4 ವರ್ಷದ ಹೆತ್ತ ಮಗನನ್ನೇ ಕೊಲೆ ಮಾಡಿದ್ದ ಬೆಂಗಳೂರು ಸ್ಟಾರ್ಟ್ ಅಪ್ CEO
ಚಿಲ್ಡ್ರನ್ಸ್ ಆ್ಯಕ್ಟ್ನ ಸೆಕ್ಷನ್ 8ರಡಿ ಚಾರ್ಜ್ಶೀಟ್ ಸಲ್ಲಿಸಿದ ಗೋವಾ ಪೊಲೀಸ್
ಟಿಶ್ಯೂ ಪೇಪರ್ ಮೇಲೆ ಸೂಚನಾ ಸೇಠ್ ಬರೆದಿದ್ದ ಐಲೈನರ್ ಕೋರ್ಟ್ಗೆ
4 ವರ್ಷದ ಹೆತ್ತ ಮಗನನ್ನೇ ಕೊಲೆ ಮಾಡಿದ್ದ ಬೆಂಗಳೂರು ಸ್ಟಾರ್ಟ್ ಅಪ್ CEO ಸುಚನಾ ಸೇಠ್ ಪ್ರಕರಣದ ತನಿಖೆಯನ್ನ ಗೋವಾ ಪೊಲೀಸರು ಮುಗಿಸಿದ್ದಾರೆ. ಕೋರ್ಟ್ಗೆ ಗೋವಾ ಪೊಲೀಸರು ಚಾರ್ಚ್ಶೀಟ್ ಸಲ್ಲಿಕೆ ಮಾಡಿದ್ದು, 642 ಪುಟದ ದೋಷಾರೋಪಣೆಯಲ್ಲಿ ಸ್ಫೋಟಕ ಅಂಶವನ್ನು ದಾಖಲು ಮಾಡಿದ್ದಾರೆ.
ಐಪಿಸಿ ಸೆಕ್ಷನ್ 302ರ ಹತ್ಯೆ, ಸೆಕ್ಷನ್ 201ರ ಸಾಕ್ಷ್ಯನಾಶ ಆರೋಪದಡಿ ಗೋವಾ ಪೊಲೀಸರು ತನಿಖೆ ಕೈಗೊಂಡಿದ್ದರು. ಗೋವಾ ಚಿಲ್ಡ್ರನ್ಸ್ ಆ್ಯಕ್ಟ್ನ ಸೆಕ್ಷನ್ 8ರಡಿ ಈಗ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸೂಚನಾ ಸೇಠ್ ಅವರು ಕುತ್ತಿಗೆ ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನನ್ನ ಮಗನನ್ನು ಕೊಂದಿದ್ದು ಯಾಕೆ? ಗಂಡ ಕೇಳಿದ ಪ್ರಶ್ನೆಗೆ ಕೂಗಾಡಿದ ಸುಚನಾ ಸೇಠ್; ಹೇಳಿದ್ದೇನು?
ಟಿಶ್ಯೂ ಪೇಪರ್ ಮೇಲೆ ಸೂಚನಾ ಸೇಠ್ ಬರೆದಿದ್ದ ಐಲೈನರ್ ಕೂಡ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ. ಟಿಶ್ಯೂ ಪೇಪರ್ ಮೇಲಿನ ಬರಹ ಸೂಚನಾ ಸೇಠ್ ಅವರದ್ದೇ ಎಂದು ಹ್ಯಾಂಡ್ ರೈಟಿಂಗ್ ಎಕ್ಸ್ಪರ್ಟ್ಗಳು ಧೃಡಪಡಿಸಿದ್ದಾರೆ.
ಬೆಂಗಳೂರು ಕೋರ್ಟ್ ಆದೇಶದ ಹೊರತಾಗಿಯೂ ಮಗನನ್ನು ಭೇಟಿಯಾಗಲು ಅವಕಾಶ ಕೊಟ್ಟಿಲ್ಲ ಎಂದು ಸಾವನ್ನಪ್ಪಿದ ಮಗುವಿನ ತಂದೆ ಹೇಳಿಕೆ ನೀಡಿದ್ದರು. ಸೂಚನಾ ಸೇಠ್ ಪತಿಯ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಜನವರಿ 7 ರಂದು ಗೋವಾದ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಸೂಚನಾ ಸೇಠ್ ಮಗನನ್ನು ಹತ್ಯೆ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
4 ವರ್ಷದ ಹೆತ್ತ ಮಗನನ್ನೇ ಕೊಲೆ ಮಾಡಿದ್ದ ಬೆಂಗಳೂರು ಸ್ಟಾರ್ಟ್ ಅಪ್ CEO
ಚಿಲ್ಡ್ರನ್ಸ್ ಆ್ಯಕ್ಟ್ನ ಸೆಕ್ಷನ್ 8ರಡಿ ಚಾರ್ಜ್ಶೀಟ್ ಸಲ್ಲಿಸಿದ ಗೋವಾ ಪೊಲೀಸ್
ಟಿಶ್ಯೂ ಪೇಪರ್ ಮೇಲೆ ಸೂಚನಾ ಸೇಠ್ ಬರೆದಿದ್ದ ಐಲೈನರ್ ಕೋರ್ಟ್ಗೆ
4 ವರ್ಷದ ಹೆತ್ತ ಮಗನನ್ನೇ ಕೊಲೆ ಮಾಡಿದ್ದ ಬೆಂಗಳೂರು ಸ್ಟಾರ್ಟ್ ಅಪ್ CEO ಸುಚನಾ ಸೇಠ್ ಪ್ರಕರಣದ ತನಿಖೆಯನ್ನ ಗೋವಾ ಪೊಲೀಸರು ಮುಗಿಸಿದ್ದಾರೆ. ಕೋರ್ಟ್ಗೆ ಗೋವಾ ಪೊಲೀಸರು ಚಾರ್ಚ್ಶೀಟ್ ಸಲ್ಲಿಕೆ ಮಾಡಿದ್ದು, 642 ಪುಟದ ದೋಷಾರೋಪಣೆಯಲ್ಲಿ ಸ್ಫೋಟಕ ಅಂಶವನ್ನು ದಾಖಲು ಮಾಡಿದ್ದಾರೆ.
ಐಪಿಸಿ ಸೆಕ್ಷನ್ 302ರ ಹತ್ಯೆ, ಸೆಕ್ಷನ್ 201ರ ಸಾಕ್ಷ್ಯನಾಶ ಆರೋಪದಡಿ ಗೋವಾ ಪೊಲೀಸರು ತನಿಖೆ ಕೈಗೊಂಡಿದ್ದರು. ಗೋವಾ ಚಿಲ್ಡ್ರನ್ಸ್ ಆ್ಯಕ್ಟ್ನ ಸೆಕ್ಷನ್ 8ರಡಿ ಈಗ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸೂಚನಾ ಸೇಠ್ ಅವರು ಕುತ್ತಿಗೆ ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನನ್ನ ಮಗನನ್ನು ಕೊಂದಿದ್ದು ಯಾಕೆ? ಗಂಡ ಕೇಳಿದ ಪ್ರಶ್ನೆಗೆ ಕೂಗಾಡಿದ ಸುಚನಾ ಸೇಠ್; ಹೇಳಿದ್ದೇನು?
ಟಿಶ್ಯೂ ಪೇಪರ್ ಮೇಲೆ ಸೂಚನಾ ಸೇಠ್ ಬರೆದಿದ್ದ ಐಲೈನರ್ ಕೂಡ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ. ಟಿಶ್ಯೂ ಪೇಪರ್ ಮೇಲಿನ ಬರಹ ಸೂಚನಾ ಸೇಠ್ ಅವರದ್ದೇ ಎಂದು ಹ್ಯಾಂಡ್ ರೈಟಿಂಗ್ ಎಕ್ಸ್ಪರ್ಟ್ಗಳು ಧೃಡಪಡಿಸಿದ್ದಾರೆ.
ಬೆಂಗಳೂರು ಕೋರ್ಟ್ ಆದೇಶದ ಹೊರತಾಗಿಯೂ ಮಗನನ್ನು ಭೇಟಿಯಾಗಲು ಅವಕಾಶ ಕೊಟ್ಟಿಲ್ಲ ಎಂದು ಸಾವನ್ನಪ್ಪಿದ ಮಗುವಿನ ತಂದೆ ಹೇಳಿಕೆ ನೀಡಿದ್ದರು. ಸೂಚನಾ ಸೇಠ್ ಪತಿಯ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಜನವರಿ 7 ರಂದು ಗೋವಾದ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಸೂಚನಾ ಸೇಠ್ ಮಗನನ್ನು ಹತ್ಯೆ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ