ಯುವ ರಾಜ್ಕುಮಾರ್ ‘ಯುವ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ
‘ಯುವ’ ಸಿನಿಮಾ ಬುಕ್ಕಿಂಗ್ ಪ್ರಾರಂಭ.. ಕಾದುಕುಳಿತ ಅಭಿಮಾನಿ ದೇವ್ರುಗಳು
29ರಂದು ರಿಲೀಸ್ ಆಗಲಿದೆ ಸಂತೋಷ್ ಆನಂದ್ರಾಮ್ ನಿರ್ದೇಶನ ಸಿನಿಮಾ
ರಾಜ್ ಕುಟುಂಬದ ಕುಡಿ ಯುವ ರಾಜ್ಕುಮಾರ್ ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಲಿಡುವ ಸಮಯ ಬಂದಿದೆ. ಚೊಚ್ಚಲ ‘ಯುವ’ ಸಿನಿಮಾದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದಹಾಗೆಯೇ ಇದೇ 29 ರಂದು ಯುವ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ನೂತನ ಸಿನಿಮಾಗಾಗಿ ರಾಜ್ ಕುಟುಂಬ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಯುವ ಬುಕ್ಕಿಂಗ್ ಆರಂಭ
‘ಯುವ’ ಸದ್ಯ ಸ್ಯಾಂಗ್ ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದೆ. ಕಾಲೇಜು ಸ್ಟೂಡೆಂಟ್ ಆಗಿ ಯುವರಾಜ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕುತೂಹಲತೆ ಹುಟ್ಟಿಸಿದ ಈ ಸಿನಿಮಾದ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಈಗಾಗಲೇ ಅನೇಕರು ಸಿನಿಮಾ ಟಿಕೆಟ್ ಕಾಯ್ದಿರಿಸಿಕೊಂಡಿದ್ದಾರೆ.
ಮಾರ್ಚ್ 28ರ ಮಿಡ್ ನೈಟ್ ಶೋಗೆ ಬೇಡಿಕೆ ಹೆಚ್ಚಾಗಿದ್ದು, ನೂರಕ್ಕೂ ಹೆಚ್ಚು ಕಡೆ ಮಿಡ್ ನೈಟ್ ಶೋಗೆ ಪ್ಲಾನ್ ಮಾಡಲಾಗುತ್ತಿದೆ. ‘ಯುವ’ ಅಭಿಮಾನಿಗಳಂತೂ ನೆಚ್ಚಿನ ನಟನ ಸಿನಿಮಾ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಲೂಸಿಫರ್-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕಡೆಯಿಂದ ಆಹ್ವಾನ!
ಇನ್ನು ‘ಯುವ’ ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಹೊಂಬಾಳೆ ಬ್ಯಾನರ್ನಡಿ ಈ ಸಿನಿಮಾ ಮೂಡಿ ಬಂದಿದೆ. ಮಾರ್ಚ್ 29ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವ ರಾಜ್ಕುಮಾರ್ ‘ಯುವ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ
‘ಯುವ’ ಸಿನಿಮಾ ಬುಕ್ಕಿಂಗ್ ಪ್ರಾರಂಭ.. ಕಾದುಕುಳಿತ ಅಭಿಮಾನಿ ದೇವ್ರುಗಳು
29ರಂದು ರಿಲೀಸ್ ಆಗಲಿದೆ ಸಂತೋಷ್ ಆನಂದ್ರಾಮ್ ನಿರ್ದೇಶನ ಸಿನಿಮಾ
ರಾಜ್ ಕುಟುಂಬದ ಕುಡಿ ಯುವ ರಾಜ್ಕುಮಾರ್ ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಲಿಡುವ ಸಮಯ ಬಂದಿದೆ. ಚೊಚ್ಚಲ ‘ಯುವ’ ಸಿನಿಮಾದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದಹಾಗೆಯೇ ಇದೇ 29 ರಂದು ಯುವ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ನೂತನ ಸಿನಿಮಾಗಾಗಿ ರಾಜ್ ಕುಟುಂಬ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಯುವ ಬುಕ್ಕಿಂಗ್ ಆರಂಭ
‘ಯುವ’ ಸದ್ಯ ಸ್ಯಾಂಗ್ ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದೆ. ಕಾಲೇಜು ಸ್ಟೂಡೆಂಟ್ ಆಗಿ ಯುವರಾಜ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕುತೂಹಲತೆ ಹುಟ್ಟಿಸಿದ ಈ ಸಿನಿಮಾದ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಈಗಾಗಲೇ ಅನೇಕರು ಸಿನಿಮಾ ಟಿಕೆಟ್ ಕಾಯ್ದಿರಿಸಿಕೊಂಡಿದ್ದಾರೆ.
ಮಾರ್ಚ್ 28ರ ಮಿಡ್ ನೈಟ್ ಶೋಗೆ ಬೇಡಿಕೆ ಹೆಚ್ಚಾಗಿದ್ದು, ನೂರಕ್ಕೂ ಹೆಚ್ಚು ಕಡೆ ಮಿಡ್ ನೈಟ್ ಶೋಗೆ ಪ್ಲಾನ್ ಮಾಡಲಾಗುತ್ತಿದೆ. ‘ಯುವ’ ಅಭಿಮಾನಿಗಳಂತೂ ನೆಚ್ಚಿನ ನಟನ ಸಿನಿಮಾ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಲೂಸಿಫರ್-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕಡೆಯಿಂದ ಆಹ್ವಾನ!
ಇನ್ನು ‘ಯುವ’ ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಹೊಂಬಾಳೆ ಬ್ಯಾನರ್ನಡಿ ಈ ಸಿನಿಮಾ ಮೂಡಿ ಬಂದಿದೆ. ಮಾರ್ಚ್ 29ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ