/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ‘ಬದುಕ್ತಾ ಇರೋದೇ ಮರ್ಯಾದೆಗೋಸ್ಕರ..’ ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ..!
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ನಿಮ್ಮ ಜೀವನದಲ್ಲಿ ಬದಲಾವಣೆಯ ಘಟ್ಟ ಎನ್ನಬಹುದು
- ನಿಮ್ಮ ನಿರ್ಧಾರ ಬೇರೆಯವರಿಗೆ ಮಾದರಿಯಾಗಿ ಪ್ರಶಂಸೆಗೆ ಪಾತ್ರರಾಗುತ್ತೀರಿ
- ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಇಂದು ಸಂತೋಷವಾಗಿರುತ್ತೀರಿ
- ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷವನ್ನುಂಟುಮಾಡತ್ತೆ
- ಪ್ರೇಮಿಗಳಿಗೆ ಬಹಳ ಹಿನ್ನಡೆಯ ದಿನವಾಗಲಿದೆ
- ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
- ನೌಕರಿಯಲ್ಲಿ ಪ್ರಗತಿ ಕಾಣುವ ದಿನವಾಗಿದೆ
- ವಿದ್ಯಾರಾಜಗೋಪಾಲ ಮಂತ್ರ ಪಠಿಸಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಯಂತ್ರೋಪಕರಣಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವವರಿಗೆ ಉತ್ತಮ ದಿನ
- ನಿಮ್ಮ ತೀರ್ಮಾನಗಳು ಭವಿಷ್ಯಕ್ಕೆ ಬುನಾದಿಯಾಗುವ ದಿನ
- ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು ಜಾಗ್ರತೆ
- ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರಿಗೆ ಶುಭಫಲವಿದೆ
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
- ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ಇಂದು ನಿವಾರಣೆಯಾಗುತ್ತವೆ
- ಆಂತರಿಕ ಶತ್ರುಗಳಿಂದ ಅಡಚಣೆ ಉಂಟಾಗಬಹುದು ಎಚ್ಚರಿಕೆ ಇರಲಿ
- ನಿಮ್ಮ ಕೆಲಸದಲ್ಲಿ ಯಾವತ್ತೂ ಹಿಂಜರಿಯಬೇಡಿ ಯಶಸ್ಸು ನಿಮ್ಮದಾಗುತ್ತೆ
- ಜಗನ್ಮೋಹನ ಮಂತ್ರವನ್ನು ಪಠಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕ್ರೀಡಾಪಟುಗಳಿಗೆ ಉತ್ತಮ ಲಾಭ, ಗೌರವ-ಪುರಸ್ಕಾರಗಳು ಸಿಗುವ ದಿನವಾಗಿದೆ
- ನಿಮ್ಮ ಯೋಜನೆಗಳಿಗೆ ವಿಶೇಷ ಬೆಂಬಲ ಸಿಗುವ ದಿನ
- ನಯವಾಗಿ ಸಮಾಧಾನದಿಂದ ಅವರೊಂದಿಗೆ ವ್ಯವಹರಿಸಿ
- ಸಾಲಕ್ಕಾಗಿ ಪ್ರಿಯರು ಸಂಬಂಧಿಕರು ಮನೆ ಹತ್ತಿರ ಬರುವ ಸಾಧ್ಯತೆ ಇದೆ
- ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ
- ಲಕ್ಷ್ಮೀವಾಸುದೇವ ಮಂತ್ರವನ್ನು ಜಪಿಸುವುದು ಒಳಿತು
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರಸ್ಥರಾಗಿದ್ದರೆ ಒಳಿತು
- ಆಧಾತ್ಮಿಕ ಚಿಂತನೆ ನಿಮ್ಮ ಮನಸಲ್ಲಿ ನಡೆಯುತ್ತದೆ
- ವಿವಾಹ ವಿಚಾರಕ್ಕೆ ಚಾಲನೆ ಸಿಗುವಂತಹ ದಿನ
- ನಿರಾಸೆಯಿಂದ ಹೊರಬಂದು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿರಿ
- ದೀರ್ಘಕಾಲದ ಖಾಯಿಲೆಯಿಂದ ಗುಣಮುಖರಾಗುತ್ತೀರಿ
- ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
- ಎರಡನೇ ಮದುವೆಗೆ ಇಂದು ಶುಭಫಲವಿದೆ
- ಕೂರ್ಮ ಮಂತ್ರ ಶ್ರವಣ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತರಕಾರಿ ವ್ಯಾಪಾರಿಗಳಿಗೆ ಹಾಗೂ ಪ್ರಾಣಿಗಳನ್ನ ಮಾರುವ ದಲ್ಲಾಳಿಗಳಿಗೆ ಆತಂಕ ಎದುರಾಗುವ ಸಾಧ್ಯತೆ ಇದೆ
- ಸಂಪನ್ಮೂಲಗಳನ್ನ ಕ್ರೋಡಿಕರಿಸಲು ಹಲವಾರು ರೀತಿ ಪ್ರಯತ್ನಿಸುತ್ತೀರಿ
- ನಿಮ್ಮ ಬಗ್ಗೆ ಇರೋ ಅಭಿಪ್ರಾಯ ಮನಸ್ಸಿಗೆ ಹಿತವೆನಿಸುತ್ತದೆ
- ಬೇರೆಯವರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರುತ್ತದೆ
- ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
- ಆಹಾರ ಸೇವಿಸಬೇಕಾದರೆ ಜಾಗರೂಕರಾಗಿರಿ
- ದಾಂಪತ್ಯದಲ್ಲಿ ವಿರಸ ಮೂಡಬಹುದು ಸರಿ ಪಡಿಸಿಕೊಳ್ಳಿ
- ಏಕಾಕ್ಷರ ನರಸಿಂಹ ಮಂತ್ರ ಶ್ರವಣ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು ಜಾಗ್ರತೆ ವಹಿಸಿ
- ಹೊಸ ಸಂಬಂಧ ಹೊಸ ಪರಿಚಯ ಗೆಳತನ ಎಲ್ಲವೂ ಲಭ್ಯವಾಗುವ ದಿನ
- ಯಾವುದು ಸರಿ ಅನಿಸುತ್ತೆ ಅದನ್ನ ಮಾತ್ರ ಮಾಡಿ
- ಮನಸ್ಸಿನ ಬೇಸರ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
- ಇಂದು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ
- ವಸ್ತ್ರ ವ್ಯಾಪಾರಿಗಳಿಗೆ ಲಾಭದ ದಿನ
- ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪ
- ದಧಿವಾಮನ ಮಂತ್ರ ಜಪಿಸಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಮನಸ್ಸಿಗೆ ಮನೆಗೆ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ ಉಂಟು ಮಾಡುವ ಸಾಧ್ಯತೆ
- ಯಾವುದೇ ಆತುರವಾದ ನಿರ್ಧಾರ ಬೇಡ
- ನೆರೆಹೊರೆಯವರೊಂದಿಗೆ ವಿಶ್ವಾಸದಿಂದಿರಿ
- ಜೀವನದ ಸಾರ್ಥಕತೆಯ ಬಗ್ಗೆ ಹುಡುಕಾಟ ನಡೆಯಬಹುದು
- ಧಾರ್ಮಿಕ,ಆದ್ಯಾತ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರದಾಡುತ್ತೆ ಗಮನ ಹರಿಸಿ
- ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
- ಸ್ತ್ರೀಯರಿಗೆ ಸಾಂಸಾರಿಕ ಜೀವನದಲ್ಲಿ ತೃಪ್ತಿ ಸಿಗುವ ದಿನ
- ಶಂಕರನಾರಾಯಣನನ್ನು ಪ್ರಾರ್ಥಿಸಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವಾತ್ಸಲ್ಯಪೂರ್ಣ ಮಾತಿನಿಂದಾಗಿ ಕುಟುಂಬದಲ್ಲಿ ಹೆಚ್ಚಿನ ವಿಶ್ವಾಸಗಳಿಸುತ್ತೀರಿ
- ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ನಿಮ್ಮದಾಗತ್ತದೆ
- ಅನಿರೀಕ್ಷಿತ ಧನಾಗಮ ಆಗಲಿದೆ
- ನಿರ್ಧಾರಗಳನ್ನು ಬದಲಿಸುವುದರಿಂದ ನೌಕರಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ
- ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
- ನಿಮ್ಮನ್ನು ಮಕ್ಕಳು ಹೆಚ್ಚು ಪ್ರೀತಿಸುವ ದಿನವಾಗಿದೆ
- ರಾಮರಕ್ಷಾ ಸ್ತೋತ್ರ ಪಠಿಸಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು
- ಮೂಲವ್ಯಾಧಿ ಇರೋರಿಗೆ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿ
- ಕುಟುಂಬದಲ್ಲಿ ಕಿರಿಕಿರಿ ಆಗುವ ದಿನ
- ಇಂದು ಅಧಿಕವಾಗಿ ಆರ್ಥಿಕ ನಷ್ಟವಾಗಬಹುದು
- ಮಾನಸಿಕ ನೆಮ್ಮದಿ ಇಲ್ಲದೆ ಇರುವ ದಿನ
- ಆರೋಗ್ಯದ ಕಡೆ ಗಮನಕೊಡಿ
- ದಂಪತಿಗಳು ಹಾಗೂ ಮಕ್ಕಳ ಮಧ್ಯೆ ಬೇಸರದ ವಾತಾವರಣ ಉಂಟಾಗಬಹುದು
- ಇಂದು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
- ವಿಷ್ಣುತ್ರಯೀ ಮಂತ್ರವನ್ನ ಜಪಿಸಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ನಿಮ್ಮ ವಿರೋಧಿಗಳೆ ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಬೆಂಬಲ ನೀಡಬಹುದು
- ನಿಮ್ಮ ಸಮಸ್ಯೆಗಳಿಗೆ ಸರಳವಾದ ಪರಿಹಾರ ಕಂಡುಕೊಳ್ಳುತ್ತೀರಿ
- ಪಾರಂಪರಿಕ ವೃತ್ತಿಯಲ್ಲಿ ಗೌರವ ಸಿಗುವ ದಿನವಾಗಿದೆ
- ಕಟ್ಟಡ ಸಾಮಾಗ್ರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ
- ಅಪರಿಚಿತರಿಂದ ಮೋಸಹೋಗುವ ಸಾಧ್ಯತೆಯಿದೆ ಎಚ್ಚರಿಕೆ
- ಇಂದು ನಿಂದನೆಗೆ ಒಳಗಾಗುವ ಸಾಧ್ಯತೆಯಿದೆ ಎಚ್ಚರಿಕೆ
- ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುವ ದಿನ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು
- ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ
- ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತೆ
- ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ
- ಕುಟುಂಬದಲ್ಲಿ ವಾದ-ವಿವಾದಗಳಿಂದ ರಾಜಿಯಾಗಬಹುದು
- ಈ ದಿವಸ ಸಂಗಾತಿಯೊಂದಿಗೆ ವಿರಸ
- ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನವಾಗಿದೆ
- ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
- ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ
- ಗುರು ಪ್ರಾರ್ಥನೆ ಮಾಡಿ
ಇದನ್ನೂ ಓದಿ:ರಸ್ತೆಯಲ್ಲಿ ವಾಹನ ನಿಲ್ಲಿಸಿದರೇ, ಮೊದಲಿಗೆ ಟೋಯಿಂಗ್, ಬಳಿಕ ಹರಾಜು! ಎಚ್ಚರ ವಾಹನ ಮಾಲೀಕರೇ ಎಚ್ಚರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us