/newsfirstlive-kannada/media/post_attachments/wp-content/uploads/2024/08/kulla-seena-1.jpg)
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚೇರ್​ ಮೇಲೆ ಕುಳಿತುಕೊಂಡು ಸಿಗರೇಟು ಸೇದುವ ಫೋಟೋ ವೈರಲ್​ ಆಗಿದೆ. ರೌಡಿಗಳ ಜೊತೆಗೆ ಕುಳಿತುಕೊಂಡು ಟೀ ಜೊತೆಗೆ ಸಿಗರೇಟು ಸೇದುತ್ತಿರುವ ಸಂಗತಿ ಬಟಾ ಬಯಲಾಗಿದೆ. ವಿಲ್ಸನ್​​ ಗಾರ್ಡನ್​ ನಾಗ, ಕುಳ್ಳ ಸೀನ ಜೊತೆಗೆ ಎಂಜಾಯ್​ ಮಾಡುವ ದೃಶ್ಯ ಸಮೇತ ಸಿಕ್ಕಿದೆ. ಆದರೀಗ ಈ ಇಬ್ಬರ ಕ್ರಿಮಿನಲ್​ ಹಿಸ್ಟರಿ ವಿಭಿನ್ನವಾಗಿದೆ. ಅದರಲ್ಲೂ ಕುಳ್ಳ ಸೀನನ ಕತೆ, ಪ್ರಕರಣದ ಬಗ್ಗೆ ಮಾಹಿತಿ ಇಲ್ಲಿದೆ.
ದರ್ಶನ್ ಜೊತೆ ಜೈಲಿನಲ್ಲಿರುವ ಮತ್ತೊಬ್ಬ ಖೈದಿ ಹೆಸರು ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ. ಸುಬ್ರಮಣ್ಯಪುರದ ಠಾಣ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ ಈತ ಜೈಲು ಸೇರಿರುವ ಖೈದಿ. ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಗೆ ಸಜೆ ಕೂಡ ಆಗಿದೆ.
/newsfirstlive-kannada/media/post_attachments/wp-content/uploads/2024/08/kulla-seena.jpg)
ಸಜೆ ಆಗಿರೋ ಖೈದಿಗಳಿಗಳು ಸಾಧಾರಣವಾಗಿ ಬಿಳಿ ಬಟ್ಟೆ ಹಾಕಬೇಕು. ಆದರೆ ಶ್ರೀನಿವಾಸ್ ಸಜೆ ಆದ್ರೂ ಬಿಳಿ ಬಟ್ಟೆ ಧರಿಸೋದಿಲ್ಲ. ಜೈಲಾಧಿಕಾರಿಗಲಿಗೆ ಶ್ರೀನಿವಾಸ್ ಕ್ಯಾರೆ ಅಂತಾನು ಅನ್ನಲ್ವಂತೆ.
/newsfirstlive-kannada/media/post_attachments/wp-content/uploads/2024/08/darshan-2.jpg)
ವಿಲ್ಸನ್ ಗಾರ್ಡನ್ ನಾಗನೇ ಜೈಲಿನಲ್ಲಿ ಶ್ರೀನಿವಾಸ್ ಗೆ ಕೇಕ್ ಕತ್ತರಿಸಿ ಬರ್ತ್​​​ಡೆ ಮಾಡಿದ್ದನು. ಕುಳ್ಳ ಸೀನನಿಗೆ ಏಕಾಏಕಿ ಜೈಲಿನಲ್ಲಿ ಗನ್ ಕೇಕ್ ಕತ್ತರಿಸಿ ಬರ್ತಡೆ ಸೆಲಬ್ರೇಷನ್ ಮಾಡಿದ್ದನು.
/newsfirstlive-kannada/media/post_attachments/wp-content/uploads/2024/08/seena.jpg)
ಇನ್ನು ಕುಳ್ಳ ಸೀನನು ವಿಲ್ಸನ್ ಗಾರ್ಡನ್ ನಾಗನ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ಗುರುವಾಗಿದ್ದನು. ಹೀಗಾಗಿ ಇಬ್ಬರು ಈಗ ಜೈಲಿನಲ್ಲಿದ್ದು, ಜೈಲಿನಲ್ಲೇ ಗನ್ ಕೇಕ್ ಕತ್ತರಿಸಿ ಆತನ ಹವಾ ಎಂತದ್ದು ಎಂದು ನಾಗ ತೋರಿಸಿದ್ದನು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us