/newsfirstlive-kannada/media/media_files/2025/09/13/shahid-afridi-on-india-2025-09-13-11-31-29.jpg)
ಇಂಡೋ-ಪಾಕ್ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಬದ್ಧವೈರಿಗಳ ನಡುವಿನ ಕದನದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹೀದ್ ಅಫ್ರಿದಿ ನಾಲಿಗೆ ಹರಿಬಿಟ್ಟು ಟೀಮ್ ಇಂಡಿಯಾ ಆಟಗಾರರು ಹಾಗೂ ಅಭಿಮಾನಿಗಳನ್ನ ಕೆರಳಿಸಿದ್ದಾರೆ. ಅಷ್ಟಕ್ಕೂ ಅಫ್ರಿದಿ ಹೇಳಿದ್ದೇನು ಅನ್ನೋ ವಿವರ ಸ್ಟೋರಿಯಲ್ಲಿದೆ.
ನಾಲಿಗೆ ಹರಿಬಿಟ್ಟ ಅಫ್ರಿದಿ
ಇಂಡೋ-ಪಾಕ್ ಏಷ್ಯಾಕಪ್ ಕದನದ ಡಿಬೆಟ್ನಲ್ಲಿ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿ ಭಾಗವಹಿಸಿದ್ರು. ಚರ್ಚೆಯ ವೇಳೆ ಬಾಯ್ಕಾಟ್ ಅಭಿಯಾನದ ಬಗ್ಗೆ ಮಾತನಾಡಿರೋ ಅಫ್ರಿದಿ, ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ಸ್ಗಳ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಟೀಕಿಸೋ ಭರದಲ್ಲಿ ಅಫ್ರಿದಿ ಆಡಿರುವ ಮಾತುಗಳು ಇದೀಗ ತೀವ್ರ ಚರ್ಚೆಗೆ ಕಾರಣವಾಗಿವೆ.
ಇದನ್ನೂ ಓದಿ:ಗಿಲ್ ಯುವರಾಜನ ಪಟ್ಟವೇರಿದ ಜರ್ನಿಯೇ ರೋಚಕ.. ಕಾರಣ ಮಾತ್ರ ಜ್ಯೂಸ್ ಮಾರುವವನ ಮಗ!
ಕೆಲವು ಭಾರತೀಯ ಆಟಗಾರರು ಈಗಲೂ ತಾವು ಭಾರತೀಯರು ಎಂದು ನಿರೂಪಿಸಿಕೊಳ್ಳುತ್ತಿದ್ದಾರೆ. ಹುಟ್ಟಿನಿಂದಲೂ ನಾವು ಭಾರತೀಯರು ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದ್ರೀಗ, ಏಷ್ಯಾಕಪ್ನಲ್ಲಿ ಕಾಮೆಂಟರಿ ಮಾಡೋದಕ್ಕೆ ಬಂದಿದ್ದಾರೆ-ಶಾಹೀದ್ ಅಫ್ರಿದಿ, ಮಾಜಿ ಕ್ರಿಕೆಟಿಗ
ಯುವಿ, ಇರ್ಫಾನ್, ಧವನ್ಗೆ ಟಾಂಗ್?
ಅಫ್ರಿದಿ ಆಡಿರೋ ಮಾತುಗಳ ಹಿಂದೆ ಒಂದು ಸಣ್ಣ ಕಥೆಯಿದೆ. ಜುಲೈನಲ್ಲಿ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ನಡೆದಿತ್ತಲ್ವಾ? ಆ ಟೂರ್ನಿಯಲ್ಲಿ ಪೆಹಲ್ಗಾಮ್ ಟೆರರ್ ಅಟ್ಯಾಕ್ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯ ಆಡಲು ಟೀಮ್ ಇಂಡಿಯಾ ಆಟಗಾರರು ಹಿಂದೇಟು ಹಾಕಿದ್ರು. ಈ ಪೈಕಿ ಮೊದಲಿಗನಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಶಿಖರ್ ಧವನ್. ಆ ಬಳಿಕ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಕೂಡ ನಾವು ಪಂದ್ಯ ಆಡಲ್ಲ ಎಂದು ಹೇಳಿದ್ರು. ಅಫ್ರಿದಿ ಮಾತನಾಡಿರೋದು ಶಿಖರ್ ಧವನ್ ಬಗ್ಗೆಯೇ.
ಇದನ್ನೂ ಓದಿ:ಭಾರತ- ಪಾಕ್ ಮಧ್ಯೆ ನಡೆದ ಏಷ್ಯಾಕಪ್ನ ಟಾಪ್- 5 ಮ್ಯಾಚ್ಗಳು.. ಫುಲ್ ಥ್ರಿಲ್ಲಿಂಗ್..!
ಟೂರ್ನಿಯ ಲೀಗ್ ಹಂತದ ಪಂದ್ಯ ಮಾತ್ರವಲ್ಲ. ಸೆಮಿಫೈನಲ್ ಪಂದ್ಯವನ್ನೂ ಟೀಮ್ ಇಂಡಿಯಾ ಆಟಗಾರರು ಬಾಯ್ಕಾಟ್ ಮಾಡಿದ್ರು. ಪರಿಣಾಮ ಪಾಕಿಸ್ತಾನ ಪಂದ್ಯವನ್ನ ಆಡದೇ ಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಅಂದು ಮಾಜಿ ಕ್ರಿಕೆಟಿಗರು ಪಂದ್ಯವನ್ನ ಬಾಯ್ಕಾಟ್ ಮಾಡಿದ್ದನ್ನೇ ಎಳೆಯಾಗಿ ಇಟ್ಟುಕೊಂಡು ಶಾಹೀದ್ ಅಫ್ರಿದಿ ಈ ಮಾತನ್ನಾಡಿದ್ದಾರೆ. ಅಸಲಿಗೆ ಟೀಕಿಸೋಕೆ ಅಫ್ರಿದಿಗೆ ಇದೊಂದು ನೆಪ ಮಾತ್ರ. ಸಿಟ್ಟಿಗೆ ಕಾರಣ ಬೇರೆನೇ ಇದೆ.
ಸೇನೆ ಟೀಕಿಸಿದ್ದ ಶಾಹೀದ್ ಅಫ್ರಿದಿ
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರ ಮೇಲಿನ ಕೋಪಕ್ಕೆ ಇದೊಂದೆ ಕಾರಣವಲ್ಲ. ಈ ಹಿಂದೆ ಪೆಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಭಾರತೀಯ ಸೇನೆ ಬಗ್ಗೆ ಅಫ್ರಿದಿ ಅಸಂಬದ್ಧವಾಗಿ ಮಾತನಾಡಿದ್ರು. ಅಸಮರ್ಥ ಹಾಗೂ ನಿಷ್ಪ್ರಯೋಜಕ ಎಂದು ಅಫ್ರಿದಿ ನಾಲಿಗೆ ಹರಿಬಿಟ್ಟಿದ್ರು. ಆಗ ಖಡಕ್ಕ ತಿರುಗೇಟು ಕೊಟ್ಟಿದ್ದ ಧವನ್, ಕಾರ್ಗಿಲ್ ವಾರ್ನಲ್ಲಿ ನಿಮ್ಮನ್ನು ಸೋಲಿಸಿದ್ದು ನಾವೇ.. ನಿಮ್ಮ ದೇಶ ಸುಧಾರಣೆ ಮಾಡೋದ್ರ ಕಡೆ ಗಮನಹರಿಸಿ ಎಂದು ಖಡಕ್ ತಿರುಗೇಟು ನೀಡಿದ್ರು.
ಧವನ್ ಮಾತ್ರವಲ್ಲ, ಸುಖಾಸುಮ್ಮನೆ ಕಾಲು ಕೆರೆದುಕೊಂಡು ಬರೋ ಅಫ್ರಿದಿಗೆ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಈ ಹಿಂದೆ ಕಟುವಾದ ಮಾತುಗಳಲ್ಲಿ ವಾರ್ನಿಂಗ್ ಕೊಟ್ಟಿದ್ದಿದೆ. ಅದೇನೆ ಇರಲಿ, ಸದ್ಯ ಶಾಹೀದ್ ಅಫ್ರಿದಿ ಆಡಿರುವ ಮಾತುಗಳು ಟೀಮ್ ಇಂಡಿಯಾ ಆಟಗಾರರು ಮತ್ತು ಅಭಿಮಾನಿಗಳನ್ನ ಕೆರಳಿಸಿರೋದಂತೂ ಸುಳ್ಳಲ್ಲ. ಅಫ್ರಿದಿ ಅನಗತ್ಯ ಟೀಕೆ ತಂಡದ ಸೋಲಿಗೆ ಕಾರಣವಾದ್ರು ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:ಭಾರತ-ಪಾಕ್ ಮ್ಯಾಚ್ಗೆ ಡಿಮ್ಯಾಂಡೇ ಇಲ್ಲ! ಅದಕ್ಕೆ 4 ಕಾರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ