ಮಾಡು ಇಲ್ಲವೇ ಮಡಿ ಪಂದ್ಯ, ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ!
4ನ್ನು ಗೆದ್ದಿರುವ RCBಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್
ರಾಜಸ್ಥಾನ ರಾಯಲ್ಸ್ ಗೆಲುವಿಗಾಗಿ RCB ಹಾಗೂ ಫ್ಯಾನ್ಸ್ ಪ್ರಾರ್ಥನೆ
ಐಪಿಎಲ್ನ ಮೋಸ್ಟ್ ಎಕ್ಸೈಟ್ಮೆಂಟ್ ಪಂದ್ಯಗಳಿಗೆ ಇಂದಿನ ಸೂಪರ್ ಸಂಡೇ ಸಾಕ್ಷಿಯಾಗ್ತಿದೆ. 2 ಪಂದ್ಯಗಳು ನಡೆಯುತ್ತಿದ್ದು, ನಾಲ್ಕು ತಂಡಗಳ ಹೋರಾಡ್ತಿವೆ. ಆದ್ರೆ, ಇಂದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಿರ್ಧಾರವಾಗ್ತಿರೋದು ಮಾತ್ರ ಆರ್ಸಿಬಿಯ ಭವಿಷ್ಯ. ಎರಡು ತಂಡಗಳ ಪಾಲಿಗೆ ಇಂದು ಆರ್ಸಿಬಿ ಎದುರಾಳಿಯಾಗಿದೆ.
ಇಂದು ಚೆನ್ನೈ, ಡೆಲ್ಲಿ V/S ಆರ್ಸಿಬಿ ದಂಗಲ್..!
ಐಪಿಎಲ್ನ ಸೂಪರ್ ಸಂಡೇಯ ಸೂಪರ್ ಫೈಟ್ಗೆ ಕ್ಷಣಗಣನೆ ಶುರುವಾಗಿದೆ. 4 ತಂಡಗಳ ನಡುವಿನ ಬಿಗ್ ಬ್ಯಾಟಲ್.. ಫ್ಯಾನ್ಸ್ ಕ್ಯುರಿಯಾಸಿಟಿ ಹೆಚ್ಚಿಸಿದೆ. ನಾನಾ.. ನೀನಾ ಎಂದು ಹೋರಾಟಕ್ಕೆ ಇಳಿಯುತ್ತಿರುವ 4 ತಂಡಗಳ ಪೈಕಿ 3 ತಂಡಗಳಿಗೆ ಈ ದಿನ ಮೋಸ್ಟ್ ಕ್ರೂಶಿಯಲ್.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್
ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ರಾಜಸ್ಥಾನ ರಾಯಲ್ಸ್ ಸವಾಲ್ ಎದುರಾಗುತ್ತಿದೆ. ಉಭಯ ತಂಡಗಳ ಹೋರಾಟಕ್ಕೆ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ಈ ಪಂದ್ಯದಲ್ಲಿ ಚೆನ್ನೈನ ಪ್ರತ್ಯಕ್ಷ ಎದುರಾಳಿ ರಾಜಸ್ಥಾನ ಆಗಿದ್ರೂ, ಪರೋಕ್ಷ ಎದುರಾಳಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿದೆ. ಯಾಕಂದ್ರೆ, ಈ ಪಂದ್ಯದ ಫಲಿತಾಂಶ ಆರ್ಸಿಬಿ ಭವಿಷ್ಯವನ್ನ ನಿರ್ಧರಿಸಲಿದೆ.
ಚೆನ್ನೈ ಕಿಂಗ್ಸ್ ಗೆದ್ದರೆ ನುಚ್ಚು ನೂರಾಗಲಿದೆ RCB ಕನಸು
ಕಳೆದ ಪಂದ್ಯದಲ್ಲಿ ಗುಜರಾತ್ ಎದುರು ಸೋತ ಚೆನ್ನೈ, ತವರಿನಲ್ಲಿ ಗೆಲ್ಲೋ ರಣೋತ್ಸಾಹದಲ್ಲಿದೆ. ಆದ್ರೆ, ಬ್ಯಾಕ್ ಟು ಬ್ಯಾಕ್ ಸೋತಿರೋ ರಾಜಸ್ಥಾನ, ಚೆನ್ನೈಗೆ ಚೆನ್ನೈನಲ್ಲೇ ಚಮಕ್ ನೀಡೋ ಲೆಕ್ಕಾಚಾರದಲ್ಲಿದೆ. ಇದರೊಂದಿಗೆ ಪ್ಲೇ-ಆಫ್ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಮುಂದಾಗಿವೆ. ಈ ಪಂದ್ಯದಲ್ಲಿ ಚೆನ್ನೈ ಸೋತ್ರೆ ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಗೆಲುವಿಗಾಗಿ ಆರ್ಸಿಬಿ ಫ್ಯಾನ್ಸ್ ಇನ್ನಿಲ್ಲದ ಪ್ರಾರ್ಥನೆ ಮಾಡ್ತಿದ್ದಾರೆ.
ಚೆನ್ನೈ ಸೋಲಿನ ಜೊತೆ ತವರಿನಲ್ಲಿ ಗೆಲ್ಲೋ ಚಾಲೆಂಜ್.!
ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಾರ್ಥನೆ ಮಾಡ್ತಿರುವ ಆರ್ಸಿಬಿ, ನಂತರದ ಪಂದ್ಯದಲ್ಲಿ ರಿಯಲ್ ಚಾಲೆಂಜ್ ಎದುರಿಸಲಿದೆ. ತವರಿನ ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ತೊಡೆ ತಟ್ಟಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಿದೆ. ಈಗ ಸತತ 4 ಪಂದ್ಯಗಳನ್ನ ಗೆದ್ದಿರುವ ರೆಡ್ ಆರ್ಮಿಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್.. ಯಾಕಂದ್ರೆ, ಈ ಪಂದ್ಯ ಡೆಲ್ಲಿ ಪಾಲಿಗೂ ಡು ಆರ್ ಡೈ ಕದನವಾಗಿದೆ.
ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ
ಬ್ಯಾಟ್ಸ್ಮನ್ಗಳಾಗ್ತಾರಾ ಗೆಲುವಿನ ರೂವಾರಿಗಳು..?
ಇವತ್ತು ಆರ್ಸಿಬಿಯ ಗೆಲುವಿನ ಕನಸು ನಿಂತಿರೋದೆ ತಂಡದ ಬ್ಯಾಟರ್ಗಳ ಮೇಲಾಗಿದೆ. ಚಿನ್ನಸ್ವಾಮಿಯ ಬ್ಯಾಟಿಂಗ್ ಫ್ರೆಂಡ್ಲಿ ಗ್ರೌಂಡ್ನಲ್ಲಿ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್ ವೈಲೆಂಟ್ ಆಗಬೇಕಿದೆ. ಮಿಡಲ್ ಆರ್ಡರ್ನಲ್ಲಿ ರಜತ್ ಪಾಟಿದಾರ್ ರಾಕ್ಷಸನಂತೆ ಸಿಡಿಯಬೇಕು. ಕ್ಯಾಮರೂನ್ ಗ್ರೀನ್ ಕಮಾಲ್ ಮಾಡಬೇಕು. ದಿನೇಶ್ ಕಾರ್ತಿಕ್ ದಂಡಯಾತ್ರೆ ನಡೆಸಬೇಕು. ಹೀಗಾದರಷ್ಟೇ ಡೇಂಜರಸ್ ಡೆಲ್ಲಿಗೆ ಟಕ್ಕರ್ ನೀಡಬಹುದಾಗಿದೆ. ಇಲ್ಲ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.
ಮಳೆಯಾದರೆ ಆರ್ಸಿಬಿ ಕಥೆ ಗೋವಿಂದ..!
ಒಂದ್ಕಡೆ ಗೆಲುವಿನ ಪ್ರಾರ್ಥನೆ ನಡೆಸ್ತಿರುವ ಆರ್ಸಿಬಿಗೆ ಮಳೆರಾಯನೂ ಕಂಟಕವಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಮಳೆರಾಯನ ಆರ್ಭಟ ಸಿಲಿಕಾನ್ ಸಿಟಿಯಲ್ಲಿ ಜೋರಾಗಿದೆ. ಇಂದೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಅಕಸ್ಮಾತ್ ಇಂದು ಮಳೆರಾಯ ಅವಕೃಪೆ ತೋರಿ ಪಂದ್ಯ ರದ್ದಾದ್ರೆ, ಆರ್ಸಿಬಿಯ ಪ್ಲೇ-ಆಫ್ ಕನಸು ನುಚ್ಚು ನೂರಾಗಲಿದೆ. ಇಂದಿನ ಸೂಪರ್ ಸಂಡೇ, ಬ್ಲಾಕ್ ಬಸ್ಟರ್ ಕದನಗಳಿಗೆ ಸಾಕ್ಷಿಯಾಗಲಿದೆ. ಪ್ಲೇ ಆಫ್ ದೃಷ್ಟಿಯಿಂದ ಇಂದಿನ ರಣಕಣ ಮಹತ್ವ ಪಡೆದಿದ್ದು, ಅಭಿಮಾನಿಗಳಿಗಂತೂ ಭರ್ಜರಿ ಟ್ರೀಟ್ ಕಾದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮಾಡು ಇಲ್ಲವೇ ಮಡಿ ಪಂದ್ಯ, ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ!
4ನ್ನು ಗೆದ್ದಿರುವ RCBಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್
ರಾಜಸ್ಥಾನ ರಾಯಲ್ಸ್ ಗೆಲುವಿಗಾಗಿ RCB ಹಾಗೂ ಫ್ಯಾನ್ಸ್ ಪ್ರಾರ್ಥನೆ
ಐಪಿಎಲ್ನ ಮೋಸ್ಟ್ ಎಕ್ಸೈಟ್ಮೆಂಟ್ ಪಂದ್ಯಗಳಿಗೆ ಇಂದಿನ ಸೂಪರ್ ಸಂಡೇ ಸಾಕ್ಷಿಯಾಗ್ತಿದೆ. 2 ಪಂದ್ಯಗಳು ನಡೆಯುತ್ತಿದ್ದು, ನಾಲ್ಕು ತಂಡಗಳ ಹೋರಾಡ್ತಿವೆ. ಆದ್ರೆ, ಇಂದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಿರ್ಧಾರವಾಗ್ತಿರೋದು ಮಾತ್ರ ಆರ್ಸಿಬಿಯ ಭವಿಷ್ಯ. ಎರಡು ತಂಡಗಳ ಪಾಲಿಗೆ ಇಂದು ಆರ್ಸಿಬಿ ಎದುರಾಳಿಯಾಗಿದೆ.
ಇಂದು ಚೆನ್ನೈ, ಡೆಲ್ಲಿ V/S ಆರ್ಸಿಬಿ ದಂಗಲ್..!
ಐಪಿಎಲ್ನ ಸೂಪರ್ ಸಂಡೇಯ ಸೂಪರ್ ಫೈಟ್ಗೆ ಕ್ಷಣಗಣನೆ ಶುರುವಾಗಿದೆ. 4 ತಂಡಗಳ ನಡುವಿನ ಬಿಗ್ ಬ್ಯಾಟಲ್.. ಫ್ಯಾನ್ಸ್ ಕ್ಯುರಿಯಾಸಿಟಿ ಹೆಚ್ಚಿಸಿದೆ. ನಾನಾ.. ನೀನಾ ಎಂದು ಹೋರಾಟಕ್ಕೆ ಇಳಿಯುತ್ತಿರುವ 4 ತಂಡಗಳ ಪೈಕಿ 3 ತಂಡಗಳಿಗೆ ಈ ದಿನ ಮೋಸ್ಟ್ ಕ್ರೂಶಿಯಲ್.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್
ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ರಾಜಸ್ಥಾನ ರಾಯಲ್ಸ್ ಸವಾಲ್ ಎದುರಾಗುತ್ತಿದೆ. ಉಭಯ ತಂಡಗಳ ಹೋರಾಟಕ್ಕೆ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ಈ ಪಂದ್ಯದಲ್ಲಿ ಚೆನ್ನೈನ ಪ್ರತ್ಯಕ್ಷ ಎದುರಾಳಿ ರಾಜಸ್ಥಾನ ಆಗಿದ್ರೂ, ಪರೋಕ್ಷ ಎದುರಾಳಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿದೆ. ಯಾಕಂದ್ರೆ, ಈ ಪಂದ್ಯದ ಫಲಿತಾಂಶ ಆರ್ಸಿಬಿ ಭವಿಷ್ಯವನ್ನ ನಿರ್ಧರಿಸಲಿದೆ.
ಚೆನ್ನೈ ಕಿಂಗ್ಸ್ ಗೆದ್ದರೆ ನುಚ್ಚು ನೂರಾಗಲಿದೆ RCB ಕನಸು
ಕಳೆದ ಪಂದ್ಯದಲ್ಲಿ ಗುಜರಾತ್ ಎದುರು ಸೋತ ಚೆನ್ನೈ, ತವರಿನಲ್ಲಿ ಗೆಲ್ಲೋ ರಣೋತ್ಸಾಹದಲ್ಲಿದೆ. ಆದ್ರೆ, ಬ್ಯಾಕ್ ಟು ಬ್ಯಾಕ್ ಸೋತಿರೋ ರಾಜಸ್ಥಾನ, ಚೆನ್ನೈಗೆ ಚೆನ್ನೈನಲ್ಲೇ ಚಮಕ್ ನೀಡೋ ಲೆಕ್ಕಾಚಾರದಲ್ಲಿದೆ. ಇದರೊಂದಿಗೆ ಪ್ಲೇ-ಆಫ್ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಮುಂದಾಗಿವೆ. ಈ ಪಂದ್ಯದಲ್ಲಿ ಚೆನ್ನೈ ಸೋತ್ರೆ ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಗೆಲುವಿಗಾಗಿ ಆರ್ಸಿಬಿ ಫ್ಯಾನ್ಸ್ ಇನ್ನಿಲ್ಲದ ಪ್ರಾರ್ಥನೆ ಮಾಡ್ತಿದ್ದಾರೆ.
ಚೆನ್ನೈ ಸೋಲಿನ ಜೊತೆ ತವರಿನಲ್ಲಿ ಗೆಲ್ಲೋ ಚಾಲೆಂಜ್.!
ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಾರ್ಥನೆ ಮಾಡ್ತಿರುವ ಆರ್ಸಿಬಿ, ನಂತರದ ಪಂದ್ಯದಲ್ಲಿ ರಿಯಲ್ ಚಾಲೆಂಜ್ ಎದುರಿಸಲಿದೆ. ತವರಿನ ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ತೊಡೆ ತಟ್ಟಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಿದೆ. ಈಗ ಸತತ 4 ಪಂದ್ಯಗಳನ್ನ ಗೆದ್ದಿರುವ ರೆಡ್ ಆರ್ಮಿಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್.. ಯಾಕಂದ್ರೆ, ಈ ಪಂದ್ಯ ಡೆಲ್ಲಿ ಪಾಲಿಗೂ ಡು ಆರ್ ಡೈ ಕದನವಾಗಿದೆ.
ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ
ಬ್ಯಾಟ್ಸ್ಮನ್ಗಳಾಗ್ತಾರಾ ಗೆಲುವಿನ ರೂವಾರಿಗಳು..?
ಇವತ್ತು ಆರ್ಸಿಬಿಯ ಗೆಲುವಿನ ಕನಸು ನಿಂತಿರೋದೆ ತಂಡದ ಬ್ಯಾಟರ್ಗಳ ಮೇಲಾಗಿದೆ. ಚಿನ್ನಸ್ವಾಮಿಯ ಬ್ಯಾಟಿಂಗ್ ಫ್ರೆಂಡ್ಲಿ ಗ್ರೌಂಡ್ನಲ್ಲಿ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್ ವೈಲೆಂಟ್ ಆಗಬೇಕಿದೆ. ಮಿಡಲ್ ಆರ್ಡರ್ನಲ್ಲಿ ರಜತ್ ಪಾಟಿದಾರ್ ರಾಕ್ಷಸನಂತೆ ಸಿಡಿಯಬೇಕು. ಕ್ಯಾಮರೂನ್ ಗ್ರೀನ್ ಕಮಾಲ್ ಮಾಡಬೇಕು. ದಿನೇಶ್ ಕಾರ್ತಿಕ್ ದಂಡಯಾತ್ರೆ ನಡೆಸಬೇಕು. ಹೀಗಾದರಷ್ಟೇ ಡೇಂಜರಸ್ ಡೆಲ್ಲಿಗೆ ಟಕ್ಕರ್ ನೀಡಬಹುದಾಗಿದೆ. ಇಲ್ಲ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.
ಮಳೆಯಾದರೆ ಆರ್ಸಿಬಿ ಕಥೆ ಗೋವಿಂದ..!
ಒಂದ್ಕಡೆ ಗೆಲುವಿನ ಪ್ರಾರ್ಥನೆ ನಡೆಸ್ತಿರುವ ಆರ್ಸಿಬಿಗೆ ಮಳೆರಾಯನೂ ಕಂಟಕವಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಮಳೆರಾಯನ ಆರ್ಭಟ ಸಿಲಿಕಾನ್ ಸಿಟಿಯಲ್ಲಿ ಜೋರಾಗಿದೆ. ಇಂದೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಅಕಸ್ಮಾತ್ ಇಂದು ಮಳೆರಾಯ ಅವಕೃಪೆ ತೋರಿ ಪಂದ್ಯ ರದ್ದಾದ್ರೆ, ಆರ್ಸಿಬಿಯ ಪ್ಲೇ-ಆಫ್ ಕನಸು ನುಚ್ಚು ನೂರಾಗಲಿದೆ. ಇಂದಿನ ಸೂಪರ್ ಸಂಡೇ, ಬ್ಲಾಕ್ ಬಸ್ಟರ್ ಕದನಗಳಿಗೆ ಸಾಕ್ಷಿಯಾಗಲಿದೆ. ಪ್ಲೇ ಆಫ್ ದೃಷ್ಟಿಯಿಂದ ಇಂದಿನ ರಣಕಣ ಮಹತ್ವ ಪಡೆದಿದ್ದು, ಅಭಿಮಾನಿಗಳಿಗಂತೂ ಭರ್ಜರಿ ಟ್ರೀಟ್ ಕಾದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ