/newsfirstlive-kannada/media/media_files/2025/08/13/ms-dhoni-2025-08-13-15-59-33.jpg)
ಎಂ.ಎಸ್.ಧೋನಿ
ಮಿಸ್ಟರ್ ಕೂಲ್ ಎಮ್.ಎಸ್.ಧೋನಿ ಮುಂದಿನ ಸೀಸನ್ ಐಪಿಎಲ್ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕ್ರಿಕೆಟ್ ಲೋಕದಲ್ಲಿ ಗಿರಕಿ ಹೊಡೀತಿದೆ. ಇದ್ರ ನಡುವೆ ಧೋನಿ 12 ವರ್ಷಗಳ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಮತ್ತೆ ಸೌಂಡ್ ಮಾಡ್ತಿದೆ. ಬರೋಬ್ಬರಿ 100 ಕೋಟಿಯ ಕೇಸ್ ಇದೀಗ ಅಂತಿಮ ಘಟ್ಟ ತಲುಪಿದೆ. ಅಷ್ಟಕ್ಕೂ ಏನಿದು ಪ್ರಕರಣ? 100 ಕೋಟಿಯ ಕಥೆ ಏನು?
100 ಕೋಟಿ ಕೇಸ್ಗೆ ಮರುಜೀವ
12 ವರ್ಷದ ಹಿಂದೆ ಅಂದ್ರೆ 2014ರಲ್ಲಿ ಧೋನಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಮಹತ್ವದ ಆದೇಶ ಪ್ರಕಟಿಸಿದೆ. 2013ರಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತಲ್ವಾ ಆ ಸಂದರ್ಭದಲ್ಲಿ ಕೆಲವರು ಧೋನಿ ಹೆಸರನ್ನ ಎಳೆದು ತಂದಿದ್ರು. ಇದನ್ನ ಸಹಿಸಿಕೊಳ್ಳದ ಧೋನಿ ಹೈಕೋರ್ಟ್ ಮೆಟ್ಟಿಲೇರಿದ್ರು. ಬರೋಬ್ಬರಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ರು. ಸುದೀರ್ಘ 12 ವರ್ಷಗಳ ಬಳಿಕ ಈ ಕೇಸ್ ಇದೀಗ ಮಹತ್ವದ ಘಟ್ಟ ತಲುಪಿದ್ದು ಟ್ರಯಲ್ಸ್ಗೆ ಹೈಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ರೋಹಿತ್ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್ ಪ್ಲೇಟ್..!
/filters:format(webp)/newsfirstlive-kannada/media/media_files/2025/08/08/ms-dhoni-retirement-plan-2025-08-08-18-18-34.jpg)
ಟ್ರಯಲ್ಸ್ನಿಂದ MS ಧೋನಿಗೆ ವಿನಾಯಿತಿ
ಮಾನನಷ್ಟ ಮೊಕದ್ದಮೆಯ ಮುಖಾಮುಖಿ ವಿಚಾರಣೆ ಆರಂಭಿಸಲು ಆದೇಶಿಸಿರುವ ಹೈಕೋರ್ಟ್ ಇದ್ರಿಂದ ಧೋನಿಗೆ ವಿನಾಯಿತಿ ನೀಡಿದೆ. ಧೋನಿಯಿಂದ ಸಾಕ್ಷ್ಯ ದಾಖಲಿಸಲು ಅಡ್ವೋಕೇಟ್ ಕಮಿಷನರ್ರನ್ನ ಹೈಕೋರ್ಟ್ ನೇಮಿಸಿದೆ. ಧೋನಿ ದೈಹಿಕವಾಗಿ ನ್ಯಾಯಾಲಯಕ್ಕೆ ಹಾಜಾರಾದ್ರೆ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಇದನ್ನ ಗಮನದಲ್ಲಿರಿಸಿಕೊಂಡಿರುವ ಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ: ಫಿಲ್ ಸಾಲ್ಟ್ರನ್ನ ಬಿಟ್ಟುಕೊಡುತ್ತಾ RCB? ಕೆಕೆಆರ್ ಜೊತೆ ಆರ್ಸಿಬಿ ಬಿಗ್ ಡೀಲ್..?
ಏನಿದು ಪ್ರಕರಣ? ಧೋನಿ ಎದುರಾಳಿಗಳು ಯಾರು?
2013ರಲ್ಲಿ ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಹಗರಣ ನಡೆದಿತ್ತು. ಈ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಶ್ರೀನಿವಾಸನ್ರ ಅಳಿಯ, ಚೆನ್ನೈ ತಂಡದ ಉನ್ನತ ಅಧಿಕಾರಿಯಾಗಿದ್ದ ಗುರುನಾಥ್ ಮೇಯಪ್ಪನ್ನ ಬಂಧಿಸಲಾಗಿತ್ತು. ಈ ಪ್ರಕರಣವನ್ನ ವರದಿ ಮಾಡುವ ವೇಳೆ ನ್ಯೂಸ್ ನೇಷನ್ ನೆಟ್ವರ್ಕ್, ಪತ್ರಕರ್ತ ಸುಧೀರ್ ಚೌಧರಿ, ಜೀ ಮೀಡಿಯಾ ನೆಟ್ವರ್ಕ್ ಧೋನಿ ಹೆಸರನ್ನ ಎಳೆದುತಂದಿದ್ರು. ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಕೂಡ ಧೋನಿ ಮೇಲೆ ಆರೋಪ ಮಾಡಿದ್ರು. ಇವ್ರ ಮೇಲೆ ಧೋನಿ 100 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ರು.
ತ್ವರಿತಗತಿಯಲ್ಲಿ ವಿಚಾರಣೆಗೆ ಮನವಿ ಮಾಡಿದ್ದ ಧೋನಿ
ಧೋನಿ ಸಲ್ಲಿಸಿದ್ದ ಈ ಪ್ರಕರಣದ ವಿಚಾರಣೆ ಹಲವಾರು ಅರ್ಜಿಗಳು ಮತ್ತು ಕಾರ್ಯವಿಧಾನದ ವಿಳಂಬದಿಂದಾಗಿ ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಹೀಗಾಗಿ ಶೀಘ್ರ ವಿಚಾರಣೆಗೆ ಧೋನಿ ಇತ್ತೀಚೆಗೆ ಮನವಿ ಮಾಡಿದ್ರು. ಅಡ್ವೋಕೇಟ್ ಕಮಿಷನರ್ ನೇಮಕದ ಬಳಿಕ ಅಫಿಡೆವಿಟ್ ಸಲ್ಲಿಸಿರೋ ಧೋನಿ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದಿದ್ದಾರೆ. ವಿಚಾರಣೆ, ಸಾಕ್ಷ ದಾಖಲಾತಿಗೆ ಸಹಕಾರ ನೀಡೋದಾಗಿ ತಿಳಿಸಿದ್ದು, ಅಕ್ಟೋಬರ್ 20ರಿಂದ ಡಿಸೆಂಬರ್ 10ರವರೆಗೆ ಎಕ್ಸಾಮಿನೇಷನ್ ಮತ್ತು ಕ್ರಾಸ್ ಎಕ್ಸಾಮಿನೇಷನ್ಗೆ ಲಭ್ಯವಿರೋದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಧೋನಿ 12 ವರ್ಷಗಳ ಹಿಂದೆ ಧೋನಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಇದೀಗ ಮಹತ್ವದ ಘಟ್ಟ ತಲುಪಿದೆ. ಕೆಲವೇ ದಿನಗಳಲ್ಲಿ ಟ್ರಯಲ್ಸ್ ಆರಂಭವಾಗಲಿದ್ದು, ಶೀಘ್ರದಲ್ಲೇ ತೀರ್ಪು ಬರೋ ನಿರೀಕ್ಷೆಯಿದೆ.
ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ.. ಬೆಂಗಳೂರಿಗೆ ಆಗ್ತಿರುವ ನಷ್ಟಗಳು ಏನೇನು..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ