ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಶುರುವಾಯ್ತು ಕಿರಿಕ್
ನಿನ್ನ ಪತ್ನಿ ನಂಬರ್ ಕೊಡು ಎಂದು ಕೇಳಿದ್ದ ಸ್ನೇಹಿತ..!
ಸ್ನೇಹಿತರ ಗಲಾಟೆಯಲ್ಲಿ ಮನೆ ಮೇಲೆ ಕಲ್ಲು ತೂರಾಟ
ಬೆಂಗಳೂರು: ಅವರಿಬ್ಬರು ಸ್ನೇಹಿತರು. ಬಾರಲ್ಲಿ ಒಟ್ಟಿಗೆ ಕುಳಿತು ಎಣ್ಣೇನೂ ಹಾಕಿದ್ರು. ಆದ್ರೆ ಎಲ್ಲವೂ ಚೆನ್ನಾಗಿರಬೇಕಾದ್ರೆ, ಸ್ನೇಹಿತ ಕೇಳಿದ ಆ ಮಾತಿನಿಂದಲೇ ಬಲುದೊಡ್ಡ ರಂಪಾಟ ನಡೆದು ಹೋಗಿದೆ. ಹಲ್ಲೆ ನಡೆದು ಮನೆಯನ್ನೇ ಧ್ವಂಸ ಮಾಡಿಸಿದೆ.
ಮುರಿದ ಬಾಗಿಲು, ಪುಡಿ ಪುಡಿಯಾದ ಕಿಟಕಿ ಗಾಜುಗಳು! ಈ ಘಟನೆಯೇ ಹೇಳುತ್ತಿದೆ ಇಲ್ಲೇನೋ ಆಗಬಾರದು ಆಗಿದೆ ಎಂದು. ಹೌದು, ಕುಡಿದ ಮತ್ತಿನಲ್ಲಿ ಶುರುವಾದ ಕಿರಿಕ್ ಮನೆಯನ್ನೇ ಧ್ವಂಸ ಮಾಡುವ ಹಂತಕ್ಕೆ ಬಂದು ತಲುಪಿದೆ.
ಇವನು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ . ಇವರಿಬ್ಬರು ವೈರಿಗಳಲ್ಲ ಇಬ್ಬರು ಸ್ನೇಹಿತರೇ. ಆದ್ರೆ, ಬಾರ್ನಲ್ಲಿ ಕುಳಿತು ಎಣ್ಣೆ ಹೊಡೆದ ಮೇಲೆ ವೈರಿಗಳಾಗಿದ್ದಾರೆ. ಅದು ಯಾವ ವಿಚಾರಕ್ಕೆ ಅಂತೀರಾ. ಹೆಂಡತಿ ನಂಬರ್ ಕೇಳಿದ್ದಕ್ಕೆ. ಹೌದು, ಈ ರಮೇಶ್ ಕೆಂಪನ ಬಳಿ ಹೆಂಡ್ತಿ ನಂಬರ್ ಕೇಳಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಕೆಂಪ ರಮೇಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ್ದೇಕೆ ಎಂದು ರಮೇಶ್ನಿಂದ ಹಲ್ಲೆ
ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ಕೆಂಪ ತೆರಳಿದ್ದ. ಆದ್ರೆ, ಇಷ್ಟಕ್ಕೆ ಸುಮ್ಮನಾಗದ ರಮೇಶ್, ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತೆರಳಿದ್ದಾನೆ.
ಸಂಬಂಧಿಕರ ಮೇಲೆ ಹಲ್ಲೆ ನಡೆದ ನಂತರ ರೊಚ್ಚಿಗೆದ್ದ ರಮೇಶ್ ಸಂಬಂಧಿಕರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ್ದಾರೆ. ಬಾಗಿಲು ಮುರಿದು, ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಸದ್ಯ ಚಂದ್ರಲೇಔಟ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೆಂಪೇಗೌಡನನ್ನ ಬಂಧಿಸಿದ್ದಾರೆ. ಜತೆಗೆ ಇಬ್ಬರ ಮಧ್ಯೆ ನಡೆದ ಜಗಳದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಶುರುವಾಯ್ತು ಕಿರಿಕ್
ನಿನ್ನ ಪತ್ನಿ ನಂಬರ್ ಕೊಡು ಎಂದು ಕೇಳಿದ್ದ ಸ್ನೇಹಿತ..!
ಸ್ನೇಹಿತರ ಗಲಾಟೆಯಲ್ಲಿ ಮನೆ ಮೇಲೆ ಕಲ್ಲು ತೂರಾಟ
ಬೆಂಗಳೂರು: ಅವರಿಬ್ಬರು ಸ್ನೇಹಿತರು. ಬಾರಲ್ಲಿ ಒಟ್ಟಿಗೆ ಕುಳಿತು ಎಣ್ಣೇನೂ ಹಾಕಿದ್ರು. ಆದ್ರೆ ಎಲ್ಲವೂ ಚೆನ್ನಾಗಿರಬೇಕಾದ್ರೆ, ಸ್ನೇಹಿತ ಕೇಳಿದ ಆ ಮಾತಿನಿಂದಲೇ ಬಲುದೊಡ್ಡ ರಂಪಾಟ ನಡೆದು ಹೋಗಿದೆ. ಹಲ್ಲೆ ನಡೆದು ಮನೆಯನ್ನೇ ಧ್ವಂಸ ಮಾಡಿಸಿದೆ.
ಮುರಿದ ಬಾಗಿಲು, ಪುಡಿ ಪುಡಿಯಾದ ಕಿಟಕಿ ಗಾಜುಗಳು! ಈ ಘಟನೆಯೇ ಹೇಳುತ್ತಿದೆ ಇಲ್ಲೇನೋ ಆಗಬಾರದು ಆಗಿದೆ ಎಂದು. ಹೌದು, ಕುಡಿದ ಮತ್ತಿನಲ್ಲಿ ಶುರುವಾದ ಕಿರಿಕ್ ಮನೆಯನ್ನೇ ಧ್ವಂಸ ಮಾಡುವ ಹಂತಕ್ಕೆ ಬಂದು ತಲುಪಿದೆ.
ಇವನು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ . ಇವರಿಬ್ಬರು ವೈರಿಗಳಲ್ಲ ಇಬ್ಬರು ಸ್ನೇಹಿತರೇ. ಆದ್ರೆ, ಬಾರ್ನಲ್ಲಿ ಕುಳಿತು ಎಣ್ಣೆ ಹೊಡೆದ ಮೇಲೆ ವೈರಿಗಳಾಗಿದ್ದಾರೆ. ಅದು ಯಾವ ವಿಚಾರಕ್ಕೆ ಅಂತೀರಾ. ಹೆಂಡತಿ ನಂಬರ್ ಕೇಳಿದ್ದಕ್ಕೆ. ಹೌದು, ಈ ರಮೇಶ್ ಕೆಂಪನ ಬಳಿ ಹೆಂಡ್ತಿ ನಂಬರ್ ಕೇಳಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಕೆಂಪ ರಮೇಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ್ದೇಕೆ ಎಂದು ರಮೇಶ್ನಿಂದ ಹಲ್ಲೆ
ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ಕೆಂಪ ತೆರಳಿದ್ದ. ಆದ್ರೆ, ಇಷ್ಟಕ್ಕೆ ಸುಮ್ಮನಾಗದ ರಮೇಶ್, ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತೆರಳಿದ್ದಾನೆ.
ಸಂಬಂಧಿಕರ ಮೇಲೆ ಹಲ್ಲೆ ನಡೆದ ನಂತರ ರೊಚ್ಚಿಗೆದ್ದ ರಮೇಶ್ ಸಂಬಂಧಿಕರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ್ದಾರೆ. ಬಾಗಿಲು ಮುರಿದು, ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಸದ್ಯ ಚಂದ್ರಲೇಔಟ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೆಂಪೇಗೌಡನನ್ನ ಬಂಧಿಸಿದ್ದಾರೆ. ಜತೆಗೆ ಇಬ್ಬರ ಮಧ್ಯೆ ನಡೆದ ಜಗಳದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ