ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಪರಿಚಯ
ಪರಿಚಯ ಪ್ರೀತಿಗೆ ತಿರುಗಿ ಆಗಾಗ ಭೇಟಿ ಆಗುತ್ತಿದ್ದರು
ಜುಲೈ 4 ರಂದು ಮತ್ತೆ ಲಾಡ್ಜ್ಗೆ ಬಂದಿದ್ದ ಲವ್ ಬರ್ಡ್ಸ್
ಚಿತ್ರದುರ್ಗ: ಪ್ರೇಯಸಿಯೊಂದಿಗೆ ಲಾಡ್ಜ್ಗೆ ಹೋಗಿದ್ದ ವಿವಾಹಿತ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್ನಲ್ಲಿ ನಡೆದಿದೆ.
ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಇವರು ವಿವಾಹಿತ ಮಹಿಳೆಯೊಬ್ಬರ ಜೊತೆ ಲಾಡ್ಜ್ಗೆ ಬಂದಿದ್ದ. ಮೃತ ಗೋಪಾಲ್ಗೆ ಕಳೆದ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.
ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್ ಆಗಿ ಬರೋದು ಐಪಿಎಲ್ನ ಈ ಸ್ಟಾರ್..!
ಕಳೆದ 6 ತಿಂಗಳಿನಿಂದ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಂತೆಯೇ ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಲಾಡ್ಜ್ಗೆ ಬಂದಿದ್ದರು. ಅದೇ ದಿನ ಸಂಜೆ ಲಾಡ್ಜ್ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರೇಯಸಿ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದ. ಇದೀಗ ಗೋಪಾಲನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.
ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಪರಿಚಯ
ಪರಿಚಯ ಪ್ರೀತಿಗೆ ತಿರುಗಿ ಆಗಾಗ ಭೇಟಿ ಆಗುತ್ತಿದ್ದರು
ಜುಲೈ 4 ರಂದು ಮತ್ತೆ ಲಾಡ್ಜ್ಗೆ ಬಂದಿದ್ದ ಲವ್ ಬರ್ಡ್ಸ್
ಚಿತ್ರದುರ್ಗ: ಪ್ರೇಯಸಿಯೊಂದಿಗೆ ಲಾಡ್ಜ್ಗೆ ಹೋಗಿದ್ದ ವಿವಾಹಿತ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್ನಲ್ಲಿ ನಡೆದಿದೆ.
ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಇವರು ವಿವಾಹಿತ ಮಹಿಳೆಯೊಬ್ಬರ ಜೊತೆ ಲಾಡ್ಜ್ಗೆ ಬಂದಿದ್ದ. ಮೃತ ಗೋಪಾಲ್ಗೆ ಕಳೆದ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.
ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್ ಆಗಿ ಬರೋದು ಐಪಿಎಲ್ನ ಈ ಸ್ಟಾರ್..!
ಕಳೆದ 6 ತಿಂಗಳಿನಿಂದ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಂತೆಯೇ ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಲಾಡ್ಜ್ಗೆ ಬಂದಿದ್ದರು. ಅದೇ ದಿನ ಸಂಜೆ ಲಾಡ್ಜ್ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರೇಯಸಿ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದ. ಇದೀಗ ಗೋಪಾಲನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.
ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ