/newsfirstlive-kannada/media/media_files/2025/09/16/suryakumar-yadav-and-tilak-varma-2025-09-16-09-54-26.jpg)
ಏಷ್ಯಾಕಪ್​ ಟೂರ್ನಿಯ ಮತ್ತೊಂದು ಕದನಕ್ಕೆ ವೇದಿಕೆ ಸಜ್ಜಾಗಿದೆ. ಓಮನ್​ ಎದುರು ತೊಡೆತಟ್ಟಲು ಸೂರ್ಯಕುಮಾರ್​ ಸೈನ್ಯ ರೆಡಿಯಾಗಿದೆ. ದುಬೈ ಅಂಗಳದಲ್ಲಿ ಸತತ 2 ಗೆಲುವು ಸಾಧಿಸಿರುವ ಅಬುಧಾಬಿಯಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಮೆನ್​ ಇನ್​ ಬ್ಲೂ ಪಡೆಯಲ್ಲಿ ಯಾವೆಲ್ಲಾ ಬದಲಾವಣೆಯಾಗಲಿವೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಇದನ್ನೂ ಓದಿ:WCPL ಟ್ರೋಫಿಗೆ ಮುತ್ತಿಟ್ಟ ಶ್ರೇಯಂಕ ಪಾಟೀಲ್ ಟೀಂ -ಹ್ಯಾಟ್ರಿಕ್ ಕಪ್ ಹೊಡೆದ ರಾಯಲ್ಸ್..!
ಏಷ್ಯಾಕಪ್​ ಟೂರ್ನಿಯ 3ನೇ ಕದನಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಯುಎಇ ಹಾಗೂ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿರೋ ಇಂಡಿಯನ್​ ಟೀಮ್​ ಇದೀಗ ಹ್ಯಾಟ್ರಿಕ್​ ಗೆಲುವಿನ ಕನಸಿನಲ್ಲಿದೆ. ದುಬೈ ಅಂಗಳದಲ್ಲಿ ಆಡಿದ ಎರಡೂ ಪಂದ್ಯ ಗೆದ್ದು ಬೀಗಿರೋ ಇಂಡಿಯನ್​​ ಟೈಗರ್ಸ್, ಇದೀಗ ಅಬುಧಾಬಿಯ ಶೇಕ್​​ ಝೈದ್​ ಸ್ಟೇಡಿಯಂನಲ್ಲಿ​ ಓಮನ್​ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ.
ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಪ್ರಮೋಶನ್​?
ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಈಗಾಗಲೇ ಸೂಪರ್​-4 ಹಂತಕ್ಕೆ ಕ್ವಾಲಿಫೈ ಆಗಿದೆ. ಆಡಿದ 2 ಪಂದ್ಯಗಳಲ್ಲಿ ಗೆದ್ದು ಬೀಗಿರೋದ್ರಿಂದ ಇಂದಿನ ಪಂದ್ಯದಲ್ಲಿ ಪ್ರಯೋಗಗಳಾಗೋ ನಿರೀಕ್ಷೆಯಿದೆ. ಕಳೆದ 2 ಪಂದ್ಯಗಳಿಂದ ಮಿಡಲ್​ ಆರ್ಡರ್​ಗೆ ಸೀಮಿತವಾಗಿರೋ ಸಂಜು ಸ್ಯಾಮ್ಸನ್​ ಪ್ಯಾಡ್​ ಕಟ್ಟಿ ಅಂಗಳಕ್ಕಿಳಿಯೋ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಓಪನರ್​ ಆಗಿ ಪ್ರಮೋಷನ್​ ಸಿಗೋ ಸಾಧ್ಯತೆಯಿದೆ.
ಓಮನ್ ಎದುರು ಲೋವರ್​ ಆರ್ಡರ್​​ ಸ್ಟ್ರೆಂಥ್​​ ‘ಟೆಸ್ಟ್​’?
ಆಡಿದ ಎರಡೂ ಪಂದ್ಯಗಳಲ್ಲಿ ಟೀಮ್​ ಇಂಡಿಯಾದ ಟಾಪ್​ ಹಾಗೂ ಮಿಡಲ್​ ಆರ್ಡರ್​ ಬ್ಯಾಟರ್​​ಗಳೇ ಮ್ಯಾಚ್​ ಮುಗಿಸಿದ್ದಾರೆ. ಲೋವರ್​ ಆರ್ಡರ್​ ಬ್ಯಾಟ್ಸ್​ಮನ್​ಗಳಿಗೆ ಅವಕಾಶ ಸಿಕ್ಕಿಲ್ಲ. ಸುದೀರ್ಘ ಅಂತರದ ಬಳಿಕ ಮೈದಾನಕ್ಕೆ ಕಮ್​ಬ್ಯಾಕ್​ ಮಾಡಿದ್ರೂ, ಬ್ಯಾಟಿಂಗ್​ ಮಾಡಿಲ್ಲ. ಭಾನುವಾರ ಮತ್ತೊಂದು ಮಹತ್ವದ ಪಂದ್ಯ ಇರೋದ್ರಿಂದ ಇಂದಿನ ಪಂದ್ಯದಲ್ಲಿ ಲೋವರ್​​ ಬ್ಯಾಟಿಂಗ್​ ಸ್ಟ್ರೆಂಥ್​ನ ಟೆಸ್ಟ್​ ನಡೆಸಲು ಟೀಮ್​ ಮ್ಯಾನೇಜ್​ಮೆಂಟ್​ ಚಿಂತಿಸಿದೆ.
/filters:format(webp)/newsfirstlive-kannada/media/media_files/2025/09/15/surya-kumar-yadav-2025-09-15-07-38-15.jpg)
ದುಬೈನ ಸ್ಪಿನ್​ ಫ್ರೆಂಡ್ಲಿ ಕಂಡಿಷನ್​ನಲ್ಲಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್​ ಹಾಗೂ ಒಬ್ಬ ಸ್ಪೆಷಲಿಸ್ಟ್​ ವೇಗಿ, ಒಬ್ಬ ಪೇಸ್​​ ಆಲ್​​ರೌಂಡರ್​​ ಕಾಂಬಿನೇಷನ್​ನಲ್ಲಿ ಕಣಕ್ಕಿಳಿದು ಸಕ್ಸಸ್​ ಕಂಡಿತ್ತು. ಅಬುಧಾಬುಯಿಯ ಕಂಡಿಷನ್ಸ್​ ಬೇರೆಯಾಗಿರೋದ್ರಿಂದ ಬೌಲಿಂಗ್​ ಕಾಂಬಿನೇಷನ್​​ನಲ್ಲಿ ಬದಲಾವಣೆಯಾಗೋ ಸಾಧ್ಯತೆಯಿದೆ. ಇಬ್ಬರು ಸ್ಪೆಷಲಿಸ್ಟ್​ ವೇಗಿಗಳೊಂದಿಗೆ ಕಣಕ್ಕಿಳಿಯಿದ್ರೆ, ವರುಣ್​ ಚಕ್ರವರ್ತಿ, ಅಕ್ಷರ್​ ಪಟೇಲ್​, ಕುಲ್​​ದೀಪ್​ ಯಾದವ್​ ಪೈಕಿ ಯಾರು ಡ್ರಾಪ್​ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಆರ್ಷ್​​ದೀಪ್​ಗೆ ಚಾನ್ಸ್?
ವರ್ಕ್​​​ಲೋಡ್​​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಇಂದಿನ ಪಂದ್ಯದಿಂದ ವೇಗಿ ಜಸ್​​ಪ್ರಿತ್​ ಬೂಮ್ರಾಗೆ ವಿಶ್ರಾಂತಿ ನೀಡಲು ಮ್ಯಾನೇಜ್​ಮೆಂಟ್​ ಮುಂದಾಗಿದೆ. ಮೊದಲ 2 ಪಂದ್ಯಗಳಲ್ಲಿ ಬೆಂಚ್​ ಕಾದಿರೋ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಪ್ಲೇಯಿಂಗ್​ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ. ಇಬ್ಬರೂ ವೇಗಿಗಳೊಂದಿಗೆ ಕಣಕ್ಕಿಳಿಯೋದಾದ್ರೆ, ಹರ್ಷಿತ್​​ ರಾಣಾ ಕೂಡ ಅಬಿಧಾಬಿಯಲ್ಲಿ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.
ಇದನ್ನೂ ಓದಿ:ಕಿಂಗ್​ ಕೊಹ್ಲಿನ ನೆನಪಿಸುತ್ತಿರುವ T20 ಪಂದ್ಯಗಳು.. ಟೀಮ್ ಇಂಡಿಯಾಗೆ ಬೇಕಾಗಿರೋದು ಏನೇನು?
ಓಮನ್​ ವಿರುದ್ಧದ ಕದನ ಔಪಚಾರಿಕವಾಗಿರೋದ್ರಿಂದ ಟೀಮ್​ ಇಂಡಿಯಾದಲ್ಲಿ ಹಲವಾರು ಬದಲಾವಣೆಗಳ ನಿರೀಕ್ಷೆಯಿದೆ. ಹೆಡ್​​ಕೋಚ್​ ಗೌತಮ್​ ಗಂಭೀರ್​ ವಿನ್ನಿಂಗ್​​ ಕಾಂಬಿನೇಷನ್​ ಡಿಸ್ಟರ್ಬ್​ ಮಾಡಿದ ಇತಿಹಾಸ ತೀರಾ ಕಡಿಮೆಯಿದೆ. ಹೀಗಾಗಿ ಅಬುಧಾಬಿ ಕದನದಲ್ಲಿ ಪ್ಲೇಯಿಂಗ್​ ಇಲೆವೆನ್ ಹಾಗೂ ಬಾರ್ಡರ್​​​ ಆರ್ಡರ್​​​ನಲ್ಲಿ​ ಬದಲಾವಣೆಗೆ ಮುಂದಾಗ್ತಾರಾ? ಅಥವಾ ಸೇಮ್​ ಕಾಂಬಿನೇಷನ್​ನೊಂದಿಗೆ ಮುಂದುವರೀತಾರಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us