ಮೊದಲ 2 ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ..!
3ನೇ ಪಂದ್ಯದಲ್ಲಿ ಧೋನಿ ದರ್ಶನ..! ಫ್ಯಾನ್ಸ್ ಖುಷ್.!
ಎಲ್ಲಾ ಅಭಿಮಾನಿಗಳಿಗಾಗಿ.. ನೋವಲ್ಲೂ ನಕ್ಕ ಮಾಹಿ..!
ಐಪಿಎಲ್ ಅಖಾಡದಲ್ಲಿ ಬ್ಯಾಟ್ ಬೀಸಿದ ಮೊದಲ ಪಂದ್ಯದಲ್ಲೇ ಧೋನಿ, ಫ್ಯಾನ್ಸ್ಗೆ ಫುಲ್ ಟ್ರೀಟ್ ಕೊಟ್ಟಿದ್ದಾರೆ. ವೈಜಾಕ್ನಲ್ಲಿ ಧೋನಿ ಘರ್ಜಿಸಿದ್ದನ್ನ ನೋಡಿ ಕ್ರಿಕೆಟ್ ಲೋಕ ಸಂಭ್ರಮಿಸಿದೆ. ಹಳೆ ಖದರ್ನಲ್ಲಿ ಮಾಹಿ ಘರ್ಜಿಸಿದ್ದನ್ನ ನೋಡಿ ಫ್ಯಾನ್ಸ್ ಫುಲ್ ಖುಷ್ ಆದ ಬೆನ್ನಲ್ಲೇ ಬೇಸರದ ಸುದ್ದಿ ಹೊರಬಿದ್ದಿದೆ. ಏನಪ್ಪಾ ಆ ಬ್ಯಾಡ್ನ್ಯೂಸ್ ಅಂತೀರಾ?
ಕಳೆದ ಸೀಸನ್ನಂತೆ ಈ ಬಾರಿಯೂ ಐಪಿಎಲ್ ಅಖಾಡದಲ್ಲಿ ಧೋನಿ ಜಾತ್ರೆ ನಡೀತಾಯಿದೆ. ಮಹೇಂದ್ರ ಬಾಹುಬಲಿಯ ಆಟವನ್ನ ಕಣ್ತುಂಬಿಕೊಳ್ಳಲು ಜನ ಸಾಗರವೇ ಮೈದಾನಕ್ಕೆ ಹರಿದು ಬರ್ತಿದೆ. ಈ ಸೀಸನ್ನಲ್ಲಿ ಧೋನಿಯ ಆಟವನ್ನ ನೋಡಬೇಕು ಅಂತಾ ಮೈದಾನಕ್ಕೆ ಎಂಟ್ರಿ ಕೊಟ್ಟ ಅಭಿಮಾನಿಗಳಿಗೆ ಮೊದಲ 2 ಪಂದ್ಯದಲ್ಲಿ ಆಗಿದ್ದು ತೀವ್ರ ನಿರಾಸೆ. ಕೀಪಿಂಗ್ ಮಾಡಿ ಗಮನ ಸೆಳೆದ ಮಾಹಿ, ಬ್ಯಾಟಿಂಗ್ಗೆ ಬರಲೇ ಇಲ್ಲ. ಇದ್ರಿಂದ ಚೆನ್ನೈ ಅಭಿಮಾನಿಗಳಿಗೆ ಆದ ಬೇಸರ ಅಷ್ಟಿಷ್ಟಲ್ಲ..
ಮೊದಲ 2 ಪಂದ್ಯದಲ್ಲಿ ಕಾದ ಅಭಿಮಾನಿಗಳಿಗೆ ನಿರಾಸೆ..!
ಕೊನೆಗೂ 3ನೇ ಪಂದ್ಯದಲ್ಲಿ ಧೋನಿ ಕಣಕ್ಕಿಳಿದೇ ಬಿಟ್ರು.. ಪ್ಯಾಡ್ ಕಟ್ಟಿ ಧೋನಿ ಎಂಟ್ರಿ ಕೊಟ್ಟಾಗ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಸಲಿಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡಿತು. ಆದ್ರೂ ಚೆನ್ನೈ ಫ್ಯಾನ್ಸ್ ಮುಖದಲ್ಲಿ ಮಾತ್ರ ಮಂದಹಾಸವಿತ್ತು. ಧೋನಿ ಆಡಿದ್ದು ಅಂತಾ ಎಂಟರ್ಟೈನಿಂಗ್ ಇನ್ನಿಂಗ್ಸ್.! ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಮಾಹಿ, ಬಿರುಸಿನ ಆಟವಾಡಿದ್ರು. 4 ಬೌಂಡರಿ, 3 ಸಿಕ್ಸರ್ ಚಚ್ಚಿ ಬಿಸಾಕಿದ್ರು.
ಫುಲ್ ಖುಷ್ ಆದ ಫ್ಯಾನ್ಸ್ಗೆ ಬ್ಯಾಡ್ನ್ಯೂಸ್.!
ಹೌದು.. ಧೋನಿ ಇನ್ನಿಂಗ್ಸ್ ನೋಡಿ ಖುಷ್ ಆದ ಫ್ಯಾನ್ಸ್ಗೆ ಇದೀಗ ಬ್ಯಾಡ್ ನ್ಯೂಸ್ ಕೇಳಿ ಬಂದಿದೆ. ಈ ಸೀಸನ್ನ ಅರ್ಧಕ್ಕೆ ಧೋನಿ ಐಪಿಎಲ್ಗೆ ಗುಡ್ ಬೈ ಹೇಳ್ತಾರಾ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಇದಕ್ಕೆಲ್ಲಾ ಕಾರಣ ಧೋನಿ ಇಂಜುರಿ…
ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್
ಮತ್ತೆ ಉಲ್ಬಣವಾಯ್ತಾ ಧೋನಿಯ ಇಂಜುರಿ?
ಕಳೆದ ಸೀಸನ್ನಲ್ಲೂ ಇಂಜುರಿ ನೋವಿನ ನಡುವೆ ಧೋನಿ ಅಖಾಡಕ್ಕಿಳಿದ್ರು. ಟೂರ್ನಿ ಮುಗಿದ ಬಳಿಕ KNEE ಸರ್ಜರಿ ಮಾಡಿಸಿಕೊಂಡು ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ರು. ಹೀಗಾಗಿ ಈ ಸೀಸನ್ಗೂ ಮುನ್ನ ಹೆಚ್ಚು ಅಭ್ಯಾಸ ನಡೆಸಲಿಲ್ಲ. ಸೀಸನ್ ಆರಂಭವಾದ ಬಳಿಕ ನಾರ್ಮಲ್ ಆಗೇ ಧೋನಿ ಕಾಣಿಸಿಕೊಂಡಿದ್ರು. ಚಾಣಾಕ್ಷ ವಿಕೆಟ್ ಕೀಪಿಂಗ್ನಿಂದ ಮಿಂಚಿದ್ರು. ಆದ್ರೆ, ಯಾವಾಗಲೂ ಬಿಟ್ವೀನ್ ದ ವಿಕೆಟ್ಸ್ ಚಿರತೆಯಂತೆ ಓಡ್ತಿದ್ದ ಧೋನಿ, ಡೆಲ್ಲಿ ಎದುರು ಬ್ಯಾಟಿಂಗ್ಗಿಳಿದಾಗ ಹೆಚ್ಚು ರನ್ ಓಡಲೇ ಇಲ್ಲ. ಯಾಕಂದ್ರೆ, ಅದಾಗಲೇ ಇಂಜುರಿ ಧೋನಿಯನ್ನ ಕಾಡಲಾರಂಭಿಸಿತ್ತು.
ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ದಾಖಲೆ; ಅಚ್ಚರಿಯ ಬೌಲಿಂಗ್ ಸ್ಪೀಡ್..! ವಿಡಿಯೋ
ಡೆಲ್ಲಿ ಕ್ಯಾಪಿಟಲ್ಸ್ ಎದುರು ಅಬ್ಬರದ ಬ್ಯಾಟಿಂಗ್ ನಡೆಸಿದ ಧೋನಿ, ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಾಗ ಕಾಲಿಗೆ ಐಸ್ಪ್ಯಾಕ್ ಕಟ್ಟಿಕೊಂಡಿದ್ರು. ಕುಂಟುತ್ತಲೇ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ರು. ಅಪಾರ ನೋವಿನಿಂದ ಬಳಲುತ್ತಿದ್ದಾರೆ ಅನ್ನೋದನ್ನ ಅವರ ಮುಖವೇ ಸಾರಿ ಸಾರಿ ಹೇಳ್ತಿತ್ತು. ಪೆವಿಲಿಯನ್ಗೆ ವಾಪಾಸ್ಸಾಗುವಾಗ ಹೆಚ್ಚು ಕುಂಟಿದ ಧೋನಿ ಭಾರವಾದ ಹೆಜ್ಜೆಗಳನ್ನಿಟ್ಟರು.
ಕೆಲ ಪಂದ್ಯಗಳಿಂದ ದೂರ ಉಳೀತಾರಾ ಮಾಹಿ.?
ಪಂದ್ಯ ಮುಗಿದ 2 ದಿನಗಳ ಬಳಿಕ ಹೈದ್ರಾಬಾದ್ಗೆ ಬಂದಿಳಿದಾಗಲೂ ಧೋನಿ ಕುಂಟುತ್ತಲೇ ಸಾಗಿದ್ರು. ಇದನ್ನ ನೋಡಿದ ಬಳಿಕ, ಮಾಹಿ ಇಂಜುರಿ ಗಂಭೀರ ಸ್ವರೂಪದಲ್ಲಿದೆ ಅನ್ನೋದು ಕನ್ಫರ್ಮ್ ಆಗಿದೆ. ಹೀಗಾಗಿ ಈ ಸೀಸನ್ನ ಕೆಲ ಪಂದ್ಯಗಳಿಂದ ಧೋನಿ ಹೊರಗುಳಿಯುವ ತೀರ್ಮಾನ ಮಾಡೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ಬಾಣ; ಬರದ ಅಸ್ತ್ರ ಪ್ರಯೋಗಿಸಿ ಕೌಂಟರ್ ಕೊಟ್ಟ ಸಿದ್ದರಾಮಯ್ಯ..!
ಒಟ್ಟಿನಲ್ಲಿ, ಧೋನಿ ಇಂಜುರಿ ಸಮಸ್ಯೆ ಎದುರಿಸ್ತಿರೋದು ಸದ್ಯಕ್ಕೆ ಓಪನ್ ಸೀಕ್ರೆಟ್.! ಆದ್ರೆ, ಧೋನಿಯ ಮುಂದಿನ ನಡೆ ಏನು ಅನ್ನೋದು ಸಸ್ಪೆನ್ಸ್.. ರೆಸ್ಟ್ ತೆಗೆದುಕೊಂಡು ವಾಪಾಸ್ಸಾಗ್ತಾರಾ.? ಅಥವಾ ನೋವಿನ ನಡುವೆಯೂ ಆಡ್ತಾರಾ.? ಅಥವಾ ಸೀಸನ್ ಮಧ್ಯೆಯೇ ಗುಡ್ ಬೈ ಹೇಳಿಬಿಡ್ತಾರಾ.? ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಫ್ಯಾನ್ಸ್ಗೆ ಸಲಾಂ ಹೊಡೆದ ಎಲ್ಎಸ್ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಮೊದಲ 2 ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ..!
3ನೇ ಪಂದ್ಯದಲ್ಲಿ ಧೋನಿ ದರ್ಶನ..! ಫ್ಯಾನ್ಸ್ ಖುಷ್.!
ಎಲ್ಲಾ ಅಭಿಮಾನಿಗಳಿಗಾಗಿ.. ನೋವಲ್ಲೂ ನಕ್ಕ ಮಾಹಿ..!
ಐಪಿಎಲ್ ಅಖಾಡದಲ್ಲಿ ಬ್ಯಾಟ್ ಬೀಸಿದ ಮೊದಲ ಪಂದ್ಯದಲ್ಲೇ ಧೋನಿ, ಫ್ಯಾನ್ಸ್ಗೆ ಫುಲ್ ಟ್ರೀಟ್ ಕೊಟ್ಟಿದ್ದಾರೆ. ವೈಜಾಕ್ನಲ್ಲಿ ಧೋನಿ ಘರ್ಜಿಸಿದ್ದನ್ನ ನೋಡಿ ಕ್ರಿಕೆಟ್ ಲೋಕ ಸಂಭ್ರಮಿಸಿದೆ. ಹಳೆ ಖದರ್ನಲ್ಲಿ ಮಾಹಿ ಘರ್ಜಿಸಿದ್ದನ್ನ ನೋಡಿ ಫ್ಯಾನ್ಸ್ ಫುಲ್ ಖುಷ್ ಆದ ಬೆನ್ನಲ್ಲೇ ಬೇಸರದ ಸುದ್ದಿ ಹೊರಬಿದ್ದಿದೆ. ಏನಪ್ಪಾ ಆ ಬ್ಯಾಡ್ನ್ಯೂಸ್ ಅಂತೀರಾ?
ಕಳೆದ ಸೀಸನ್ನಂತೆ ಈ ಬಾರಿಯೂ ಐಪಿಎಲ್ ಅಖಾಡದಲ್ಲಿ ಧೋನಿ ಜಾತ್ರೆ ನಡೀತಾಯಿದೆ. ಮಹೇಂದ್ರ ಬಾಹುಬಲಿಯ ಆಟವನ್ನ ಕಣ್ತುಂಬಿಕೊಳ್ಳಲು ಜನ ಸಾಗರವೇ ಮೈದಾನಕ್ಕೆ ಹರಿದು ಬರ್ತಿದೆ. ಈ ಸೀಸನ್ನಲ್ಲಿ ಧೋನಿಯ ಆಟವನ್ನ ನೋಡಬೇಕು ಅಂತಾ ಮೈದಾನಕ್ಕೆ ಎಂಟ್ರಿ ಕೊಟ್ಟ ಅಭಿಮಾನಿಗಳಿಗೆ ಮೊದಲ 2 ಪಂದ್ಯದಲ್ಲಿ ಆಗಿದ್ದು ತೀವ್ರ ನಿರಾಸೆ. ಕೀಪಿಂಗ್ ಮಾಡಿ ಗಮನ ಸೆಳೆದ ಮಾಹಿ, ಬ್ಯಾಟಿಂಗ್ಗೆ ಬರಲೇ ಇಲ್ಲ. ಇದ್ರಿಂದ ಚೆನ್ನೈ ಅಭಿಮಾನಿಗಳಿಗೆ ಆದ ಬೇಸರ ಅಷ್ಟಿಷ್ಟಲ್ಲ..
ಮೊದಲ 2 ಪಂದ್ಯದಲ್ಲಿ ಕಾದ ಅಭಿಮಾನಿಗಳಿಗೆ ನಿರಾಸೆ..!
ಕೊನೆಗೂ 3ನೇ ಪಂದ್ಯದಲ್ಲಿ ಧೋನಿ ಕಣಕ್ಕಿಳಿದೇ ಬಿಟ್ರು.. ಪ್ಯಾಡ್ ಕಟ್ಟಿ ಧೋನಿ ಎಂಟ್ರಿ ಕೊಟ್ಟಾಗ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಸಲಿಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡಿತು. ಆದ್ರೂ ಚೆನ್ನೈ ಫ್ಯಾನ್ಸ್ ಮುಖದಲ್ಲಿ ಮಾತ್ರ ಮಂದಹಾಸವಿತ್ತು. ಧೋನಿ ಆಡಿದ್ದು ಅಂತಾ ಎಂಟರ್ಟೈನಿಂಗ್ ಇನ್ನಿಂಗ್ಸ್.! ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಮಾಹಿ, ಬಿರುಸಿನ ಆಟವಾಡಿದ್ರು. 4 ಬೌಂಡರಿ, 3 ಸಿಕ್ಸರ್ ಚಚ್ಚಿ ಬಿಸಾಕಿದ್ರು.
ಫುಲ್ ಖುಷ್ ಆದ ಫ್ಯಾನ್ಸ್ಗೆ ಬ್ಯಾಡ್ನ್ಯೂಸ್.!
ಹೌದು.. ಧೋನಿ ಇನ್ನಿಂಗ್ಸ್ ನೋಡಿ ಖುಷ್ ಆದ ಫ್ಯಾನ್ಸ್ಗೆ ಇದೀಗ ಬ್ಯಾಡ್ ನ್ಯೂಸ್ ಕೇಳಿ ಬಂದಿದೆ. ಈ ಸೀಸನ್ನ ಅರ್ಧಕ್ಕೆ ಧೋನಿ ಐಪಿಎಲ್ಗೆ ಗುಡ್ ಬೈ ಹೇಳ್ತಾರಾ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಇದಕ್ಕೆಲ್ಲಾ ಕಾರಣ ಧೋನಿ ಇಂಜುರಿ…
ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್
ಮತ್ತೆ ಉಲ್ಬಣವಾಯ್ತಾ ಧೋನಿಯ ಇಂಜುರಿ?
ಕಳೆದ ಸೀಸನ್ನಲ್ಲೂ ಇಂಜುರಿ ನೋವಿನ ನಡುವೆ ಧೋನಿ ಅಖಾಡಕ್ಕಿಳಿದ್ರು. ಟೂರ್ನಿ ಮುಗಿದ ಬಳಿಕ KNEE ಸರ್ಜರಿ ಮಾಡಿಸಿಕೊಂಡು ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ರು. ಹೀಗಾಗಿ ಈ ಸೀಸನ್ಗೂ ಮುನ್ನ ಹೆಚ್ಚು ಅಭ್ಯಾಸ ನಡೆಸಲಿಲ್ಲ. ಸೀಸನ್ ಆರಂಭವಾದ ಬಳಿಕ ನಾರ್ಮಲ್ ಆಗೇ ಧೋನಿ ಕಾಣಿಸಿಕೊಂಡಿದ್ರು. ಚಾಣಾಕ್ಷ ವಿಕೆಟ್ ಕೀಪಿಂಗ್ನಿಂದ ಮಿಂಚಿದ್ರು. ಆದ್ರೆ, ಯಾವಾಗಲೂ ಬಿಟ್ವೀನ್ ದ ವಿಕೆಟ್ಸ್ ಚಿರತೆಯಂತೆ ಓಡ್ತಿದ್ದ ಧೋನಿ, ಡೆಲ್ಲಿ ಎದುರು ಬ್ಯಾಟಿಂಗ್ಗಿಳಿದಾಗ ಹೆಚ್ಚು ರನ್ ಓಡಲೇ ಇಲ್ಲ. ಯಾಕಂದ್ರೆ, ಅದಾಗಲೇ ಇಂಜುರಿ ಧೋನಿಯನ್ನ ಕಾಡಲಾರಂಭಿಸಿತ್ತು.
ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ದಾಖಲೆ; ಅಚ್ಚರಿಯ ಬೌಲಿಂಗ್ ಸ್ಪೀಡ್..! ವಿಡಿಯೋ
ಡೆಲ್ಲಿ ಕ್ಯಾಪಿಟಲ್ಸ್ ಎದುರು ಅಬ್ಬರದ ಬ್ಯಾಟಿಂಗ್ ನಡೆಸಿದ ಧೋನಿ, ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಾಗ ಕಾಲಿಗೆ ಐಸ್ಪ್ಯಾಕ್ ಕಟ್ಟಿಕೊಂಡಿದ್ರು. ಕುಂಟುತ್ತಲೇ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ರು. ಅಪಾರ ನೋವಿನಿಂದ ಬಳಲುತ್ತಿದ್ದಾರೆ ಅನ್ನೋದನ್ನ ಅವರ ಮುಖವೇ ಸಾರಿ ಸಾರಿ ಹೇಳ್ತಿತ್ತು. ಪೆವಿಲಿಯನ್ಗೆ ವಾಪಾಸ್ಸಾಗುವಾಗ ಹೆಚ್ಚು ಕುಂಟಿದ ಧೋನಿ ಭಾರವಾದ ಹೆಜ್ಜೆಗಳನ್ನಿಟ್ಟರು.
ಕೆಲ ಪಂದ್ಯಗಳಿಂದ ದೂರ ಉಳೀತಾರಾ ಮಾಹಿ.?
ಪಂದ್ಯ ಮುಗಿದ 2 ದಿನಗಳ ಬಳಿಕ ಹೈದ್ರಾಬಾದ್ಗೆ ಬಂದಿಳಿದಾಗಲೂ ಧೋನಿ ಕುಂಟುತ್ತಲೇ ಸಾಗಿದ್ರು. ಇದನ್ನ ನೋಡಿದ ಬಳಿಕ, ಮಾಹಿ ಇಂಜುರಿ ಗಂಭೀರ ಸ್ವರೂಪದಲ್ಲಿದೆ ಅನ್ನೋದು ಕನ್ಫರ್ಮ್ ಆಗಿದೆ. ಹೀಗಾಗಿ ಈ ಸೀಸನ್ನ ಕೆಲ ಪಂದ್ಯಗಳಿಂದ ಧೋನಿ ಹೊರಗುಳಿಯುವ ತೀರ್ಮಾನ ಮಾಡೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ಬಾಣ; ಬರದ ಅಸ್ತ್ರ ಪ್ರಯೋಗಿಸಿ ಕೌಂಟರ್ ಕೊಟ್ಟ ಸಿದ್ದರಾಮಯ್ಯ..!
ಒಟ್ಟಿನಲ್ಲಿ, ಧೋನಿ ಇಂಜುರಿ ಸಮಸ್ಯೆ ಎದುರಿಸ್ತಿರೋದು ಸದ್ಯಕ್ಕೆ ಓಪನ್ ಸೀಕ್ರೆಟ್.! ಆದ್ರೆ, ಧೋನಿಯ ಮುಂದಿನ ನಡೆ ಏನು ಅನ್ನೋದು ಸಸ್ಪೆನ್ಸ್.. ರೆಸ್ಟ್ ತೆಗೆದುಕೊಂಡು ವಾಪಾಸ್ಸಾಗ್ತಾರಾ.? ಅಥವಾ ನೋವಿನ ನಡುವೆಯೂ ಆಡ್ತಾರಾ.? ಅಥವಾ ಸೀಸನ್ ಮಧ್ಯೆಯೇ ಗುಡ್ ಬೈ ಹೇಳಿಬಿಡ್ತಾರಾ.? ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಫ್ಯಾನ್ಸ್ಗೆ ಸಲಾಂ ಹೊಡೆದ ಎಲ್ಎಸ್ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್