ಬಹಿರಂಗವಾಯ್ತು ವಿರಾಟ್ ಕೊಹ್ಲಿಯ ಫೋನ್ ವಾಲ್ಪೇಪರ್ ರಹಸ್ಯ!
ಕೊಹ್ಲಿ ಮೊಬೈಲ್ ಫೋನ್ ವಾಲ್ಪೇಪರ್ ಸಿಕ್ರೇಟ್ ರಿವೀಲ್ ಆಗಿದ್ದೇಗೆ?
ವಿರಾಟ್ಗೆ 2019ರ ನವೆಂಬರ್ ಬಳಿಕ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಕಾಡಿತ್ತು
ವಿರಾಟ್ ಕೊಹ್ಲಿ..ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಪ್ಲೇಯರ್. ಕೋಟಿ.. ಕೋಟಿ ಜನರಿಗೆ ರೋಲ್ ಮಾಡೆಲ್. ಕಿಂಗ್ ಕೊಹ್ಲಿಯನ್ನ ಆರಾಧಿಸುವ ಕೋಟ್ಯಾಂತರ ಮಂದಿ, ವಿರಾಟ್ ಕೊಹ್ಲಿಯ ಪೋಟೋವನ್ನೇ ಮೊಬೈಲ್ WALPAPER ಆಗಿ ಇಟ್ಟುಕೊಂಡಿದ್ದಾರೆ. ಆದ್ರೆ, ಕೊಹ್ಲಿ WALPAPERನಲ್ಲಿ ಯಾರ ಪೋಟೋ ಇದೆ ಗೊತ್ತಾ?.
ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ಗ್ರೇಟ್ ಕ್ರಿಕೆಟರ್ ಮಾತ್ರವಲ್ಲ. ದಿ ಗ್ರೇಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಕ್ರಿಕೆಟ್ನಷ್ಟೇ ತಮ್ಮ ಫ್ಯಾಮಿಲಿಯನ್ನು ಪ್ರೀತಿಸುವ ವ್ಯಕ್ತಿ. ಇದಕ್ಕೆ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮೈದಾನದಲ್ಲೇ ಪತ್ನಿ ಅನುಷ್ಕಾ ಶರ್ಮಾಗೆ ಪೋನ್ ಮಾಡಿ ಸಂಭ್ರಮಿಸಿದ್ದೇ ಸಾಕ್ಷಿ. ಇಂಥಹ ಫ್ಯಾಮಿಲಿ ಮ್ಯಾನ್ ವಿರಾಟ್, ಮೊಬೈಲ್ನ WALPAPERನಲ್ಲಿ ಫ್ಯಾಮಿಲಿ ಪೋಟೋನೇ ಇರುತ್ತೆ ಎಂದು ನೀವು ನಂಬಿದ್ರೆ, ಅದು ಸುಳ್ಳು.
ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!
ಇಂಟರ್ನೆಟ್ನಲ್ಲಿ ಸದ್ದು ಮಾಡ್ತು ಗುರುವಿನ ಪೋಟೋ!
ಟೀಮ್ ಇಂಡಿಯಾ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಳಿಕ ಆಟಗಾರರು, ಫುಲ್ ಬ್ಯುಸಿ ಆಗಿದ್ರು. ಪ್ರಧಾನಿ ಮೋದಿ ಜೊತೆ ಉಪಹಾರಕೂಟ ಮತ್ತು ಸಂವಾದ. ಮುಂಬೈಗೆ ಪ್ರಯಾಣ, ವಿಜಯೋತ್ಸವದ ಱಲಿ.. ವಾಂಖೇಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ. ಇದರಿಂದ ಬಳಲಿ ಬೆಂಡಾಗಿದ್ದ ವಿಶ್ವಕಪ್ ವೀರರು ರಿಲ್ಯಾಕ್ಸ್ ಮೂಡ್ಗೆ ಜಾರಿದ್ರು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?
ಆದ್ರೆ, ಕೊಹ್ಲಿ ಮಾತ್ರ ಮನಸ್ಸು ಮಾತ್ರ ಮನೆ, ಪತ್ನಿ, ಮಕ್ಕಳ ಕಡೆ ಸೆಳೆಯುತ್ತಿತ್ತು. ಇದ್ರಿಂದ ರಾತ್ರೋ ರಾತ್ರಿ ಲಂಡನ್ಗೆ ಹಾರಿದ್ರು. ಈ ವೇಳೆ ಕೊಹ್ಲಿ ಮೊಬೈಲ್ WALPAPER ಸಿಕ್ರೇಟ್ ರಿವೀಲ್ ಆಯ್ತು. ಇದನ್ನ ನೋಡಿದ್ದ ಫ್ಯಾನ್ಸ್ಗೂ ಶಾಕ್ ಕಾದಿತ್ತು. ಯಾಕಂದ್ರೆ, ಫ್ಯಾಮಿಲಿ ಮ್ಯಾನ್ ವಿರಾಟ್ ವಾಲ್ ಪೇಪರ್ ಹಾಕಿದಿದ್ದು, ಕುಟುಂಬಸ್ಥರ ಪೋಟೋವಲ್ಲ. ಬದಲಾಗಿ ಆಧ್ಯಾತ್ಮಿಕ ಗುರುವಿನ ಪೋಟೋ. ಈ ಫೋಟೋ ಕಂಡಿದ್ದೆ ತಡ ಇಂಟರ್ನೆಟ್ನಲ್ಲಿ ಸದ್ದು ಮಾಡ್ತು.!
ವಿರಾಟ್ ಕೊಹ್ಲಿಯ ಆರಾಧ್ಯ ದೈವ ಕರೋಲಿ ಬಾಬಾ..!
ವಿರಾಟ್ ಕೊಹ್ಲಿ ಮೊಬೈಲ್ WALPAPERನಲ್ಲಿ ಕಂಡಿದ್ದು ಆರಾಧ್ಯ ದೈವ, ನೀಮ್ ಕರೋಲಿ ಬಾಬಾ.. ಅಂದ್ಹಾಗೆ 1,900ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ ಕರೋಲಿ ಬಾಬಾರ ಮೂಲ ಹೆಸರು ಲಕ್ಷ್ಮಣ್ ನಾರಾಯಣ್ ಶರ್ಮಾ. ಆಧ್ಯಾತ್ಮಿಕ ಗುರುವಾಗಿದ್ದ ಇವ್ರು, ತಮ್ಮ ಪ್ರವಚನಗಳ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನ ಹೊಂದಿದ್ರು. 73ನೇ ವಯಸ್ಸಿಯಲ್ಲಿ ಭಗವಂತನಲ್ಲಿ ಲೀನರಾದ್ರು. ಇನ್ಫ್ಯಾಕ್ಟ್_ ವಿರಾಟ್ ಕೊಹ್ಲಿ ಸಂಕಷ್ಟದಲ್ಲಿದ್ದಾಗ ಇವರ ದರ್ಶನಕ್ಕೂ ತೆರಳಿದ್ದಿದೆ.
ವಿರಾಟ್ ಕೊಹ್ಲಿ ಮೇಲೆ ಕರೋಲಿ ಬಾಬಾ ಪ್ರಭಾವ..!
ವಿರಾಟ್, ವಿಶ್ವ ಕ್ರಿಕೆಟ್ನ ಸಾಮ್ರಾಟನಾಗಿ ಮೆರೆದಾಡಿದ್ದರು. ರನ್ ಶಿಖರವೇ ಕಟ್ಟಿದ್ರು. ನನಗಿಲ್ಲ ಸಾಟಿ ಎಂದು ಮುನ್ನುಗ್ಗುತ್ತಿದ್ದ ವಿರಾಟ್ಗೆ, 2019ರ ನೆವೆಂಬರ್ ಬಳಿಕ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಕಾಡಿತ್ತು. 3 ವರ್ಷಗಳ ಕಾಲ ಟೀಕೆ, ಟಿಪ್ಪಣೆ, ಅಪಮಾನ ಎದುರಿಸಿದ್ದರು. ಇಂಥಹ ಸಂಕಷ್ಟದಲ್ಲಿ ಕೊಹ್ಲಿ, ತೆರಳಿದ್ದೆ ನೀಮ್ ಕರೋಲಿ ಬಾಬಾ ದರ್ಶನಕ್ಕೆ. 2023ರ ಜನವರಿಯಲ್ಲಿ ಲಂಕಾ ಎದುರಿನ ಸರಣಿಗೂ ಮುನ್ನ ವೃಂದಾವನದ ಆಶ್ರಮಕ್ಕೆ ಭೇಟಿ ನೀಡಿದ್ರು. ಆ ಬಳಿಕ ನಡೆದಿದ್ದೆಲ್ಲ ನಿಜಕ್ಕೂ ಪವಾಡ. ವಿರಾಟ್ ಕಟ್ಟಿದ್ದು ರನ್ ಶಿಖರ್. ಇದೇ ಕಾರಣಕ್ಕೆ ಕರೋಲಿ ಬಾಬಾ, ವಿರಾಟ್ ಮೇಲೆ ಅಷ್ಟೊಂದು ಪ್ರಭಾವ ಬೀರಲು ಕಾರಣ.
ಬಾಬಾ ಭಕ್ತರು ಯಾರು, ಯಾರು?
ಇವ್ರೇ ಅಲ್ಲ, ಆ್ಯಪಲ್ ಸಿಇಒ ಸ್ಟೀವ್ ಜಾಬ್ಸ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಸೇರಿ ಜಗತ್ತಿನಾದ್ಯಂತ ಹಲವು ಪ್ರಸಿದ್ಧ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳೆಲ್ಲ ಬಾಬಾ ಭಕ್ತರಾಗಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?
ದೇವರು ಆಶೀರ್ವದಿಸಿ ವಿರಾಟ್ ಕೊಹ್ಲಿಯನ್ನ ಕಮ್ಬ್ಯಾಕ್ ಮಾಡುವಂತೆ ಮಾಡಿದ್ರೋ.? ಇಲ್ವೋ.? ಗೊತ್ತಿಲ್ಲ. ಆದ್ರೆ, ಒಂದು ಆರಾಧನೆ ಕೊಹ್ಲಿಯನ್ನ ಮಾನಸಿಕವಾಗಿ ಬಲಿಷ್ಠಗೊಳಿಸಿದ್ದಂತೂ ಸತ್ಯ. ಮುಂದೆಯು ಕೊಹ್ಲಿ ಮೇಲೆ ದೇವರ ಕೃಪಾಕಟಾಕ್ಷ ಹೀಗೆ ಇರಲಿ. ಮತ್ತಷ್ಟು ರನ್ ಶಿಖರ ಕಟ್ಟಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಬಹಿರಂಗವಾಯ್ತು ವಿರಾಟ್ ಕೊಹ್ಲಿಯ ಫೋನ್ ವಾಲ್ಪೇಪರ್ ರಹಸ್ಯ!
ಕೊಹ್ಲಿ ಮೊಬೈಲ್ ಫೋನ್ ವಾಲ್ಪೇಪರ್ ಸಿಕ್ರೇಟ್ ರಿವೀಲ್ ಆಗಿದ್ದೇಗೆ?
ವಿರಾಟ್ಗೆ 2019ರ ನವೆಂಬರ್ ಬಳಿಕ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಕಾಡಿತ್ತು
ವಿರಾಟ್ ಕೊಹ್ಲಿ..ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಪ್ಲೇಯರ್. ಕೋಟಿ.. ಕೋಟಿ ಜನರಿಗೆ ರೋಲ್ ಮಾಡೆಲ್. ಕಿಂಗ್ ಕೊಹ್ಲಿಯನ್ನ ಆರಾಧಿಸುವ ಕೋಟ್ಯಾಂತರ ಮಂದಿ, ವಿರಾಟ್ ಕೊಹ್ಲಿಯ ಪೋಟೋವನ್ನೇ ಮೊಬೈಲ್ WALPAPER ಆಗಿ ಇಟ್ಟುಕೊಂಡಿದ್ದಾರೆ. ಆದ್ರೆ, ಕೊಹ್ಲಿ WALPAPERನಲ್ಲಿ ಯಾರ ಪೋಟೋ ಇದೆ ಗೊತ್ತಾ?.
ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ಗ್ರೇಟ್ ಕ್ರಿಕೆಟರ್ ಮಾತ್ರವಲ್ಲ. ದಿ ಗ್ರೇಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಕ್ರಿಕೆಟ್ನಷ್ಟೇ ತಮ್ಮ ಫ್ಯಾಮಿಲಿಯನ್ನು ಪ್ರೀತಿಸುವ ವ್ಯಕ್ತಿ. ಇದಕ್ಕೆ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮೈದಾನದಲ್ಲೇ ಪತ್ನಿ ಅನುಷ್ಕಾ ಶರ್ಮಾಗೆ ಪೋನ್ ಮಾಡಿ ಸಂಭ್ರಮಿಸಿದ್ದೇ ಸಾಕ್ಷಿ. ಇಂಥಹ ಫ್ಯಾಮಿಲಿ ಮ್ಯಾನ್ ವಿರಾಟ್, ಮೊಬೈಲ್ನ WALPAPERನಲ್ಲಿ ಫ್ಯಾಮಿಲಿ ಪೋಟೋನೇ ಇರುತ್ತೆ ಎಂದು ನೀವು ನಂಬಿದ್ರೆ, ಅದು ಸುಳ್ಳು.
ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!
ಇಂಟರ್ನೆಟ್ನಲ್ಲಿ ಸದ್ದು ಮಾಡ್ತು ಗುರುವಿನ ಪೋಟೋ!
ಟೀಮ್ ಇಂಡಿಯಾ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಳಿಕ ಆಟಗಾರರು, ಫುಲ್ ಬ್ಯುಸಿ ಆಗಿದ್ರು. ಪ್ರಧಾನಿ ಮೋದಿ ಜೊತೆ ಉಪಹಾರಕೂಟ ಮತ್ತು ಸಂವಾದ. ಮುಂಬೈಗೆ ಪ್ರಯಾಣ, ವಿಜಯೋತ್ಸವದ ಱಲಿ.. ವಾಂಖೇಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ. ಇದರಿಂದ ಬಳಲಿ ಬೆಂಡಾಗಿದ್ದ ವಿಶ್ವಕಪ್ ವೀರರು ರಿಲ್ಯಾಕ್ಸ್ ಮೂಡ್ಗೆ ಜಾರಿದ್ರು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?
ಆದ್ರೆ, ಕೊಹ್ಲಿ ಮಾತ್ರ ಮನಸ್ಸು ಮಾತ್ರ ಮನೆ, ಪತ್ನಿ, ಮಕ್ಕಳ ಕಡೆ ಸೆಳೆಯುತ್ತಿತ್ತು. ಇದ್ರಿಂದ ರಾತ್ರೋ ರಾತ್ರಿ ಲಂಡನ್ಗೆ ಹಾರಿದ್ರು. ಈ ವೇಳೆ ಕೊಹ್ಲಿ ಮೊಬೈಲ್ WALPAPER ಸಿಕ್ರೇಟ್ ರಿವೀಲ್ ಆಯ್ತು. ಇದನ್ನ ನೋಡಿದ್ದ ಫ್ಯಾನ್ಸ್ಗೂ ಶಾಕ್ ಕಾದಿತ್ತು. ಯಾಕಂದ್ರೆ, ಫ್ಯಾಮಿಲಿ ಮ್ಯಾನ್ ವಿರಾಟ್ ವಾಲ್ ಪೇಪರ್ ಹಾಕಿದಿದ್ದು, ಕುಟುಂಬಸ್ಥರ ಪೋಟೋವಲ್ಲ. ಬದಲಾಗಿ ಆಧ್ಯಾತ್ಮಿಕ ಗುರುವಿನ ಪೋಟೋ. ಈ ಫೋಟೋ ಕಂಡಿದ್ದೆ ತಡ ಇಂಟರ್ನೆಟ್ನಲ್ಲಿ ಸದ್ದು ಮಾಡ್ತು.!
ವಿರಾಟ್ ಕೊಹ್ಲಿಯ ಆರಾಧ್ಯ ದೈವ ಕರೋಲಿ ಬಾಬಾ..!
ವಿರಾಟ್ ಕೊಹ್ಲಿ ಮೊಬೈಲ್ WALPAPERನಲ್ಲಿ ಕಂಡಿದ್ದು ಆರಾಧ್ಯ ದೈವ, ನೀಮ್ ಕರೋಲಿ ಬಾಬಾ.. ಅಂದ್ಹಾಗೆ 1,900ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ ಕರೋಲಿ ಬಾಬಾರ ಮೂಲ ಹೆಸರು ಲಕ್ಷ್ಮಣ್ ನಾರಾಯಣ್ ಶರ್ಮಾ. ಆಧ್ಯಾತ್ಮಿಕ ಗುರುವಾಗಿದ್ದ ಇವ್ರು, ತಮ್ಮ ಪ್ರವಚನಗಳ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನ ಹೊಂದಿದ್ರು. 73ನೇ ವಯಸ್ಸಿಯಲ್ಲಿ ಭಗವಂತನಲ್ಲಿ ಲೀನರಾದ್ರು. ಇನ್ಫ್ಯಾಕ್ಟ್_ ವಿರಾಟ್ ಕೊಹ್ಲಿ ಸಂಕಷ್ಟದಲ್ಲಿದ್ದಾಗ ಇವರ ದರ್ಶನಕ್ಕೂ ತೆರಳಿದ್ದಿದೆ.
ವಿರಾಟ್ ಕೊಹ್ಲಿ ಮೇಲೆ ಕರೋಲಿ ಬಾಬಾ ಪ್ರಭಾವ..!
ವಿರಾಟ್, ವಿಶ್ವ ಕ್ರಿಕೆಟ್ನ ಸಾಮ್ರಾಟನಾಗಿ ಮೆರೆದಾಡಿದ್ದರು. ರನ್ ಶಿಖರವೇ ಕಟ್ಟಿದ್ರು. ನನಗಿಲ್ಲ ಸಾಟಿ ಎಂದು ಮುನ್ನುಗ್ಗುತ್ತಿದ್ದ ವಿರಾಟ್ಗೆ, 2019ರ ನೆವೆಂಬರ್ ಬಳಿಕ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಕಾಡಿತ್ತು. 3 ವರ್ಷಗಳ ಕಾಲ ಟೀಕೆ, ಟಿಪ್ಪಣೆ, ಅಪಮಾನ ಎದುರಿಸಿದ್ದರು. ಇಂಥಹ ಸಂಕಷ್ಟದಲ್ಲಿ ಕೊಹ್ಲಿ, ತೆರಳಿದ್ದೆ ನೀಮ್ ಕರೋಲಿ ಬಾಬಾ ದರ್ಶನಕ್ಕೆ. 2023ರ ಜನವರಿಯಲ್ಲಿ ಲಂಕಾ ಎದುರಿನ ಸರಣಿಗೂ ಮುನ್ನ ವೃಂದಾವನದ ಆಶ್ರಮಕ್ಕೆ ಭೇಟಿ ನೀಡಿದ್ರು. ಆ ಬಳಿಕ ನಡೆದಿದ್ದೆಲ್ಲ ನಿಜಕ್ಕೂ ಪವಾಡ. ವಿರಾಟ್ ಕಟ್ಟಿದ್ದು ರನ್ ಶಿಖರ್. ಇದೇ ಕಾರಣಕ್ಕೆ ಕರೋಲಿ ಬಾಬಾ, ವಿರಾಟ್ ಮೇಲೆ ಅಷ್ಟೊಂದು ಪ್ರಭಾವ ಬೀರಲು ಕಾರಣ.
ಬಾಬಾ ಭಕ್ತರು ಯಾರು, ಯಾರು?
ಇವ್ರೇ ಅಲ್ಲ, ಆ್ಯಪಲ್ ಸಿಇಒ ಸ್ಟೀವ್ ಜಾಬ್ಸ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಸೇರಿ ಜಗತ್ತಿನಾದ್ಯಂತ ಹಲವು ಪ್ರಸಿದ್ಧ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳೆಲ್ಲ ಬಾಬಾ ಭಕ್ತರಾಗಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?
ದೇವರು ಆಶೀರ್ವದಿಸಿ ವಿರಾಟ್ ಕೊಹ್ಲಿಯನ್ನ ಕಮ್ಬ್ಯಾಕ್ ಮಾಡುವಂತೆ ಮಾಡಿದ್ರೋ.? ಇಲ್ವೋ.? ಗೊತ್ತಿಲ್ಲ. ಆದ್ರೆ, ಒಂದು ಆರಾಧನೆ ಕೊಹ್ಲಿಯನ್ನ ಮಾನಸಿಕವಾಗಿ ಬಲಿಷ್ಠಗೊಳಿಸಿದ್ದಂತೂ ಸತ್ಯ. ಮುಂದೆಯು ಕೊಹ್ಲಿ ಮೇಲೆ ದೇವರ ಕೃಪಾಕಟಾಕ್ಷ ಹೀಗೆ ಇರಲಿ. ಮತ್ತಷ್ಟು ರನ್ ಶಿಖರ ಕಟ್ಟಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ