ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

author-image
Gopal Kulkarni
Updated On
ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?
Advertisment
  • ರೇಣುಕಾಸ್ವಾಮಿ ಭೇಟಿಗೂ ಮೊದಲು ಮಾತನಾಡುತ್ತಿರಲಿಲ್ಲ ದರ್ಶನ್, ಪವಿತ್ರಾ!
  • ನಟ ದರ್ಶನ್ ಜೊತೆ ಪವಿತ್ರಾಗೌಡ ಮುನಿಸಿಕೊಳ್ಳಲು ಅಸಲಿ ಕಾರಣವೇನು?
  • ಜಗಳ, ಮೌನದ ಬಗ್ಗೆ ಪೊಲೀಸರ ಎದುರು ಹೇಳಿಕೆ ನೀಡಿರುವ ಪವಿತ್ರಾಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಪ್ರತಿಯೊಬ್ಬ ಆರೋಪಿಯ ಸ್ವ-ಇಚ್ಛಾ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು 3991 ಪುಟದ ಜಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದಾರೆ. ಆರೋಪಿ ನಂಬರ್ 1 ಆಗಿರುವ ಪವಿತ್ರಾಗೌಡರನ್ನು ವಿಚಾರಣೆ ಮಾಡಿರುವ ಪೊಲೀಸರು ಅವರ ಹೇಳಿಕೆಯನ್ನು ಪುಟ ಸಂಖ್ಯೆ 3849 ರಿಂದ 3851 ಪುಟದವರೆಗೆ ಪವಿತ್ರಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಪವಿತ್ರಾ ತಮ್ಮ ಹೇಳಿಕೆಯಲ್ಲಿ ಈ ಹಿಂದೆ ದರ್ಶನ್ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರ ಬಗ್ಗೆಯೂ ಹೇಳಿದ್ದಾರೆ.

publive-image

ಇದನ್ನೂ ಓದಿ:ದರ್ಶನ್‌ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?

ರೇಣುಕಾಸ್ವಾಮಿ ಕೊಲೆಯ ಒಂದು ತಿಂಗಳ ಮುಂಚೆ ಪವಿತ್ರಾಗೌಡ ದರ್ಶನ್​ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರು. ಅದಕ್ಕೆ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಇದೇ ವರ್ಷ ಮೇ 19 ರಂದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಜೊತೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ನನಗೆ ತಿಳಿಸದೇ ಪತ್ನಿಯೊಂದಿಗೆ ದುಬೈಗೆ ಹೋಗಿದ್ದರಿಂದ ನಾನು ಕೋಪಗೊಂಡು ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೆ ಎಂದು ತಮ್ಮ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ದಿನ ನಡೆದಿದ್ದೇನು? ನಟ ದರ್ಶನ್​​​ ಬಿಚ್ಚಿಟ್ಟ ಇಂಚಿಂಚೂ ಶಾಕಿಂಗ್​ ಮಾಹಿತಿ ಇಲ್ಲಿದೆ!

ಇದರೊಂದಿಗೆ ಫೆಬ್ರವರಿಯಿಂದ ಗೌತಮ್ ಕೆ ಎಸ್ ಎಂಬ ಖಾತೆಯಿಂದ ನನಗೆ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆಯೂ ಪವಿತ್ರಾಗೌಡ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment