ಗ್ರಹಣಕ್ಕೆ ನಿಲುಕದ ಪುಣ್ಯಸ್ಥಳ ಇದು.. ಗ್ರಹಣ ಸಮಯದಲ್ಲೂ ಇಲ್ಲಿ ಸಿಗಲಿದೆ ದರ್ಶನ ಭಾಗ್ಯ!

ಗ್ರಹಣಗಳ ಸಮಯದಲ್ಲಿ ದೇವಾಲಯಗಳನ್ನ ಮುಚ್ಚುವುದು ಸಾಮಾನ್ಯ. ಆದರೆ ತಿರುಪತಿ ಜಿಲ್ಲೆಯ ಪ್ರಸಿದ್ಧ ಶ್ರೀಕಾಳಹಸ್ತಿ ದೇವಾಲಯದಲ್ಲಿ (Srikalahasti Temple) ಪೂಜೆ ಎಂದಿನಂತೆ ಇರುತ್ತದೆ. ಗ್ರಹಣಗಳನ್ನೂ ಮೀರಿದ ಶಕ್ತಿ ಸ್ಥಳ ಇದಾಗಿದೆ. ಈ ದೇಗುಲದ ವಿಶೇಷತೆ ಏನು ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
srikalahasti temple
Advertisment

ಗ್ರಹಣಗಳ ಸಮಯದಲ್ಲಿ ದೇವಾಲಯಗಳನ್ನ ಮುಚ್ಚುವುದು ಸಾಮಾನ್ಯ. ಆದರೆ ತಿರುಪತಿ ಜಿಲ್ಲೆಯ ಪ್ರಸಿದ್ಧ ಶ್ರೀಕಾಳಹಸ್ತಿ ದೇವಾಲಯದಲ್ಲಿ  (Srikalahasti Temple) ಪೂಜೆ ಎಂದಿನಂತೆ ಇರುತ್ತದೆ. ಗ್ರಹಣಗಳನ್ನೂ ಮೀರಿದ ಶಕ್ತಿ ಸ್ಥಳ ಇದಾಗಿದೆ. ಈ ದೇಗುಲದ ವಿಶೇಷತೆ ಏನು ಅನ್ನೋ ವಿವರ ಇಲ್ಲಿದೆ. 

ಈ ದೇವಾಲಯವು ಗ್ರಹಣದ ಶಕ್ತಿಯನ್ನೂ ಮೀರಿದೆ. ದುಷ್ಟಶಕ್ತಿಗಳನ್ನು ಗುಣಪಡಿಸಲು ಭಕ್ತರಿಗೆ ಇದು ಜನಪ್ರಿಯ ಸ್ಥಳ. ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಅಭಿಷೇಕ ಮಾಡುವ ದೇವಾಲಯ ಇದಾಗಿದೆ. ರಾಹು, ಕೇತು ಮತ್ತು ಸರ್ಪ ದುಷ್ಟಶಕ್ತಿಗಳನ್ನು ಗುಣಪಡಿಸುವ ಸ್ಥಳವಾಗಿ ಇದು ವಿಜೃಂಭಿಸುತ್ತಿದೆ. ಗ್ರಹಣ ಕಾಲದಲ್ಲಿ ಭಕ್ತರಿಗೆ ಭಗವಂತನ ದರ್ಶನ ಲಭ್ಯವಾಗುವುದು ಇಲ್ಲಿಯ ವಿಶೇಷ..

ಇದನ್ನೂ ಓದಿ:ಮಂತ್ರಮುಗ್ಧಗೊಳಿಸೋ ಅಪರೂಪದ ‘ರಕ್ತ ಚಂದ್ರ’ ಗ್ರಹಣ ಇವತ್ತು..!

srikalahasti temple (1)

ಶ್ರೀಕಾಳಹಸ್ತಿ ಕ್ಷೇತ್ರ.. ತಿರುಪತಿ ಜಿಲ್ಲೆಯಲ್ಲಿರುವ ಈ ದೇವಾಲಯವು ವಿಶ್ವಪ್ರಸಿದ್ಧ ದೇಗುಲ. ಗ್ರಹಣಗಳ ಸಮಯದಲ್ಲಿ ಎಲ್ಲಾ ದೇವಾಲಯಗಳು ಮುಚ್ಚುವುದು ಸಾಮಾನ್ಯ. ಆದರೆ ಗ್ರಹಣವನ್ನು ಮೀರಿದ ಈ ದೇವಾಲಯವು 9 ಗ್ರಹಗಳು ಮತ್ತು 27 ನಕ್ಷತ್ರಗಳಿಂದ ಅಲಂಕರಿಸಲ್ಪಟ್ಟ ಶ್ರೀಕಾಳಹಸ್ತಿ ಭಗವಂತನ ಸ್ವಯಂ ಪ್ರಕಾಶಕ ಮಹಾಲಿಂಗವನ್ನು ಹೊಂದಿರೋ ವಿಶೇಷ ಸ್ಥಳವಾಗಿದೆ. 

ಇದನ್ನೂ ಓದಿ:ರಕ್ತ ಚಂದ್ರವೆಂದು ಹೆದರಿಸೋದು ಬೇಡ, ಗ್ರಹಣ ನೋಡಿ ಎಂಜಾಯ್ ಮಾಡಿ -‌ಖಗೋಳ ಶಾಸ್ತ್ರಜ್ಞ

Lunar eclipse

ಅಂದ್ಹಾಗೆ ಶ್ರೀಕಾಳಹಸ್ತಿ ಕ್ಷೇತ್ರವು ಸರ್ಪ ದೋಷ ನಿವಾರಣೆಗೆ ಪ್ರಸಿದ್ಧಿಯಾಗಿದೆ. ರಾಹು-ಕೇತು ಮತ್ತು ಸರ್ಪ ದೋಷ ನಿವಾರಣೆಯ ಕ್ಷೇತ್ರ ಇದು. ಹೀಗಾಗಿ ಭಕ್ತರನ್ನು ಹೆಚ್ಚು ಆಕರ್ಷಿಸುವ ಕೇಂದ್ರವಾಗಿದೆ. ಸ್ವಯಂ ಪ್ರಕಾಶಮಾನವಾಗಿರುವ ವಾಯುಲಿಂಗೇಶ್ವರ ದೇವಾಲಯವು ಗ್ರಹಣ ಸಮಯದಲ್ಲಿ ತೆರೆದಿರೋದು ಇನ್ನೊಂದು ವಿಶೇಷ. ಎಲ್ಲಾ ದೇವಾಲಯಗಳಿಗಿಂತ ಭಿನ್ನವಾಗಿ ಇದು ಗ್ರಹಣ ದಿನ ತೆರೆದಿರುತ್ತದೆ. ಭಕ್ತರಿಗೆ ದರುಶನ ಭಾಗ್ಯ ಸಿಗಲಿದೆ.  

ಇದನ್ನೂ ಓದಿ:ಭಾರತದಲ್ಲಿ ಚಂದ್ರ ಗ್ರಹಣ ಕಾಣೋದು ಯಾವಾಗ? ಗ್ರಹಣ ಸಂದರ್ಭದಲ್ಲಿ ನೀವು ಏನು ಮಾಡಬೇಕು..?

Lunar eclipse (1)

ಇಲ್ಲಿ ರಾಹು ಮತ್ತು ಕೇತುವಿನ ಆಟಗಳು ನಡೆಯಲ್ಲ ಎಂದು ದೇವಾಲಯದ ಇತಿಹಾಸ ಹೇಳುತ್ತದೆ. ಶಿಲ್ಪ ಕಲೆಗಳಿಂದ ಐತಿಹಾಸಿಕ ದೇವಾಲಯವಾಗಿಯೂ ಪ್ರಸಿದ್ಧವಾಗಿರುವ ಶ್ರೀ ಜ್ಞಾನ ಪ್ರಸುನಾಂಬಿಕಾ ಕಾಳಹಸ್ತಿ ದೇವಾಲಯದಲ್ಲಿ ಅನಾಧಿಕಾಲದಿಂದಲೂ ರಾಹು ಮತ್ತು ಕೇತು, ಸರ್ಪದೋಷ ಪರಿಹಾರದ ಪೂಜೆಗಳು ನಡೆದುಕೊಂಡು ಬಂದಿವೆ. ಮುಜರಾಯಿ ಇಲಾಖೆಯ ಅಡಿಯಲ್ಲಿರುವ ಆಂಧ್ರದ 11 ಪ್ರಸಿದ್ಧ ದೇವಾಲಯಗಳಲ್ಲಿ ಇದು ಮೊದಲ ಸಾಲಿನಲ್ಲಿದೆ. 

ದೇವಾಲಯದ ವಿಶೇಷ ಪೂಜೆಗೆ ಇಲ್ಲಿ 500, 750, 1500, 2500 ಮತ್ತು 5 ಸಾವಿರ ರೂಗಳ ಟಿಕೆಟ್‌ಗಳು ಇವೆ. ಪ್ರಸ್ತುತ ವಾರ್ಷಿಕವಾಗಿ 200 ಕೋಟಿ ರೂಪಾಯಿಗಳ ಆದಾಯ ಗಳಿಸುತ್ತಿದೆ. ಇದರಲ್ಲಿ ರಾಹು ಮತ್ತು ಕೇತು ಪೂಜೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪೂಜಾ ಮಂಟಪವು ಮಹಾಲಿಂಗದ ಮುಂದೆ ಒಂಬತ್ತು ಗ್ರಹಗಳು ಮತ್ತು 27 ನಕ್ಷತ್ರಗಳನ್ನು ಹೊಂದಿದೆ. 

ಇದನ್ನೂ ಓದಿ:ಖಗ್ರಾಸ ಚಂದ್ರಗ್ರಹಣದ ವೇಳೆ ಏನೇನು ಮಾಡಬೇಕು? ಏನು ಮಾಡಬಾರದು? ಫುಲ್ ಡೀಟೈಲ್ಸ್ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Red Moon Lunar eclipse
Advertisment