/newsfirstlive-kannada/media/post_attachments/wp-content/uploads/2023/11/bigg-boss-2023-11-04T162314.626.jpg)
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಯಲಿದೆ. ಸದ್ಯ ಕಲರ್ಸ್ ಕನ್ನಡ ಲೇಟೆಸ್ಟ್ ಪ್ರೋಮೋವೊಂದನ್ನ ರಿಲೀಸ್ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಿದ್ದಂತೆ ವಿನಯ್ ಗೌಡ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್ಬಾಸ್ ಕೊಟ್ಟ ಹಳ್ಳಿ ಟಾಸ್ಕ್ನಲ್ಲಿ ವಿನಯ್ ಗೌಡ ಕಾರ್ತಿಕ್ಗೆ ಬಳೆಗಳ ರಾಜ ಎಂಬ ಹೇಳಿಕೆ ನೀಡಿದ್ದರು. ಬಳಿಕ ಈ ಇಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ಆಗ ವಿನಯ್ ಗಂಡಸು ತರಹ ಆಡು.. ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡೋದಲ್ಲ. ಬಾರೋ ಬಾ.. ಏಯ್ ಗಂಡಸು ಬಾ.. ದೊಡ್ಡ ಗಂಡಸು ನನ್ಮಗನೇ ನಾನೇ ಬಳೆ ಹಾಕೊಂಡಿರೋದು ಎಂದು ಸಹ ಹೇಳಿದ್ದರು. ಇದೇ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಕೂಡ ಆಗುತ್ತಿತ್ತು. ಇತ್ತ ಬಿಗ್ಬಾಸ್ ಪ್ರೇಕ್ಷಕರು ಸಹ ಬಿಗ್ಬಾಸ್ ಬರುವಿಕೆಗಾಗಿ ಕಾಯುತ್ತಾ ಇದ್ದರು. ಇದೀಗ ಆ ಸಂದರ್ಭ ಬಂದಿದೆ. ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ವಿನಯ್ ಗೌಡ ಅವರಿಗೆ ಸಖತ್ ಕ್ಲಾಸ್ ತಗೆದುಕೊಳ್ಳಲಿದ್ದಾರೆ.
https://twitter.com/i/status/1720751509816615112
ರಿಲೀಸ್ ಆದ ಪ್ರೋಮೋದಲ್ಲಿ ಏನಿದೆ..?
ಹೌದು, ಬಿಗ್ಬಾಸ್ ಮನೆಯ ಎಲ್ಲಾ 15 ಸ್ಪರ್ಧಿಗಳಿಗೆ ಹಾಯ್ ಎನ್ನುತ್ತಲೆ ವಿನಯ್ ಗೌಡ ವಿರುದ್ಧ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಕಿಚ್ಚ ಸುದೀಪ್ ವೇದಿಕೆ ಮೇಲೆ ಬರುತ್ತಿದ್ದಂತೆ ವಿನಯ್ ಅವರೇ ಗಂಡಸು ತರಹ ಆಡು, ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡಬೇಡ. ಬಳೆ ಅವನಿಗೆ ತೊಡಿಸು ಈ ಬಳೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಸರ್ ಎಂದು ಕಿಚ್ಚ ಸುದೀಪ್ ವಿನಯ್ಗೆ ಕೇಳುತ್ತಾರೆ. ಆಗ ಅದಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್, ಕಾರ್ತಿಕ್ ಯಾವಾಗಲೂ ಸಂಗೀತಾ ಹಾಗೂ ತನಿಶಾ ಜೊತೆ ಇರುತ್ತಾನೆ ಸರ್ ಅದಕ್ಕೆ ಹಾಗೇ ಹೇಳಿದ್ದೇನೆ. ಆಗ ಕಿಚ್ಚ ಸುದೀಪ್, ಅವರಿಬ್ಬರೂ ಕಾರ್ತಿಕ್ ಒಟ್ಟಿಗೆ ಇದ್ದಾಗ ಅವರು ಯಾಕೆ ಮೀಸೆಗಳ ರಾಣಿಯರು ಆಗಿರಬಾರದು ಎಂದು ಪ್ರಶ್ನೆ ಮಾಡುತ್ತಾರೆ. ಹೆಣ್ಣು ಏಕೆ ಸರ್ ಯಾವಾಗಲೂ ಟಾರ್ಗೆಟ್ ಆಗಬೇಕು ಎಂದು ಹೇಳುತ್ತಾರೆ. ಆಗ ವಿನಯ್ ಬೇಕು ಅಂತಾ ಹಾಗೆ ಮಾತಾಡಿಲ್ಲ ಸರ್ ಎನ್ನುತ್ತಾರೆ. ಕೆಲವೊಂದು ಸಾರಿ ಸೈಲೆಂಟ್ ಆಗಿ ಇದ್ದರೆ ಒಳ್ಳೆಯದು. ಮಾತಿನ ಮೇಲೆ ನಿಗಾ ಇರಲಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ