newsfirstkannada.com

RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ

Share :

Published October 2, 2024 at 9:15am

Update October 2, 2024 at 9:58am

    ಕ್ಯಾಪ್ಟನ್​ ಕೂಲ್​ನ ಕೋಪಕ್ಕೆ ಟಿವಿ ಪೀಸ್​ ಪೀಸ್​ ಆಗಿತ್ತಾ?

    ಆರ್​ಸಿಬಿ ವಿರುದ್ಧ ಸೋಲು ಅರಗಿಸಿಕೊಳ್ಳಲಾಗದ ಬೇಸರ

    ಬೆಂಗಳೂರಿನಲ್ಲಿ ನಡೆದ ಪಂದ್ಯ ಧೋನಿ ಕೋಪ ಹೇಗಿತ್ತು?

ಧೋನಿಯನ್ನ ಕ್ಯಾಪ್ಟನ್​ ಕೂಲ್​ ಅಂತಾರೆ. ಧೋನಿ ಯಾವತ್ತು ಕ್ರಿಕೆಟಿಗರ ಜೊತೆಗೆ ಉಗ್ರವಾಗಿ ನಡೆದುಕೊಂಡಿಲ್ಲ, ದರ್ಪ ತೋರಿಲ್ಲ. ಪ್ರತಿಯೊಬ್ಬರ ಜೊತೆಗೆ ಗೌರವ ನಡೆದುಕೊಳ್ಳುವ ಧೋನಿ​ ಪ್ರತಿಯೊಬ್ಬರ ಜೊತೆಗೆ ಬೆರೆಯುತ್ತಾರೆ. ಆದರೆ ಕ್ಯಾಪ್ಟನ್​ ಕೂಲ್​ ಒಳಗೂ ಆಕ್ರೋಶವಿದೆ. ಮೈದಾನದಲ್ಲಿ ಕೂಲ್​ ಆಗಿರುವ ಧೋನಿ ಕಳೆದ ವರ್ಷ ಡ್ರೆಸ್ಸಿಂಗ್​ ರೂಂನಲ್ಲಿ ಏನು ಮಾಡಿದ್ದರು ಗೊತ್ತಾ?.

ಧೋನಿ ಕಳೆದ ವರ್ಷ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದರಂತೆ. ಸೋತ ಅಘಾತದಲ್ಲಿ ಡ್ರೆಸ್ಸಿಂಗ್​ ರೂಮ್​ಗೆ ಹೋದ ಮಾಹಿ ಕೈಗೆ ಸಿಕ್ಕ ಟಿವಿಯನ್ನು ಇಬ್ಭಾಗ ಮಾಡಿದ್ದರಂತೆ. ಅಂದಹಾಗೆಯೇ ಈ ಘಟನೆಯನ್ನು ಪತ್ರಕರ್ತರೊಬ್ಬರು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ ಪಂತ್​​; ಅಸಲಿಗೆ ಆಗಿದ್ದೇನು?

ಕಳೆದ ವರ್ಷ ಮೇ18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ RCB ಮತ್ತು CSK ನಡುವೆ ಕೊನೆಯ ಲೀಗ್​ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಧೋನಿಯ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೋತಿತ್ತು. ರಾಯಲ್​ ಚಾಲೆಂಜರ್ಸ್​ ತಂಡ ಗೆದ್ದಿತ್ತು. ಸೋಲನ್ನು ಅನುಭವಿಸಿದ ಪ್ಲೇಆಫ್​​ ಅರ್ಹತೆಯಿಂದ ಹೊರಬಿದ್ದ ಧೋನಿ ಕೋಪಗೊಂಡು ಡ್ರೆಸ್ಸಿಂಗ್​ ರೂಂನಲ್ಲಿ ಟಿವಿಯನ್ನೇ ಪೀಸ್​ ಪೀಸ್​ ಮಾಡಿದ್ದರಂತೆ.

ಇದನ್ನೂ ಓದಿ: ಭಾರತದ ಗೆಲುವಿಗೆ KL ರಾಹುಲ್​​​​ ಕಾರಣ ಎಂದ ಕ್ಯಾಪ್ಟನ್​ ರೋಹಿತ್​​.. ಅಸಲಿ ಸತ್ಯ ಬಿಚ್ಚಿಟ್ರು!

ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ 219 ರನ್​ಗಳ ಗುರಿ ಮುಟ್ಟುವುದು ಧೋನಿ ತಂಡಕ್ಕೆ ಸವಾಲಾಗಿತ್ತು. ಈ ವೇಳೆ ಚೆನ್ನೈ ತಂಡವನ್ನು ಆರ್​ಸಿಬಿ 27 ರನ್​ಗೆ ಸೋಲಿಸಿತು. ಈ ಪಂದ್ಯದಲ್ಲಿ ಧೋನಿ 13 ಎಸೆತಕ್ಕೆ 25 ರನ್​ ಗಳಿಸಿ ಕೊನೆಯ ಓವರ್​ನಲ್ಲಿ ಯಶ್​​ ದಯಾಳ್​​ ಎಸೆತಕ್ಕೆ ಔಟ್​ ಆಗಿದ್ದರು.

ಅಂದಹಾಗೆಯೇ ಪತ್ರಕರ್ತರೊಬ್ಬರಿಗೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಈ ವಿಚಾರ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ

https://newsfirstlive.com/wp-content/uploads/2024/10/Dhoni.jpg

    ಕ್ಯಾಪ್ಟನ್​ ಕೂಲ್​ನ ಕೋಪಕ್ಕೆ ಟಿವಿ ಪೀಸ್​ ಪೀಸ್​ ಆಗಿತ್ತಾ?

    ಆರ್​ಸಿಬಿ ವಿರುದ್ಧ ಸೋಲು ಅರಗಿಸಿಕೊಳ್ಳಲಾಗದ ಬೇಸರ

    ಬೆಂಗಳೂರಿನಲ್ಲಿ ನಡೆದ ಪಂದ್ಯ ಧೋನಿ ಕೋಪ ಹೇಗಿತ್ತು?

ಧೋನಿಯನ್ನ ಕ್ಯಾಪ್ಟನ್​ ಕೂಲ್​ ಅಂತಾರೆ. ಧೋನಿ ಯಾವತ್ತು ಕ್ರಿಕೆಟಿಗರ ಜೊತೆಗೆ ಉಗ್ರವಾಗಿ ನಡೆದುಕೊಂಡಿಲ್ಲ, ದರ್ಪ ತೋರಿಲ್ಲ. ಪ್ರತಿಯೊಬ್ಬರ ಜೊತೆಗೆ ಗೌರವ ನಡೆದುಕೊಳ್ಳುವ ಧೋನಿ​ ಪ್ರತಿಯೊಬ್ಬರ ಜೊತೆಗೆ ಬೆರೆಯುತ್ತಾರೆ. ಆದರೆ ಕ್ಯಾಪ್ಟನ್​ ಕೂಲ್​ ಒಳಗೂ ಆಕ್ರೋಶವಿದೆ. ಮೈದಾನದಲ್ಲಿ ಕೂಲ್​ ಆಗಿರುವ ಧೋನಿ ಕಳೆದ ವರ್ಷ ಡ್ರೆಸ್ಸಿಂಗ್​ ರೂಂನಲ್ಲಿ ಏನು ಮಾಡಿದ್ದರು ಗೊತ್ತಾ?.

ಧೋನಿ ಕಳೆದ ವರ್ಷ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದರಂತೆ. ಸೋತ ಅಘಾತದಲ್ಲಿ ಡ್ರೆಸ್ಸಿಂಗ್​ ರೂಮ್​ಗೆ ಹೋದ ಮಾಹಿ ಕೈಗೆ ಸಿಕ್ಕ ಟಿವಿಯನ್ನು ಇಬ್ಭಾಗ ಮಾಡಿದ್ದರಂತೆ. ಅಂದಹಾಗೆಯೇ ಈ ಘಟನೆಯನ್ನು ಪತ್ರಕರ್ತರೊಬ್ಬರು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ ಪಂತ್​​; ಅಸಲಿಗೆ ಆಗಿದ್ದೇನು?

ಕಳೆದ ವರ್ಷ ಮೇ18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ RCB ಮತ್ತು CSK ನಡುವೆ ಕೊನೆಯ ಲೀಗ್​ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಧೋನಿಯ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೋತಿತ್ತು. ರಾಯಲ್​ ಚಾಲೆಂಜರ್ಸ್​ ತಂಡ ಗೆದ್ದಿತ್ತು. ಸೋಲನ್ನು ಅನುಭವಿಸಿದ ಪ್ಲೇಆಫ್​​ ಅರ್ಹತೆಯಿಂದ ಹೊರಬಿದ್ದ ಧೋನಿ ಕೋಪಗೊಂಡು ಡ್ರೆಸ್ಸಿಂಗ್​ ರೂಂನಲ್ಲಿ ಟಿವಿಯನ್ನೇ ಪೀಸ್​ ಪೀಸ್​ ಮಾಡಿದ್ದರಂತೆ.

ಇದನ್ನೂ ಓದಿ: ಭಾರತದ ಗೆಲುವಿಗೆ KL ರಾಹುಲ್​​​​ ಕಾರಣ ಎಂದ ಕ್ಯಾಪ್ಟನ್​ ರೋಹಿತ್​​.. ಅಸಲಿ ಸತ್ಯ ಬಿಚ್ಚಿಟ್ರು!

ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ 219 ರನ್​ಗಳ ಗುರಿ ಮುಟ್ಟುವುದು ಧೋನಿ ತಂಡಕ್ಕೆ ಸವಾಲಾಗಿತ್ತು. ಈ ವೇಳೆ ಚೆನ್ನೈ ತಂಡವನ್ನು ಆರ್​ಸಿಬಿ 27 ರನ್​ಗೆ ಸೋಲಿಸಿತು. ಈ ಪಂದ್ಯದಲ್ಲಿ ಧೋನಿ 13 ಎಸೆತಕ್ಕೆ 25 ರನ್​ ಗಳಿಸಿ ಕೊನೆಯ ಓವರ್​ನಲ್ಲಿ ಯಶ್​​ ದಯಾಳ್​​ ಎಸೆತಕ್ಕೆ ಔಟ್​ ಆಗಿದ್ದರು.

ಅಂದಹಾಗೆಯೇ ಪತ್ರಕರ್ತರೊಬ್ಬರಿಗೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಈ ವಿಚಾರ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More