/newsfirstlive-kannada/media/post_attachments/wp-content/uploads/2023/07/PARWESH.jpg)
ದುರಂಹಕಾರಿ ವ್ಯಕ್ತಿಯೊಬ್ಬ ಕಾರ್ಮಿಕನ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಲಕ್ಷಣ ವಿಡಿಯೋ ಒಂದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ರಾಜಕೀಯ ಸ್ವರೂಪ ಕೂಡ ಪಡೆದುಕೊಂಡಿದೆ.
ಈ ಕೃತ್ಯವು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಪಲೆ ಕೊಲ್ ಎಂಬ ಆದಿವಾಸಿ ವ್ಯಕ್ತಿ ಮೇಲೆ ಪರ್ವೇಶ್ ಶುಕ್ಲಾ ಎಂಬ ಕಿಡಿಗೇಡಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶ ನೀಡಿದ್ದಾರೆ.
[caption id="attachment_6326" align="alignnone" width="800"] ಆರೋಪಿ[/caption]
ವೈರಲ್ ಆಗಿರುವ ವಿಡಿಯೋ, ಸುಮಾರು 6 ದಿನಗಳ ಹಿಂದಿನದು ಎಂದು ತಿಳಿದುಬಂದಿದೆ. ವೈರಲ್ ಆಗಿರುವ ವಿಡಿಯೋವನ್ನು ಮಧ್ಯಪ್ರದೇಶದ ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿವೆ. ಹಾಲಿ ಎಂಎಲ್ಎ ಕೇದರ್ ಶುಕ್ಲಾ ಜೊತೆಗೆ ಆರೋಪಿಯ ಫೋಟೋವನ್ನು ಮರ್ಜ್ ಮಾಡಿ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
https://twitter.com/sudarshanunique/status/1676210840431738881
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ