/newsfirstlive-kannada/media/media_files/2025/08/31/rahul-dravid-2025-08-31-08-31-59.jpg)
ರಾಜಸ್ಥಾನ್ ರಾಯಲ್ಸ್.. ಸೀಸನ್-18ರ ಮಿಡ್ ಸೀಸನ್ನಿಂದ ಹಿಡಿದು ಇವತ್ತಿನ ತನಕ ಟ್ರೇಡಿಂಗ್, ಟ್ರೆಂಡ್ನಲ್ಲಿರುವ ಹೆಸರು. ಇಷ್ಟು ದಿನ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಬಿಡ್ತಾರಾ? ಎಂಬ ಪ್ರಶ್ನೆಯಿಂದಲೇ ಸುದ್ದಿಯಾಗಿತ್ತು. ಆದ್ರೀಗ ದಿ ಜಂಟಲ್ಮನ್ ರಾಹುಲ್ ದ್ರಾವಿಡ್ರಿಂದ ಸದ್ದು ಮಾಡ್ತಿದೆ.
ಸೀಸನ್-19ರ ಐಪಿಎಲ್ ಆರಂಭಕ್ಕೆ ಏಳೆಂಟು ತಿಂಗಳು ಬಾಕಿಯಿದೆ. ಫ್ರಾಂಚೈಸಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ವಿಂಡೋ ಟ್ರೇಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ಕರೆತರವ ಲೆಕ್ಕಾಚಾರದಲ್ಲಿರುವ ಫ್ರಾಂಚೈಸಿಗಳು, ಕೆಲ ಕೋಚ್ಗಳಿಗೂ ಗೇಟ್ಪಾಸ್ ನೀಡಿವೆ. ಇದೆಲ್ಲದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಘಾತ ಎದುರಾಗಿದೆ. ರಾಹುಲ್ ದ್ರಾವಿಡ್, ತೆಗೆದುಕೊಂಡ ಒಂದು ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ವಿರುಷ್ಕಾ ನೆಚ್ಚಿನ ಶ್ವಾನದ ಹೆಸರೇನು? KL ರಾಹುಲ್ ಏನೆಂದು ಕರೀತಾರೆ?
ಹೆಡ್ ಕೋಚ್ ಹುದ್ದೆಗೆ ದ್ರಾವಿಡ್ ಗುಡ್ ಬೈ
ಕಳೆದ ವರ್ಷವಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್ ಹುದ್ದೆಗೇರಿದ್ದ ರಾಹುಲ್ ದ್ರಾವಿಡ್ 10 ವರ್ಷಗಳ ಬಳಿಕ ನೆಚ್ಚಿನ ತಂಡಕ್ಕೆ ರೀ ಎಂಟ್ರಿ ನೀಡಿದ್ದರು. 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ರಾಹುಲ್ ದ್ರಾವಿಡ್, ಈಗ 2026ರ ಐಪಿಎಲ್ಗೂ ಮುನ್ನವೇ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ರಾಜೀನಾಮೆಯ ಸುತ್ತ ಅನುಮಾನದ ಹುತ್ತಗಳೇ ಬೆಳೆದು ನಿಂತಿದೆ.
ದ್ರಾವಿಡ್ಗೆ ಧನ್ಯವಾದ
ರಾಹುಲ್ ದ್ರಾವಿಡ್ ಹಲವು ವರ್ಷಗಳಿಂದ ರಾಯಲ್ಸ್ ತಂಡದ ಪ್ರಯಾಣದ ಕೇಂದ್ರ ಬಿಂದುವಾಗಿದ್ದಾರೆ. ದ್ರಾವಿಡ್ ನಾಯಕತ್ವ ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನ ನಿರ್ಮಿಸಿದೆ. ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಒಂದು ಗುರುತು ಬಿಟ್ಟಿದೆ. ರಾಹುಲ್ ಅವರಿಗೆ ದೊಡ್ಡ ಹುದ್ದೆಯನ್ನ ನೀಡಲು ನಿರ್ಧರಿಸಲಾಗಿತ್ತು. ದ್ರಾವಿಡ್ ಆ ಜವಾಬ್ದಾರಿ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್, ಆಟಗಾರರು, ಲಕ್ಷಾಂತರ ಅಭಿಮಾನಿಗಳು ರಾಹುಲ್ ಫ್ರಾಂಚೈಸಿಗೆ ನೀಡಿದ ಗಮನಾರ್ಹ ಸೇವೆಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತದೆ.
ರಾಜಸ್ಥಾನ್ ರಾಯಲ್ಸ್
ದೊಡ್ಡ ಹುದ್ದೆಯ ಆಫರ್ ತಿರಸ್ಕರಿಸಿದ್ಯಾಕೆ ದ್ರಾವಿಡ್?
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯೇ ಹೇಳಿದಂತೆ ಹೆಡ್ ಕೋಚ್ ದ್ರಾವಿಡ್ಗೆ ಬಿಗ್ ಆಫರ್ ನೀಡಿದೆ. ಹೆಡ್ ಕೋಚ್ ಬದಲಾಗಿ ಕುಮಾರ ಸಂಗಕ್ಕಾರ, ನಿರ್ವಹಿಸುತ್ತಿದ್ದ ಡೈರೆಕ್ಟರ್ ಹುದ್ದೆ ವಹಿಸಲು ಮುಂದಾಗಿತ್ತು. ಈ ಆಫರ್ನ ದ್ರಾವಿಡ್ ನಿರಾಕರಿಸಿದ್ದಾರೆ. ಹೆಡ್ ಕೋಚ್ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಸಹಜವಾಗೇ ಹೊಸ ಪ್ರಶ್ನೆಗಳಿಗೆ ನಾಂದಿಯಾಡಿದೆ. ಹೆಡ್ ಕೋಚ್ ಹುದ್ದೆಯಿಂದ ದ್ರಾವಿಡ್ ದೂರ ಇದ್ರೆ ಆಟಗಾರರ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಬೀಳುತ್ತೆ. ಈ ಕಾರಣಕ್ಕಾಗಿಯೇ ರಾಜಸ್ಥಾನ್ ರಾಯಲ್ಸ್ ದೊಡ್ಡ ಹುದ್ದೆಯ ಆಫರ್ ನೀಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದಕ್ಕೆ ಕಾರಣ ಸೀಸನ್-18ರಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಡೀತಿರುವ ಬೆಳವಣಿಗೆಗಳು.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ 'ಬ್ರಾಂಕೋ ಟೆಸ್ಟ್' ವರದಾನವಾಗುತ್ತಾ..?
ಸೀಸನ್-18ರಿಂದ ಆರ್ಆರ್ ತಂಡದಲ್ಲಿ ಭಿನ್ನಮತ..!
ಸೀಸನ್-18 ಮಿಡ್ ಸೀಸನ್ನಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಸಮಾಧಾನದ ಹೊಗೆಯಾಡ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯವನ್ನ ರಾಜಸ್ಥಾನ್ ಟೈ ಮಾಡಿಕೊಂಡಿತ್ತು. ಈ ವೇಳೆ ಸೂಪರ್ ಓವರ್ನ ಡಿಸ್ಕಷನ್ ವೇಳೆ ನಡೆದ ಕೆಲ ಘಟನೆಗಳು ಎಲ್ಲವೂ ಸರಿ ಇಲ್ಲ ಎಂಬ ಅನುಮಾನಕ್ಕೆ ನಾಂದಿಯಾಡಿತ್ತು. ದ್ರಾವಿಡ್ ಸಪೋರ್ಟ್ ಸ್ಟಾಫ್ ಹಾಗೂ ಆಟಗಾರರ ಜೊತೆ ಗೇಮ್ ಪ್ಲಾನ್ ಮಾಡ್ತಿದ್ರೆ, ಇತ್ತ ಸಂಜು ತನಗೇನು ಸಂಬಂಧ ಇಲ್ಲವೆಂಬಂತೆ ನಡೆದುಕೊಂಡಿದ್ದರು. ಸಹ ಆಟಗಾರ ಟೀಮ್ ಮೀಟಿಂಗ್ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿ ಮೀಟಿಂಗ್ನಿಂದ ದೂರ ಉಳಿದ್ದಿದ್ದರು. ಇದು ಆರ್ಆರ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನೇ ನೀಡಿತ್ತು.
ಸಂಜು ಉಳಿವಿಗಾಗಿ ಯತ್ನಿಸಿತಾ ಆರ್ಆರ್ ಫ್ರಾಂಚೈಸಿ?
ಸೀಸನ್-18 ಅಂತ್ಯದ ಬೆನ್ನಲ್ಲೇ ಸಂಜು, ಆರ್ಆರ್ ತೊರೆಯಲು ಸನ್ನದ್ಧರಾಗಿದ್ದರು. ಸ್ವತಃ ರಿಲೀಸ್ ಮಾಡಲು ಫ್ರಾಂಚೈಸಿಗೆ ಮನವಿ ಮಾಡಿದ್ದರು. ಸಂಜು ರಿಲೀಸ್ಗೆ ಆರ್ಆರ್ ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ಆರ್ಆರ್, ದೊಡ್ಡ ಹುದ್ದೆಯ ಆಫರ್ ದ್ರಾವಿಡ್ಗೆ ನೀಡಿತ್ತು. ಇದೆನ್ನೆಲ್ಲವನ್ನು ಅರಿತಿದ್ದ ದ್ರಾವಿಡ್ ದೊಡ್ಡ ಹುದ್ದೆಯನ್ನೇ ಅಲ್ಲ. ಹೆಡ್ ಕೋಚ್ ಹುದ್ದೆಗೂ ಗುಡ್ ಬೈ ಹೇಳಿದ್ದಾರೆ. ಗೌರವ ಇದ್ದಡೆ ಮಾತ್ರ ದ್ರಾವಿಡ್ ಎಂಬ ಲೆಜೆಂಡ್ ಇರ್ತಾರೆ ಎಂಬ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: ಬಿಸಿಸಿಐನ ಈ ನಡವಳಿಕೆ ಸರಿಯಿಲ್ಲ.. ದಿಗ್ಗಜರಿಗೆ ಕನಿಷ್ಠ ಗೌರವವೂ ಇಲ್ಲದಾಯಿತೇ..?
ಸಂಜು ಎಂಬ ಯುವ ಪ್ರತಿಭೆಗೆ ಅವಕಾಶ ನೀಡಿ ಕ್ರಿಕೆಟ್ ಲೋಕಕ್ಕೆ ಪರಿಚಯಿಸಿದ್ದ ದ್ರಾವಿಡ್ಗೆ, ಇವತ್ತು ಸಂಜು ಸ್ಯಾಮ್ಸನ್ ಹದ್ದಾಗಿ ಕುಕ್ಕಿದೆ. ರಾಹುಲ್ ದ್ರಾವಿಡ್ ರಾಜೀನಾಮೆ ಕಾರಣರಾಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ