ಟೀಂ ಇಂಡಿಯಾದಲ್ಲಿ ಗಂಭೀರ್ ಕ್ರಾಂತಿಕಾರಿ ಹೆಜ್ಜೆ.. ಯಾರಿಗೂ ಮಾಡಲಾಗದ್ದನ್ನ ಸಾಧಿಸಿದ ಕೋಚ್..!

ಕ್ಯಾಪ್ಟನ್ಸ್​​ ಟೀಮ್​ ಇಂಡಿಯಾದ ಶಕ್ತಿ ಅನಿಸಿದ್ದ ಕಾಲವೊಂದಿತ್ತು. ಆದ್ರೀಗ ಕ್ಯಾಪ್ಟನ್ಸ್​​ ಪವರ್​ ಕಟ್​​ ಆಗಿದೆ. ಈಗ ಹೆಡ್​​ ಕೋಚ್​​ ಟೀಮ್​ ಇಂಡಿಯಾದ ರಿಯಲ್​ ಬಾಸ್​​. ಗೌತಮ್​ ಗಂಭೀರ್​​ ಹೇಳಿದ್ದೇ ವೇದವಾಕ್ಯ. ಯಾರಿಗೂ ಬದಲಾವಣೆ ತರೋಕೆ ಆಗಲಿಲ್ಲ. ಗಂಭೀರ್​ ಎಲ್ಲವನ್ನ ಬದಲಾಯಿಸಿದ್ದಾರೆ.

author-image
Ganesh
Gautam gambhir

ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯಕೋಚ್

Advertisment

ಕ್ಯಾಪ್ಟನ್ಸ್​​ ಟೀಮ್​ ಇಂಡಿಯಾದ ಶಕ್ತಿ ಅನಿಸಿದ್ದ ಕಾಲವೊಂದಿತ್ತು. ಆದ್ರೀಗ ಕ್ಯಾಪ್ಟನ್ಸ್​​ ಪವರ್​ ಕಟ್​​ ಆಗಿದೆ. ಈಗ ಹೆಡ್​​ ಕೋಚ್​​ ಟೀಮ್​ ಇಂಡಿಯಾದ ರಿಯಲ್​ ಬಾಸ್​​. ಗೌತಮ್​ ಗಂಭೀರ್​​ ಹೇಳಿದ್ದೇ ವೇದವಾಕ್ಯ. ಈ ಹಿಂದೆ ರವಿ ಶಾಸ್ತ್ರಿ, ರಾಹುಲ್​ ದ್ರಾವಿಡ್​ರಂತ ದಿಗ್ಗಜರೇ ಟೀಮ್​ ಇಂಡಿಯಾದ ಕೋಚ್​​ಗಳಾಗಿ ಬಂದು ಹೋದರು. ಯಾರಿಗೂ ಬದಲಾವಣೆ ತರೋಕೆ ಆಗಲಿಲ್ಲ. ಗಂಭೀರ್​ ಎಲ್ಲವನ್ನ ಬದಲಾಯಿಸಿದ್ದಾರೆ. 

ಗ್ಯಾರಿ ಕ್ರಿಸ್ಟನ್​​, ರವಿ ಶಾಸ್ತ್ರಿ, ರಾಹುಲ್​ ದ್ರಾವಿಡ್​. ಕಳೆದ 2 ದಶಕಗಳಲ್ಲಿ ಟೀಮ್​ ಇಂಡಿಯಾ ಆಟಗಾರರಿಗೆ ದಿಗ್ಗಜರೇ ಪಾಠ ಮಾಡಿದ್ದಾರೆ. ಇವ್ರ ಅಧಿಕಾರ ಅವಧಿಯಲ್ಲಿ ಹಲವು ಆಟಗಾರರು ಬಂದು, ಹೋಗಿದ್ದಾರೆ. ಭಾರತೀಯ ಕ್ರಿಕೆಟ್​ನಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಒಂದು ವಿಚಾರದಲ್ಲಿ ಮಾತ್ರ ಇವ್ರೆಲ್ಲ ಪ್ರಯತ್ನ ಮಾಡಿ ಮಾಡಿ ಫೇಲ್​ ಆದರು. ಎಷ್ಟೇ ಪ್ರಯತ್ನ ಪಟ್ರೂ ಆ ಒಂದು ಬದಲಾವಣೆ ತರೋಕೆ ಆಗಲಿಲ್ಲ. ಹೆಡ್​ಕೋಚ್ ಪಟ್ಟವೇರಿದ ಒಂದು ವರ್ಷದ ಅವಧಿಯಲ್ಲೇ 2 ದಶಕಗಳಿಂದ ಆಗದ ಕೆಲಸವನ್ನ ಗೌತಮ್​ ಗಂಭೀರ್​ ಮಾಡಿದ್ದಾರೆ. 

ಗೌತಮ್​ ಗಂಭೀರ್​​ ಟೀಮ್​ ಇಂಡಿಯಾದ ‘ರಿಯಲ್​ ಬಾಸ್​’

ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಗೌತಮ್​ ಗಂಭೀರ್​​ ಟೀಮ್​ ಇಂಡಿಯಾದ ರಿಯಲ್​ ಬಾಸ್​. ಈ ಹಿಂದೆ ಮಹೇಂದ್ರ ಸಿಂಗ್​ ಧೋನಿ, ಆ ಬಳಿಕ ವಿರಾಟ್​​ ಕೊಹ್ಲಿ, ಆ ನಂತರದಲ್ಲಿ ರೋಹಿತ್​ ಶರ್ಮಾ.. ನಾಯಕರೇ ಟೀಮ್​ ಇಂಡಿಯಾದ ಡಿಸಿಷನ್​ ಮೇಕರ್ಸ್​ ಆಗಿದ್ದರು. ಒಂದರ್ಥದಲ್ಲಿ ಕ್ಯಾಪ್ಟನ್​ ನಿಜವಾದ ರೂಲರ್​ ಅನಿಸಿದ್ರು. ಟೀಮ್​ ಸೆಲೆಕ್ಷನ್​, ಪ್ಲೇಯಿಂಗ್​ ಇಲೆವೆನ್​ ಸೆಲೆಕ್ಷನ್​ನಿಂದ ಹಿಡಿದು ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನಾಯಕರೇ ಡಿಸಿಷನ್​ ಮೇಕರ್ಸ್​ ಆಗಿದ್ರು. ಟೀಮ್​ ಶೀಟ್​ ಮೇಲೆ ಮಾತ್ರ ಕೋಚ್​ ಸೈನ್​ ಇರುತ್ತಿತ್ತು. ಆದ್ರೀಗ ಎಲ್ಲಾ ಬದಲಾಗಿದೆ. 

ಗಂಭೀರ್​​ಗೆ ಪರಮಾಧಿಕಾರ.. ಕ್ಯಾಪ್ಟನ್ಸ್​​ ‘ಪವರ್​ಕಟ್​’.!

ಜುಲೈ 9, 2024.. ಒಂದು ವರ್ಷದ ಹಿಂದೆ ಟೀಮ್​ ಇಂಡಿಯಾ ಹೆಡ್​ಕೋಚ್​ ಆಗಿ ಗಂಭೀರ್​​ ಎಂಟ್ರಿಕೊಟ್ರು. ಅಂದಿನ ಸೆಕ್ರೆಟರಿ ಜಯ್​​ ಶಾ ಹೆಡ್​ಕೋಚ್​ ಹುದ್ದೆಯ ಆಫರ್​ ಮಾಡಿದಾಗಲೇ ಷರತ್ತು ವಿಧಿಸಿದ್ದ ಗಂಭೀರ್​​ ಫ್ರಿ ಹ್ಯಾಂಡ್​​ ನೀಡುವಂತೆ ಹೇಳಿದ್ದರು. ಅದರಂತೆ ಬಿಸಿಸಿಐ ಬಾಸ್​​ಗಳು ಪರಮಾಧಿಕಾರ ನೀಡಿದ್ದರು. ಆ ಬಳಿಕ ಟೀಮ್​ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಅನ್ನೋದೆ ಗಂಭೀರ್​​ ಪವರ್​​ಹೌಸ್​​ ಅನ್ನೋದನ್ನ ನಿರೂಪಿಸಿದೆ. 

ಇದನ್ನೂ ಓದಿ: ಪಾಟೀದಾರ್ ಮಾಡಿದ ಒಂದೇ ಒಂದು ಯಡವಟ್ಟು.. ದಿನಸಿ ಅಂಗಡಿ ಮಾಲೀಕರಿಗೆ ಕೊಹ್ಲಿ, ಎಬಿಡಿ ಕರೆ..!

Gautam_Gambhir (1)

3 ಫಾರ್ಮೆಟ್​​.. ಮೂರು ಕ್ಯಾಪ್ಟನ್ಸ್​​.. ಗಂಭೀರ್​ ‘ಬಾಸ್​​’

ಭಾರತೀಯ ಕ್ರಿಕೆಟ್​ನ ಇತಿಹಾಸದಲ್ಲೇ ಒಂದೊಂದು ಮಾದರಿಗೆ ಒಬ್ಬೊಬ್ಬ ಕ್ಯಾಪ್ಟನ್​ ಆಗಿರಲಿಲ್ಲ. ಹಲವು ಬಾರಿ ಈ ಬಗ್ಗೆ ಪ್ರಸ್ತಾಪ ಆಗಿತ್ತಾದ್ರೂ ಇದನ್ನ ಜಾರಿಗೆ ಮಾಡೋಕೆ ಸಾಧ್ಯನೇ ಆಗಿರಲಿಲ್ಲ. ಗೌತಮ್​ ಗಂಭೀರ್​ ಅದನ್ನ ಸಾಧ್ಯವಾಗಿಸಿದ್ದಾರೆ. ಟೆಸ್ಟ್​ಗೆ ಶುಭ್​ಮನ್​ ಗಿಲ್​, ಏಕದಿನಕ್ಕೆ ರೋಹಿತ್​ ಶರ್ಮಾ, ಟಿ20ಗೆ ಸೂರ್ಯಕುಮಾರ್​ ಯಾದವ್​​.. ಮೂರು ಮಾದರಿಗೆ ಮೂವರು ನಾಯಕರನ್ನ ನೇಮಿಸಿ ಪವರ್​ ಶೇರ್​​​ ಮಾಡಿರೋ ಗಂಭೀರ್​, ತಾನು ರಿಯಲ್​​ ಬಾಸ್​ ಹುದ್ದೆಯನ್ನ ಅಲಂಕರಿಸಿದ್ದಾರೆ. ಟೀಮ್​​ ಸೆಲೆಕ್ಷನ್​, ಪ್ಲೇಯಿಂಗ್​ ಇಲೆವೆನ್​ ಎಲ್ಲರದಲ್ಲೂ ಈಗ ಗಂಭೀರ್​ ಹೇಳಿದ್ದೇ ವೇದವಾಕ್ಯ.

ಇದನ್ನೂ ಓದಿ:ಚಿನ್ನಸ್ವಾಮಿ ಕೈತಪ್ಪಿದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು

ಅಡಕತ್ತರಿಯಲ್ಲಿ ಸರ್ಫರಾಜ್​ ಖಾನ್ ಕ್ರಿಕೆಟ್ ಬದುಕು.. ಆರೋಪ ಸಾಬೀತಾದ್ರೆ ಖೇಲ್ ಖತಂ..!

3 ಫಾರ್ಮೆಟ್​ಗೆ ಮೂವರು ಕ್ಯಾಪ್ಟನ್ಸ್​​ ಮಾತ್ರವಲ್ಲ. ಕಳೆದೊಂದು ವರ್ಷದಿಂದ ಕೆಲವೇ ಕೆಲವು ಆಟಗಾರರು ಮಾತ್ರ ಮೂರು ಫಾರ್ಮೆಟ್​ಗೆ ಸೀಮಿತವಾಗಿದ್ದಾರೆ. ಉಳಿದಂತೆ ಕೆಲವು ಆಟಗಾರರು ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಮಾತ್ರ ಗುರುತಿಸಿಕೊಂಡಿದ್ರೆ, ಇನ್ನು ಕೆಲವರು ರೆಡ್​​ ಬಾಲ್​​ ಫಾರ್ಮೆಟ್​ನಲ್ಲಿ ಮಾತ್ರ ಆಡ್ತಿದ್ದಾರೆ. ಫಾರ್ಮೆಟ್​​​ ತಕ್ಕಂತೆ ಆಟಗಾರರ ಆಯ್ಕೆಯ ಹಿಂದಿರೋದು ಕೂಡ ಗೌತಮ್​ ಗಂಭೀರ್. 

ಸ್ಟಾರ್​​ ಸಂಸ್ಕೃತಿಗೆ ಕೊಕ್​ ಕೊಟ್ಟ ಗೌತಮ್​ ಗಂಭೀರ್

ಟೀಮ್​ ಇಂಡಿಯಾಗೆ ಹಲವು ವರ್ಷಗಳಿಂದ ಸ್ಟಾರ್​ ಸಂಸ್ಕೃತಿ ಅನ್ನೋದು ಅಂಟಿಕೊಂಡಿತ್ತು. ನಾಯಕ, ನಾಯಕನ ಜೊತೆಗೆ ಕೆಲವೇ ಕೆಲವು ಆಟಗಾರರು ಸ್ಟಾರ್​​ಗಳಾಗಿ ಮೆರೆದಾಡ್ತಿದ್ರು. ಇವ್ರು ಪರ್ಫಾಮ್​ ಮಾಡಲಿ, ಬಿಡಲಿ.. ತಂಡದಲ್ಲಿ ಇವ್ರಿಗೆ ಸ್ಥಾನ ಫಿಕ್ಸ್​ ಆಗಿತ್ತು. ಗೌತಮ್​ ಗಂಭೀರ್​ ಈ ಸ್ಟಾರ್​​ ಸಂಸ್ಕೃತಿಗೆ ಕೊಕ್​ ಕೊಟ್ಟಿದ್ದಾರೆ. ಕೊಹ್ಲಿ, ರೋಹಿತ್​​ ಟೆಸ್ಟ್​ಗೆ ದಿಢೀರ್​ ರಾಜೀನಾಮೆ ಕೊಡೋದಕ್ಕೆ ಗಂಭೀರ್​ ನಿರ್ಧಾರಗಳೂ ಕೂಡ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇದೀಗ ಕೊಹ್ಲಿ, ರೋಹಿತ್​ ಒನ್​ ಡೇ ಭವಿಷ್ಯ ಅಂತತ್ರಕ್ಕೆ ಸಿಲುಕಿರೋದಕ್ಕೂ ಗಂಭೀರ್​ ದೃಢ ನಿರ್ಧಾರಗಳೇ ಕಾರಣ.

ಇದನ್ನೂ ಓದಿ:ಬೆಂಗಳೂರು ಜನರಿಗೆ ಗುಡ್​ನ್ಯೂಸ್​.. ಉದ್ಯಾನ ನಗರಿಯಲ್ಲಿ ತಲೆ ಎತ್ತಲಿದೆ ಬೃಹತ್ ಸ್ಟೇಡಿಯಂ

ಚಾಂಪಿಯನ್ಸ್ ಟ್ರೋಫಿ: ಕೆ.ಎಲ್​ ರಾಹುಲ್​ಗೆ ಟೀಮ್​ ಇಂಡಿಯಾದಲ್ಲಿ ವಿಶೇಷ ಜವಾಬ್ದಾರಿ

ಟೀಮ್​ ಇಂಡಿಯಾ ಅಂದ್ರೆ ಕ್ಯಾಪ್ಟನ್​ ಎಂಬಂತಿದ್ದ ಮಾತನ್ನ ಗೌತಮ್​ ಗಂಭೀರ್​ ಈಗ ಹೆಡ್​ಕೋಚ್​ ಎಂದು ಬದಲಾಯಿಸಿದ್ದಾರೆ. ಕೋಚ್​ ಆಗಿ ಟೀಮ್​ ಇಂಡಿಯಾದ ಅಸಲಿ ಪವರ್​ಹೌಸ್​​ ಎನಿಸಿದ್ದಾರೆ. ಚಾಂಪಿಯನ್ಸ್​ ಟ್ರೋಫಿಯಂತಹ ಬಿಗ್​ ಟೂರ್ನಿಯನ್ನ ಗೆಲ್ಲಿಸಿಕೊಟ್ಟು ಆನ್​ಫೀಲ್ಡ್​ ಪರೀಕ್ಷೆಯಲ್ಲೂ ಪಾಸ್​ ಆಗಿದ್ದಾರೆ. ಗಂಭೀರ್​ ಅಧಿಕಾರಾವಧಿ 2 ವರ್ಷಗಳ ಕಾಲ ಇದ್ದು, ಮುಂದೆ ಏನೆಲ್ಲಾ ಬದಲಾವಣೆಗಳಾಗಲಿವೆ ಕಾದು ನೋಡೋಣ.

ಇದನ್ನೂ ಓದಿ:ಶುಭ್​ಮನ್ ಗಿಲ್​ಗೆ ಆಫರ್​ ಮೇಲೆ ಆಫರ್.. ಯುವರಾಜನಿಗೆ ಒಲಿಯುತ್ತಾ ಈ ಪಟ್ಟ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Gautam Gambhir India head coach Indian cricket team news
Advertisment