ಕ್ರಾಸ್ನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಹಲವರಿಗೆ ಗಂಭೀರ ಗಾಯ
ಪ್ರವಾಸಕ್ಕೆ ಬಂದಿದ್ದ ಗ್ರಾಮಸ್ಥರ ಬಂಸ್ವೊಂದು ಪಲ್ಟಿಯಾಗಿ ಅಪಘಾತ
ಜೋಗ ಜಲಪಾತ ಮುಗಿಸಿ, ಗೋಕರ್ಣ ಕಡೆಗೆ ಹೊರಟಿದ್ದ ಪ್ರವಾಸಿಗರು
ಶಿವಮೊಗ್ಗ: ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಶಿವಮೊಗ್ಗ -ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ನಲ್ಲಿ ನಡೆದಿದೆ.
ಪ್ರವಾಸಕ್ಕೆಂದು 2 ಬಸ್ನಲ್ಲಿ ಬಂದಿದ್ದ ಗೌರಿಬಿದನೂರು ತಾಲೂಕಿನ ಗದರೆ- ಮಲಸಂದ್ರದ ಗ್ರಾಮಸ್ಥರು ಜೋಗ ಜಲಪಾತ ನೋಡಿಕೊಂಡು ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಹೊರಟಿದ್ದರು. ಈ ವೇಳೆ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ ಬಳಿ ಬರುತ್ತಿದ್ದಂತೆ ಒಂದು ಬಸ್ನ ಬ್ರೇಕ್ ಫೇಲ್ ಆಗಿದ್ದು ಪಲ್ಟಿಯಾಗಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು?
ಇದನ್ನೂ ಓದಿ: ಯಶ್ ಟಾಕ್ಸಿಕ್ನಿಂದ ಬಾಲಿವುಡ್ ಬ್ಯೂಟಿ ಔಟ್.. ಕರೀನಾ ಹೊರ ಬರಲು ಕಾರಣ?
ಸದ್ಯ ಘಟನೆಯಲ್ಲಿ ಹಲವರ ಕೈಕಾಲು ಕಟ್ ಆಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ನಲ್ಲಿ ಒಟ್ಟು 80 ಪ್ರಯಾಣಿಕರು ಇದ್ದರು. ಒಂದೇ ಬಸ್ ಅಪಘಾತಕ್ಕೆ ಈಡಾಗಿದ್ದರಿಂದ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋಗ ಜಲಪಾತ ಮುಗಿಸಿ, ಗ್ರಾಮಸ್ಥರು ಗೋಕರ್ಣಕ್ಕೆ ಹೊರಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕ್ರಾಸ್ನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಹಲವರಿಗೆ ಗಂಭೀರ ಗಾಯ
ಪ್ರವಾಸಕ್ಕೆ ಬಂದಿದ್ದ ಗ್ರಾಮಸ್ಥರ ಬಂಸ್ವೊಂದು ಪಲ್ಟಿಯಾಗಿ ಅಪಘಾತ
ಜೋಗ ಜಲಪಾತ ಮುಗಿಸಿ, ಗೋಕರ್ಣ ಕಡೆಗೆ ಹೊರಟಿದ್ದ ಪ್ರವಾಸಿಗರು
ಶಿವಮೊಗ್ಗ: ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಶಿವಮೊಗ್ಗ -ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ನಲ್ಲಿ ನಡೆದಿದೆ.
ಪ್ರವಾಸಕ್ಕೆಂದು 2 ಬಸ್ನಲ್ಲಿ ಬಂದಿದ್ದ ಗೌರಿಬಿದನೂರು ತಾಲೂಕಿನ ಗದರೆ- ಮಲಸಂದ್ರದ ಗ್ರಾಮಸ್ಥರು ಜೋಗ ಜಲಪಾತ ನೋಡಿಕೊಂಡು ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಹೊರಟಿದ್ದರು. ಈ ವೇಳೆ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ ಬಳಿ ಬರುತ್ತಿದ್ದಂತೆ ಒಂದು ಬಸ್ನ ಬ್ರೇಕ್ ಫೇಲ್ ಆಗಿದ್ದು ಪಲ್ಟಿಯಾಗಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು?
ಇದನ್ನೂ ಓದಿ: ಯಶ್ ಟಾಕ್ಸಿಕ್ನಿಂದ ಬಾಲಿವುಡ್ ಬ್ಯೂಟಿ ಔಟ್.. ಕರೀನಾ ಹೊರ ಬರಲು ಕಾರಣ?
ಸದ್ಯ ಘಟನೆಯಲ್ಲಿ ಹಲವರ ಕೈಕಾಲು ಕಟ್ ಆಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ನಲ್ಲಿ ಒಟ್ಟು 80 ಪ್ರಯಾಣಿಕರು ಇದ್ದರು. ಒಂದೇ ಬಸ್ ಅಪಘಾತಕ್ಕೆ ಈಡಾಗಿದ್ದರಿಂದ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋಗ ಜಲಪಾತ ಮುಗಿಸಿ, ಗ್ರಾಮಸ್ಥರು ಗೋಕರ್ಣಕ್ಕೆ ಹೊರಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ