ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಪಡೆಗೆ ತಲೆ ಬಾಗಿದ ಪಂಜಾಬ್
ಜಡೇಜಾ, ದೇಶಪಾಂಡ್ಯ, ಸಿಂಗ್ ಚೆನ್ನೈ ಪರ ಉತ್ತಮ ಬೌಲಿಂಗ್
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 28 ರನ್ಗಳಿಂದ ಅಮೋಘ ಗೆಲವು ಸಾಧಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ಗೆ ಪಂಜಾಬ್ ಸೋಲೋಪ್ಪಿಕೊಂಡಿದೆ.
ಟಾಸ್ ಗೆದ್ದುಕೊಂಡ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಚೆನ್ನೈ ಪರ ಓಪನರ್ಸ್ ಅಜಿಂಕ್ಯಾ ರಹಾನೆ, ಕ್ಯಾಪ್ಟನ್ ರುತುರಾಜ್ ಉತ್ತಮ ಆರಂಭವೇನು ಪಡೆಯಲಿಲ್ಲ. ತಂಡದ ಮೊತ್ತ ಕೇವಲ 12 ಇರುವಾಗಲೇ ರಹಾನೆ ಔಟ್ ಆದ್ರೆ ರುತುರಾಜ್ ಗಾಯಕ್ವಾಡ್ 32 ರನ್ಗೆ ಪೆವಿಲಿಯನ್ ನಡೆದರು. ಮಿಚೆಲ್ ಸ್ವಲ್ಪ ಹೊತ್ತು ಕ್ರೀಸ್ನಲ್ಲಿದ್ದು 30 ರನ್ಗೆ ಎಲ್ಬಿ ಬಲೆಗೆ ಬಿದ್ದರು. ಇನ್ನು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ 43 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಇವರನ್ನು ಬಿಟ್ಟರೇ ಧೋನಿ ಸೇರಿ ಉಳಿದ ಬ್ಯಾಟ್ಸ್ಮನ್ಗಳೆಲ್ಲ 20 ರನ್ ಗಳಿಸುವುದಕ್ಕೂ ಮೊದಲೇ ಔಟ್ ಆದರು. ಹೀಗಾಗಿ 20 ಓವರ್ಗಳಲ್ಲಿ ಪಂಜಾಬ್ಗೆ 167 ರನ್ಗಳ ಟಾರ್ಗೆಟ್ ಅನ್ನು ಚೆನ್ನೈ ನೀಡಿತ್ತು.
ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್ ಹೇಳಿದ್ದೇನು?
ಇದನ್ನೂ ಓದಿ: ಧೋನಿ ಡಕೌಟ್.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?
ಈ ಟಾರ್ಗೆಟ್ ಬೆನ್ನಟ್ಟಿದ್ದ ಪಂಜಾಬ್ ಆರಂಭದಲ್ಲಿ ಭಾರೀ ನಷ್ಟ ಅನುಭವಿಸಿತು. ಕೇವಲ 7 ರನ್ಗೆ ಜಾನಿ ಬೈರ್ಸ್ಟೋವ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಪ್ರಭಾಸಿಮ್ರಾನ್ ಕೆಲ ಹೊತ್ತು ಚೆನ್ನೈ ಬೌಲರ್ಸ್ ಅನ್ನು ಕಾಡಿ 30 ರನ್ ಗಳಿಸಿ ಆಡುವಾಗ ಜಡೇಜಾ ಬೌಲಿಂಗ್ನಲ್ಲಿ ಔಟ್ ಆದರು. ಶಶಾಂಕ್ ಸಿಂಗ್ 27 ಬಿಟ್ಟರೇ ಉಳಿದ ಬ್ಯಾಟ್ಸ್ಮನ್ಗಳು 17ರ ಗಡಿ ಕೂಡ ದಾಟಲಿಲ್ಲ. ಹೀಗಾಗಿ ಪಂಜಾಬ್ ಬ್ಯಾಟಿಂಗ್ ಮಾಡಲು ಭಾರೀ ಕಷ್ಟ ಪಟ್ಟಿತು ಎನ್ನಬಹುದು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಮಾತ್ರ ಗಳಿಸಲು ಶಕ್ತವಾಯಿತು. ಇದರಿಂದ 28 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಗಲುವಿನ ನಗೆ ಬೀರಿತು.
ಇದನ್ನೂ ಓದಿ: T20 ವಿಶ್ವಕಪ್ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್ ರೋಹಿತ್ ಶರ್ಮಾ ಇಂಜುರಿಗೆ ಒಳಗಾದ್ರಾ?
ಚೆನ್ನೈ ಪರ 43 ರನ್ ಸಿಡಿಸಿದ್ದು ಅಲ್ಲದೇ ಪ್ರಮುಖ 3 ವಿಕೆಟ್ಗಳನ್ನ ರವೀಂದ್ರ ಜಡೇಜಾ ಪಡೆದರು. ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಪಡೆಗೆ ತಲೆ ಬಾಗಿದ ಪಂಜಾಬ್
ಜಡೇಜಾ, ದೇಶಪಾಂಡ್ಯ, ಸಿಂಗ್ ಚೆನ್ನೈ ಪರ ಉತ್ತಮ ಬೌಲಿಂಗ್
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 28 ರನ್ಗಳಿಂದ ಅಮೋಘ ಗೆಲವು ಸಾಧಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ಗೆ ಪಂಜಾಬ್ ಸೋಲೋಪ್ಪಿಕೊಂಡಿದೆ.
ಟಾಸ್ ಗೆದ್ದುಕೊಂಡ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಚೆನ್ನೈ ಪರ ಓಪನರ್ಸ್ ಅಜಿಂಕ್ಯಾ ರಹಾನೆ, ಕ್ಯಾಪ್ಟನ್ ರುತುರಾಜ್ ಉತ್ತಮ ಆರಂಭವೇನು ಪಡೆಯಲಿಲ್ಲ. ತಂಡದ ಮೊತ್ತ ಕೇವಲ 12 ಇರುವಾಗಲೇ ರಹಾನೆ ಔಟ್ ಆದ್ರೆ ರುತುರಾಜ್ ಗಾಯಕ್ವಾಡ್ 32 ರನ್ಗೆ ಪೆವಿಲಿಯನ್ ನಡೆದರು. ಮಿಚೆಲ್ ಸ್ವಲ್ಪ ಹೊತ್ತು ಕ್ರೀಸ್ನಲ್ಲಿದ್ದು 30 ರನ್ಗೆ ಎಲ್ಬಿ ಬಲೆಗೆ ಬಿದ್ದರು. ಇನ್ನು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ 43 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಇವರನ್ನು ಬಿಟ್ಟರೇ ಧೋನಿ ಸೇರಿ ಉಳಿದ ಬ್ಯಾಟ್ಸ್ಮನ್ಗಳೆಲ್ಲ 20 ರನ್ ಗಳಿಸುವುದಕ್ಕೂ ಮೊದಲೇ ಔಟ್ ಆದರು. ಹೀಗಾಗಿ 20 ಓವರ್ಗಳಲ್ಲಿ ಪಂಜಾಬ್ಗೆ 167 ರನ್ಗಳ ಟಾರ್ಗೆಟ್ ಅನ್ನು ಚೆನ್ನೈ ನೀಡಿತ್ತು.
ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್ ಹೇಳಿದ್ದೇನು?
ಇದನ್ನೂ ಓದಿ: ಧೋನಿ ಡಕೌಟ್.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?
ಈ ಟಾರ್ಗೆಟ್ ಬೆನ್ನಟ್ಟಿದ್ದ ಪಂಜಾಬ್ ಆರಂಭದಲ್ಲಿ ಭಾರೀ ನಷ್ಟ ಅನುಭವಿಸಿತು. ಕೇವಲ 7 ರನ್ಗೆ ಜಾನಿ ಬೈರ್ಸ್ಟೋವ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಪ್ರಭಾಸಿಮ್ರಾನ್ ಕೆಲ ಹೊತ್ತು ಚೆನ್ನೈ ಬೌಲರ್ಸ್ ಅನ್ನು ಕಾಡಿ 30 ರನ್ ಗಳಿಸಿ ಆಡುವಾಗ ಜಡೇಜಾ ಬೌಲಿಂಗ್ನಲ್ಲಿ ಔಟ್ ಆದರು. ಶಶಾಂಕ್ ಸಿಂಗ್ 27 ಬಿಟ್ಟರೇ ಉಳಿದ ಬ್ಯಾಟ್ಸ್ಮನ್ಗಳು 17ರ ಗಡಿ ಕೂಡ ದಾಟಲಿಲ್ಲ. ಹೀಗಾಗಿ ಪಂಜಾಬ್ ಬ್ಯಾಟಿಂಗ್ ಮಾಡಲು ಭಾರೀ ಕಷ್ಟ ಪಟ್ಟಿತು ಎನ್ನಬಹುದು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಮಾತ್ರ ಗಳಿಸಲು ಶಕ್ತವಾಯಿತು. ಇದರಿಂದ 28 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಗಲುವಿನ ನಗೆ ಬೀರಿತು.
ಇದನ್ನೂ ಓದಿ: T20 ವಿಶ್ವಕಪ್ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್ ರೋಹಿತ್ ಶರ್ಮಾ ಇಂಜುರಿಗೆ ಒಳಗಾದ್ರಾ?
ಚೆನ್ನೈ ಪರ 43 ರನ್ ಸಿಡಿಸಿದ್ದು ಅಲ್ಲದೇ ಪ್ರಮುಖ 3 ವಿಕೆಟ್ಗಳನ್ನ ರವೀಂದ್ರ ಜಡೇಜಾ ಪಡೆದರು. ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ