newsfirstkannada.com

ಗಂಡನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ, ಕೂಡಿ ಹಾಕಿದ ಹೆಂಡತಿ.. ಫುಲ್ ಟಾರ್ಚರ್​, ಯಾಕೆ?

Share :

Published May 4, 2024 at 5:21pm

    ಮನೆ ಬಿಟ್ಟು ಓಡಿ ಹೋಗಿದ್ದ ಗಂಡನನ್ನ ಹಿಡಿದು ತಂದಿದ್ದ ಹೆಂಡತಿ

    ತಾಯಿ, ಮಕ್ಕಳು ಸೇರಿ ಗಂಡನನ್ನು ಮನೆಯಲ್ಲಿ ಕೂಡಿ ಹಾಕಿದ್ದರು

    ಸ್ಥಳೀಯರು ವ್ಯಕ್ತಿಯನ್ನು ಪಾರು ಮಾಡಿದ್ದು ಹೇಗೆ, ಅದು ಇಲ್ಲಿದೆ!

ಹೈದರಾಬಾದ್: ಆಸ್ತಿಗಾಗಿ ಮಹಿಳೆಯೊಬ್ಬರು ತನ್ನ ಗಂಡನನ್ನು ಕಬ್ಬಿಣದ ಸರಳಪಳಿಯಿಂದ ಬಂಧಿಸಿ ಮನ ಬಂದಂತೆ ಥಳಿಸಿರುವ ಘಟನೆ ತೆಲಂಗಾಣದ ಮೇಡ್ಪಲ್ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಅಂಬೇಡ್ಕರ್ ನಗರದ ನಿವಾಸಿ ಭರತಮ್ಮ (45) ತನ್ನ ಗಂಡನನ್ನೇ ಸರಳಪಳಿಯಲ್ಲಿ ಬಂಧಿಸಿದ ಮಹಿಳೆ. ಪಟ್ಟಿ ನರಸಿಂಹ (55) ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿ. ಈ ಕೃತ್ಯಕ್ಕೆ ದಂಪತಿಯ ನಾಲ್ವರು ಮಕ್ಕಳು ಸಹಕಾರ ನೀಡಿದ ಹಿನ್ನೆಲೆಯಲ್ಲಿ ತಾಯಿ ಸಮೇತ 5 ಜನರ ಮೇಲೆ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

ಹೆಂಡತಿಯ ಹೆಸರಲ್ಲಿನ ಸ್ಥಳದಲ್ಲಿ ಸಾಲ ಮಾಡಿ ಗಂಡ ಹೊಸ ಮನೆ ನಿರ್ಮಾಣ ಮಾಡಿದ್ದನು. ಇದರಿಂದ ಸಾಲ ಹೆಚ್ಚಾಗಿದ್ದರಿಂದ ಜಮೀನು ಮಾರಾಟ ಮಾಡಿ ಸಾಲ ಕಟ್ಟಲು ಗಂಡ ಮುಂದಾಗಿದ್ದನು. ಇದಕ್ಕೆ ತಕರಾರು ತೆಗೆದ ಹೆಂಡತಿ, ಮಕ್ಕಳು ಜಮೀನು ಮಾರಾಟ ಮಾಡಲು ಬಿಟ್ಟಿಲ್ಲ. ಇದರಿಂದ ಕುಟುಂಬದಲ್ಲಿ ಜಗಳ ಏರ್ಪಟ್ಟಿದೆ. ಹೀಗಾಗಿ ಮನೆ ಬಿಟ್ಟು ಹೋಗಿ ಭುವನಗಿರಿ ಜಿಲ್ಲೆಯಲ್ಲಿ ವಾಸ ಆಕೆಯ ಗಂಡ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

ಇದನ್ನು ತಿಳಿದುಕೊಂಡ ಹೆಂಡತಿಯು, ಮಕ್ಕಳೊಂದಿಗೆ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಾಳೆ. ಬಳಿಕ ಮನೆಯಲ್ಲಿ ಗಂಡನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ, 3 ದಿನಗಳಿಂದ ಮನಬಂದಂತೆ ನಿರಂತರವಾಗಿ ಥಳಿಸಿದ್ದು ಗಾಯಗೊಂಡಿದ್ದನು. ಸದ್ಯ ಇದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅಲ್ಲದೇ ಮಾಜಿ ಎಂಪಿಟಿಸಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಮನೆಗೆ ಬಂದು ನರಸಿಂಹನನ್ನು ಬಿಡುಗಡೆಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇನ್ನು ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ, ಕೂಡಿ ಹಾಕಿದ ಹೆಂಡತಿ.. ಫುಲ್ ಟಾರ್ಚರ್​, ಯಾಕೆ?

https://newsfirstlive.com/wp-content/uploads/2024/05/TN_HUSBAND.jpg

    ಮನೆ ಬಿಟ್ಟು ಓಡಿ ಹೋಗಿದ್ದ ಗಂಡನನ್ನ ಹಿಡಿದು ತಂದಿದ್ದ ಹೆಂಡತಿ

    ತಾಯಿ, ಮಕ್ಕಳು ಸೇರಿ ಗಂಡನನ್ನು ಮನೆಯಲ್ಲಿ ಕೂಡಿ ಹಾಕಿದ್ದರು

    ಸ್ಥಳೀಯರು ವ್ಯಕ್ತಿಯನ್ನು ಪಾರು ಮಾಡಿದ್ದು ಹೇಗೆ, ಅದು ಇಲ್ಲಿದೆ!

ಹೈದರಾಬಾದ್: ಆಸ್ತಿಗಾಗಿ ಮಹಿಳೆಯೊಬ್ಬರು ತನ್ನ ಗಂಡನನ್ನು ಕಬ್ಬಿಣದ ಸರಳಪಳಿಯಿಂದ ಬಂಧಿಸಿ ಮನ ಬಂದಂತೆ ಥಳಿಸಿರುವ ಘಟನೆ ತೆಲಂಗಾಣದ ಮೇಡ್ಪಲ್ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಅಂಬೇಡ್ಕರ್ ನಗರದ ನಿವಾಸಿ ಭರತಮ್ಮ (45) ತನ್ನ ಗಂಡನನ್ನೇ ಸರಳಪಳಿಯಲ್ಲಿ ಬಂಧಿಸಿದ ಮಹಿಳೆ. ಪಟ್ಟಿ ನರಸಿಂಹ (55) ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿ. ಈ ಕೃತ್ಯಕ್ಕೆ ದಂಪತಿಯ ನಾಲ್ವರು ಮಕ್ಕಳು ಸಹಕಾರ ನೀಡಿದ ಹಿನ್ನೆಲೆಯಲ್ಲಿ ತಾಯಿ ಸಮೇತ 5 ಜನರ ಮೇಲೆ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

ಹೆಂಡತಿಯ ಹೆಸರಲ್ಲಿನ ಸ್ಥಳದಲ್ಲಿ ಸಾಲ ಮಾಡಿ ಗಂಡ ಹೊಸ ಮನೆ ನಿರ್ಮಾಣ ಮಾಡಿದ್ದನು. ಇದರಿಂದ ಸಾಲ ಹೆಚ್ಚಾಗಿದ್ದರಿಂದ ಜಮೀನು ಮಾರಾಟ ಮಾಡಿ ಸಾಲ ಕಟ್ಟಲು ಗಂಡ ಮುಂದಾಗಿದ್ದನು. ಇದಕ್ಕೆ ತಕರಾರು ತೆಗೆದ ಹೆಂಡತಿ, ಮಕ್ಕಳು ಜಮೀನು ಮಾರಾಟ ಮಾಡಲು ಬಿಟ್ಟಿಲ್ಲ. ಇದರಿಂದ ಕುಟುಂಬದಲ್ಲಿ ಜಗಳ ಏರ್ಪಟ್ಟಿದೆ. ಹೀಗಾಗಿ ಮನೆ ಬಿಟ್ಟು ಹೋಗಿ ಭುವನಗಿರಿ ಜಿಲ್ಲೆಯಲ್ಲಿ ವಾಸ ಆಕೆಯ ಗಂಡ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

ಇದನ್ನು ತಿಳಿದುಕೊಂಡ ಹೆಂಡತಿಯು, ಮಕ್ಕಳೊಂದಿಗೆ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಾಳೆ. ಬಳಿಕ ಮನೆಯಲ್ಲಿ ಗಂಡನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ, 3 ದಿನಗಳಿಂದ ಮನಬಂದಂತೆ ನಿರಂತರವಾಗಿ ಥಳಿಸಿದ್ದು ಗಾಯಗೊಂಡಿದ್ದನು. ಸದ್ಯ ಇದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅಲ್ಲದೇ ಮಾಜಿ ಎಂಪಿಟಿಸಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಮನೆಗೆ ಬಂದು ನರಸಿಂಹನನ್ನು ಬಿಡುಗಡೆಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇನ್ನು ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More