/newsfirstlive-kannada/media/media_files/2025/09/01/dravid-sanju-samson-2025-09-01-18-28-28.jpg)
ಐಪಿಎಲ್ಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಿದ್ಧತೆ ಜೋರಾಗಿದೆ. ಸಂಜು ಸ್ಯಾಮ್ಸನ್ನ ಖರೀದಿಸಲು ಶತ ಪ್ರಯತ್ನ ನಡೆಸ್ತಿರೋ ಕೆಕೆಆರ್ ಇದೀಗ ಹೊಸ ದಾಳ ಉರುಳಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಮತ್ತೊಬ್ಬ ಬಿಗ್ಸ್ಟಾರ್ಗೆ ಕೆಕೆಆರ್ ಗಾಳ ಹಾಕಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ರಾಜಸ್ಥಾನ್ ರಾಯಲ್ಸ್ನಲ್ಲಿ 2 ವಿಕೆಟ್ ಪತನವಾಗಲಿವೆ.
ಏಷ್ಯಾಕಪ್ ಅಬ್ಬರದ ನಡುವೆ ಐಪಿಎಲ್ನ ಗದ್ದಲ ಕೂಡ ಜೋರಾಗಿದೆ. ಈಗಾಗಲೇ ರಾಹುಲ್ ದ್ರಾವಿಡ್ ಆರ್ಆರ್ಗೆ ಗುಡ್ ಬೈ ಹೇಳಿದ್ದಾರೆ. ಮತ್ತೊಂದ್ಕಡೆ ಸಂಜು ಸ್ಯಾಮ್ಸನ್ ಗುಡ್ ಬೈ ಹೇಳೋಕೆ ಮುಂದಾಗಿರೋದು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಸಂಜುವಿನ ಮುಂದಿನ ದಾರಿ ಯಾವುದಯ್ಯಾ? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದ್ರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಸಂಜು ಸ್ಯಾಮ್ಸನ್ ಮಾತ್ರವಲ್ಲ.. ರಾಜಸ್ಥಾನ್ ರಾಯಲ್ಸ್ನಲ್ಲಿ ಮತ್ತೊಂದು ವಿಕೆಟ್ ಉರುಳೋ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದು ವಿಕೆಟ್ ಪತನ?
ರಾಜಸ್ಥಾನ್ ರಾಯಲ್ಸ್ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಕುಮಾರ್ ಸಂಗಾಕ್ಕರ ಫ್ರಾಂಚೈಸಿಗೆ ಗುಡ್ ಬೈ ಹೇಳೋಕೆ ಹೊರಟಿದ್ದಾರೆ ಅನ್ನೋ ಹೊಸ ಸುದ್ದಿ ಹೊರಬಿದ್ದಿದೆ. ರಾಜಸ್ಥಾನ ತಂಡಕ್ಕೆ ಕಳೆದ ವರ್ಷ ದ್ರಾವಿಡ್ ಹೆಡ್ ಕೋಚ್ ಆಗಿ ವಾಪಾಸ್ಸಾದ ಬಳಿಕ ಕುಮಾರ್ ಸಂಗಾಕ್ಕರಗೆ ಹೆಚ್ಚಿನ ಆದ್ಯತೆ ಸಿಕ್ಕಿರಲಿಲ್ಲ. ಮುಂದಿನ ಸೀಸನ್ಗೂ ಮುನ್ನ ಕುಮಾರ್ ಸಂಗಾಕ್ಕರ ರಾಜಸ್ಥಾನ್ ರಾಯಲ್ಸ್ ತೊರೆದು ಬೇರೊಂದು ಫ್ರಾಂಚೈಸಿ ಸೇರಲು ಚಿಂತಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿಯನ್ನೂ ಮೀರಿಸೋ ರೇಂಜ್ಗೆ ಪಾಂಡ್ಯ.. ಒಂದು ಇನ್ಸ್ಟಾ ಪೋಸ್ಟ್ಗೆ ಎಷ್ಟು ಚಾರ್ಜ್ ಮಾಡ್ತಾರೆ..?
ಕೊಲ್ಕತ್ತಾ ನೈಟ್ ರೈಡರ್ಸ್ ಸೇರ್ತಾರಾ ಸಂಗಾಕ್ಕರ..?
ರಾಜಸ್ಥಾನ್ ರಾಯಲ್ಸ್ನ ತೊರೆಯಲು ಮುಂದಾಗಿರೋ ಸಂಗಾಕ್ಕರ ಕೊಲ್ಕತ್ತಾ ನೈಟ್ ರೈಡರ್ಸ್ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಕಾಂತ್ ಪಂಡಿತ್ಗೆ ಕೊಕ್ ನೀಡಿರುವ ಕೆಕೆಆರ್ ಹೊಸ ಹೆಡ್ಕೋಚ್ಗಾಗಿ ಹುಡುಕಾಟ ನಡೆಸ್ತಿದೆ. ಶಾರೂಖ್ ಖಾನ್ ಫ್ರಾಂಚೈಸಿಯ ಕಣ್ಣು ಸಂಗಾಕ್ಕರ ಮೇಲೆ ಬಿದ್ದಿದ್ದು, ಈಗಾಗಲೇ ಅಪ್ರೋಚ್ ಮಾಡಲಾಗಿದೆ ಎನ್ನಲಾಗ್ತಿದೆ.
ಗುರುವಿನಿಂದಲೇ ಶಿಷ್ಯನಿಗೆ ಕೆಕೆಆರ್ ಗಾಳ?
ಕುಮಾರ್ ಸಂಗಾಕ್ಕರ ಕರೆತರಲು ಪ್ರಯತ್ನಿಸ್ತಾ ಇರೋ ಕೆಕೆಆರ್ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್ ರೂಪಿಸಿದೆ. ಒಂದೆಡೆ ಹೊಸ ಹೆಡ್ಕೋಚ್ ಕರೆ ತರೋದ್ರ ಜೊತೆಗೆ ಹೊಸ ನಾಯಕನನ್ನೂ ಸೆಳೆಯಲು ಮುಂದಾಗಿದೆ. ಗುರು ಸಂಗಾಕ್ಕರನ ತಂಡಕ್ಕೆ ಕರೆ ತಂದ್ರೆ ಶಿಷ್ಯ ಸಂಜು ಸ್ಯಾಮ್ಸನ್ ಬುಟ್ಟಿಗೆ ಹಾಕಿಕೊಳ್ಳೋದು ಇನ್ನಷ್ಟು ಸುಲಭ ಅನ್ನೋದು ಕೆಕೆಆರ್ ಫ್ರಾಂಚೈಸಿಯ ಪ್ಲಾನ್ ಆಗಿದೆ.
ಇದನ್ನೂ ಓದಿ:ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಆರ್ಸಿಬಿಯೇ ಕಿಂಗ್.. ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಲಿಸ್ಟ್..!
ಸಂಜು ಸ್ಯಾಮ್ಸನ್ ಮೇಲೆ ಕೆಕೆಆರ್ಗೆ ಅತೀವ ಆಸಕ್ತಿ
ಸಂಜು ಸ್ಯಾಮ್ಸನ್ ಖರೀದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅತೀವ ಆಸಕ್ತಿ ಹೊಂದಿದೆ. ವಿಕೆಟ್ ಕೀಪರ್, ನಾಯಕನ ಹುಡುಕಾಟದಲ್ಲಿರೋ ಕೆಕೆಆರ್, ಶತಯಾಗತಾಯ ಸಂಜುನ ತಂಡಕ್ಕೆ ಕರೆ ತರಲು ಪಣತೊಟ್ಟಿದ್ದು ಅದಕ್ಕಾಗಿ 3 ಪ್ಲಾನ್ಗಳನ್ನೂ ರೂಪಿಸಿದೆ. ಅದ್ರಲ್ಲಿ ಮೊದಲನೇ ಪ್ಲಾನೇ ಟ್ರೇಡಿಂಗ್. ಆಟಗಾರರ ವರ್ಗಾವಣೆ ನಿಯಮದಡಿ ರಾಜಸ್ಥಾನ್ ಫ್ರಾಂಚೈಸಿ ಜೊತೆಗೆ ಚರ್ಚಿಸಿ ವೆಂಕಟೇಶ್ ಅಯ್ಯರ್ನ ಬಿಟ್ಟು ಕೊಟ್ಟು ಸಂಜುವನ್ನ ಖರೀದಿಸಲು ಕೆಕೆಆರ್ ಮುಂದಾಗಿದೆ.
ಮೊದಲ ಪ್ಲಾನ್ ವರ್ಕೌಟ್ ಆಗಲಿಲ್ಲ ಅಂದ್ರೆ ಕೆಕೆಆರ್ ಬಳಿ ಪ್ಲಾನ್ ಬಿ ಕೂಡ ರೆಡಿಯಾಗಿದೆ. ಪ್ಲೇಯರ್ಸ್ ವರ್ಗಾವಣೆ ಮತ್ತು ಕ್ಯಾಶ್ ಡೀಲ್ನ ಆಫರ್ ಮಾಡಲು ಕೆಕೆಆರ್ ಚಿಂತಿಸಿದೆ. ಮೂಲಗಳ ಪ್ರಕಾರ ತಂಡದ ಯುವ ಆಟಗಾರರಾದ ಅಂಗ್ಕ್ರಿಶ್ ರಘವಂಶಿ ಅಥವಾ ರಮಣ್ದೀಪ್ ಸಿಂಗ್ ಇಬ್ಬರಲ್ಲಿ ಒಬ್ಬರನ್ನ ಬಿಟ್ಟು ಕೊಟ್ಟು, ಉಳಿದ ಹಣವನ್ನ ಕ್ಯಾಶ್ ರೂಪದಲ್ಲಿ ನೀಡಲು ಕೆಕೆಆರ್ ಪ್ಲಾನ್ ರೂಪಿಸಿಕೊಂಡಿದೆ.
ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ನಿಂದ ರಾಹುಲ್ ದ್ರಾವಿಡ್ ರನ್ನು ಕಿಕ್ ಔಟ್ ಮಾಡಲಾಗಿದೆ ಎಂದ ಎಬಿ ಡಿವಿಲಿಯರ್ಸ್!
/filters:format(webp)/newsfirstlive-kannada/media/media_files/2025/08/13/sanju-samson-2025-08-13-18-46-18.jpg)
ಕೆಕೆಆರ್ನ ಪ್ಲಾನ್ ಸಿ ಫುಲ್ ಕ್ಯಾಶ್ ಡೀಲ್. ಇದೇನಾದ್ರೂ ವರ್ಕೌಟ್ ಆದ್ರೆ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ನಡುವೆ ಹಾರ್ದಿಕ್ ಪಾಂಡ್ಯ ವರ್ಗಾವಣೆಯ ಡೀಲ್ ನಡೀತಲ್ವಾ? ಅದಕ್ಕಿಂತ ಬಿಗ್ ಡೀಲ್ ಇದಾಗಲಿದೆ. ಅಂದು ಹಾರ್ದಿಕ್ ಪಾಂಡ್ಯನ ಮುಂಬೈ ಖರೀದಿಸಿದ್ದು 15 ಕೋಟಿಗೆ. ಕೆಕೆಆರ್ ಬರೋಬ್ಬರಿ 18 ಕೋಟಿಗೂ ಅಧಿಕ ಹಣವನ್ನ ನೀಡಿ ಸಂಜು ಸ್ಯಾಮ್ಸನ್ ಖರೀದಿಸಲು ಮುಂದಾಗಿದೆ.
ಒಂದು ವೇಳೆ ಸಂಜು ಸ್ಯಾಮ್ಸನ್ ಮಿನಿ ಆಕ್ಷನ್ ಕಣಕ್ಕೆ ಹೋದ್ರೂ ಕೂಡ ಕೆಕೆಆರ್ ಬಿಗ್ ಪರ್ಸ್ನೊಂದಿಗೆ ಆಕ್ಷನ್ ಅಖಾಡಕ್ಕಿಳಿದು ಬಿಡ್ ಮಾಡೋ ಲೆಕ್ಕಾಚಾರದಲ್ಲಿದೆ. ಒಟ್ಟಿನಲ್ಲಿ, ಮುಂದಿನ ಸೀಸನ್ಗೂ ಮುನ್ನ ಬಲಿಷ್ಠ ತಂಡ ಕಟ್ಟಲು ಕೆಕೆಆರ್ ಸಕಲ ಪ್ರಯತ್ನವನ್ನ ಮಾಡ್ತಿದೆ. ಕೋಚ್ ಆಗಿ ಸಂಗಾಕ್ಕರ ಕರೆತರಲು ಮುಂದಾಗಿರೋ ಕೆಕೆಆರ್, ನಾಯಕನಾಗಿ ಸಂಜುವನ್ನ ಸೆಳೆಯಲು ಪ್ಲಾನ್ ರೂಪಿಸಿದೆ. ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:ಐಪಿಎಲ್ ಆಡ್ಲಿಲ್ಲ, ವಿಶ್ವಕಪ್ನಲ್ಲೂ ಇಲ್ಲ.. ಎಲ್ಲಿಗೆ ಹೋದ್ರು ಕನ್ನಡತಿ..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ