವುದಿಲ್ಲ
  • ನಿಮ್ಮ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
  • ಅಷ್ಟಲಕ್ಷ್ಮಿಯ ಆರಾಧನೆ ಮಾಡಿ

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಸರ್ಕಾರಿ ನೌಕರರಿಗೆ ಅನುಕೂಲವಾಗುವ ದಿನ
  • ನಿಮ್ಮ ಮಾತಿನಿಂದಲೇ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ
  • ಬಾಕಿ ಇರುವ ಕೆಲಸಗಳು ಇಂದು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ
  • ನಿಮ್ಮ ಮಾತು ಬಹಳ ನಿಯಂತ್ರಣದಲ್ಲಿರಬೇಕು
  • ಸರ್ಕಾರಿ ಕೆಲಸಗಾರರಿಗೆ ಬಡ್ತಿ ಸಿಗಲಿದೆ,  ವಾಗ್ದೇವತಾ ಆರಾಧನೆ ಮಾಡಿ
Advertisment

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಬೀಳಗಿ ಪಟ್ಟಣದ ದಂಪತಿ!: ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment