ಇಂದು ಬಾಂಗ್ಲಾದೇಶ ಎದುರು ಅಭ್ಯಾಸ ಪಂದ್ಯ
ಪ್ರಯೋಗಕ್ಕೆ ರಹದಾರಿ.. 15 ಆಟಗಾರರು ಕಣಕ್ಕೆ..!
ಟೀಮ್ ಕಾಂಬಿಷೇನ್ಗೆ ಇಂದೇ ಅಂತಿಮ ಮುದ್ರೆ..!
17 ವರ್ಷಗಳ ನಂತರ ಟ್ರೋಫಿ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಇಂದು ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಪ್ರಯೋಗ, ಟೀಮ್ ಕಾಂಬಿನೇಶನ್, ಸ್ಟ್ರೆಂಥ್ ಅಂಡ್ ವೀಕ್ನೆಸ್. ಇದಕ್ಕೆಲ್ಲ ಆನ್ಸರ್ ಕಂಡುಕೊಳ್ಳಲು ಪ್ರಾಕ್ಟೀಸ್ ಮ್ಯಾಚ್ ಉತ್ತಮ ವೇದಿಕೆಯಾಗಿದೆ. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಕೆಲ ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಳ್ಳಬೇಕಿದೆ.
ಇಂದಿನಿಂದ ಟೀಮ್ ಇಂಡಿಯಾ ವಿಶ್ವಕಪ್ ಜರ್ನಿ ಶುರು..!
ಜೂನ್ 2 ಅಂದ್ರೆ ನಾಳೆಯಿಂದ ಬಹುನಿರೀಕ್ಷಿತ ಟಿ20 ವಿಶ್ವಕಪ್ ದಂಗಲ್ ಆರಂಭಗೊಳ್ಳಲಿದೆ. ಆದ್ರೆ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾದ ಜರ್ನಿ ಇಂದಿನಿಂದ ಶುರುವಾಗಲಿದೆ. ಇಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಅಸಲಿ ಅಖಾಡಕ್ಕೂ ಮುನ್ನ ಭಾರತಕ್ಕಿರೋದು ಒಂದೇ ಅಭ್ಯಾಸ ಪಂದ್ಯ. ಇಲ್ಲಿನೇ ತಂಡದ ಎಲ್ಲಾ ಪ್ರಾಬ್ಲಮ್ಸ್ಗೆ ಆನ್ಸರ್ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..
ನಸ್ಸೌ ಅಂತಾರಾಷ್ಟ್ರೀಯ ಕೌಂಟಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ನಾಯಕರು ಈ ಕಾದಾಟಕ್ಕೆ ಸಾಕಷ್ಟು ಎಕ್ಸೈಟ್ ಆಗಿದ್ದಾರೆ.
ಇದು ತೆರೆದ ಮೈದಾನ. ಇಲ್ಲಿ ಮೊದಲ ಅಭ್ಯಾಸ ಪಂದ್ಯವನ್ನ ಆಡಲು ಸಾಕಷ್ಟು ಖುಷಿ ಆಗುತ್ತಿದೆ. ಕಂಡಿಷನ್ ಬಳಸಿ ಜೂನ್ 5 ರಂದು ನಡೆಯುವ ಮೊದಲ ಪಂದ್ಯದಲ್ಲಿ ಯಾವ ಆಟಗಾರರನ್ನ ಆಡಿಸಬೇಕು ಎಂದು ನಿರ್ಧರಿಸುತ್ತೇವೆ. ಇಲ್ಲಿಯ ವಾತಾವರಣ, ಪಿಚ್ ನಿಜಕ್ಕೂ ಅದ್ಭುತ ಅನುಭವ -ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ನಂಬಲಾಗುತ್ತಿಲ್ಲ. ಕ್ರೇಜಿ ಅನ್ನಿಸುತ್ತಿದೆ. ನಾನು ಮೈದಾನದ ವಿಕೆಟ್, ವಾತಾವರಣ ನೋಡಿದೆ. ನಿಜಕ್ಕೂ ಉತ್ತಮ ಅನುಭವ. ನೋಡಲು ಕೂಡ ಕ್ರೇಜಿ ಆಗಿದೆ-ನಜ್ಮುಲ್ ಎಚ್ ಶಾಂಟೋ, ಬಾಂಗ್ಲಾ ಕ್ಯಾಪ್ಟನ್
ಪ್ರಯೋಗಕ್ಕೆ ರಹದಾರಿ..15 ಆಟಗಾರರು ಕಣಕ್ಕೆ..!
ನಸ್ಸೌ ಮೈದಾನದಲ್ಲಿ ನಡೆಯುವ ಇಂದಿನ ಅಭ್ಯಾಸ ಪಂದ್ಯ, ಟೀಂ ಇಂಡಿಯಾ ಪಾಲಿಗೆ ಪ್ರಯೋಗ ಪಂದ್ಯವಾಗಿರಲಿದೆ. ಈ ಪಂದ್ಯವನ್ನ ಬಿಟ್ರೆ ಟೀಮ್ ಇಂಡಿಯಾ ನೇರವಾಗಿ ವಿಶ್ವಕಪ್ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ಏನೇ ಪ್ರಯೋಗ ಮಾಡಿದ್ರೂ ಇಂದೇ ಮಾಡಲೇಬೇಕಿದೆ. 15 ಆಟಗಾರರಿಗೆ ಆಡಲು ಅವಕಾಶವಿರುತ್ತೆ. ಹೀಗಾಗಿ ಆಯ್ಕೆಯಾಗಿರೋ ಎಲ್ಲಾ ಆಟಗಾರರು ಇಂದು ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ತಂಡದ ಮಿಸ್ಟೇಕ್ಸ್ ತಿದ್ದಿಕೊಳ್ಳುವ ಜೊತೆ ಟೀಮ್ ಕಾಂಬಿನೇಷನ್ಗೆ ನೆರವಾಗಲಿದೆ.
ಇದನ್ನೂ ಓದಿ:ಸಚಿನ್ ಕೊನೆಯ ಪಂದ್ಯವನ್ನು ಹೋಮ್ಗ್ರೌಂಡ್ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್ ಮಾಡಿ..
ಟೀಮ್ ಕಾಂಬಿಷೇನ್ಗೆ ಇಂದೇ ಅಂತಿಮ ಮುದ್ರೆ
ಬಿಸಿಸಿಐ ವಿಶ್ವಕಪ್ಗೆ ಬಲಿಷ್ಠ 15 ಆಟಗಾರರ ತಂಡವನ್ನೇನೋ ಸೆಲೆಕ್ಟ್ ಮಾಡಿದೆ. ಆದ್ರೆ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ತಾರೆ ಅನ್ನೋದಕ್ಕೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಕೆಲ ಸ್ಲಾಟ್ಗೆ ಭಾರಿ ಫೈಪೋಟಿ ಏರ್ಪಟ್ಟಿದೆ. ಅಭ್ಯಾಸ ಪಂದ್ಯದಲ್ಲಿ ಅದಕ್ಕೆಲ್ಲಾ ಉತ್ತರ ಸಿಗಲಿದೆ. ಇಂದು ಇಂಪ್ರೆಸ್ಸಿವ್ ಪ್ರದರ್ಶನ ನೀಡಿದವರಿಗೆ ಜೂನ್ 5 ರಂದು ಜಾಕ್ಪಾಟ್ ಹೊಡೆಯಲಿದೆ.
ರೋಹಿತ್-ದ್ರಾವಿಡ್ ಮುಂದಿವೆ ಬಿಗ್ ಚಾಲೆಂಜಸ್..!
ಅಭ್ಯಾಸ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ರಾಹುಲ್ ದ್ರಾವಿಡ್ ಮುಂದೆ ಅನೇಕ ಸವಾಲುಗಳಿವೆ. ಸ್ಲೋ ಪಿಚ್ನಲ್ಲಿ ಓಪನರ್ಸ್ ಯಾರು ? ಫಿನಿಶಿಂಗ್ ರೋಲ್ ನಿಭಾಯಿಸೋದ್ಯಾರು ? ಪಂತ್ ಆಯ್ಕೆ ಉತ್ತಮನಾ ಅಥವಾ ಸ್ಯಾಮ್ಸನ್ ಆಯ್ಕೆ ಉತ್ತಮನಾ ? ಕುಲ್ಚಾ ಜೋಡಿಯಲ್ಲಿ ಯಾರನ್ನ ಆಡಿಸಿದ್ರೆ ಬೆಸ್ಟ್ ? ಈ ಎಲ್ಲಾ ಪ್ರಶ್ನೆಗಳಿಗೆ ರೋಹಿತ್ ಹಾಗೂ ದ್ರಾವಿಡ್ ಅಭ್ಯಾಸ ಪಂದ್ಯದಲ್ಲಿ ಆನ್ಸರ್ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್
ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿತಾರಾ ಕಿಂಗ್ ಕೊಹ್ಲಿ..?
ಐಪಿಎಲ್ ಬಳಿಕ ಕಿರು ವಿಶ್ರಾಂತಿಗೆ ಜಾರಿದ್ದ ಕಿಂಗ್ ಕೊಹ್ಲಿ ತಡವಾಗಿ ತಂಡವನ್ನ ಸೇರಿಕೊಂಡಿದ್ದಾರೆ. ಆದರೆ ಅವರು ಬಾಂಗ್ಲಾದೇಶ ಎದುರಿನ ಅಭ್ಯಾಸ ಪಂದ್ಯದಲ್ಲಿ ಆಡ್ತಾರಾ? ಇಲ್ವಾ ಅನ್ನೋದು ಸ್ಪಷ್ಟವಾಗಿಲ್ಲ. ಒಂದು ವೇಳೆ ಕೊಹ್ಲಿ ಕಣಕ್ಕಿಳಿದಿದ್ದೆ ಆದ್ರೆ ಅವರ ಪ್ರಸೆನ್ಸ್ ತಂಡಕ್ಕೆ ಸಾಕಷ್ಟು ಬಲ ತುಂಬಲಿದೆ.
ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂದು ಬಾಂಗ್ಲಾದೇಶ ಎದುರು ಅಭ್ಯಾಸ ಪಂದ್ಯ
ಪ್ರಯೋಗಕ್ಕೆ ರಹದಾರಿ.. 15 ಆಟಗಾರರು ಕಣಕ್ಕೆ..!
ಟೀಮ್ ಕಾಂಬಿಷೇನ್ಗೆ ಇಂದೇ ಅಂತಿಮ ಮುದ್ರೆ..!
17 ವರ್ಷಗಳ ನಂತರ ಟ್ರೋಫಿ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಇಂದು ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಪ್ರಯೋಗ, ಟೀಮ್ ಕಾಂಬಿನೇಶನ್, ಸ್ಟ್ರೆಂಥ್ ಅಂಡ್ ವೀಕ್ನೆಸ್. ಇದಕ್ಕೆಲ್ಲ ಆನ್ಸರ್ ಕಂಡುಕೊಳ್ಳಲು ಪ್ರಾಕ್ಟೀಸ್ ಮ್ಯಾಚ್ ಉತ್ತಮ ವೇದಿಕೆಯಾಗಿದೆ. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಕೆಲ ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಳ್ಳಬೇಕಿದೆ.
ಇಂದಿನಿಂದ ಟೀಮ್ ಇಂಡಿಯಾ ವಿಶ್ವಕಪ್ ಜರ್ನಿ ಶುರು..!
ಜೂನ್ 2 ಅಂದ್ರೆ ನಾಳೆಯಿಂದ ಬಹುನಿರೀಕ್ಷಿತ ಟಿ20 ವಿಶ್ವಕಪ್ ದಂಗಲ್ ಆರಂಭಗೊಳ್ಳಲಿದೆ. ಆದ್ರೆ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾದ ಜರ್ನಿ ಇಂದಿನಿಂದ ಶುರುವಾಗಲಿದೆ. ಇಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಅಸಲಿ ಅಖಾಡಕ್ಕೂ ಮುನ್ನ ಭಾರತಕ್ಕಿರೋದು ಒಂದೇ ಅಭ್ಯಾಸ ಪಂದ್ಯ. ಇಲ್ಲಿನೇ ತಂಡದ ಎಲ್ಲಾ ಪ್ರಾಬ್ಲಮ್ಸ್ಗೆ ಆನ್ಸರ್ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..
ನಸ್ಸೌ ಅಂತಾರಾಷ್ಟ್ರೀಯ ಕೌಂಟಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ನಾಯಕರು ಈ ಕಾದಾಟಕ್ಕೆ ಸಾಕಷ್ಟು ಎಕ್ಸೈಟ್ ಆಗಿದ್ದಾರೆ.
ಇದು ತೆರೆದ ಮೈದಾನ. ಇಲ್ಲಿ ಮೊದಲ ಅಭ್ಯಾಸ ಪಂದ್ಯವನ್ನ ಆಡಲು ಸಾಕಷ್ಟು ಖುಷಿ ಆಗುತ್ತಿದೆ. ಕಂಡಿಷನ್ ಬಳಸಿ ಜೂನ್ 5 ರಂದು ನಡೆಯುವ ಮೊದಲ ಪಂದ್ಯದಲ್ಲಿ ಯಾವ ಆಟಗಾರರನ್ನ ಆಡಿಸಬೇಕು ಎಂದು ನಿರ್ಧರಿಸುತ್ತೇವೆ. ಇಲ್ಲಿಯ ವಾತಾವರಣ, ಪಿಚ್ ನಿಜಕ್ಕೂ ಅದ್ಭುತ ಅನುಭವ -ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ನಂಬಲಾಗುತ್ತಿಲ್ಲ. ಕ್ರೇಜಿ ಅನ್ನಿಸುತ್ತಿದೆ. ನಾನು ಮೈದಾನದ ವಿಕೆಟ್, ವಾತಾವರಣ ನೋಡಿದೆ. ನಿಜಕ್ಕೂ ಉತ್ತಮ ಅನುಭವ. ನೋಡಲು ಕೂಡ ಕ್ರೇಜಿ ಆಗಿದೆ-ನಜ್ಮುಲ್ ಎಚ್ ಶಾಂಟೋ, ಬಾಂಗ್ಲಾ ಕ್ಯಾಪ್ಟನ್
ಪ್ರಯೋಗಕ್ಕೆ ರಹದಾರಿ..15 ಆಟಗಾರರು ಕಣಕ್ಕೆ..!
ನಸ್ಸೌ ಮೈದಾನದಲ್ಲಿ ನಡೆಯುವ ಇಂದಿನ ಅಭ್ಯಾಸ ಪಂದ್ಯ, ಟೀಂ ಇಂಡಿಯಾ ಪಾಲಿಗೆ ಪ್ರಯೋಗ ಪಂದ್ಯವಾಗಿರಲಿದೆ. ಈ ಪಂದ್ಯವನ್ನ ಬಿಟ್ರೆ ಟೀಮ್ ಇಂಡಿಯಾ ನೇರವಾಗಿ ವಿಶ್ವಕಪ್ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ಏನೇ ಪ್ರಯೋಗ ಮಾಡಿದ್ರೂ ಇಂದೇ ಮಾಡಲೇಬೇಕಿದೆ. 15 ಆಟಗಾರರಿಗೆ ಆಡಲು ಅವಕಾಶವಿರುತ್ತೆ. ಹೀಗಾಗಿ ಆಯ್ಕೆಯಾಗಿರೋ ಎಲ್ಲಾ ಆಟಗಾರರು ಇಂದು ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ತಂಡದ ಮಿಸ್ಟೇಕ್ಸ್ ತಿದ್ದಿಕೊಳ್ಳುವ ಜೊತೆ ಟೀಮ್ ಕಾಂಬಿನೇಷನ್ಗೆ ನೆರವಾಗಲಿದೆ.
ಇದನ್ನೂ ಓದಿ:ಸಚಿನ್ ಕೊನೆಯ ಪಂದ್ಯವನ್ನು ಹೋಮ್ಗ್ರೌಂಡ್ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್ ಮಾಡಿ..
ಟೀಮ್ ಕಾಂಬಿಷೇನ್ಗೆ ಇಂದೇ ಅಂತಿಮ ಮುದ್ರೆ
ಬಿಸಿಸಿಐ ವಿಶ್ವಕಪ್ಗೆ ಬಲಿಷ್ಠ 15 ಆಟಗಾರರ ತಂಡವನ್ನೇನೋ ಸೆಲೆಕ್ಟ್ ಮಾಡಿದೆ. ಆದ್ರೆ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ತಾರೆ ಅನ್ನೋದಕ್ಕೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಕೆಲ ಸ್ಲಾಟ್ಗೆ ಭಾರಿ ಫೈಪೋಟಿ ಏರ್ಪಟ್ಟಿದೆ. ಅಭ್ಯಾಸ ಪಂದ್ಯದಲ್ಲಿ ಅದಕ್ಕೆಲ್ಲಾ ಉತ್ತರ ಸಿಗಲಿದೆ. ಇಂದು ಇಂಪ್ರೆಸ್ಸಿವ್ ಪ್ರದರ್ಶನ ನೀಡಿದವರಿಗೆ ಜೂನ್ 5 ರಂದು ಜಾಕ್ಪಾಟ್ ಹೊಡೆಯಲಿದೆ.
ರೋಹಿತ್-ದ್ರಾವಿಡ್ ಮುಂದಿವೆ ಬಿಗ್ ಚಾಲೆಂಜಸ್..!
ಅಭ್ಯಾಸ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ರಾಹುಲ್ ದ್ರಾವಿಡ್ ಮುಂದೆ ಅನೇಕ ಸವಾಲುಗಳಿವೆ. ಸ್ಲೋ ಪಿಚ್ನಲ್ಲಿ ಓಪನರ್ಸ್ ಯಾರು ? ಫಿನಿಶಿಂಗ್ ರೋಲ್ ನಿಭಾಯಿಸೋದ್ಯಾರು ? ಪಂತ್ ಆಯ್ಕೆ ಉತ್ತಮನಾ ಅಥವಾ ಸ್ಯಾಮ್ಸನ್ ಆಯ್ಕೆ ಉತ್ತಮನಾ ? ಕುಲ್ಚಾ ಜೋಡಿಯಲ್ಲಿ ಯಾರನ್ನ ಆಡಿಸಿದ್ರೆ ಬೆಸ್ಟ್ ? ಈ ಎಲ್ಲಾ ಪ್ರಶ್ನೆಗಳಿಗೆ ರೋಹಿತ್ ಹಾಗೂ ದ್ರಾವಿಡ್ ಅಭ್ಯಾಸ ಪಂದ್ಯದಲ್ಲಿ ಆನ್ಸರ್ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್
ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿತಾರಾ ಕಿಂಗ್ ಕೊಹ್ಲಿ..?
ಐಪಿಎಲ್ ಬಳಿಕ ಕಿರು ವಿಶ್ರಾಂತಿಗೆ ಜಾರಿದ್ದ ಕಿಂಗ್ ಕೊಹ್ಲಿ ತಡವಾಗಿ ತಂಡವನ್ನ ಸೇರಿಕೊಂಡಿದ್ದಾರೆ. ಆದರೆ ಅವರು ಬಾಂಗ್ಲಾದೇಶ ಎದುರಿನ ಅಭ್ಯಾಸ ಪಂದ್ಯದಲ್ಲಿ ಆಡ್ತಾರಾ? ಇಲ್ವಾ ಅನ್ನೋದು ಸ್ಪಷ್ಟವಾಗಿಲ್ಲ. ಒಂದು ವೇಳೆ ಕೊಹ್ಲಿ ಕಣಕ್ಕಿಳಿದಿದ್ದೆ ಆದ್ರೆ ಅವರ ಪ್ರಸೆನ್ಸ್ ತಂಡಕ್ಕೆ ಸಾಕಷ್ಟು ಬಲ ತುಂಬಲಿದೆ.
ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್