newsfirstkannada.com

ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

Share :

Published June 1, 2024 at 11:15am

    ನಾಳೆಯಿಂದ T20 ವಿಶ್ವಕಪ್​​ ಧಮಾಕ ಶುರುವಾಗಲಿದೆ

    ಶುರುವಿಗೂ ಮುನ್ನ ಟೂರ್ನಿ ಬಗ್ಗೆ ಅಪಸ್ವರ.. ಯಾಕೆ?

    ಐಸಿಸಿಗೆ ದೂರು ನೀಡಿದ ಕ್ಯಾಪ್ಟನ್ ರೋಹಿತ್, ದ್ರಾವಿಡ್?

ಟಿ20 ವಿಶ್ವಕಪ್​ ಬ್ಯಾಟಲ್​ಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. ಆಗಲೇ ಪಂದ್ಯಾವಳಿ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಟೀಮ್ ಇಂಡಿಯಾ, ಐಸಿಸಿ ವಿರುದ್ಧ ಸಿಡಿದೆದ್ದಿದೆ.

T20 ವಿಶ್ವಕಪ್​​​​. ಪ್ರತಿಷ್ಠಿತ ಕದನ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗಷ್ಟೇ ಅಲ್ಲ, ಟೂರ್ನಿ ಆಯೋಜಿಸುವ ಐಸಿಸಿ ಹಾಗೂ ದೇಶಗಳಿಗೂ ಪ್ರತಿಷ್ಠೆಯ ವಿಚಾರ. ವಿಶ್ವದರ್ಜೆಯ ಆಟಗಾರರು ಹಾಗೂ ತಂಡಗಳು ಇಲ್ಲಿ ಸೆಣಸಾಡುತ್ತವೆ. ಇದನ್ನು ಯಶಸ್ವಿಯಾಗಿ ನಡೆಸಿಕೊಡುವ ಜವಾಬ್ದಾರಿ ಐಸಿಸಿ ಮೇಲಿರುತ್ತೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೆ. ಆದರೆ 2024ನೇ ಟಿ20 ವಿಶ್ವಕಪ್​​ ವಾರ್​​ ಆರಂಭಕ್ಕೂ ಮುನ್ನವೇ ಟೂರ್ನಿ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ಇದನ್ನೂ ಓದಿ:ಇಂದು ಮಿಂಚಿದವರಿಗೆ ಜಾಕ್​ಪಾಟ್- ಅಭ್ಯಾಸ ಪಂದ್ಯದ ಪ್ಲಾನ್ ತಿಳಿಸಿದ ಕ್ಯಾಪ್ಟನ್ ಶರ್ಮಾ..!

ಸಮಸ್ಯೆಗಳ ಆಗರವಾದ T20 ವಿಶ್ವಕಪ್ ಟೂರ್ನಿ
ಟಿ20 ವಿಶ್ವಕಪ್​​ ಟೂರ್ನಿ ಆರಂಭಕ್ಕೂ ಮುನ್ನವೇ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ನ್ಯೂಯಾರ್ಕ್​ನಲ್ಲಿನ ಎವರೇಜ್ ಪ್ರಾಕ್ಟೀಸ್​​​​ ಸೌಲಭ್ಯಕ್ಕೆ ಟೀಮ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ ತಂಡದ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ವಿಶ್ವಕಪ್​​ಗೆ ಸಿದ್ಧತೆ ಆರಂಭಿಸಿದೆ. ಇಲ್ಲಿ ಅಭ್ಯಾಸಕ್ಕೆ ಸಮರ್ಪಕ ಸೌಲಭ್ಯಗಳು ಇಲ್ಲವೆಂದು ಟೀಮ್ ಇಂಡಿಯಾ ಕೆಂಡಕಾರಿದೆ. ಇಲ್ಲಿ ಎಲ್ಲವೂ ತಾತ್ಕಾಲಿಕವಾಗಿದೆ. ಪಿಚ್​ಗಳಿಂದ ಹಿಡಿದು ಇತರೆ ಸೌಲಭ್ಯಗಳ ತನಕ. ಈ ಬಗ್ಗೆ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​​​​​​ ರಾಹುಲ್​ ದ್ರಾವಿಡ್​ ಅವರು ಐಸಿಸಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳಿಗೆ ಸೂಕ್ತ ಸೌಲಭ್ಯ ಒದಗಿಸುವುದು ಐಸಿಸಿ ಕರ್ತವ್ಯ. ಆ ವಿಚಾರದಲ್ಲಿ ಐಸಿಸಿ ಆರಂಭಿಕ ಹಂತದಲ್ಲೆ ಫೇಲಾಗಿದೆ.

ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..

ಸಮಸ್ಯೆ ನಂ.1: ಸೀಮಿತ ಪಿಚ್​ಗಳಲ್ಲಿ ಅಭ್ಯಾಸ
ಟೀಮ್ ಇಂಡಿಯಾ ವಿಶ್ವಕಪ್​​ ತಯಾರಿಗೆ ನ್ಯೂಯಾರ್ಕ್​ನ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ಬೀಡುಬಿಟ್ಟಿದೆ. ಇಲ್ಲಿ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಸೀಮಿತ ಪಿಚ್​ಗಳನ್ನ ನೀಡಲಾಗಿದೆ. ಒಟ್ಟು ಆರು ಡ್ರಾಫ್​​ ಇನ್ ಪಿಚ್​​ಗಳಿವೆ. ಆದರೆ ಕೇವಲ ಮೂರು ಪಿಚ್​​​ನಲ್ಲಿ ಅಭ್ಯಾಸ ನಡೆಸುವಂತೆ ಸೂಚಿಸಲಾಗಿದೆ. ಅದು ಶಿಫ್ಟ್​​ ಸರದಿಯಂತೆ ಮಾಡಬೇಕು. ಇದರಿಂದ ಭಾರತ ತಂಡ ಅಂದುಕೊಂಡಂತೆ ಅಭ್ಯಾಸ ನಡೆಸಲು ಸಾಧ್ಯವಾಗ್ತಿಲ್ಲ.

ಸಮಸ್ಯೆ ನಂ.2: ಅಸಮರ್ಪಕ ಆಹಾರ ನಿರ್ವಹಣೆ
ಈ ಸಮಸ್ಯೆ ವಿರುದ್ಧವು ಟೀಮ್ ಇಂಡಿಯಾ ತೀವ್ರ ಬೇಸರ ವ್ಯಕ್ತಪಡಿಸಿದೆ. ಸೌಲಭ್ಯಗಳ ಹೊರತಾಗಿ ಸ್ಥಳದಲ್ಲಿ ಊಟದ ವ್ಯವಸ್ಥೆಯೂ ಸೂಕ್ತವಾಗಿಲ್ಲ. ಪಂದ್ಯಾವಳಿ ಕವರ್ ಮಾಡಲು ಬಂದಿರುವ ಪತ್ರಕರ್ತರು ಬಾಕ್ಸ್​ಗಳಲ್ಲಿ ಆಟಗಾರರಿಗೆ ಆಹಾರ ವಿತರಿಸಿದ್ದಾರೆ. ಇದನ್ನ ಸರಿಪಡಿಸುವಂತೆ ಕ್ಯಾಪ್ಟನ್ ರೋಹಿತ್​​​​​, ಐಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್​

ಸಮಸ್ಯೆ ನಂ.3: ಟ್ರೈನಿಂಗ್​ ಒಂದೆಡೆ.. ಪ್ರಾಕ್ಟೀಸ್​ ಇನ್ನೊಂದೆಡೆ..
ಭಾರತ ತಂಡ ಟ್ರೈನಿಂಗ್​ ಒಂದು ಕಡೆ ನಡೆಸಿದ್ರೆ ಅಭ್ಯಾಸವನ್ನ ಬೇರೆಡೆಗೆ ಮಾಡುತ್ತಿದೆ. ಅಧಿಕೃತವಾಗಿ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ಟ್ರೈನಿಂಗ್​​ ಸೌಲಭ್ಯವಿದೆ. ಆದರೆ ಅಭ್ಯಾಸಕ್ಕಾಗಿ ಬೇರೆಡೆಗೆ ಹೋಗಬೇಕಿದೆ. ಇದರಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಇನ್ನು ಪಂದ್ಯ ನಡೆಯುವ ನಸ್ಸೌ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಭ್ಯಾಸಕ್ಕೆ ಅವಕಾಶವಿಲ್ಲ. ಅಲ್ಲಿ ಕೇವಲ ಪಂದ್ಯಗಳು ನಡೆಯುತ್ತವೆ.
ಎನಿವೇ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿ ಬಂದಿದೆ. ಟೀಮ್ ಇಂಡಿಯಾಗೆ ಎದುರಾಗಿರೋ ಸಮಸ್ಯೆಗಳನ್ನ ಐಸಿಸಿ ಬೇಗನೆ ಸಡಿಪಡಿಸಲಿ. ಇಲ್ಲವಾದ್ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರಕ್ಕೀಡಾಬೇಕಾಗುತ್ತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

https://newsfirstlive.com/wp-content/uploads/2024/04/Virat-Kohli_Rohit_Dravid.jpg

    ನಾಳೆಯಿಂದ T20 ವಿಶ್ವಕಪ್​​ ಧಮಾಕ ಶುರುವಾಗಲಿದೆ

    ಶುರುವಿಗೂ ಮುನ್ನ ಟೂರ್ನಿ ಬಗ್ಗೆ ಅಪಸ್ವರ.. ಯಾಕೆ?

    ಐಸಿಸಿಗೆ ದೂರು ನೀಡಿದ ಕ್ಯಾಪ್ಟನ್ ರೋಹಿತ್, ದ್ರಾವಿಡ್?

ಟಿ20 ವಿಶ್ವಕಪ್​ ಬ್ಯಾಟಲ್​ಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. ಆಗಲೇ ಪಂದ್ಯಾವಳಿ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಟೀಮ್ ಇಂಡಿಯಾ, ಐಸಿಸಿ ವಿರುದ್ಧ ಸಿಡಿದೆದ್ದಿದೆ.

T20 ವಿಶ್ವಕಪ್​​​​. ಪ್ರತಿಷ್ಠಿತ ಕದನ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗಷ್ಟೇ ಅಲ್ಲ, ಟೂರ್ನಿ ಆಯೋಜಿಸುವ ಐಸಿಸಿ ಹಾಗೂ ದೇಶಗಳಿಗೂ ಪ್ರತಿಷ್ಠೆಯ ವಿಚಾರ. ವಿಶ್ವದರ್ಜೆಯ ಆಟಗಾರರು ಹಾಗೂ ತಂಡಗಳು ಇಲ್ಲಿ ಸೆಣಸಾಡುತ್ತವೆ. ಇದನ್ನು ಯಶಸ್ವಿಯಾಗಿ ನಡೆಸಿಕೊಡುವ ಜವಾಬ್ದಾರಿ ಐಸಿಸಿ ಮೇಲಿರುತ್ತೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೆ. ಆದರೆ 2024ನೇ ಟಿ20 ವಿಶ್ವಕಪ್​​ ವಾರ್​​ ಆರಂಭಕ್ಕೂ ಮುನ್ನವೇ ಟೂರ್ನಿ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ಇದನ್ನೂ ಓದಿ:ಇಂದು ಮಿಂಚಿದವರಿಗೆ ಜಾಕ್​ಪಾಟ್- ಅಭ್ಯಾಸ ಪಂದ್ಯದ ಪ್ಲಾನ್ ತಿಳಿಸಿದ ಕ್ಯಾಪ್ಟನ್ ಶರ್ಮಾ..!

ಸಮಸ್ಯೆಗಳ ಆಗರವಾದ T20 ವಿಶ್ವಕಪ್ ಟೂರ್ನಿ
ಟಿ20 ವಿಶ್ವಕಪ್​​ ಟೂರ್ನಿ ಆರಂಭಕ್ಕೂ ಮುನ್ನವೇ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ನ್ಯೂಯಾರ್ಕ್​ನಲ್ಲಿನ ಎವರೇಜ್ ಪ್ರಾಕ್ಟೀಸ್​​​​ ಸೌಲಭ್ಯಕ್ಕೆ ಟೀಮ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ ತಂಡದ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ವಿಶ್ವಕಪ್​​ಗೆ ಸಿದ್ಧತೆ ಆರಂಭಿಸಿದೆ. ಇಲ್ಲಿ ಅಭ್ಯಾಸಕ್ಕೆ ಸಮರ್ಪಕ ಸೌಲಭ್ಯಗಳು ಇಲ್ಲವೆಂದು ಟೀಮ್ ಇಂಡಿಯಾ ಕೆಂಡಕಾರಿದೆ. ಇಲ್ಲಿ ಎಲ್ಲವೂ ತಾತ್ಕಾಲಿಕವಾಗಿದೆ. ಪಿಚ್​ಗಳಿಂದ ಹಿಡಿದು ಇತರೆ ಸೌಲಭ್ಯಗಳ ತನಕ. ಈ ಬಗ್ಗೆ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​​​​​​ ರಾಹುಲ್​ ದ್ರಾವಿಡ್​ ಅವರು ಐಸಿಸಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳಿಗೆ ಸೂಕ್ತ ಸೌಲಭ್ಯ ಒದಗಿಸುವುದು ಐಸಿಸಿ ಕರ್ತವ್ಯ. ಆ ವಿಚಾರದಲ್ಲಿ ಐಸಿಸಿ ಆರಂಭಿಕ ಹಂತದಲ್ಲೆ ಫೇಲಾಗಿದೆ.

ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..

ಸಮಸ್ಯೆ ನಂ.1: ಸೀಮಿತ ಪಿಚ್​ಗಳಲ್ಲಿ ಅಭ್ಯಾಸ
ಟೀಮ್ ಇಂಡಿಯಾ ವಿಶ್ವಕಪ್​​ ತಯಾರಿಗೆ ನ್ಯೂಯಾರ್ಕ್​ನ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ಬೀಡುಬಿಟ್ಟಿದೆ. ಇಲ್ಲಿ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಸೀಮಿತ ಪಿಚ್​ಗಳನ್ನ ನೀಡಲಾಗಿದೆ. ಒಟ್ಟು ಆರು ಡ್ರಾಫ್​​ ಇನ್ ಪಿಚ್​​ಗಳಿವೆ. ಆದರೆ ಕೇವಲ ಮೂರು ಪಿಚ್​​​ನಲ್ಲಿ ಅಭ್ಯಾಸ ನಡೆಸುವಂತೆ ಸೂಚಿಸಲಾಗಿದೆ. ಅದು ಶಿಫ್ಟ್​​ ಸರದಿಯಂತೆ ಮಾಡಬೇಕು. ಇದರಿಂದ ಭಾರತ ತಂಡ ಅಂದುಕೊಂಡಂತೆ ಅಭ್ಯಾಸ ನಡೆಸಲು ಸಾಧ್ಯವಾಗ್ತಿಲ್ಲ.

ಸಮಸ್ಯೆ ನಂ.2: ಅಸಮರ್ಪಕ ಆಹಾರ ನಿರ್ವಹಣೆ
ಈ ಸಮಸ್ಯೆ ವಿರುದ್ಧವು ಟೀಮ್ ಇಂಡಿಯಾ ತೀವ್ರ ಬೇಸರ ವ್ಯಕ್ತಪಡಿಸಿದೆ. ಸೌಲಭ್ಯಗಳ ಹೊರತಾಗಿ ಸ್ಥಳದಲ್ಲಿ ಊಟದ ವ್ಯವಸ್ಥೆಯೂ ಸೂಕ್ತವಾಗಿಲ್ಲ. ಪಂದ್ಯಾವಳಿ ಕವರ್ ಮಾಡಲು ಬಂದಿರುವ ಪತ್ರಕರ್ತರು ಬಾಕ್ಸ್​ಗಳಲ್ಲಿ ಆಟಗಾರರಿಗೆ ಆಹಾರ ವಿತರಿಸಿದ್ದಾರೆ. ಇದನ್ನ ಸರಿಪಡಿಸುವಂತೆ ಕ್ಯಾಪ್ಟನ್ ರೋಹಿತ್​​​​​, ಐಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್​

ಸಮಸ್ಯೆ ನಂ.3: ಟ್ರೈನಿಂಗ್​ ಒಂದೆಡೆ.. ಪ್ರಾಕ್ಟೀಸ್​ ಇನ್ನೊಂದೆಡೆ..
ಭಾರತ ತಂಡ ಟ್ರೈನಿಂಗ್​ ಒಂದು ಕಡೆ ನಡೆಸಿದ್ರೆ ಅಭ್ಯಾಸವನ್ನ ಬೇರೆಡೆಗೆ ಮಾಡುತ್ತಿದೆ. ಅಧಿಕೃತವಾಗಿ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ಟ್ರೈನಿಂಗ್​​ ಸೌಲಭ್ಯವಿದೆ. ಆದರೆ ಅಭ್ಯಾಸಕ್ಕಾಗಿ ಬೇರೆಡೆಗೆ ಹೋಗಬೇಕಿದೆ. ಇದರಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಇನ್ನು ಪಂದ್ಯ ನಡೆಯುವ ನಸ್ಸೌ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಭ್ಯಾಸಕ್ಕೆ ಅವಕಾಶವಿಲ್ಲ. ಅಲ್ಲಿ ಕೇವಲ ಪಂದ್ಯಗಳು ನಡೆಯುತ್ತವೆ.
ಎನಿವೇ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿ ಬಂದಿದೆ. ಟೀಮ್ ಇಂಡಿಯಾಗೆ ಎದುರಾಗಿರೋ ಸಮಸ್ಯೆಗಳನ್ನ ಐಸಿಸಿ ಬೇಗನೆ ಸಡಿಪಡಿಸಲಿ. ಇಲ್ಲವಾದ್ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರಕ್ಕೀಡಾಬೇಕಾಗುತ್ತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More