ಇಂದು T20 ವಿಶ್ವಕಪ್ನಲ್ಲಿ ಭಾರತ-ಐರ್ಲೆಂಡ್ ಫೈಟ್..!
ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್ ಕಾತರ
ನಸ್ಸೌ ಮೈದಾನದಲ್ಲಿ ಯಾರಿಗೆ ವಿಜಯಮಾಲೆ..?
T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲೆ ಐರ್ಲೆಂಡ್ ಜೊತೆ ಕಾದಾಡಲಿದೆ. ಆನ್ ಪೇಪರ್ ಭಾರತವೇ ಗೆಲ್ಲುವ ಫೇವರಿಟ್. ಹಾಗಂತ ಐರ್ಲೆಂಡ್ ತಂಡವನ್ನ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಬಲಾಢ್ಯ ತಂಡಗಳಿಗೆ ಟಕ್ಕರ್ ಕೊಡಬಲ್ಲ ಕೆಪಾಸಿಟಿ ಐರಿಷ್ ತಂಡಕ್ಕಿದೆ. ಇಂದಿನ ಹಣಾಹಣಿಯಲ್ಲಿ ಯಾವ ತಂಡದ ಬಲಾಬಲ ಹೇಗಿದೆ?
ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್ ಸನ್ನದ್ಧ..!
ಟಿ20 ವಿಶ್ವಕಪ್ ರಣಕಣ ಕಾವೇರಿದೆ. ಟೂರ್ನಿಗೆ ಜೂನ್ 2 ರಂದು ಅದ್ಧೂರಿ ಚಾಲನೆ ಸಿಕ್ಕಿದ್ದು, ಟೀಮ್ ಇಂಡಿಯಾ ಇಂದು ಅಧಿಕೃತವಾಗಿ ಅಖಾಡಕ್ಕೆ ಧುಮುಕಲಿದೆ. ನಸ್ಸೌ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ. ಅದೇ ಹುಮ್ಮಸ್ಸಿನಲ್ಲಿ ಐರ್ಲೆಂಡ್ ತಂಡಕ್ಕೆ ಶಾಕ್ ಕೊಡುವ ಇರಾದೆಯಲ್ಲಿದೆ.
ಇದನ್ನೂ ಓದಿ:ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?
ಐರ್ಲೆಂಡ್ ತಂಡ ಡಮ್ಮಿ ಅಲ್ಲ, ಎಚ್ಚರ, ಎಚ್ಚರ..!
ಟೀಮ್ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧ ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿಯನ್ನ ಯಾವುದೇ ಕಾರಣಕ್ಕೂ ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ಐರ್ಲೆಂಡ್ ತಂಡ ಡಮ್ಮಿ ಅಲ್ಲವೇ ಅಲ್ಲ. ಬೆರಳು ಕೊಟ್ರೆ ಅಂಗೈಯೇ ನುಂಗಬಲ್ಲದು. ಯಾವುದೇ ಕ್ಷಣದಲ್ಲಿ ಫಿನಿಕ್ಸ್ ಮೇಲೆದ್ದು ಸೋಲಿನ ರುಚಿ ತೋರಿಸುವ ಶಕ್ತಿ ಐರ್ಲೆಂಡ್ ತಂಡಕ್ಕಿದೆ.
ಪ್ರಸಕ್ತ ಐಪಿಎಲ್ನಲ್ಲಿ ಬಲಾಢ್ಯವಲ್ಲದ ತಂಡಗಳು ಅದ್ಭುತವಾಗಿ ಆಡುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ಅಮೆರಿಕಾ ಕೆನಾಡವನ್ನ ಮಣಿಸಿದ್ರೆ, ಪಪುವಾ ನ್ಯೂಗಿನಿಯಾ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ಗೆ ಪ್ರಬಲ ಪೈಪೋಟಿ ನೀಡಿದೆ. ತಿಣುಕಾಡಿದ ವಿಂಡೀಸ್, ಜಸ್ಟ್ 1 ಓವರ್ ಉಳಿಸಿ ಗೆದ್ದು ಬೀಗ್ತು. ಇನ್ನು ಒಮನ್ ಕೂಡ ಅನುಭವಿ ನಮಿಬಿಯಾಗೆ ಟಫ್ ಫೈಟ್ ಕೊಡ್ತು. ಹೀಗಾಗಿ ಇಂದು ಐರ್ಲೆಂಡ್ ಭಾರತಕ್ಕೆ ಕಠಿಣ ಸವಾಲು ಒಡ್ಡುವ ಲೆಕ್ಕಚಾರದಲ್ಲಿದೆ. ಸ್ವಲ್ಪ ಯಾಮಾರಿದ್ರೂ ಸೋಲಿನ ಪ್ರಪಾತಕ್ಕೆ ಬೀಳೋದು ಗ್ಯಾರಂಟಿ.
ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್ ಬೇರೆಯದ್ದೇ ಕತೆ ಹೇಳ್ತಿದೆ..!
ಚಾಂಪಿಯನ್ ತಂಡಗಳಿಗೆ ಶಾಕ್ ಕೊಟ್ಟಿದೆ ಐರ್ಲೆಂಡ್..!
ಐರ್ಲೆಂಡ್ ಯಾಕೆ ಡೇಂಜರಸ್ ಅನ್ನೋದಕ್ಕೆ ಇದೇ ಸಾಕ್ಷಿ. ಕಳೆದ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ಗೆ ಸೋಲಿನ ರುಚಿ ತೋರಿಸಿತ್ತು. ಗುಂಪು ಹಂತದಲ್ಲಿ ವಿಂಡೀಸ್ ತಂಡವನ್ನ ಮಣಿಸಿ ಎಲ್ಲರನ್ನ ಅಚ್ಚರಿಗೆ ತಳ್ಳಿತ್ತು. ಇದೇ ಪಂದ್ಯಾವಳಿಯಲ್ಲಿ ಐರ್ಲೆಂಡ್, ಇಂಗ್ಲೆಂಡ್ ತಂಡಕ್ಕೂ ಬಿಗ್ ಶಾಕ್ ಕೊಟ್ಟಿತ್ತು. ಡೆಕ್ವತ್ ಲೂಯಿಸ್ ನಿಯಮದಡಿ 5 ರನ್ಗಳಿಂದ ಗೆದ್ದು, ಕ್ರಿಕೆಟ್ ಜನಕರಿಗೆ ಮರ್ಮಾಘಾತ ನೀಡಿತ್ತು. ಸೋ, ಇದು ಭಾರತಕ್ಕೆ ಇದು ಎಚ್ಚರಿಕೆ ಕರೆಗಂಟೆಯಾಗಿದೆ.
ಫೈರಿ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್ ಬಿಗ್ ಥ್ರೆಟ್..!
ಐರ್ಲೆಂಡ್ ತಂಡದಲ್ಲಿ ಭಾರತಕ್ಕೆ ನೀರು ಕುಡಿಸುವ ಡೇಂಜರಸ್ ಬ್ಯಾಟ್ಸ್ಮನ್ಗಳಿದ್ದಾರೆ. ಕ್ಯಾಪ್ಟನ್ ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಆಂಡ್ರ್ಯೂ ಬಾಲ್ಬಿರ್ನಿ ಹಾಗೂ ಕರ್ಟಿಸ್ ಕ್ಯಾಂಫರ್ರಂತ ಟಿ20 ಸ್ಪೆಶಲಿಸ್ಟ್ಗಳಿದ್ದಾರೆ. ನಿರ್ಭಯವಾಗಿ ದಂಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿ ಕೊಡಬಲ್ಲರು. ಕ್ಯಾಪ್ಟನ್ ರೋಹಿತ್ ಇವರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..
ಒಗ್ಗಟ್ಟಿನ ಮಂತ್ರ ಜಪಿಸಿದರಷ್ಟೇ ಭಾರತಕ್ಕೆ ಗೆಲುವು..!
ಭಾರತಕ್ಕಿಂದು ಗೆಲುವಂತೂ ಸುಲಭವಿಲ್ಲ. ಒಗ್ಗಟ್ಟಿನ ಮಂತ್ರ ಜಪಿಸಲೇಬೇಕಿದೆ. ಕಂಡಿಷನ್ ಹಾಗೂ ಸಿಚುವೇಶನ್ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭ್ಯಾಸದಲ್ಲಿ ಫೇಲಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಫಾರ್ಮ್ ಕಂಡುಕೊಳ್ಳಬೇಕಿದೆ. ಹಾಗಾದ್ದಲ್ಲಿ ಮಾತ್ರ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಸಾಧ್ಯ. ಹಾಗಾಗಲಿ ಎಂಬುದೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂದು T20 ವಿಶ್ವಕಪ್ನಲ್ಲಿ ಭಾರತ-ಐರ್ಲೆಂಡ್ ಫೈಟ್..!
ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್ ಕಾತರ
ನಸ್ಸೌ ಮೈದಾನದಲ್ಲಿ ಯಾರಿಗೆ ವಿಜಯಮಾಲೆ..?
T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲೆ ಐರ್ಲೆಂಡ್ ಜೊತೆ ಕಾದಾಡಲಿದೆ. ಆನ್ ಪೇಪರ್ ಭಾರತವೇ ಗೆಲ್ಲುವ ಫೇವರಿಟ್. ಹಾಗಂತ ಐರ್ಲೆಂಡ್ ತಂಡವನ್ನ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಬಲಾಢ್ಯ ತಂಡಗಳಿಗೆ ಟಕ್ಕರ್ ಕೊಡಬಲ್ಲ ಕೆಪಾಸಿಟಿ ಐರಿಷ್ ತಂಡಕ್ಕಿದೆ. ಇಂದಿನ ಹಣಾಹಣಿಯಲ್ಲಿ ಯಾವ ತಂಡದ ಬಲಾಬಲ ಹೇಗಿದೆ?
ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್ ಸನ್ನದ್ಧ..!
ಟಿ20 ವಿಶ್ವಕಪ್ ರಣಕಣ ಕಾವೇರಿದೆ. ಟೂರ್ನಿಗೆ ಜೂನ್ 2 ರಂದು ಅದ್ಧೂರಿ ಚಾಲನೆ ಸಿಕ್ಕಿದ್ದು, ಟೀಮ್ ಇಂಡಿಯಾ ಇಂದು ಅಧಿಕೃತವಾಗಿ ಅಖಾಡಕ್ಕೆ ಧುಮುಕಲಿದೆ. ನಸ್ಸೌ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ. ಅದೇ ಹುಮ್ಮಸ್ಸಿನಲ್ಲಿ ಐರ್ಲೆಂಡ್ ತಂಡಕ್ಕೆ ಶಾಕ್ ಕೊಡುವ ಇರಾದೆಯಲ್ಲಿದೆ.
ಇದನ್ನೂ ಓದಿ:ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?
ಐರ್ಲೆಂಡ್ ತಂಡ ಡಮ್ಮಿ ಅಲ್ಲ, ಎಚ್ಚರ, ಎಚ್ಚರ..!
ಟೀಮ್ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧ ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿಯನ್ನ ಯಾವುದೇ ಕಾರಣಕ್ಕೂ ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ಐರ್ಲೆಂಡ್ ತಂಡ ಡಮ್ಮಿ ಅಲ್ಲವೇ ಅಲ್ಲ. ಬೆರಳು ಕೊಟ್ರೆ ಅಂಗೈಯೇ ನುಂಗಬಲ್ಲದು. ಯಾವುದೇ ಕ್ಷಣದಲ್ಲಿ ಫಿನಿಕ್ಸ್ ಮೇಲೆದ್ದು ಸೋಲಿನ ರುಚಿ ತೋರಿಸುವ ಶಕ್ತಿ ಐರ್ಲೆಂಡ್ ತಂಡಕ್ಕಿದೆ.
ಪ್ರಸಕ್ತ ಐಪಿಎಲ್ನಲ್ಲಿ ಬಲಾಢ್ಯವಲ್ಲದ ತಂಡಗಳು ಅದ್ಭುತವಾಗಿ ಆಡುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ಅಮೆರಿಕಾ ಕೆನಾಡವನ್ನ ಮಣಿಸಿದ್ರೆ, ಪಪುವಾ ನ್ಯೂಗಿನಿಯಾ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ಗೆ ಪ್ರಬಲ ಪೈಪೋಟಿ ನೀಡಿದೆ. ತಿಣುಕಾಡಿದ ವಿಂಡೀಸ್, ಜಸ್ಟ್ 1 ಓವರ್ ಉಳಿಸಿ ಗೆದ್ದು ಬೀಗ್ತು. ಇನ್ನು ಒಮನ್ ಕೂಡ ಅನುಭವಿ ನಮಿಬಿಯಾಗೆ ಟಫ್ ಫೈಟ್ ಕೊಡ್ತು. ಹೀಗಾಗಿ ಇಂದು ಐರ್ಲೆಂಡ್ ಭಾರತಕ್ಕೆ ಕಠಿಣ ಸವಾಲು ಒಡ್ಡುವ ಲೆಕ್ಕಚಾರದಲ್ಲಿದೆ. ಸ್ವಲ್ಪ ಯಾಮಾರಿದ್ರೂ ಸೋಲಿನ ಪ್ರಪಾತಕ್ಕೆ ಬೀಳೋದು ಗ್ಯಾರಂಟಿ.
ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್ ಬೇರೆಯದ್ದೇ ಕತೆ ಹೇಳ್ತಿದೆ..!
ಚಾಂಪಿಯನ್ ತಂಡಗಳಿಗೆ ಶಾಕ್ ಕೊಟ್ಟಿದೆ ಐರ್ಲೆಂಡ್..!
ಐರ್ಲೆಂಡ್ ಯಾಕೆ ಡೇಂಜರಸ್ ಅನ್ನೋದಕ್ಕೆ ಇದೇ ಸಾಕ್ಷಿ. ಕಳೆದ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ಗೆ ಸೋಲಿನ ರುಚಿ ತೋರಿಸಿತ್ತು. ಗುಂಪು ಹಂತದಲ್ಲಿ ವಿಂಡೀಸ್ ತಂಡವನ್ನ ಮಣಿಸಿ ಎಲ್ಲರನ್ನ ಅಚ್ಚರಿಗೆ ತಳ್ಳಿತ್ತು. ಇದೇ ಪಂದ್ಯಾವಳಿಯಲ್ಲಿ ಐರ್ಲೆಂಡ್, ಇಂಗ್ಲೆಂಡ್ ತಂಡಕ್ಕೂ ಬಿಗ್ ಶಾಕ್ ಕೊಟ್ಟಿತ್ತು. ಡೆಕ್ವತ್ ಲೂಯಿಸ್ ನಿಯಮದಡಿ 5 ರನ್ಗಳಿಂದ ಗೆದ್ದು, ಕ್ರಿಕೆಟ್ ಜನಕರಿಗೆ ಮರ್ಮಾಘಾತ ನೀಡಿತ್ತು. ಸೋ, ಇದು ಭಾರತಕ್ಕೆ ಇದು ಎಚ್ಚರಿಕೆ ಕರೆಗಂಟೆಯಾಗಿದೆ.
ಫೈರಿ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್ ಬಿಗ್ ಥ್ರೆಟ್..!
ಐರ್ಲೆಂಡ್ ತಂಡದಲ್ಲಿ ಭಾರತಕ್ಕೆ ನೀರು ಕುಡಿಸುವ ಡೇಂಜರಸ್ ಬ್ಯಾಟ್ಸ್ಮನ್ಗಳಿದ್ದಾರೆ. ಕ್ಯಾಪ್ಟನ್ ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಆಂಡ್ರ್ಯೂ ಬಾಲ್ಬಿರ್ನಿ ಹಾಗೂ ಕರ್ಟಿಸ್ ಕ್ಯಾಂಫರ್ರಂತ ಟಿ20 ಸ್ಪೆಶಲಿಸ್ಟ್ಗಳಿದ್ದಾರೆ. ನಿರ್ಭಯವಾಗಿ ದಂಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿ ಕೊಡಬಲ್ಲರು. ಕ್ಯಾಪ್ಟನ್ ರೋಹಿತ್ ಇವರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..
ಒಗ್ಗಟ್ಟಿನ ಮಂತ್ರ ಜಪಿಸಿದರಷ್ಟೇ ಭಾರತಕ್ಕೆ ಗೆಲುವು..!
ಭಾರತಕ್ಕಿಂದು ಗೆಲುವಂತೂ ಸುಲಭವಿಲ್ಲ. ಒಗ್ಗಟ್ಟಿನ ಮಂತ್ರ ಜಪಿಸಲೇಬೇಕಿದೆ. ಕಂಡಿಷನ್ ಹಾಗೂ ಸಿಚುವೇಶನ್ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭ್ಯಾಸದಲ್ಲಿ ಫೇಲಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಫಾರ್ಮ್ ಕಂಡುಕೊಳ್ಳಬೇಕಿದೆ. ಹಾಗಾದ್ದಲ್ಲಿ ಮಾತ್ರ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಸಾಧ್ಯ. ಹಾಗಾಗಲಿ ಎಂಬುದೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್