/newsfirstlive-kannada/media/media_files/2025/09/11/axer-patel-and-kuldeep-yadav-2025-09-11-10-12-53.jpg)
ಏಷ್ಯಾಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಯುಎಇ ತಂಡವನ್ನ ಬಗ್ಗು ಬಡಿದು ಟ್ರೋಫಿಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಇಷ್ಟೇ ಅಲ್ಲ, ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಗೇಮ್ಪ್ಲಾನ್ ಸಖತ್ ಆಗಿ ವರ್ಕೌಟ್ ಆಗಿದೆ. ಟೀಮ್ಇಂಡಿಯಾ ಗೆಲುವಿನ ರಣ ತಂತ್ರ ಸಕ್ಸಸ್ ಕಂಡಿದ್ದೇಗೆ ಅನ್ನೋ ವಿವರ ಇಲ್ಲಿದೆ.
3 ಜನ ಸ್ಪಿನ್ನರ್ ಬೇಕಿತ್ತಾ? ಏಷ್ಯಾಕಪ್ ಕದನದ ಯುಎಇ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಅನೌನ್ಸ್ ಆದ ಕೂಡಲೇ ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗ್ತು. ಹೆಡ್ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪ್ಲಾನ್ ಪರ್ಫೆಕ್ಟ್ ಆಗಿ ವರ್ಕೌಟ್ ಆಯ್ತು.
ಸ್ಪಿನ್ ‘ಸ್ಟ್ರೋಕ್’.!
ದುಬೈ ಮೈದಾನದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಗಳು ನಿನ್ನೆ ಪರಾಕ್ರಮ ಮೆರೆದ್ರು. ಮೆನ್ ಇನ್ ಬ್ಲೂ ಆರ್ಮಿಯ ಸ್ಪಿನ್ ಮೆಜಿಶಿಯನ್ಸ್ ಚಮಾತ್ಕಾರದ ಮುಂದೆ ಯುಇಎ ಬ್ಯಾಟರ್ಸ್ ಪರದಾಡಿದ್ರು. ಸ್ಪಿನ್ ಟ್ರ್ಯಾಪ್ನಲ್ಲಿ ಬಿದ್ದು ವಿಲ ವಿಲ ಒದ್ದಾಡಿದ್ರು. ಟೀಮ್ ಇಂಡಿಯಾದ ಸ್ಪಿನ್ ಸ್ಟ್ರೋಕ್ಗೆ ತಬ್ಬಿಬ್ಬಾಗಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ರು.
ಇದನ್ನೂ ಓದಿ:ಕೇವಲ 4 ಓವರ್ಗಳಲ್ಲಿ UAE ತಂಡದ ವಿರುದ್ಧ ಟೀಮ್ ಇಂಡಿಯಾಗೆ ಗೆಲುವು
ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ನಿನ್ನೆ ಕೈಚಳಕ ಮಾಡಿದ್ರು. ದುಬೈನಲ್ಲಿ ದರ್ಬಾರ್ ನಡೆಸಿದ ಕುಲ್ದೀಪ್ ಯಾದವ್ 4 ವಿಕೆಟ್ ಬೇಟೆಯಾಡಿದ್ರು. ಹಾಕಿದ ಮೊದಲ ಓವರ್ನಲ್ಲಿ ವಿಕೆಟ್ ಲೆಸ್ ಆಗಿ ನಿರ್ಗಮಿಸಿದ ಕುಲ್ದೀಪ್ ಯಾದವ್, 2ನೇ ಓವರ್ನಲ್ಲಿ ಚಮಾತ್ಕಾರ ಮಾಡಿದ್ರು. ರಾಹುಲ್ ಚೋಪ್ರಾ, ಮೊಹಮ್ಮದ್ ವಾಸಿಮ್, ಹರ್ಷಿತ್ ಕೌಶಿಕ್.. ಮೂವರಿಗೆ ಒಂದೇ ಓವರ್ನಲ್ಲಿ ಪೆವಿಲಿಯನ್ ದಾರಿ ತೋರಿಸಿದ್ರು.
ಸೆಕೆಂಡ್ ಸ್ಪೆಲ್ ಹಾಕಲು ಬಂದ ಮೊದಲ ಎಸೆತದಲ್ಲೇ ಕುಲ್ದೀಪ್ ಯುಎಇ ಬ್ಯಾಟಿಂಗ್ ಕತೆ ಮುಗಿಸಿದ್ರು. ಮ್ಯಾಜಿಕಲ್ ಎಸೆತಕ್ಕೆ ತಬ್ಬಿಬ್ಬಾದ ಹೈದರ್ ಅಲಿ, ಸಂಜು ಸ್ಯಾಮ್ಸನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಇದನ್ನೂ ಓದಿ:ಕುಲ್ದೀಪ್ ಸ್ಪಿನ್ ಮ್ಯಾಜಿಕ್.. ಸೂರ್ಯ ಸೇನೆ ವಿರುದ್ಧ ಕೇವಲ 57 ರನ್ಗೆ UAE ಆಲೌಟ್
ಕುಲ್ದೀಪ್ ಯಾದವ್ ಬೌಲಿಂಗ್
ನಿನ್ನೆ ಪಂದ್ಯದಲ್ಲಿ ಒಟ್ಟಾರೆ 2.1 ಓವರ್ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್, ಕೇವಲ 7 ರನ್ ಬಿಟ್ಟು ಕೊಟ್ರು. 3.20ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟ ಕುಲ್ದೀಪ್ ಯಾದವ್ ಒಟ್ಟು 4 ವಿಕೆಟ್ ಬೇಟೆಯಾಡಿದ್ರು. ಕುಲ್ದೀಪ್ ಯಾದವ್ ಮಾತ್ರವಲ್ಲ.. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಚಮಾತ್ಕಾರ ಮಾಡಿದ್ರು. 2 ಓವರ್ ಬೌಲಿಂಗ್ ಮಾಡಿದ ವರುಣ್ ಚಕ್ರವರ್ತಿ ಜಸ್ಟ್ 4 ರನ್ ಬಿಟ್ಟು ಕೊಟ್ಟು ಒಂದು ವಿಕೆಟ್ ಉರುಳಿಸಿದ್ರು.
ಅಕ್ಷರ್ ಪಟೇಲ್ ಕೂಡ ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿಯಾದ್ರು. ಮೊದಲ ಓವರ್ನಲ್ಲಿ ದುಬಾರಿ ಅನಿಸಿದ್ರೂ 2ನೇ ಓವರ್ನಲ್ಲಿ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ್ರು. ಸ್ಪಿನ್ನರ್ಗಳ ಹೊರತಾಗಿ ಆಲ್ರೌಂಡರ್ ಶಿವಂ ದುಬೆ ಎಲ್ಲರ ಗಮನ ಸೆಳೆದ್ರು. ಹಾಕಿದ 2 ಓವರ್ಗಳಲ್ಲಿ 3 ವಿಕೆಟ್ ಬೇಟೆಯಾಡಿದ್ರು. ವೇಗಿ ಜಸ್ಪ್ರಿತ್ ಬೂಮ್ರಾ ಒಂದು ವಿಕೆಟ್ ಕಬಳಿಸಿದ್ರು.
ಇದನ್ನೂ ಓದಿ:ನೆಟ್ ಬೌಲರ್ಸ್ಗೆ ಬೆಂಡೆತ್ತಿದ ಯಂಗ್ ಬ್ಯಾಟರ್.. 30 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ
ಒಟ್ಟಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಬೌಲರ್ಗಳು ಪರಾಕ್ರಮ ಮೆರೆದಿದ್ದಾರೆ. ಜೊತೆಗೆ ಅರಬ್ಬರ ಪಡೆಯನ್ನ ಬಗ್ಗು ಬಡಿದು ಮುಂದಿನ ಎದುರಾಳಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ