ತಮಿಳುನಾಡು ಬಿಜೆಪಿ ಫೈರ್ ಬ್ರ್ಯಾಂಡ್ಗೆ ಶಾಕಿಂಗ್ ನ್ಯೂಸ್
ಅಣ್ಣಾಮಲೈ ಸೋಲುವ ಭವಿಷ್ಯ ನುಡಿದ ಇಂಡಿಯಾ ಟುಡೇ
ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ
ಭಾರತ ದೇಶದ ಪ್ರಜಾಪ್ರಭುತ್ವ ಯುದ್ಧ ಮುಗಿದಿದೆ ಯಾರ್ ಗೆದ್ರು.. ಯಾರ್ ಸೋತ್ರು.. ಅನ್ನೋದು ನಾಳೆಯಲ್ಲ ನಾಡಿದ್ದು ಗೊತ್ತಾಗುತ್ತೆ.. ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರಗಳು ಭಾರೀ ಸದ್ದು ಮಾಡಿದ್ವು.. ಅದರಲ್ಲೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಹಾಸದ ಪ್ರಜ್ವಲ್ ರೇವಣ್ಣ, ಬಾಲಿವುಡ್ನಿಂದ ಲೋಕ ಕದನಕ್ಕೆ ಇಳಿದಿದ್ದ ಕಂಗಾನಾ ಗಮನ ಸೆಳೆದಿದ್ದರು. ಆದ್ರೆ ಌಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ನಲ್ಲಿ ಅಚ್ಚರಿ ಫಲಿತಾಂಶ ಬಂದಿದೆ.
ಅಣ್ಣಾಮಲೈ ಸೋಲುವ ಭವಿಷ್ಯ ನುಡಿದ ಇಂಡಿಯಾ ಟುಡೇ
361-401 ಕ್ಷೇತ್ರಗಳಲ್ಲಿ NDA ಗೆಲ್ಲಲಿದೆ ಎಂದ ಸಮೀಕ್ಷೆಯನ್ನ ಌಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಆದ್ರೆ ತಮಿಳುನಾಡು ಬಿಜೆಪಿ ಫೈರ್ ಬ್ರ್ಯಾಂಡ್ ಆಗಿರೋ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಇದೇ ಌಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಶಾಕ್ ನೀಡಿದೆ. ಕೋಯ್ಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಅಣ್ಣಾಮಲೈ ಸೋಲು ಕಾಣಲಿದ್ದಾರೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಅಭ್ಯರ್ಥಿ ಪಿ.ಗಣಪತಿ ರಾಜಕುಮಾರ್ ಗೆಲ್ಲುವ ನಿರೀಕ್ಷೆ ಌಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಈ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವನ್ನು ತಿರಸ್ಕರಿಸಿದ್ದು, ನಿಮಗೆ ಅಚ್ಚರಿಯ ಫಲಿತಾಂಶ ನೀಡಲು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!
ಪ್ರಜ್ವಲ್ ರೇವಣ್ಣಗೆ ಮತ್ತೊಮ್ಮೆ ದಕ್ಕಲಿದೆ ಸಿಂಹಾಸನ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಇತ್ತು. ಌಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಪ್ರಜ್ವಲ್ ರೇವಣ್ಣಗೆ ಹಾಸನ ಸಿಂಹಾಸನ ಮತ್ತೊಮ್ಮೆ ದಕ್ಕಲಿದೆ ಎಂದು ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿರುದ್ಧ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದಿದೆ. ಎಲೆಕ್ಷನ್ ಮುನ್ನ ಪೆನ್ಡ್ರೈವ್ ಹಂಚಿಕೆಯಾದ್ರೂ, ಅದರಿಂದ ಯಾವುದೇ ಎಫೆಕ್ಟ್ ಆಗಿಲ್ಲ ಎಂಬ ಲೆಕ್ಕಾಚಾರವನ್ನ ಹೊರಗಿಟ್ಟಿದೆ.
‘ಕೈ’ ಕೋಟೆಯನ್ನ ಛಿದ್ರಮಾಡ್ತಾರಾ ರಾಜೀವ್ ಚಂದ್ರಶೇಖರ್?
ಇತ್ತ ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಮತ್ತು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಮಧ್ಯೆ ಬಿಗ್ ಫೈಟ್ ಇದೆ. 2009ರಿಂದ ತಿರುವನಂತಪುರಂ ಕಾಂಗ್ರೆಸ್ನ ಭದ್ರಕೋಟೆ ಎನಿಸಿಕೊಂಡು, ಅಂದಿನಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಕಾಂಗ್ರೆಸ್ ಶಶಿ ತರೂರ್ಗೆ ಈಗ ಬಿಜೆಪಿಯ ರಾಜೀವ್ ಚಂದ್ರಶೇಖರ್ ಭಾರೀ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನ ರಾಜೀವ್ ಚಂದ್ರಶೇಖರ್ ಛಿದ್ರ ಮಾಡುವ ಸಾಧ್ಯತೆ ಇದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇ ಭವಿಷ್ಯ ನುಡಿದಿದೆ.
ಇದನ್ನೂ ಓದಿ:ವಿಶ್ವಕಪ್ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್ರಿಂದ ಭಾರೀ ಆಕ್ರೋಶ..!
ಬಾಲಿವುಡ್ ಬೆಡಗಿ ಕಂಗನಾಗೆ ವಿಜಯಮಾಲೆ ಪಕ್ಕಾ?
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಲಿವುಡ್ ಬೆಡಗಿ ಕಂಗನಾ ಗೆಲ್ಲುವ ಸಾಧ್ಯತೆ ಎಂದು ಌಕ್ಸಿಸ್ ಮೈ ಇಂಡಿಯಾ ಹೇಳಿದೆ. ಹಿಲ್ ಸ್ಟೇಷನ್ನಲ್ಲಿ ಕಾಂಗ್ರೆಸ್ಗೆ ಶಾಕ್ ಕೊಟ್ಟು, 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಗೆಲುವು ಸಾಧಿಸಿ ವಿಜಯಮಾಲೆಯನ್ನ ಕಂಗನಾ ಧರಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.
ಅತ್ತ ಪಂಜಾಬ್ನಲ್ಲಿ ಭಾರೀ ನಿರೀಕ್ಷೆಯಲ್ಲಿದ್ದ ಕೇಜ್ರಿವಾಲ್ ಪಕ್ಷಕ್ಕೆ ಆಪ್ಗೆ ಸರ್ವೇ ಶಾಕ್ ಕೊಟ್ಟಿದೆ. ರೈತ ಹೋರಾಟದ ನಡುವೆಯೂ ಬಿಜೆಪಿ ಚೇತರಿಕೆ ಭವಿಷ್ಯ ನುಡಿದಿದ್ದು, ಪಂಜಾಬ್ನಲ್ಲಿ 7 ರಿಂದ 9 ಸ್ಥಾನ ಗೆಲ್ಲುವ ಭವಿಷ್ಯವನ್ನ ಸಮೀಕ್ಷೆ ನುಡಿದಿದೆ.. ಅದೇನೆ ಇರಲಿ ತೀವ್ರ ಕುತೂಹಲ.. ಭಾರೀ ಗದ್ದಲ ಸೃಷ್ಟಿಸಿದ್ದ 2024ರ ಲೋಕಸಭಾ ಚುನಾವನೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಿದ್ದು, ಜೂನ್ 4ರತ್ತ ಎಲ್ಲರ ಚಿತ್ತ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಮಿಳುನಾಡು ಬಿಜೆಪಿ ಫೈರ್ ಬ್ರ್ಯಾಂಡ್ಗೆ ಶಾಕಿಂಗ್ ನ್ಯೂಸ್
ಅಣ್ಣಾಮಲೈ ಸೋಲುವ ಭವಿಷ್ಯ ನುಡಿದ ಇಂಡಿಯಾ ಟುಡೇ
ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ
ಭಾರತ ದೇಶದ ಪ್ರಜಾಪ್ರಭುತ್ವ ಯುದ್ಧ ಮುಗಿದಿದೆ ಯಾರ್ ಗೆದ್ರು.. ಯಾರ್ ಸೋತ್ರು.. ಅನ್ನೋದು ನಾಳೆಯಲ್ಲ ನಾಡಿದ್ದು ಗೊತ್ತಾಗುತ್ತೆ.. ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರಗಳು ಭಾರೀ ಸದ್ದು ಮಾಡಿದ್ವು.. ಅದರಲ್ಲೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಹಾಸದ ಪ್ರಜ್ವಲ್ ರೇವಣ್ಣ, ಬಾಲಿವುಡ್ನಿಂದ ಲೋಕ ಕದನಕ್ಕೆ ಇಳಿದಿದ್ದ ಕಂಗಾನಾ ಗಮನ ಸೆಳೆದಿದ್ದರು. ಆದ್ರೆ ಌಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ನಲ್ಲಿ ಅಚ್ಚರಿ ಫಲಿತಾಂಶ ಬಂದಿದೆ.
ಅಣ್ಣಾಮಲೈ ಸೋಲುವ ಭವಿಷ್ಯ ನುಡಿದ ಇಂಡಿಯಾ ಟುಡೇ
361-401 ಕ್ಷೇತ್ರಗಳಲ್ಲಿ NDA ಗೆಲ್ಲಲಿದೆ ಎಂದ ಸಮೀಕ್ಷೆಯನ್ನ ಌಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಆದ್ರೆ ತಮಿಳುನಾಡು ಬಿಜೆಪಿ ಫೈರ್ ಬ್ರ್ಯಾಂಡ್ ಆಗಿರೋ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಇದೇ ಌಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಶಾಕ್ ನೀಡಿದೆ. ಕೋಯ್ಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಅಣ್ಣಾಮಲೈ ಸೋಲು ಕಾಣಲಿದ್ದಾರೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಅಭ್ಯರ್ಥಿ ಪಿ.ಗಣಪತಿ ರಾಜಕುಮಾರ್ ಗೆಲ್ಲುವ ನಿರೀಕ್ಷೆ ಌಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಈ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವನ್ನು ತಿರಸ್ಕರಿಸಿದ್ದು, ನಿಮಗೆ ಅಚ್ಚರಿಯ ಫಲಿತಾಂಶ ನೀಡಲು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!
ಪ್ರಜ್ವಲ್ ರೇವಣ್ಣಗೆ ಮತ್ತೊಮ್ಮೆ ದಕ್ಕಲಿದೆ ಸಿಂಹಾಸನ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಇತ್ತು. ಌಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಪ್ರಜ್ವಲ್ ರೇವಣ್ಣಗೆ ಹಾಸನ ಸಿಂಹಾಸನ ಮತ್ತೊಮ್ಮೆ ದಕ್ಕಲಿದೆ ಎಂದು ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿರುದ್ಧ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದಿದೆ. ಎಲೆಕ್ಷನ್ ಮುನ್ನ ಪೆನ್ಡ್ರೈವ್ ಹಂಚಿಕೆಯಾದ್ರೂ, ಅದರಿಂದ ಯಾವುದೇ ಎಫೆಕ್ಟ್ ಆಗಿಲ್ಲ ಎಂಬ ಲೆಕ್ಕಾಚಾರವನ್ನ ಹೊರಗಿಟ್ಟಿದೆ.
‘ಕೈ’ ಕೋಟೆಯನ್ನ ಛಿದ್ರಮಾಡ್ತಾರಾ ರಾಜೀವ್ ಚಂದ್ರಶೇಖರ್?
ಇತ್ತ ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಮತ್ತು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಮಧ್ಯೆ ಬಿಗ್ ಫೈಟ್ ಇದೆ. 2009ರಿಂದ ತಿರುವನಂತಪುರಂ ಕಾಂಗ್ರೆಸ್ನ ಭದ್ರಕೋಟೆ ಎನಿಸಿಕೊಂಡು, ಅಂದಿನಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಕಾಂಗ್ರೆಸ್ ಶಶಿ ತರೂರ್ಗೆ ಈಗ ಬಿಜೆಪಿಯ ರಾಜೀವ್ ಚಂದ್ರಶೇಖರ್ ಭಾರೀ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನ ರಾಜೀವ್ ಚಂದ್ರಶೇಖರ್ ಛಿದ್ರ ಮಾಡುವ ಸಾಧ್ಯತೆ ಇದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇ ಭವಿಷ್ಯ ನುಡಿದಿದೆ.
ಇದನ್ನೂ ಓದಿ:ವಿಶ್ವಕಪ್ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್ರಿಂದ ಭಾರೀ ಆಕ್ರೋಶ..!
ಬಾಲಿವುಡ್ ಬೆಡಗಿ ಕಂಗನಾಗೆ ವಿಜಯಮಾಲೆ ಪಕ್ಕಾ?
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಲಿವುಡ್ ಬೆಡಗಿ ಕಂಗನಾ ಗೆಲ್ಲುವ ಸಾಧ್ಯತೆ ಎಂದು ಌಕ್ಸಿಸ್ ಮೈ ಇಂಡಿಯಾ ಹೇಳಿದೆ. ಹಿಲ್ ಸ್ಟೇಷನ್ನಲ್ಲಿ ಕಾಂಗ್ರೆಸ್ಗೆ ಶಾಕ್ ಕೊಟ್ಟು, 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಗೆಲುವು ಸಾಧಿಸಿ ವಿಜಯಮಾಲೆಯನ್ನ ಕಂಗನಾ ಧರಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.
ಅತ್ತ ಪಂಜಾಬ್ನಲ್ಲಿ ಭಾರೀ ನಿರೀಕ್ಷೆಯಲ್ಲಿದ್ದ ಕೇಜ್ರಿವಾಲ್ ಪಕ್ಷಕ್ಕೆ ಆಪ್ಗೆ ಸರ್ವೇ ಶಾಕ್ ಕೊಟ್ಟಿದೆ. ರೈತ ಹೋರಾಟದ ನಡುವೆಯೂ ಬಿಜೆಪಿ ಚೇತರಿಕೆ ಭವಿಷ್ಯ ನುಡಿದಿದ್ದು, ಪಂಜಾಬ್ನಲ್ಲಿ 7 ರಿಂದ 9 ಸ್ಥಾನ ಗೆಲ್ಲುವ ಭವಿಷ್ಯವನ್ನ ಸಮೀಕ್ಷೆ ನುಡಿದಿದೆ.. ಅದೇನೆ ಇರಲಿ ತೀವ್ರ ಕುತೂಹಲ.. ಭಾರೀ ಗದ್ದಲ ಸೃಷ್ಟಿಸಿದ್ದ 2024ರ ಲೋಕಸಭಾ ಚುನಾವನೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಿದ್ದು, ಜೂನ್ 4ರತ್ತ ಎಲ್ಲರ ಚಿತ್ತ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ