ಮೂರು ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಕಾವ್ಯ.. ಲಕ್ ಚೇಂಜ್!
ಕಳೆದ ಸೀಸನ್ನಲ್ಲಿ ಅತಿಕೆಟ್ಟ ಪ್ರದರ್ಶನ ನೀಡಿದ್ದ ಹೈದ್ರಾಬಾದ್ ತಂಡ
ಗಟ್ಟಿಗಿತ್ತಿ ತಂಡದ ಒಡತಿ ಕಾವ್ಯ ಮಾರನ್ಗೆ ಬಿಗ್ ಥ್ಯಾಂಕ್ಸ್ ಹೇಳಬೇಕು
ಕಳೆದ ಸೀಸನ್ನಲ್ಲಿ ಪಾತಾಳಕ್ಕೆ ಕುಸಿದಿದ್ದ ತಂಡ. ಆದ್ರೆ ಈ ಬಾರಿ ಅದೇ ತಂಡ ರನ್ನರ್ಅಪ್ ಆಗಿದೆ. ಇದಕ್ಕೆಲ್ಲ ಕಾರಣ ಒಡತಿ ಕಾವ್ಯ ಮಾರನ್ ತೆಗೆದುಕೊಂಡ ಆ ಮೂರು ದಿಟ್ಟ ನಿರ್ಧಾರ. ಆ ನಿರ್ಧಾರ ಹೈದ್ರಾಬಾದ್ ತಂಡ ಫೈನಲ್ ಪ್ರವೇಶ ಮಾಡುವಂತೆ ಮಾಡ್ತು. ಅಷ್ಟಕ್ಕೂ ಗಟ್ಟಿಗಿತ್ತಿ ಕಾವ್ಯಾ ತೆಗೆದುಕೊಂಡ ಆ ಬೋಲ್ಡ್ ಡಿಶಿಷನ್ಸ್ ಯಾವುವು?.
ಕೆಕೆಆರ್ ಎದುರಿನ ಫೈನಲ್ ದಂಗಲ್ನಲ್ಲಿ ಹೈದ್ರಾಬಾದ್ ಸೋತು ಟ್ರೋಫಿ ಕೈಚೆಲ್ಲಿದೆ. ಸೋಲಿನ ನೋವು ತಡೆಯಲಾಗದೇ ಫ್ರಾಂಚೈಸಿ ಒಡತಿ ಕಾವ್ಯ ಮಾರನ್ ಕಣ್ಣೀರು ಸುರಿಸಿದ್ದಾರೆ. ಕಾವ್ಯರ ಈ ಕಣ್ಣೀರ ಧಾರೆ ಹಿಂದೆ ಒಂದು ದೊಡ್ಡ ಕನಸಿತ್ತು. ಆದ್ರೀಗ ಕನಸಿನ ಗೋಪುರ ಛಿದ್ರವಾಗಿದೆ.
ಇದನ್ನೂ ಓದಿ: KKRTC ಬಸ್- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು
ತಲಾ ಸರ್ಗೆ ನನ್ನದೊಂದು ಮನವಿ. ಮುಂದಿನ ಸಲ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ. ಹೈದ್ರಾಬಾದ್ ಪಂದ್ಯ ನಡೆಯುವಾಗ ಕಾವ್ಯ ಕೊಡುವ ಎಕ್ಸ್ಪ್ರೆಶನ್ ನೋಡಿದ್ರೆ, ನಮಗೆ ಟೆನ್ಷನ್ ಆಗುತ್ತೆ. ಕಾವ್ಯಾಳನ್ನ ನೋಡಿದ್ರೆ ನಮಗೆ ಬಿಪಿ ಹೆಚ್ಚಾಗುತ್ತೆ.
10ನೇ ಸ್ಥಾನದಿಂದ ಸಿಡಿದೆದ್ದು ರನ್ನರ್ಅಪ್ ಸಾಧನೆ
ಸೂಪರ್ ಸ್ಟಾರ್ ರಜನಿಕಾಂತ್ ಆಡಿದ ಈ ಒಂದೇ ಒಂದು ಮಾತು ಹೈದ್ರಾಬಾದ್ ತಂಡದ ಹಣೆ ಬರಹವನ್ನೇ ಬದಲಿಸಿದೆ. ಕಳೆದ ಸೀಸನ್ನಲ್ಲಿ ಹೈದ್ರಾಬಾದ್ ಅತಿಕೆಟ್ಟ ಪ್ರದರ್ಶನ ನೀಡಿತ್ತು.10ನೇ ಸ್ಥಾನಕ್ಕೆ ತೃಪ್ತಿಪಟ್ಟು ತೀವ್ರ ಮುಖಭಂಗ ಅನುಭವಿಸಿತ್ತು. ಇಂತಹ ತಂಡವೇ ಈಗ ಫಿನಿಕ್ಸ್ನಂತೆ ಮೇಲೆದ್ದು 17ನೇ ಐಪಿಎಲ್ನಲ್ಲಿ ರನ್ನರ್ ಅಪ್ ಆಗಿದೆ. ಇದಕ್ಕೆಲ್ಲಾ ಕಾರಣ ಒಡತಿ ಕಾವ್ಯಾ ಮಾರನ್. ಈಕೆ ತೆಗೆದುಕೊಂಡು ಆ ಮೂರು ಅಗ್ರೆಸ್ಸಿವ್ ನಿರ್ಧಾರಗಳು ತಂಡದ ಚರಿಷ್ಮಾ ಬದಲಿಸ್ತು.
ನಿರ್ಧಾರ ನಂ.1- 20.5 ಕೋಟಿ ರೂಗೆ ಕಮಿನ್ಸ್ ಖರೀದಿ
ತಲೈವಾ ರಜನಿಕಾಂತ್ ತುಂಬಿದ ಸಭೆಯಲ್ಲಿ ಪ್ಲೀಸ್ ಹೈದ್ರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ ಅಂತ ಫ್ರಾಂಚೈಸಿ ಒಡತಿ ಕಾವ್ಯ ಮಾರನ್ಗೆ ರಿಕ್ವೆಸ್ಟ್ ಮಾಡಿದ್ರು. ಇದನ್ನೆ ಸವಾಲಾಗಿ ಸ್ವೀಕರಿಸಿ 2023 ಐಪಿಎಲ್ ಆಕ್ಷನ್ನಲ್ಲಿ ಬಿಗ್ ಫಿಶ್ಗೆ ಗಾಳ ಹಾಕಿದ್ರು. ಬರೋಬ್ಬರಿ 20.5 ಕೋಟಿ ನೀಡಿ ಆಸಿಸ್ ಚಾಂಪಿಯನ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಖರೀದಿಸಿದ್ರು. ಕಮಿನ್ಸ್ ಹೈದ್ರಾಬಾದ್ ನಾಯಕನ ಪಟಕ್ಕೇರಿದ್ದ ಬಳಿಕ ತಂಡಕ್ಕೆ ಹೊಸ ಹುಮ್ಮಸ್ಸು ತುಂಬಿದ್ರು. ಎಲ್ಲರಿಗೂ ಅಗ್ರೆಸ್ಸಿವ್ ಪಾಠ ಬೋಧಿಸಿದ್ರು. ಅದರ ಪರಿಣಾಮದ ರಿಸಲ್ಟ್ ನಮ್ಮ ಕಣ್ಣು ಮುಂದಿದೆ.
ನಿರ್ಧಾರ ನಂ.2: ವೆಟೋರಿಗೆ ಹೆಡ್ಕೋಚ್ ಆಗಿ ಬಡ್ತಿ
ಕಾವ್ಯ ಮಾರನ್ ಬರೀ ಉತ್ತಮ ಆಟಗಾರರನ್ನೇ ಖರೀದಿಸಲ್ಲ. ಟೀಮ್ ಮ್ಯಾನೇಜ್ಮೆಂಟ್ಗೂ ಸರ್ಜರಿ ಮಾಡಿದ್ರು. ಹೆಡ್ಕೋಚ್ ಆಗಿದ್ದ ದಿಗ್ಗಜ ಬ್ರಿಯಾನ್ ಲಾರಾಗೆ ಗೇಟ್ಪಾಸ್ ನೀಡಿದ್ರು. ಅವರ ಸ್ಥಾನಕ್ಕೆ ಡೇನಿಯಲ್ ವೆಟೋರಿಯನ್ನ ತಂದು ಕೂರಿಸಿದ್ರು. ಈ ಸ್ಟ್ರಾಟಜಿ ವರ್ಕ್ ಆಯ್ತು. ಕೂಲ್ ಕಮಿನ್ಸ್ ಹಾಗೂ ಕೂಲ್ ವೆಟೋರಿ ಕೂಡಿಕೊಂಡು ತಂಡವನ್ನ ಪ್ರಶಸ್ತಿ ರೇಸ್ಗೆ ಕೊಂಡೊಯ್ದರು.
ಇದನ್ನೂ ಓದಿ: ಮಾಡೆಲ್ ಜೊತೆ ಅಭಿಷೇಕ್ ಶರ್ಮಾ ಲವ್.. ಆತ್ಮಹತ್ಯೆ ಕೇಸ್ನಲ್ಲಿ ಹೊರ ಬಂದು ಬ್ಯಾಟ್ ಬೀಸಿದ್ದೇ ರೋಚಕ
ನಿರ್ಧಾರ ನಂ.3- ಜಿದ್ದಿಗೆ ಬಿದ್ದು ಕ್ಲಾಸೆನ್ಗೆ ಮಣೆ
ಹೆನ್ರಿಚ್ ಕ್ಲಾಸೆನ್ ವಿಧ್ವಸಂಕ ಆಟಕ್ಕೆ ಎತ್ತಿದ ಕೈ. ಪ್ರಸಕ್ತ ಐಪಿಎಲ್ನಲ್ಲಿ ವಿಸ್ಫೋಟಕ ಆಟವಾಡಿ ಹೈದ್ರಾಬಾದ್ ಗತ್ತನ್ನೆ ಬದಲಿಸಿದ್ದಾನೆ. ಇಂತಹ ಕ್ಲಾಸೆನ್ 2023ರ ಹರಾಜಿನಲ್ಲಿ ಮೊದಲು ಡೆಲ್ಲಿ ಪಾಲಾಗಿದ್ರು. ಆದ್ರೆ ಕೊನೇ ಕ್ಷಣದಲ್ಲಿ ಕಾವ್ಯ ಮಾರನ್ ಕೂಡ ಬಿಡ್ ಮಾಡೋ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ರು. ಇದನ್ನ ನೋಡಿದ ಆಕ್ಷನರ್, 3 ಬಾರಿ ಹ್ಯಾನರ್ ಬಾರಿಸಿದ್ರೂ ಕೂಡ ಮತ್ತೆ ಬಿಡ್ಡಿಂಗ್ ಮುಂದುವರೆಸಿದ್ರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಜಿದ್ದಿಗೆ ಬಿದ್ದ ಕಾವ್ಯ, ಹೆನ್ರಿಚ್ ಕ್ಲಾಸೆನ್ನ 5.25 ಕೋಟಿ ಕೊಟ್ಟು ಖರೀದಿಸೇ ಬಿಟ್ರು. ಅಂದೇನಾದ್ರು ಕಾವ್ಯ ಮಾರನ್ ಕ್ಲಾಸೆನ್ರನ್ನ ಖರೀದಿಸದಿದ್ರೆ, ಹೈದ್ರಾಬಾದ್ ತಂಡದಿಂದ ಇಂತಹ ಸಾಧನೆ ಸಾಧ್ಯವೇ ಆಗುತ್ತಿರಲಿಲ್ಲ.
ಇದನ್ನೂ ಓದಿ: IPL ಫೈನಲ್ ಮ್ಯಾಚ್ನಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್..?
ಎನಿವೇ ಕಾವ್ಯ ಮಾರನ್ರ ಈ 3 ಅಗ್ರೆಸ್ಸಿವ್ ನಿರ್ಧಾರಕ್ಕೆ ತಂಡಕ್ಕೆ ರನ್ನರ್ಅಪ್ ಪಟ್ಟ ಒಲಿದಿದೆ. ಕೂದಲೆಳೆ ಅಂತರದಲ್ಲಿ ಟ್ರೋಫಿ ಮಿಸ್ಸಾಗಿರಬಹುದು. ಆದ್ರೆ ಟೂರ್ನಿಯುದ್ದಕ್ಕೂ ಹೈದ್ರಾಬಾದ್ ತಂಡ ಕೊಟ್ಟ ಮನರಂಜನೆ ಇದೆ ಅಲ್ಲ, ಅದು ನಿಜಕ್ಕೂ ನೆಕ್ಸ್ಟ್ ಲೆವೆಲ್. ಇಂತಹ ಮನರಂಜನೆ ನೀಡಲು ಕಾರಣವಾದ ಗಟ್ಟಿಗಿತ್ತಿ, ತಂಡದ ಒಡತಿ ಕಾವ್ಯ ಮಾರನ್ಗೆ ಬಿಗ್ ಥ್ಯಾಂಕ್ಸ್ ಹೇಳಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮೂರು ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಕಾವ್ಯ.. ಲಕ್ ಚೇಂಜ್!
ಕಳೆದ ಸೀಸನ್ನಲ್ಲಿ ಅತಿಕೆಟ್ಟ ಪ್ರದರ್ಶನ ನೀಡಿದ್ದ ಹೈದ್ರಾಬಾದ್ ತಂಡ
ಗಟ್ಟಿಗಿತ್ತಿ ತಂಡದ ಒಡತಿ ಕಾವ್ಯ ಮಾರನ್ಗೆ ಬಿಗ್ ಥ್ಯಾಂಕ್ಸ್ ಹೇಳಬೇಕು
ಕಳೆದ ಸೀಸನ್ನಲ್ಲಿ ಪಾತಾಳಕ್ಕೆ ಕುಸಿದಿದ್ದ ತಂಡ. ಆದ್ರೆ ಈ ಬಾರಿ ಅದೇ ತಂಡ ರನ್ನರ್ಅಪ್ ಆಗಿದೆ. ಇದಕ್ಕೆಲ್ಲ ಕಾರಣ ಒಡತಿ ಕಾವ್ಯ ಮಾರನ್ ತೆಗೆದುಕೊಂಡ ಆ ಮೂರು ದಿಟ್ಟ ನಿರ್ಧಾರ. ಆ ನಿರ್ಧಾರ ಹೈದ್ರಾಬಾದ್ ತಂಡ ಫೈನಲ್ ಪ್ರವೇಶ ಮಾಡುವಂತೆ ಮಾಡ್ತು. ಅಷ್ಟಕ್ಕೂ ಗಟ್ಟಿಗಿತ್ತಿ ಕಾವ್ಯಾ ತೆಗೆದುಕೊಂಡ ಆ ಬೋಲ್ಡ್ ಡಿಶಿಷನ್ಸ್ ಯಾವುವು?.
ಕೆಕೆಆರ್ ಎದುರಿನ ಫೈನಲ್ ದಂಗಲ್ನಲ್ಲಿ ಹೈದ್ರಾಬಾದ್ ಸೋತು ಟ್ರೋಫಿ ಕೈಚೆಲ್ಲಿದೆ. ಸೋಲಿನ ನೋವು ತಡೆಯಲಾಗದೇ ಫ್ರಾಂಚೈಸಿ ಒಡತಿ ಕಾವ್ಯ ಮಾರನ್ ಕಣ್ಣೀರು ಸುರಿಸಿದ್ದಾರೆ. ಕಾವ್ಯರ ಈ ಕಣ್ಣೀರ ಧಾರೆ ಹಿಂದೆ ಒಂದು ದೊಡ್ಡ ಕನಸಿತ್ತು. ಆದ್ರೀಗ ಕನಸಿನ ಗೋಪುರ ಛಿದ್ರವಾಗಿದೆ.
ಇದನ್ನೂ ಓದಿ: KKRTC ಬಸ್- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು
ತಲಾ ಸರ್ಗೆ ನನ್ನದೊಂದು ಮನವಿ. ಮುಂದಿನ ಸಲ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ. ಹೈದ್ರಾಬಾದ್ ಪಂದ್ಯ ನಡೆಯುವಾಗ ಕಾವ್ಯ ಕೊಡುವ ಎಕ್ಸ್ಪ್ರೆಶನ್ ನೋಡಿದ್ರೆ, ನಮಗೆ ಟೆನ್ಷನ್ ಆಗುತ್ತೆ. ಕಾವ್ಯಾಳನ್ನ ನೋಡಿದ್ರೆ ನಮಗೆ ಬಿಪಿ ಹೆಚ್ಚಾಗುತ್ತೆ.
10ನೇ ಸ್ಥಾನದಿಂದ ಸಿಡಿದೆದ್ದು ರನ್ನರ್ಅಪ್ ಸಾಧನೆ
ಸೂಪರ್ ಸ್ಟಾರ್ ರಜನಿಕಾಂತ್ ಆಡಿದ ಈ ಒಂದೇ ಒಂದು ಮಾತು ಹೈದ್ರಾಬಾದ್ ತಂಡದ ಹಣೆ ಬರಹವನ್ನೇ ಬದಲಿಸಿದೆ. ಕಳೆದ ಸೀಸನ್ನಲ್ಲಿ ಹೈದ್ರಾಬಾದ್ ಅತಿಕೆಟ್ಟ ಪ್ರದರ್ಶನ ನೀಡಿತ್ತು.10ನೇ ಸ್ಥಾನಕ್ಕೆ ತೃಪ್ತಿಪಟ್ಟು ತೀವ್ರ ಮುಖಭಂಗ ಅನುಭವಿಸಿತ್ತು. ಇಂತಹ ತಂಡವೇ ಈಗ ಫಿನಿಕ್ಸ್ನಂತೆ ಮೇಲೆದ್ದು 17ನೇ ಐಪಿಎಲ್ನಲ್ಲಿ ರನ್ನರ್ ಅಪ್ ಆಗಿದೆ. ಇದಕ್ಕೆಲ್ಲಾ ಕಾರಣ ಒಡತಿ ಕಾವ್ಯಾ ಮಾರನ್. ಈಕೆ ತೆಗೆದುಕೊಂಡು ಆ ಮೂರು ಅಗ್ರೆಸ್ಸಿವ್ ನಿರ್ಧಾರಗಳು ತಂಡದ ಚರಿಷ್ಮಾ ಬದಲಿಸ್ತು.
ನಿರ್ಧಾರ ನಂ.1- 20.5 ಕೋಟಿ ರೂಗೆ ಕಮಿನ್ಸ್ ಖರೀದಿ
ತಲೈವಾ ರಜನಿಕಾಂತ್ ತುಂಬಿದ ಸಭೆಯಲ್ಲಿ ಪ್ಲೀಸ್ ಹೈದ್ರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ ಅಂತ ಫ್ರಾಂಚೈಸಿ ಒಡತಿ ಕಾವ್ಯ ಮಾರನ್ಗೆ ರಿಕ್ವೆಸ್ಟ್ ಮಾಡಿದ್ರು. ಇದನ್ನೆ ಸವಾಲಾಗಿ ಸ್ವೀಕರಿಸಿ 2023 ಐಪಿಎಲ್ ಆಕ್ಷನ್ನಲ್ಲಿ ಬಿಗ್ ಫಿಶ್ಗೆ ಗಾಳ ಹಾಕಿದ್ರು. ಬರೋಬ್ಬರಿ 20.5 ಕೋಟಿ ನೀಡಿ ಆಸಿಸ್ ಚಾಂಪಿಯನ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಖರೀದಿಸಿದ್ರು. ಕಮಿನ್ಸ್ ಹೈದ್ರಾಬಾದ್ ನಾಯಕನ ಪಟಕ್ಕೇರಿದ್ದ ಬಳಿಕ ತಂಡಕ್ಕೆ ಹೊಸ ಹುಮ್ಮಸ್ಸು ತುಂಬಿದ್ರು. ಎಲ್ಲರಿಗೂ ಅಗ್ರೆಸ್ಸಿವ್ ಪಾಠ ಬೋಧಿಸಿದ್ರು. ಅದರ ಪರಿಣಾಮದ ರಿಸಲ್ಟ್ ನಮ್ಮ ಕಣ್ಣು ಮುಂದಿದೆ.
ನಿರ್ಧಾರ ನಂ.2: ವೆಟೋರಿಗೆ ಹೆಡ್ಕೋಚ್ ಆಗಿ ಬಡ್ತಿ
ಕಾವ್ಯ ಮಾರನ್ ಬರೀ ಉತ್ತಮ ಆಟಗಾರರನ್ನೇ ಖರೀದಿಸಲ್ಲ. ಟೀಮ್ ಮ್ಯಾನೇಜ್ಮೆಂಟ್ಗೂ ಸರ್ಜರಿ ಮಾಡಿದ್ರು. ಹೆಡ್ಕೋಚ್ ಆಗಿದ್ದ ದಿಗ್ಗಜ ಬ್ರಿಯಾನ್ ಲಾರಾಗೆ ಗೇಟ್ಪಾಸ್ ನೀಡಿದ್ರು. ಅವರ ಸ್ಥಾನಕ್ಕೆ ಡೇನಿಯಲ್ ವೆಟೋರಿಯನ್ನ ತಂದು ಕೂರಿಸಿದ್ರು. ಈ ಸ್ಟ್ರಾಟಜಿ ವರ್ಕ್ ಆಯ್ತು. ಕೂಲ್ ಕಮಿನ್ಸ್ ಹಾಗೂ ಕೂಲ್ ವೆಟೋರಿ ಕೂಡಿಕೊಂಡು ತಂಡವನ್ನ ಪ್ರಶಸ್ತಿ ರೇಸ್ಗೆ ಕೊಂಡೊಯ್ದರು.
ಇದನ್ನೂ ಓದಿ: ಮಾಡೆಲ್ ಜೊತೆ ಅಭಿಷೇಕ್ ಶರ್ಮಾ ಲವ್.. ಆತ್ಮಹತ್ಯೆ ಕೇಸ್ನಲ್ಲಿ ಹೊರ ಬಂದು ಬ್ಯಾಟ್ ಬೀಸಿದ್ದೇ ರೋಚಕ
ನಿರ್ಧಾರ ನಂ.3- ಜಿದ್ದಿಗೆ ಬಿದ್ದು ಕ್ಲಾಸೆನ್ಗೆ ಮಣೆ
ಹೆನ್ರಿಚ್ ಕ್ಲಾಸೆನ್ ವಿಧ್ವಸಂಕ ಆಟಕ್ಕೆ ಎತ್ತಿದ ಕೈ. ಪ್ರಸಕ್ತ ಐಪಿಎಲ್ನಲ್ಲಿ ವಿಸ್ಫೋಟಕ ಆಟವಾಡಿ ಹೈದ್ರಾಬಾದ್ ಗತ್ತನ್ನೆ ಬದಲಿಸಿದ್ದಾನೆ. ಇಂತಹ ಕ್ಲಾಸೆನ್ 2023ರ ಹರಾಜಿನಲ್ಲಿ ಮೊದಲು ಡೆಲ್ಲಿ ಪಾಲಾಗಿದ್ರು. ಆದ್ರೆ ಕೊನೇ ಕ್ಷಣದಲ್ಲಿ ಕಾವ್ಯ ಮಾರನ್ ಕೂಡ ಬಿಡ್ ಮಾಡೋ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ರು. ಇದನ್ನ ನೋಡಿದ ಆಕ್ಷನರ್, 3 ಬಾರಿ ಹ್ಯಾನರ್ ಬಾರಿಸಿದ್ರೂ ಕೂಡ ಮತ್ತೆ ಬಿಡ್ಡಿಂಗ್ ಮುಂದುವರೆಸಿದ್ರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಜಿದ್ದಿಗೆ ಬಿದ್ದ ಕಾವ್ಯ, ಹೆನ್ರಿಚ್ ಕ್ಲಾಸೆನ್ನ 5.25 ಕೋಟಿ ಕೊಟ್ಟು ಖರೀದಿಸೇ ಬಿಟ್ರು. ಅಂದೇನಾದ್ರು ಕಾವ್ಯ ಮಾರನ್ ಕ್ಲಾಸೆನ್ರನ್ನ ಖರೀದಿಸದಿದ್ರೆ, ಹೈದ್ರಾಬಾದ್ ತಂಡದಿಂದ ಇಂತಹ ಸಾಧನೆ ಸಾಧ್ಯವೇ ಆಗುತ್ತಿರಲಿಲ್ಲ.
ಇದನ್ನೂ ಓದಿ: IPL ಫೈನಲ್ ಮ್ಯಾಚ್ನಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್..?
ಎನಿವೇ ಕಾವ್ಯ ಮಾರನ್ರ ಈ 3 ಅಗ್ರೆಸ್ಸಿವ್ ನಿರ್ಧಾರಕ್ಕೆ ತಂಡಕ್ಕೆ ರನ್ನರ್ಅಪ್ ಪಟ್ಟ ಒಲಿದಿದೆ. ಕೂದಲೆಳೆ ಅಂತರದಲ್ಲಿ ಟ್ರೋಫಿ ಮಿಸ್ಸಾಗಿರಬಹುದು. ಆದ್ರೆ ಟೂರ್ನಿಯುದ್ದಕ್ಕೂ ಹೈದ್ರಾಬಾದ್ ತಂಡ ಕೊಟ್ಟ ಮನರಂಜನೆ ಇದೆ ಅಲ್ಲ, ಅದು ನಿಜಕ್ಕೂ ನೆಕ್ಸ್ಟ್ ಲೆವೆಲ್. ಇಂತಹ ಮನರಂಜನೆ ನೀಡಲು ಕಾರಣವಾದ ಗಟ್ಟಿಗಿತ್ತಿ, ತಂಡದ ಒಡತಿ ಕಾವ್ಯ ಮಾರನ್ಗೆ ಬಿಗ್ ಥ್ಯಾಂಕ್ಸ್ ಹೇಳಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ