ವಿಶ್ವಕಪ್ ತಂಡದಿಂದ ರಾಹುಲ್ ಕೈಬಿಟ್ಟಿದ್ದಕ್ಕೆ ಆಕ್ರೋಶ
ಕನ್ನಡಿಗನ ಬೆಂಬಲಕ್ಕೆ ನಿಂತ ಕ್ರಿಕೆಟ್ ಎಕ್ಸ್ಫರ್ಟ್ಸ್ ಅಂಡ್ ಆ್ಯಕ್ಟರ್ಸ್
ಸಿಡಿದ ರಾಹುಲ್.. ಸೈಲೆಂಟಾಗಿ ಸೆಲೆಕ್ಟರ್ಸ್ಗೆ ಕೊಟ್ರು ಗುನ್ನಾ
ಬಿಗ್ ಅಪ್ಸೆಟ್.. ಬಿಗ್ ಸರ್ಪ್ರೈಸ್.. ಕನ್ನಡಿಗ ಕೆಎಲ್ ರಾಹುಲ್ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದಕ್ಕೆ ಎಲ್ಲರಿಗೂ ಶಾಕ್ ಆಗಿದೆ. ಪ್ರಸಂಟ್ ಫಾರ್ಮ್, ಅನುಭವ ಎಲ್ಲವೂ ಇದ್ದರೂ ಕನ್ನಡಿಗನಿಗೆ ಟಿಕೆಟ್ ಮಿಸ್ ಆಗಿದೆ. ಕನ್ನಡದ ಕಲಿಯನ್ನ ತಂಡಕ್ಕೆ ಪರಿಗಣಿಸದಿದ್ದಕ್ಕೆ ಆಕ್ರೋಶದ ಸುರಿಮಳೆ ವ್ಯಕ್ತವಾಗಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿ 3 ದಿನ ಕಳೆದಿದೆ. ಆದರೂ ಆಟಗಾರರ ಆಯ್ಕೆ ವಿಚಾರವಾಗಿ ಪರ-ವಿರೋಧ ಚರ್ಚೆಗೆ ಪುಲ್ಸ್ಟಾಪ್ ಬಿದ್ದಿಲ್ಲ. ಎಸ್ಪೆಷಲಿ ಸ್ಟಾರ್ ಬ್ಯಾಟರ್ , ಕರುನಾಡ ಕಲಿ ಕೆ.ಎಲ್.ರಾಹುಲ್ ಕಡೆಗಣನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ಗೆ ವಿಶ್ವಕಪ್ ಟಿಕೆಟ್ ಸಿಗೋದು ಹಂಡ್ರೆಂಡ್ ಪರ್ಸಂಟ್ ಫಿಕ್ಸ್ ಎಂದು ಎಲ್ಲರೂ ಭಾವಿಸಿದ್ರು. ಅಜಿತ್ ಅಗರ್ಕರ್ ಅಂಡ್ ಟೀಮ್ ರಾಹುಲ್ರನ್ನ ಕೈಬಿಟ್ಟು ಬಿಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ:ವಿಶ್ವಕಪ್ ಕನಸು ನುಚ್ಚುನೂರು.. ರಿಂಕುಗೆ ವಿಶ್ವಕಪ್ ಟಿಕೆಟ್ ಮಿಸ್ ಆಗಿದ್ದೇಕೆ..?
ವಿಶ್ವಕಪ್ ತಂಡದಿಂದ ರಾಹುಲ್ ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ
ಕನಸಲ್ಲೂ ರಾಹುಲ್ ವಿಶ್ವಕಪ್ ಟೀಮ್ನಿಂದ ಕಿಕೌಟ್ ಆಗ್ತಾರೆ ಅಂತ ಯಾರೊಬ್ಬರು ಯೋಚಿಸಿರಲಿಲ್ಲ. ಯಾಕಂದ್ರೆ ಪ್ರಸಕ್ತ ಐಪಿಎಲ್ನಲ್ಲಿ ಸಾಲಿಡ್ ಟಚ್ನಲ್ಲಿದ್ರು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಮಲ್ ಮಾಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಟಿ20 ರೆಕಾರ್ಡ್ಸ್ ಉತ್ತಮವಾಗಿತ್ತು. ಜೊತೆಗೆ ಮೋಸ್ಟ್ ಸೀನಿಯರ್ ಕ್ರಿಕೆಟರ್ ಬೇರೆ. ಹೀಗಾಗಿ ರಾಹುಲ್ಗೆ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಕ್ಕೇ ಸಿಗುತ್ತೆ ಅನ್ನೋದು ಕನ್ನಡಿಗರ ಹೆಬ್ಬಕೆಯಾಗಿತ್ತು. ಆದ್ರೀಗ ಸೆಲೆಕ್ಟರ್ಸ್ ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.
ರಾಹುಲ್ಗೆ ಟಿಕೆಟ್ ಮಿಸ್.. LSG ಫ್ರಾಂಚೈಸಿ ಕೆಂಡಾಮಂಡಲ..!
ವಿಶ್ವಕಪ್ ತಂಡ ಪ್ರಕಟವಾದ ದಿನ ರಾಹುಲ್ ಡ್ರಾಪ್ ವಿಚಾರ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ತಮ್ಮ ನಾಯಕನಿಗೆ ಸ್ಥಾನ ಕೈತಪ್ಪಿದ ಸುದ್ದಿ ಗೊತ್ತಾಗ್ತಿದ್ದಂತೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೆರಳಿ ಕೆಂಡವಾಯ್ತು. ಟ್ವಿಟರ್ನಲ್ಲಿ ರಾಹುಲ್ ಪೋಟೋ ಹಾಕಿ ನಮ್ಮ ನಂ.1, ಝೀರೋ ದಿನದಿಂದ ಅಂತ ಕ್ಯಾಪ್ಷನ್ ನೀಡಿ ಆಯ್ಕೆಗಾರರಿಗೆ ಸಖತ್ ಟಾಂಗ್ ಕೊಡ್ತು.
ಇದನ್ನೂ ಓದಿ:‘ನಮ್ ಜನ ಗೊತ್ತಲ್ವಾ..?’ ಆರ್ಸಿಬಿ ಅಭಿಮಾನಿಗಳ ಹೃದಯಕ್ಕೆ ಟಚ್ ಮಾಡಿದ ವಿಲ್ ಜಾಕ್ಸ್.. Video
Great to see IPL teams giving lots of value to hardcore fans. 👌
– A heart touching video of a KL Rahul & LSG fan. pic.twitter.com/8Kgc9Xz2JW
— Johns. (@CricCrazyJohns) May 3, 2024
ಕನ್ನಡಿಗನ ಪರ ಬಾಲಿವುಡ್ ಆ್ಯಕ್ಟರ್ ಬ್ಯಾಟಿಂಗ್
ಬರೀ ಫ್ಯಾನ್ಸ್, ಕ್ರಿಕೆಟ್ ಎಕ್ಸ್ಫರ್ಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್ ಅಷ್ಟೇ ಅಲ್ಲ. ಬಾಲಿವುಡ್ ಆ್ಯಕ್ಟರ್ಸ್ ಕೂಡ ರಾಹುಲ್ಗೆ ಸ್ಥಾನ ಮಿಸ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ರಿತೇಶ್ ದೇಶ್ಮುಖ್ ಟ್ವೀಟ್ ಮಾಡಿ ರಾಹುಲ್ ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ವಿಶ್ವಕಪ್ಗೆ ಟೀಮ್ ಅನೌನ್ಸ್ ದಿನವೇ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಟಾಸ್ ವೇಳೆ ಕಾಮೆಂಟೇಟರ್ ಇಯಾನ್ ಬಿಷಪ್ ನಿಮ್ಮ ಮೈಂಡ್ಸೆಟ್ ಇವತ್ತು ಹೇಗಿದೆ ಅಂತ ಪ್ರಶ್ನಿಸಿದ್ರು. ಅದಕ್ಕೆ ರಾಹುಲ್ ಕೊಟ್ಟ ಉತ್ತರ ಹೀಗಿತ್ತು.
ಕಾಮೆಂಟೇಟರ್: ಇವತ್ತಿನ ಪಂದ್ಯ ನಿಮಗೆ ತುಂಬಾ ಮಹತ್ವದ್ದು, ನಿಮ್ಮ ಮೈಂಡ್ಸೇಟ್ ಹೇಗಿದೆ?
ಕೆ.ಎಲ್.ರಾಹುಲ್: ಹೆಚ್ಚು ಕಡಿಮೆ ಮೈಂಡ್ಸೆಟ್ ಸೇಮ್ ಇದೆ. ಸಮತೋಲನದಿಂದಿರಲು ಪ್ರಯತ್ನಿಸುತ್ತೇನೆ. ಅದರಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಬೇಕಿದೆ
ಚುಟುಕು ದಂಗಲ್, IPLನಲ್ಲಿ ಬೊಂಬಾಟ್ ಬ್ಯಾಟಿಂಗ್
ರಾಹುಲ್ ಎಂತಹ ಪ್ಲೇಯರ್ ಅನ್ನೋದನ್ನ ಬಿಡಿಸಿಹೇಳಬೇಕಿಲ್ಲ. ಅದೆಷ್ಟೊ ಪಂದ್ಯಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಸಂಕಷ್ಟದಲ್ಲಿ ನೆರವಾಗೋದ್ರಲ್ಲಿ ರಾಹುಲ್ ನಿಸ್ಸೀಮ. ಅದನ್ನ ಈ ಅಂಕಿ-ಸಂಖ್ಯೆಗಳೇ ಸಾರಿ ಸಾರಿ ಹೇಳ್ತಿವೆ. 2022 ರಿಂದ ಕೆಎಲ್ ರಾಹುಲ್ ಭಾರತ ತಂಡದ ಪರ 16 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 28.93 ರ ಎವರೇಜ್ನಲ್ಲಿ 438 ರನ್ ಕೊಳ್ಳೆ ಹೊಡೆದಿದ್ದಾರೆ. 6 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಪ್ರಸಕ್ತ ಐಪಿಎಲ್ನಲ್ಲಿ ರಾಹುಲ್ ಗುಡ್ ಟಚ್ನಲ್ಲಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 406 ರನ್ ಸಿಡಿಸಿದ್ದಾರೆ. ಅವರ ಬ್ಯಾಟ್ನಿಂದ 3 ಅರ್ಧಶತಕ ಮೂಡಿ ಬಂದಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ
ಇಂತಹ ಮ್ಯಾಚ್ ವಿನ್ನರ್ನನ್ನ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಓರ್ವ ಕನ್ನಡಿಗನೂ ಇಲ್ಲದೇ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಆಡುತ್ತಿದೆ. ಇದರಿಂದ ರಾಹುಲ್ ನಿರಾಸೆಗೊಳ್ಳದೇ ಉತ್ತಮ ಪ್ರದರ್ಶನತ್ತ ಗಮನ ಹರಿಸಲಿ. ಬ್ಯಾಟ್ನಿಂದಲೇ ಕಡೆಗಣಿಸಿದವರಿಗೆ ಉತ್ತರ ಕೊಡುವಂತಾಗಲಿ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ವಿಶ್ವಕಪ್ ತಂಡದಿಂದ ರಾಹುಲ್ ಕೈಬಿಟ್ಟಿದ್ದಕ್ಕೆ ಆಕ್ರೋಶ
ಕನ್ನಡಿಗನ ಬೆಂಬಲಕ್ಕೆ ನಿಂತ ಕ್ರಿಕೆಟ್ ಎಕ್ಸ್ಫರ್ಟ್ಸ್ ಅಂಡ್ ಆ್ಯಕ್ಟರ್ಸ್
ಸಿಡಿದ ರಾಹುಲ್.. ಸೈಲೆಂಟಾಗಿ ಸೆಲೆಕ್ಟರ್ಸ್ಗೆ ಕೊಟ್ರು ಗುನ್ನಾ
ಬಿಗ್ ಅಪ್ಸೆಟ್.. ಬಿಗ್ ಸರ್ಪ್ರೈಸ್.. ಕನ್ನಡಿಗ ಕೆಎಲ್ ರಾಹುಲ್ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದಕ್ಕೆ ಎಲ್ಲರಿಗೂ ಶಾಕ್ ಆಗಿದೆ. ಪ್ರಸಂಟ್ ಫಾರ್ಮ್, ಅನುಭವ ಎಲ್ಲವೂ ಇದ್ದರೂ ಕನ್ನಡಿಗನಿಗೆ ಟಿಕೆಟ್ ಮಿಸ್ ಆಗಿದೆ. ಕನ್ನಡದ ಕಲಿಯನ್ನ ತಂಡಕ್ಕೆ ಪರಿಗಣಿಸದಿದ್ದಕ್ಕೆ ಆಕ್ರೋಶದ ಸುರಿಮಳೆ ವ್ಯಕ್ತವಾಗಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿ 3 ದಿನ ಕಳೆದಿದೆ. ಆದರೂ ಆಟಗಾರರ ಆಯ್ಕೆ ವಿಚಾರವಾಗಿ ಪರ-ವಿರೋಧ ಚರ್ಚೆಗೆ ಪುಲ್ಸ್ಟಾಪ್ ಬಿದ್ದಿಲ್ಲ. ಎಸ್ಪೆಷಲಿ ಸ್ಟಾರ್ ಬ್ಯಾಟರ್ , ಕರುನಾಡ ಕಲಿ ಕೆ.ಎಲ್.ರಾಹುಲ್ ಕಡೆಗಣನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ಗೆ ವಿಶ್ವಕಪ್ ಟಿಕೆಟ್ ಸಿಗೋದು ಹಂಡ್ರೆಂಡ್ ಪರ್ಸಂಟ್ ಫಿಕ್ಸ್ ಎಂದು ಎಲ್ಲರೂ ಭಾವಿಸಿದ್ರು. ಅಜಿತ್ ಅಗರ್ಕರ್ ಅಂಡ್ ಟೀಮ್ ರಾಹುಲ್ರನ್ನ ಕೈಬಿಟ್ಟು ಬಿಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ:ವಿಶ್ವಕಪ್ ಕನಸು ನುಚ್ಚುನೂರು.. ರಿಂಕುಗೆ ವಿಶ್ವಕಪ್ ಟಿಕೆಟ್ ಮಿಸ್ ಆಗಿದ್ದೇಕೆ..?
ವಿಶ್ವಕಪ್ ತಂಡದಿಂದ ರಾಹುಲ್ ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ
ಕನಸಲ್ಲೂ ರಾಹುಲ್ ವಿಶ್ವಕಪ್ ಟೀಮ್ನಿಂದ ಕಿಕೌಟ್ ಆಗ್ತಾರೆ ಅಂತ ಯಾರೊಬ್ಬರು ಯೋಚಿಸಿರಲಿಲ್ಲ. ಯಾಕಂದ್ರೆ ಪ್ರಸಕ್ತ ಐಪಿಎಲ್ನಲ್ಲಿ ಸಾಲಿಡ್ ಟಚ್ನಲ್ಲಿದ್ರು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಮಲ್ ಮಾಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಟಿ20 ರೆಕಾರ್ಡ್ಸ್ ಉತ್ತಮವಾಗಿತ್ತು. ಜೊತೆಗೆ ಮೋಸ್ಟ್ ಸೀನಿಯರ್ ಕ್ರಿಕೆಟರ್ ಬೇರೆ. ಹೀಗಾಗಿ ರಾಹುಲ್ಗೆ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಕ್ಕೇ ಸಿಗುತ್ತೆ ಅನ್ನೋದು ಕನ್ನಡಿಗರ ಹೆಬ್ಬಕೆಯಾಗಿತ್ತು. ಆದ್ರೀಗ ಸೆಲೆಕ್ಟರ್ಸ್ ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.
ರಾಹುಲ್ಗೆ ಟಿಕೆಟ್ ಮಿಸ್.. LSG ಫ್ರಾಂಚೈಸಿ ಕೆಂಡಾಮಂಡಲ..!
ವಿಶ್ವಕಪ್ ತಂಡ ಪ್ರಕಟವಾದ ದಿನ ರಾಹುಲ್ ಡ್ರಾಪ್ ವಿಚಾರ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ತಮ್ಮ ನಾಯಕನಿಗೆ ಸ್ಥಾನ ಕೈತಪ್ಪಿದ ಸುದ್ದಿ ಗೊತ್ತಾಗ್ತಿದ್ದಂತೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೆರಳಿ ಕೆಂಡವಾಯ್ತು. ಟ್ವಿಟರ್ನಲ್ಲಿ ರಾಹುಲ್ ಪೋಟೋ ಹಾಕಿ ನಮ್ಮ ನಂ.1, ಝೀರೋ ದಿನದಿಂದ ಅಂತ ಕ್ಯಾಪ್ಷನ್ ನೀಡಿ ಆಯ್ಕೆಗಾರರಿಗೆ ಸಖತ್ ಟಾಂಗ್ ಕೊಡ್ತು.
ಇದನ್ನೂ ಓದಿ:‘ನಮ್ ಜನ ಗೊತ್ತಲ್ವಾ..?’ ಆರ್ಸಿಬಿ ಅಭಿಮಾನಿಗಳ ಹೃದಯಕ್ಕೆ ಟಚ್ ಮಾಡಿದ ವಿಲ್ ಜಾಕ್ಸ್.. Video
Great to see IPL teams giving lots of value to hardcore fans. 👌
– A heart touching video of a KL Rahul & LSG fan. pic.twitter.com/8Kgc9Xz2JW
— Johns. (@CricCrazyJohns) May 3, 2024
ಕನ್ನಡಿಗನ ಪರ ಬಾಲಿವುಡ್ ಆ್ಯಕ್ಟರ್ ಬ್ಯಾಟಿಂಗ್
ಬರೀ ಫ್ಯಾನ್ಸ್, ಕ್ರಿಕೆಟ್ ಎಕ್ಸ್ಫರ್ಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್ ಅಷ್ಟೇ ಅಲ್ಲ. ಬಾಲಿವುಡ್ ಆ್ಯಕ್ಟರ್ಸ್ ಕೂಡ ರಾಹುಲ್ಗೆ ಸ್ಥಾನ ಮಿಸ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ರಿತೇಶ್ ದೇಶ್ಮುಖ್ ಟ್ವೀಟ್ ಮಾಡಿ ರಾಹುಲ್ ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ವಿಶ್ವಕಪ್ಗೆ ಟೀಮ್ ಅನೌನ್ಸ್ ದಿನವೇ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಟಾಸ್ ವೇಳೆ ಕಾಮೆಂಟೇಟರ್ ಇಯಾನ್ ಬಿಷಪ್ ನಿಮ್ಮ ಮೈಂಡ್ಸೆಟ್ ಇವತ್ತು ಹೇಗಿದೆ ಅಂತ ಪ್ರಶ್ನಿಸಿದ್ರು. ಅದಕ್ಕೆ ರಾಹುಲ್ ಕೊಟ್ಟ ಉತ್ತರ ಹೀಗಿತ್ತು.
ಕಾಮೆಂಟೇಟರ್: ಇವತ್ತಿನ ಪಂದ್ಯ ನಿಮಗೆ ತುಂಬಾ ಮಹತ್ವದ್ದು, ನಿಮ್ಮ ಮೈಂಡ್ಸೇಟ್ ಹೇಗಿದೆ?
ಕೆ.ಎಲ್.ರಾಹುಲ್: ಹೆಚ್ಚು ಕಡಿಮೆ ಮೈಂಡ್ಸೆಟ್ ಸೇಮ್ ಇದೆ. ಸಮತೋಲನದಿಂದಿರಲು ಪ್ರಯತ್ನಿಸುತ್ತೇನೆ. ಅದರಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಬೇಕಿದೆ
ಚುಟುಕು ದಂಗಲ್, IPLನಲ್ಲಿ ಬೊಂಬಾಟ್ ಬ್ಯಾಟಿಂಗ್
ರಾಹುಲ್ ಎಂತಹ ಪ್ಲೇಯರ್ ಅನ್ನೋದನ್ನ ಬಿಡಿಸಿಹೇಳಬೇಕಿಲ್ಲ. ಅದೆಷ್ಟೊ ಪಂದ್ಯಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಸಂಕಷ್ಟದಲ್ಲಿ ನೆರವಾಗೋದ್ರಲ್ಲಿ ರಾಹುಲ್ ನಿಸ್ಸೀಮ. ಅದನ್ನ ಈ ಅಂಕಿ-ಸಂಖ್ಯೆಗಳೇ ಸಾರಿ ಸಾರಿ ಹೇಳ್ತಿವೆ. 2022 ರಿಂದ ಕೆಎಲ್ ರಾಹುಲ್ ಭಾರತ ತಂಡದ ಪರ 16 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 28.93 ರ ಎವರೇಜ್ನಲ್ಲಿ 438 ರನ್ ಕೊಳ್ಳೆ ಹೊಡೆದಿದ್ದಾರೆ. 6 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಪ್ರಸಕ್ತ ಐಪಿಎಲ್ನಲ್ಲಿ ರಾಹುಲ್ ಗುಡ್ ಟಚ್ನಲ್ಲಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 406 ರನ್ ಸಿಡಿಸಿದ್ದಾರೆ. ಅವರ ಬ್ಯಾಟ್ನಿಂದ 3 ಅರ್ಧಶತಕ ಮೂಡಿ ಬಂದಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ
ಇಂತಹ ಮ್ಯಾಚ್ ವಿನ್ನರ್ನನ್ನ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಓರ್ವ ಕನ್ನಡಿಗನೂ ಇಲ್ಲದೇ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಆಡುತ್ತಿದೆ. ಇದರಿಂದ ರಾಹುಲ್ ನಿರಾಸೆಗೊಳ್ಳದೇ ಉತ್ತಮ ಪ್ರದರ್ಶನತ್ತ ಗಮನ ಹರಿಸಲಿ. ಬ್ಯಾಟ್ನಿಂದಲೇ ಕಡೆಗಣಿಸಿದವರಿಗೆ ಉತ್ತರ ಕೊಡುವಂತಾಗಲಿ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್