ಭವಿಷ್ಯದ ನಾಯಕನ ಚರ್ಚೆಗೆ ಇರಾನಿ ಟ್ರೋಫಿ ಕಿಚ್ಚು
ಟೀಮ್ ಇಂಡಿಯಾ ಕ್ಯಾಪ್ಟನ್ ರೇಸ್ಗೆ ‘ರಾಜ’ನ ಎಂಟ್ರಿ
ಯುವರಾಜ vs ರಾಜನ ನಡುವೆ ಬಿಗ್ ಫೈಟ್
ಟೀಮ್ ಇಂಡಿಯಾದ ಬ್ಯುಸಿ ಕ್ರಿಕೆಟ್ ಶೆಡ್ಯೂಲ್ ನಡುವೆಯೇ ಬಿಸಿಸಿಐ ವಲಯದಲ್ಲಿ ಭವಿಷ್ಯದ ಲೆಕ್ಕಾಚಾರ ಜೋರಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಉತ್ತರಾಧಿಕಾರಿಯ ಹುಡುಕಾಟ ಜೋರಾಗಿ ನಡೀತಾಯಿದೆ. ಇಷ್ಟು ದಿನ ಪ್ರಿನ್ಸ್ ಶುಭಮನ್ ಗಿಲ್, ಟೀಮ್ ಇಂಡಿಯಾದ ಯುವರಾಜ ಎನ್ನಲಾಗಿತ್ತು. ಇದೀಗ ರೇಸ್ಗೆ ಅಸಲಿ ರಾಜ ಋತುರಾಜ್ ಗಾಯಕ್ವಾಡ್ ಎಂಟ್ರಿ ಕೊಟ್ಟಿದ್ದಾರೆ.
ಇಂಡೋ-ಬಾಂಗ್ಲಾ ಟೆಸ್ಟ್ ಫೈಟ್ನ ನಡುವೆಯೆ ಪ್ರತಿಷ್ಟಿತ ದೇಶಿ ಟೂರ್ನಿ ಇರಾನಿ ಟ್ರೋಫಿಗೆ ಸಿದ್ಧತೆ ಶುರುವಾಗಿದೆ. ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ನಡುವೆ ಕದನ ನಡೆಯಲಿದೆ. ಅಕ್ಟೋಬರ್ 1ರಿಂದ ಲಕ್ನೋನಲ್ಲಿ ನಡೆಯೋ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ ಪ್ರಕಟವಾಗಿದೆ. ಬೆನ್ನಲ್ಲೇ, ಟೀಮ್ ಇಂಡಿಯಾ ಫ್ಯೂಚರ್ ಕ್ಯಾಪ್ಟನ್ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು? ಈ ಪ್ರಶ್ನೆ ಕಳೆದ ಕೆಲ ತಿಂಗಳಿಂದ ಭಾರತೀಯ ಕ್ರಿಕೆಟ್ ವಲಯದಲ್ಲಿ ಗಿರಕಿ ಹೊಡೀತಾಯಿದೆ. ಮೊದಲೆಲ್ಲಾ ಕೆಲ ಸೀನಿಯರ್ ಪ್ಲೇಯರ್ಗಳ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರ್ತಾ ಇದ್ವು. ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರಿತ್ ಬೂಮ್ರಾ. ಅಷ್ಟೇ ಏಕೆ.. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹೆಸರು ಕೂಡ ರೇಸ್ನಲ್ಲಿತ್ತು. ಇವ್ರೆಲ್ಲಾ ಇದೀಗ ರೇಸ್ನಿಂದ ಹೊರ ಬಿದ್ದಿದ್ದಾರೆ. ರೇಸ್ನಲ್ಲಿದ್ದ ಸೀನಿಯರ್ ಆಟಗಾರರು ಹೊರ ಬಿದ್ದ ಬಳಿಕ, ರೋಹಿತ್ ಉತ್ತರಾಧಿಕಾರಿ ಪಟ್ಟವನ್ನೇರಲು ಯಂಗ್ಸ್ಟರ್ಗಳ ನಡುವೆ ಫೈಟ್ ಏರ್ಪಟ್ಟಿದೆ.
ಭವಿಷ್ಯದ ನಾಯಕನ ಚರ್ಚೆಗೆ ಕಿಚ್ಚು ಹಚ್ಚಿದ ಇರಾನಿ ಟ್ರೋಫಿ
ಇರಾನಿ ಟ್ರೋಫಿ ಟೂರ್ನಿಗೆ ಸೀನಿಯರ್ ಸೆಲೆಕ್ಷನ್ ಕಮಿಟಿ ರೆಸ್ಟ್ ಆಫ್ ಇಂಡಿಯಾ ತಂಡವನ್ನ ಪ್ರಕಟಿಸಿದೆ. ಪ್ರಮುಖ ಆಟಗಾರರನ್ನ ಸೈಡ್ಲೈನ್ ಮಾಡಿ ಯುವ ಆಟಗಾರ ಋತುರಾಜ್ ಗಾಯಕ್ವಾಡ್ಗೆ ನಾಯಕನ ಪಟ್ಟವನ್ನ ಕಟ್ಟಲಾಗಿದೆ. ಈ ಮೂಲಕ ಋತುರಾಜ್ ಗಾಯಕ್ವಾಡ್ನ ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗ್ತಿದೆ ಅನ್ನೋ ಪರೋಕ್ಷ ಸಂದೇಶ ರವಾನೆಯಾಗಿದೆ.
ರಣಜಿ, ದುಲೀಪ್ ಟ್ರೋಫಿ, IPLನಲ್ಲಿ ನಾಯಕ
ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವ ಮಾತ್ರವಲ್ಲ. ಈ ಹಿಂದಿನ ದುಲೀಪ್ ಟ್ರೋಫಿ ಟೂರ್ನಿಯಲ್ಲೂ ಇಂಡಿಯಾ ಸಿ ತಂಡಕ್ಕೆ ಋತುರಾಜ್ ಸಾರಥಿಯಾಗಿದ್ರು. ಆಗಲೇ ಈ ಭವಿಷ್ಯದ ನಾಯಕನ ಚರ್ಚೆ ನಡೆದಿತ್ತು. ಐಪಿಎಲ್ನಲ್ಲಿ ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ನ ಋತುರಾಜ್ ಮುನ್ನಡೆಸ್ತಾ ಇದ್ದಾರೆ. ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಸೇರಿದಂತೆ ಡೊಮೆಸ್ಟಿಕ್ ಟೂರ್ನಿಗಳಲ್ಲಿ ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ನಾಯಕನಾಗಿದ್ದಾರೆ. ಹೀಗಾಗಿ ಬಿಸಿಸಿಐ ಕಣ್ಣು ಋತುರಾಜ್ ಮೇಲೆ ಬಿದ್ದಿದ್ದು, ಫ್ಯೂಚರ್ ಕ್ಯಾಪ್ಟನ್ ಆಗಿ ಋತುರಾಜ್ನ ಬೆಳೆಸೋ ಕೆಲಸ ಆರಂಭವಾಗಿದೆ.
ಇದನ್ನೂ ಓದಿ:ಕೊಹ್ಲಿಯನ್ನು ಕಾಣುವಾಸೆ.. 58km ಸೈಕಲ್ ಏರಿ ಬಂದ 10ನೇ ತರಗತಿ ಬಾಲಕ
ಋತುರಾಜ್ ನಾಯಕತ್ವದಲ್ಲಿ ಏಷ್ಯನ್ ಗೇಮ್ಸ್ ಗೆಲುವು
ಕಳೆದ ಏಷ್ಯನ್ ಗೇಮ್ಸ್ ವೇಳೆಯೂ ಅನುಭವಿ ಶಿಖರ್ ಧವನ್ ಟೀಮ್ ಇಂಡಿಯಾವನ್ನು ಮುನ್ನಡೆಸ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವೇಳೆ ಶಾಕ್ ಕೊಟ್ಟಿದ್ದ ಸೆಲೆಕ್ಷನ್ ಕಮಿಟಿ ಸರ್ಪ್ರೈಸ್ ರೀತಿಯಲ್ಲಿ ಋತುರಾಜ್ ಗಾಯಕ್ವಾಡ್ಗೆ ನಾಯಕತ್ವ ನೀಡಿತ್ತು. ಗಾಯಕ್ವಾಡ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ನಲ್ಲಿ ಚಾಂಪಿಯನ್ ಆಗಿತ್ತು.
‘ಯುವರಾಜ’ VS ‘ರಾಜ’ನ ನಡುವೆ ಬಿಗ್ ಫೈಟ್
ಋತುರಾಜ್ ಮಾತ್ರವಲ್ಲ.. ಸೀನಿಯರ್ ಸೆಲೆಕ್ಷನ್ ಕಮಿಟಿ ಯುವ ಆಟಗಾರ ಶುಭ್ಮನ್ ಗಿಲ್ನ ಕೂಡ ಭವಿಷ್ಯದ ನಾಯಕನನ್ನಾಗಿ ರೂಪಿಸ್ತಿದೆ. ಈಗಾಗಲೇ T20 ಹಾಗೂ ಏಕದಿನ ಫಾರ್ಮೆಟ್ನಲ್ಲಿ ಎಲ್ಲರನ್ನ ಸೈಡ್ಲೈನ್ ಮಾಡಿ ಶುಭ್ಮನ್ ಗಿಲ್ಗೆ ಉಪನಾಯಕನ ಪಟ್ಟವನ್ನ ಕಟ್ಟಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಗಿಲ್ ಜವಾಬ್ಧಾರಿ ನಿರ್ವಹಿಸಿದ್ದಾರೆ. ಐಪಿಎಲ್ನಲ್ಲಿ ಶುಭ್ಮನ್ ಗಿಲ್, ಗುಜರಾತ್ ತಂಡವನ್ನ ಮುನ್ನಡೆಸ್ತಾ ಇದ್ದು ನಾಯಕನ ರೇಸ್ನಲ್ಲೂ ಮುಂಚೂಣಿಯಲ್ಲಿದ್ದಾರೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ಉತ್ತರಾಧಿಕಾರಿ ನೇಮಕಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಯಂತೂ ಜೋರಾಗಿದೆ. ಲಾಂಗ್ಟರ್ಮ್ ಕ್ಯಾಪ್ಟನ್ ಹುಡುಕಾಟದಲ್ಲಿರೋ ಬಾಸ್ಗಳು ಈ ಇಬ್ಬರು ಯುವ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರೋದಂತೂ ಸ್ಪಷ್ಟ. ಯುವರಾಜ ಶುಭ್ಮನ್ ಗಿಲ್, ರಾಜ ಋತುರಾಜ್ ಗಾಯಕ್ವಾಡ್ ನಡುವಿನ ಫೈಟ್ನಲ್ಲಿ ನಾಯಕತ್ವ ಯಾರಿಗೆ ಒಲಿಯುತ್ತೆ ಅನ್ನೋದು ಸದ್ಯಕ್ಕಂತೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಭವಿಷ್ಯದ ನಾಯಕನ ಚರ್ಚೆಗೆ ಇರಾನಿ ಟ್ರೋಫಿ ಕಿಚ್ಚು
ಟೀಮ್ ಇಂಡಿಯಾ ಕ್ಯಾಪ್ಟನ್ ರೇಸ್ಗೆ ‘ರಾಜ’ನ ಎಂಟ್ರಿ
ಯುವರಾಜ vs ರಾಜನ ನಡುವೆ ಬಿಗ್ ಫೈಟ್
ಟೀಮ್ ಇಂಡಿಯಾದ ಬ್ಯುಸಿ ಕ್ರಿಕೆಟ್ ಶೆಡ್ಯೂಲ್ ನಡುವೆಯೇ ಬಿಸಿಸಿಐ ವಲಯದಲ್ಲಿ ಭವಿಷ್ಯದ ಲೆಕ್ಕಾಚಾರ ಜೋರಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಉತ್ತರಾಧಿಕಾರಿಯ ಹುಡುಕಾಟ ಜೋರಾಗಿ ನಡೀತಾಯಿದೆ. ಇಷ್ಟು ದಿನ ಪ್ರಿನ್ಸ್ ಶುಭಮನ್ ಗಿಲ್, ಟೀಮ್ ಇಂಡಿಯಾದ ಯುವರಾಜ ಎನ್ನಲಾಗಿತ್ತು. ಇದೀಗ ರೇಸ್ಗೆ ಅಸಲಿ ರಾಜ ಋತುರಾಜ್ ಗಾಯಕ್ವಾಡ್ ಎಂಟ್ರಿ ಕೊಟ್ಟಿದ್ದಾರೆ.
ಇಂಡೋ-ಬಾಂಗ್ಲಾ ಟೆಸ್ಟ್ ಫೈಟ್ನ ನಡುವೆಯೆ ಪ್ರತಿಷ್ಟಿತ ದೇಶಿ ಟೂರ್ನಿ ಇರಾನಿ ಟ್ರೋಫಿಗೆ ಸಿದ್ಧತೆ ಶುರುವಾಗಿದೆ. ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ನಡುವೆ ಕದನ ನಡೆಯಲಿದೆ. ಅಕ್ಟೋಬರ್ 1ರಿಂದ ಲಕ್ನೋನಲ್ಲಿ ನಡೆಯೋ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ ಪ್ರಕಟವಾಗಿದೆ. ಬೆನ್ನಲ್ಲೇ, ಟೀಮ್ ಇಂಡಿಯಾ ಫ್ಯೂಚರ್ ಕ್ಯಾಪ್ಟನ್ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು? ಈ ಪ್ರಶ್ನೆ ಕಳೆದ ಕೆಲ ತಿಂಗಳಿಂದ ಭಾರತೀಯ ಕ್ರಿಕೆಟ್ ವಲಯದಲ್ಲಿ ಗಿರಕಿ ಹೊಡೀತಾಯಿದೆ. ಮೊದಲೆಲ್ಲಾ ಕೆಲ ಸೀನಿಯರ್ ಪ್ಲೇಯರ್ಗಳ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರ್ತಾ ಇದ್ವು. ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರಿತ್ ಬೂಮ್ರಾ. ಅಷ್ಟೇ ಏಕೆ.. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹೆಸರು ಕೂಡ ರೇಸ್ನಲ್ಲಿತ್ತು. ಇವ್ರೆಲ್ಲಾ ಇದೀಗ ರೇಸ್ನಿಂದ ಹೊರ ಬಿದ್ದಿದ್ದಾರೆ. ರೇಸ್ನಲ್ಲಿದ್ದ ಸೀನಿಯರ್ ಆಟಗಾರರು ಹೊರ ಬಿದ್ದ ಬಳಿಕ, ರೋಹಿತ್ ಉತ್ತರಾಧಿಕಾರಿ ಪಟ್ಟವನ್ನೇರಲು ಯಂಗ್ಸ್ಟರ್ಗಳ ನಡುವೆ ಫೈಟ್ ಏರ್ಪಟ್ಟಿದೆ.
ಭವಿಷ್ಯದ ನಾಯಕನ ಚರ್ಚೆಗೆ ಕಿಚ್ಚು ಹಚ್ಚಿದ ಇರಾನಿ ಟ್ರೋಫಿ
ಇರಾನಿ ಟ್ರೋಫಿ ಟೂರ್ನಿಗೆ ಸೀನಿಯರ್ ಸೆಲೆಕ್ಷನ್ ಕಮಿಟಿ ರೆಸ್ಟ್ ಆಫ್ ಇಂಡಿಯಾ ತಂಡವನ್ನ ಪ್ರಕಟಿಸಿದೆ. ಪ್ರಮುಖ ಆಟಗಾರರನ್ನ ಸೈಡ್ಲೈನ್ ಮಾಡಿ ಯುವ ಆಟಗಾರ ಋತುರಾಜ್ ಗಾಯಕ್ವಾಡ್ಗೆ ನಾಯಕನ ಪಟ್ಟವನ್ನ ಕಟ್ಟಲಾಗಿದೆ. ಈ ಮೂಲಕ ಋತುರಾಜ್ ಗಾಯಕ್ವಾಡ್ನ ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗ್ತಿದೆ ಅನ್ನೋ ಪರೋಕ್ಷ ಸಂದೇಶ ರವಾನೆಯಾಗಿದೆ.
ರಣಜಿ, ದುಲೀಪ್ ಟ್ರೋಫಿ, IPLನಲ್ಲಿ ನಾಯಕ
ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವ ಮಾತ್ರವಲ್ಲ. ಈ ಹಿಂದಿನ ದುಲೀಪ್ ಟ್ರೋಫಿ ಟೂರ್ನಿಯಲ್ಲೂ ಇಂಡಿಯಾ ಸಿ ತಂಡಕ್ಕೆ ಋತುರಾಜ್ ಸಾರಥಿಯಾಗಿದ್ರು. ಆಗಲೇ ಈ ಭವಿಷ್ಯದ ನಾಯಕನ ಚರ್ಚೆ ನಡೆದಿತ್ತು. ಐಪಿಎಲ್ನಲ್ಲಿ ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ನ ಋತುರಾಜ್ ಮುನ್ನಡೆಸ್ತಾ ಇದ್ದಾರೆ. ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಸೇರಿದಂತೆ ಡೊಮೆಸ್ಟಿಕ್ ಟೂರ್ನಿಗಳಲ್ಲಿ ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ನಾಯಕನಾಗಿದ್ದಾರೆ. ಹೀಗಾಗಿ ಬಿಸಿಸಿಐ ಕಣ್ಣು ಋತುರಾಜ್ ಮೇಲೆ ಬಿದ್ದಿದ್ದು, ಫ್ಯೂಚರ್ ಕ್ಯಾಪ್ಟನ್ ಆಗಿ ಋತುರಾಜ್ನ ಬೆಳೆಸೋ ಕೆಲಸ ಆರಂಭವಾಗಿದೆ.
ಇದನ್ನೂ ಓದಿ:ಕೊಹ್ಲಿಯನ್ನು ಕಾಣುವಾಸೆ.. 58km ಸೈಕಲ್ ಏರಿ ಬಂದ 10ನೇ ತರಗತಿ ಬಾಲಕ
ಋತುರಾಜ್ ನಾಯಕತ್ವದಲ್ಲಿ ಏಷ್ಯನ್ ಗೇಮ್ಸ್ ಗೆಲುವು
ಕಳೆದ ಏಷ್ಯನ್ ಗೇಮ್ಸ್ ವೇಳೆಯೂ ಅನುಭವಿ ಶಿಖರ್ ಧವನ್ ಟೀಮ್ ಇಂಡಿಯಾವನ್ನು ಮುನ್ನಡೆಸ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವೇಳೆ ಶಾಕ್ ಕೊಟ್ಟಿದ್ದ ಸೆಲೆಕ್ಷನ್ ಕಮಿಟಿ ಸರ್ಪ್ರೈಸ್ ರೀತಿಯಲ್ಲಿ ಋತುರಾಜ್ ಗಾಯಕ್ವಾಡ್ಗೆ ನಾಯಕತ್ವ ನೀಡಿತ್ತು. ಗಾಯಕ್ವಾಡ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ನಲ್ಲಿ ಚಾಂಪಿಯನ್ ಆಗಿತ್ತು.
‘ಯುವರಾಜ’ VS ‘ರಾಜ’ನ ನಡುವೆ ಬಿಗ್ ಫೈಟ್
ಋತುರಾಜ್ ಮಾತ್ರವಲ್ಲ.. ಸೀನಿಯರ್ ಸೆಲೆಕ್ಷನ್ ಕಮಿಟಿ ಯುವ ಆಟಗಾರ ಶುಭ್ಮನ್ ಗಿಲ್ನ ಕೂಡ ಭವಿಷ್ಯದ ನಾಯಕನನ್ನಾಗಿ ರೂಪಿಸ್ತಿದೆ. ಈಗಾಗಲೇ T20 ಹಾಗೂ ಏಕದಿನ ಫಾರ್ಮೆಟ್ನಲ್ಲಿ ಎಲ್ಲರನ್ನ ಸೈಡ್ಲೈನ್ ಮಾಡಿ ಶುಭ್ಮನ್ ಗಿಲ್ಗೆ ಉಪನಾಯಕನ ಪಟ್ಟವನ್ನ ಕಟ್ಟಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಗಿಲ್ ಜವಾಬ್ಧಾರಿ ನಿರ್ವಹಿಸಿದ್ದಾರೆ. ಐಪಿಎಲ್ನಲ್ಲಿ ಶುಭ್ಮನ್ ಗಿಲ್, ಗುಜರಾತ್ ತಂಡವನ್ನ ಮುನ್ನಡೆಸ್ತಾ ಇದ್ದು ನಾಯಕನ ರೇಸ್ನಲ್ಲೂ ಮುಂಚೂಣಿಯಲ್ಲಿದ್ದಾರೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ಉತ್ತರಾಧಿಕಾರಿ ನೇಮಕಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಯಂತೂ ಜೋರಾಗಿದೆ. ಲಾಂಗ್ಟರ್ಮ್ ಕ್ಯಾಪ್ಟನ್ ಹುಡುಕಾಟದಲ್ಲಿರೋ ಬಾಸ್ಗಳು ಈ ಇಬ್ಬರು ಯುವ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರೋದಂತೂ ಸ್ಪಷ್ಟ. ಯುವರಾಜ ಶುಭ್ಮನ್ ಗಿಲ್, ರಾಜ ಋತುರಾಜ್ ಗಾಯಕ್ವಾಡ್ ನಡುವಿನ ಫೈಟ್ನಲ್ಲಿ ನಾಯಕತ್ವ ಯಾರಿಗೆ ಒಲಿಯುತ್ತೆ ಅನ್ನೋದು ಸದ್ಯಕ್ಕಂತೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್