newsfirstkannada.com

ದರ್ಶನ್​ಗೆ ಮತ್ತಷ್ಟು ಸಂಕಷ್ಟ, ಮೊಬೈಲ್​ ರಿಟ್ರೀವ್​.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

Share :

Published August 22, 2024 at 6:53am

Update August 22, 2024 at 10:16am

    ಪ್ರಕರಣದಲ್ಲಿ ಸಿಕ್ಕ ಮೊಬೈಲ್​ನಲ್ಲಿ ಏನೇನು ರಿಟ್ರೀವ್ ಮಾಡಲಾಗಿದೆ?

    ವಿನಯ್, ಪವನ್, ಪ್ರದೋಶ್ ದರ್ಶನ್ ಕೆಳಗಡೆ ಬರೋ ಸಾಧ್ಯತೆ

    ಸಿಕ್ಕಿರುವ ಸಾಕ್ಷ್ಯಗಳು ದರ್ಶನ್ ಕುರಿತು ಏನೇನು ಹೇಳ್ತಾವೆ ಗೊತ್ತಾ..?

ಮನೆಯೂಟ ಬೇಕು ಅಂತ ಕಾದು ಕುಳಿತಿರೋ ದರ್ಶನ್​ ಜೈಲೂಟವೇ ​ಫಿಕ್ಸ್​ ಆಗಿದೆ. ಇನ್ನಷ್ಟು ಕಾಲ ಮುಂದುವರೆಯೋದು ಫಿಕ್ಸ್ ಆಗಿದೆ. ಕಾರಣ ಪೊಲೀಸರು ಕಲೆ ಹಾಕಿರೋ ಮಹತ್ವದ ಸಾಕ್ಷಿ.. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ​ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಪೋಟೋವನ್ನ ರಿಟ್ರೀವ್ ಮಾಡಿದ್ದಾರೆ. ಈ ವೇಳೆ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಸಿಕ್ಕಿರುವ ಸಾಕ್ಷ್ಯಗಳನ್ನು ನೋಡಿದರೆ, ಜೈಲಿಂದ ದರ್ಶನ್‌ ಹೊರಬರುವುದಂತೂ ಅಷ್ಟಕಷ್ಟೇ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೊಲೆ ಕೇಸಲ್ಲಿ ದರ್ಶನ್​​ಗೆ ಬಿಗ್​ ಶಾಕ್​​; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಪೊಲೀಸ್ರ ತಯಾರಿ!

ಮೊಬೈಲ್ ರಿಟ್ರೀವ್ ವೇಳೆ ‘ರಕ್ತಸಿಕ್ತ’ ಹತ್ಯೆಯ ಫೋಟೋಗಳು ಪತ್ತೆ

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಭೀಕರವಾಗಿ ಥಳಿಸಿ ಕೊಲೆ ಮಾಡುವಾಗ ವಿಕೃತ ಮೆರೆದು ಖುಷಿ ಪಟ್ಟಿದ್ದರು. ಅದನ್ನ ಮೊಬೈಲ್‌ನಲ್ಲಿ ಸೆರೆ ಹಿಡ್ಕೊಂಡಿದ್ರು.. ನಂತರ, ಫೋಟೋಗಳನ್ನ ಡಿಲೀಟ್ ಕೂಡ ಮಾಡಿದ್ರು.. ಸತ್ಯ ಅನ್ನೋ ಬೆಂಕಿ ಯಾವತಿದ್ರೂ ಒಂದಿನ ಹೊರ ಬರಲೇ ಬೇಕಲ್ವಾ, ಸತ್ಯವನ್ನ ಹೊರ ತರೋ ಕೆಲಸವನ್ನ ರೇಣುಕಾಸ್ವಾಮಿ ಕೊಲೆ ಕೇಸ್​ನ ತನಿಖಾಧಿಕಾರಿಗಳು ಮಾಡಿದ್ದಾರೆ. ಫೋಟೋಗಳು ಡಿಲೀಟ್ ಮಾಡಿದ್ದ ಮೊಬೈಲ್​ನಿಂದ ರೇಣುಕಾಸ್ವಾಮಿ ಕೊಲೆ ಸಂಬಂಧಿತ 4 ಫೋಟೋಗಳು ರಿಟ್ರೈವ್ ಆಗಿವೆ.

ದರ್ಶನ್​ ಗೆಳತಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಭೀಕರವಾಗಿ ಥಳಿಸಿ ಕೊಲೆಗೈದು ಬೀದಿ ಹೆಣವಾಗಿ ಬೀಸಾಡಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದು ವಿಕೃತವಾಗಿ ಖುಷಿ ಅನುಭವಿಸಿದ್ದ ದರ್ಶನ್‌ ಅಂಡ್ ಗ್ಯಾಂಗ್‌ನಿಂದ ಸಾಕ್ಷಿ ಸಿಗದಂತೆ ಎಲ್ಲವನ್ನೂ ಡಿಲೀಟ್ ಮಾಡಿದ್ರು. ಕೇಸ್​ ಸಂಬಂಧ​ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಪೋಟೋವನ್ನ ರಿಟ್ರೀವ್ ಮಾಡಿದ್ದಾರೆ.

ಸತ್ಯ ಹೇಳ್ತಿದೆ ಆ 4 ಫೋಟೋ!

  • ಮೊಬೈಲ್ ರಿಟ್ರೀವ್ ವೇಳೆ ಬಯಲಾಯ್ತು ಸ್ಫೋಟಕ ವಿಚಾರ
  • 2 ಮೊಬೈಲ್ ಫೋನ್​ನಲ್ಲಿ ಪತ್ತೆಯಾದವು 4 ಫೋಟೋಗಳು
  • ಹಲ್ಲೆ ಬಳಿಕ ರೇಣುಕಾಸ್ವಾಮಿಯನ್ನು ಮಲಗಿಸಿರೋ ಫೋಟೋ
  • ಹಲ್ಲೆಗೊಳಗಾದ ಬಳಿಕ ರಕ್ತದ ಮಡುವಿನಲ್ಲಿ ಇರೋ 2 ಫೋಟೋ…
  • ಆರೋಪಿಗಳು ಹಲ್ಲೆ ಮಾಡುವಾಗ ಕೈ ಮುಗೀತಿರೋ ಫೋಟೋ
  • ಇಬ್ಬರು ಆರೋಪಿಗಳ ಮೊಬೈಲ್​ನಲ್ಲಿ 4 ಫೋಟೊಗಳು ರಿಟ್ರೀವ್

ಚಾರ್ಜ್‌ಶೀಟ್​ನಲ್ಲಿ ದರ್ಶನ್‌ರನ್ನ ಎ1 ಮಾಡುವ ಸಾಧ್ಯತೆ!

ಇನ್ನೂ ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದರೆ, ಎ2 ದರ್ಶನ್‌ ಆಗಿದ್ದಾರೆ. ಆದರೆ ಇದೀಗ ರಕ್ತಸಿಕ್ತ ಫೋಟೋವೊಂದು ಪೊಲೀಸರ ಕೈಸೇರಿದ್ದು, ಇದರಿಂದ ನಟ ದರ್ಶನ್ ಪ್ರಮುಖ ಆರೋಪಿಯನ್ನಾಗಿ ಮಾಡಿ ಚಾರ್ಜ್ ಶೀಟ್‌ನಲ್ಲಿ ಬಡ್ತಿ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

ಕೇಸಲ್ಲಿ ದರ್ಶನ್​ ಎ1!?

ಚಾರ್ಜ್ ಶೀಟ್ ವೇಳೆ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ
ಈಗ ಕೊಲೆ ಕೇಸಲ್ಲಿ ಎ1 ಆಗಿರೋ ಪವಿತ್ರಗೌಡ, ದರ್ಶನ್ ಎ2
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ1 ಆಗೋದು ಬಹುತೇಕ ಫಿಕ್ಸ್
ತನಿಖೆ ವೇಳೆ ದರ್ಶನ್ ಭಾಗಿಯಾದ ಬಗ್ಗೆ‌ ಸಾಕಷ್ಟು ಸಾಕ್ಷಿ ಲಭ್ಯ
ಈ ಸಾಕ್ಷ್ಯಗಳ ಮೇಲೆ ಎ1 ಮಾಡಲು ಮುಂದಾದ ಪೊಲೀಸರು
ವಿನಯ್, ಪವನ್, ಪ್ರದೋಶ್ ದರ್ಶನ್ ಕೆಳಗಡೆ ಬರೋ ಸಾಧ್ಯತೆ

ಪೊಲೀಸರು ತನಿಖೆ ನಿಸ್ಪಕ್ಷಪಾತವಾಗಿ ನಡೆಯುತ್ತಿದ್ದು, ದರ್ಶನ್ ಹಾಗೂ ಆತನ​ ಗ್ಯಾಂಗ್ ಮತ್ತಷ್ಟು ಸಂಕಷ್ಟದ ಸುಳಿಯಲ್ಲಿ ಸಿಲುಕಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ಮತ್ತಷ್ಟು ಸಂಕಷ್ಟ, ಮೊಬೈಲ್​ ರಿಟ್ರೀವ್​.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

https://newsfirstlive.com/wp-content/uploads/2024/06/DARSHAN_CURRENT_SHOCK.jpg

    ಪ್ರಕರಣದಲ್ಲಿ ಸಿಕ್ಕ ಮೊಬೈಲ್​ನಲ್ಲಿ ಏನೇನು ರಿಟ್ರೀವ್ ಮಾಡಲಾಗಿದೆ?

    ವಿನಯ್, ಪವನ್, ಪ್ರದೋಶ್ ದರ್ಶನ್ ಕೆಳಗಡೆ ಬರೋ ಸಾಧ್ಯತೆ

    ಸಿಕ್ಕಿರುವ ಸಾಕ್ಷ್ಯಗಳು ದರ್ಶನ್ ಕುರಿತು ಏನೇನು ಹೇಳ್ತಾವೆ ಗೊತ್ತಾ..?

ಮನೆಯೂಟ ಬೇಕು ಅಂತ ಕಾದು ಕುಳಿತಿರೋ ದರ್ಶನ್​ ಜೈಲೂಟವೇ ​ಫಿಕ್ಸ್​ ಆಗಿದೆ. ಇನ್ನಷ್ಟು ಕಾಲ ಮುಂದುವರೆಯೋದು ಫಿಕ್ಸ್ ಆಗಿದೆ. ಕಾರಣ ಪೊಲೀಸರು ಕಲೆ ಹಾಕಿರೋ ಮಹತ್ವದ ಸಾಕ್ಷಿ.. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ​ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಪೋಟೋವನ್ನ ರಿಟ್ರೀವ್ ಮಾಡಿದ್ದಾರೆ. ಈ ವೇಳೆ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಸಿಕ್ಕಿರುವ ಸಾಕ್ಷ್ಯಗಳನ್ನು ನೋಡಿದರೆ, ಜೈಲಿಂದ ದರ್ಶನ್‌ ಹೊರಬರುವುದಂತೂ ಅಷ್ಟಕಷ್ಟೇ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೊಲೆ ಕೇಸಲ್ಲಿ ದರ್ಶನ್​​ಗೆ ಬಿಗ್​ ಶಾಕ್​​; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಪೊಲೀಸ್ರ ತಯಾರಿ!

ಮೊಬೈಲ್ ರಿಟ್ರೀವ್ ವೇಳೆ ‘ರಕ್ತಸಿಕ್ತ’ ಹತ್ಯೆಯ ಫೋಟೋಗಳು ಪತ್ತೆ

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಭೀಕರವಾಗಿ ಥಳಿಸಿ ಕೊಲೆ ಮಾಡುವಾಗ ವಿಕೃತ ಮೆರೆದು ಖುಷಿ ಪಟ್ಟಿದ್ದರು. ಅದನ್ನ ಮೊಬೈಲ್‌ನಲ್ಲಿ ಸೆರೆ ಹಿಡ್ಕೊಂಡಿದ್ರು.. ನಂತರ, ಫೋಟೋಗಳನ್ನ ಡಿಲೀಟ್ ಕೂಡ ಮಾಡಿದ್ರು.. ಸತ್ಯ ಅನ್ನೋ ಬೆಂಕಿ ಯಾವತಿದ್ರೂ ಒಂದಿನ ಹೊರ ಬರಲೇ ಬೇಕಲ್ವಾ, ಸತ್ಯವನ್ನ ಹೊರ ತರೋ ಕೆಲಸವನ್ನ ರೇಣುಕಾಸ್ವಾಮಿ ಕೊಲೆ ಕೇಸ್​ನ ತನಿಖಾಧಿಕಾರಿಗಳು ಮಾಡಿದ್ದಾರೆ. ಫೋಟೋಗಳು ಡಿಲೀಟ್ ಮಾಡಿದ್ದ ಮೊಬೈಲ್​ನಿಂದ ರೇಣುಕಾಸ್ವಾಮಿ ಕೊಲೆ ಸಂಬಂಧಿತ 4 ಫೋಟೋಗಳು ರಿಟ್ರೈವ್ ಆಗಿವೆ.

ದರ್ಶನ್​ ಗೆಳತಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಭೀಕರವಾಗಿ ಥಳಿಸಿ ಕೊಲೆಗೈದು ಬೀದಿ ಹೆಣವಾಗಿ ಬೀಸಾಡಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದು ವಿಕೃತವಾಗಿ ಖುಷಿ ಅನುಭವಿಸಿದ್ದ ದರ್ಶನ್‌ ಅಂಡ್ ಗ್ಯಾಂಗ್‌ನಿಂದ ಸಾಕ್ಷಿ ಸಿಗದಂತೆ ಎಲ್ಲವನ್ನೂ ಡಿಲೀಟ್ ಮಾಡಿದ್ರು. ಕೇಸ್​ ಸಂಬಂಧ​ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಡಿಲೀಟ್ ಆಗಿದ್ದ ಪೋಟೋವನ್ನ ರಿಟ್ರೀವ್ ಮಾಡಿದ್ದಾರೆ.

ಸತ್ಯ ಹೇಳ್ತಿದೆ ಆ 4 ಫೋಟೋ!

  • ಮೊಬೈಲ್ ರಿಟ್ರೀವ್ ವೇಳೆ ಬಯಲಾಯ್ತು ಸ್ಫೋಟಕ ವಿಚಾರ
  • 2 ಮೊಬೈಲ್ ಫೋನ್​ನಲ್ಲಿ ಪತ್ತೆಯಾದವು 4 ಫೋಟೋಗಳು
  • ಹಲ್ಲೆ ಬಳಿಕ ರೇಣುಕಾಸ್ವಾಮಿಯನ್ನು ಮಲಗಿಸಿರೋ ಫೋಟೋ
  • ಹಲ್ಲೆಗೊಳಗಾದ ಬಳಿಕ ರಕ್ತದ ಮಡುವಿನಲ್ಲಿ ಇರೋ 2 ಫೋಟೋ…
  • ಆರೋಪಿಗಳು ಹಲ್ಲೆ ಮಾಡುವಾಗ ಕೈ ಮುಗೀತಿರೋ ಫೋಟೋ
  • ಇಬ್ಬರು ಆರೋಪಿಗಳ ಮೊಬೈಲ್​ನಲ್ಲಿ 4 ಫೋಟೊಗಳು ರಿಟ್ರೀವ್

ಚಾರ್ಜ್‌ಶೀಟ್​ನಲ್ಲಿ ದರ್ಶನ್‌ರನ್ನ ಎ1 ಮಾಡುವ ಸಾಧ್ಯತೆ!

ಇನ್ನೂ ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದರೆ, ಎ2 ದರ್ಶನ್‌ ಆಗಿದ್ದಾರೆ. ಆದರೆ ಇದೀಗ ರಕ್ತಸಿಕ್ತ ಫೋಟೋವೊಂದು ಪೊಲೀಸರ ಕೈಸೇರಿದ್ದು, ಇದರಿಂದ ನಟ ದರ್ಶನ್ ಪ್ರಮುಖ ಆರೋಪಿಯನ್ನಾಗಿ ಮಾಡಿ ಚಾರ್ಜ್ ಶೀಟ್‌ನಲ್ಲಿ ಬಡ್ತಿ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

ಕೇಸಲ್ಲಿ ದರ್ಶನ್​ ಎ1!?

ಚಾರ್ಜ್ ಶೀಟ್ ವೇಳೆ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ
ಈಗ ಕೊಲೆ ಕೇಸಲ್ಲಿ ಎ1 ಆಗಿರೋ ಪವಿತ್ರಗೌಡ, ದರ್ಶನ್ ಎ2
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ1 ಆಗೋದು ಬಹುತೇಕ ಫಿಕ್ಸ್
ತನಿಖೆ ವೇಳೆ ದರ್ಶನ್ ಭಾಗಿಯಾದ ಬಗ್ಗೆ‌ ಸಾಕಷ್ಟು ಸಾಕ್ಷಿ ಲಭ್ಯ
ಈ ಸಾಕ್ಷ್ಯಗಳ ಮೇಲೆ ಎ1 ಮಾಡಲು ಮುಂದಾದ ಪೊಲೀಸರು
ವಿನಯ್, ಪವನ್, ಪ್ರದೋಶ್ ದರ್ಶನ್ ಕೆಳಗಡೆ ಬರೋ ಸಾಧ್ಯತೆ

ಪೊಲೀಸರು ತನಿಖೆ ನಿಸ್ಪಕ್ಷಪಾತವಾಗಿ ನಡೆಯುತ್ತಿದ್ದು, ದರ್ಶನ್ ಹಾಗೂ ಆತನ​ ಗ್ಯಾಂಗ್ ಮತ್ತಷ್ಟು ಸಂಕಷ್ಟದ ಸುಳಿಯಲ್ಲಿ ಸಿಲುಕಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More