KL ರಾಹುಲ್​​ಗಾಗಿ ಶಾರೂಖ್ ಖಾನ್ ಪಟ್ಟು.. ಡೀಲ್ ಕುದುರಿಸಲು ಹಾಕಿದ ಗಾಳ ಎಂಥದ್ದು..?

ಸೀಸನ್​​-18ರ IPL ಮುಗೀದು 2 ತಿಂಗಳಾಗ್ತಿಲ್ಲ. ಐಪಿಎಲ್ ಫ್ರಾಂಚೈಸಿಗಳು ಮುಂದಿನ ಸೀಸನ್​​​ ತಯಾರಿಯಲ್ಲಿ ಬ್ಯಸಿಯಾಗಿದೆ. ಈ ಪೈಕಿ ಒಂದು ಕೊಲ್ಕತ್ತಾ ನೈಟ್​ ರೈಡರ್ಸ್ ಕಳೆದ ಸೀಸನ್​​ನ ಪ್ರದರ್ಶನಕ್ಕೆ ಬೇಸರವಾಗಿರುವ ಮ್ಯಾನೇಜ್​ಮೆಂಟ್ ಶತಯಾ ಗತಾಯ ಕನ್ನಡಿಗ ಕೆ.ಎಲ್.ರಾಹುಲ್​, ತಂಡಕ್ಕೆ ಕರೆತರುವ ಯತ್ನದಲ್ಲಿದೆ.

author-image
Ganesh
kl rahul delhi capitals

ಕೆ.ಎಲ್.ರಾಹುಲ್

Advertisment
  • ಬ್ಲಾಕ್ ಬಾಸ್ಟರ್ ಟ್ರೇಡ್​​​ಗೆ ನೈಟ್ ರೈಡರ್ಸ್​​ ಸನ್ನದ್ಧ
  • ಡೆಲ್ಲಿ ಕ್ಯಾಪಿಟಲ್ಸ್​ ಜೊತೆಯೂ ನಡೆದಿದೆ ಮಾತುಕತೆ!
  • 25 ಕೋಟಿಯ ಡೀಲ್​ಗೆ ಕೊಲ್ಕತ್ತಾ ನೈಟ್​ ರೈಡರ್ಸ್ ರೆಡಿ​

ಸೀಸನ್​​-18ರ ಐಪಿಎಲ್ ಮುಗೀದು ಎರಡು ತಿಂಗಳಾಗ್ತಿದೆ. ಸೀಸನ್​​-18ರಲ್ಲಿ ನಿರೀಕ್ಷೆ ತಕ್ಕ ಪ್ರದರ್ಶನ ನೀಡದ ಕೊಲ್ಕತ್ತಾ ನೈಟ್​ ರೈಡರ್ಸ್​, ಮುಂದಿನ ಸೀಸನ್​​​​ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ಕೋಚಿಂಗ್ ಸ್ಟಾಫ್ ಸರ್ಜರಿ ಮಾಡಿರುವ ಕೊಲ್ಕತ್ತಾ ನೈಟ್​ ರೈಡರ್ಸ್​, ಈಗ ತಂಡದ ಸರ್ಜರಿಗಿಳಿದಿದೆ. ಈ ನಿಟ್ಟಿನಲ್ಲೇ ಕನ್ನಡಿಗ ಕೆ.ಎಲ್.ರಾಹುಲ್​​ಗೆ ತಂಡಕ್ಕೆ ಕರೆತರುವ ಯತ್ನದಲ್ಲಿದೆ. 

ಕೆ.ಎಲ್.ರಾಹುಲ್​​ಗಾಗಿ ಕಿಂಗ್ ಖಾನ್ ಶಾರೂಖ್ ಪಟ್ಟು!

ಕಳೆದ ಸೀಸನ್​​​ನಲ್ಲಿ ಕೆಕೆಆರ್ ನೀಡಿರುವ ಪ್ರದರ್ಶನಕ್ಕೆ ಅಸಂತೃಪ್ತಿ ಹೊಂದಿರುವ ಕಿಂಗ್ ಖಾನ್ ಶಾರೂಖ್, ಸೀಸನ್​​-19ಕ್ಕೆ ಬಲಿಷ್ಠ ತಂಡ ಕಟ್ಟಲು ಸೂಚಿಸಿದ್ದಾರೆ. ಇದರ ಅನ್ವಯವೇ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆಗೆ ಮ್ಯಾನೇಜ್​ಮೆಂಟ್​​ ಮುಂದಾಗಿದೆ.  ಶತಯಾ ಗತಯಾ ಕನ್ನಡಿಗ ಕೆ.ಎಲ್.ರಾಹುಲ್​​ನ ತಂಡಕ್ಕೆ ಕರೆತರಲು ಸ್ವತಃ ಶಾರೂಖ್ ಖಾನ್ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಟ್ರೇಡ್​ ಮೂಲಕ ಸೆಳೆಯುವ ಯತ್ನದಲ್ಲಿದೆ. ಇದಕ್ಕಾಗಿ ಒಂದು ಅಸ್ತ್ರವನ್ನು ಬಿಟ್ಟಿದೆ.

ಅಭಿಷೇಕ್ ನಾಯರ್ ಮೂಲಕ ರಾಹುಲ್​ಗೆ ಆಫರ್

ಕೆ.ಎಲ್.ರಾಹುಲ್​​ನ ಸೆಳೆಯಲು ಬಿಟ್ಟಿರುವ ಅಸ್ತ್ರವೇ ಅಭಿಷೇಕ್ ನಾಯರ್. ಇದಕ್ಕೆ ಕಾರಣ ಅಭಿಷೇಕ್ ನಾಯರ್ ಹಾಗೂ ಕೆ.ಎಲ್.ರಾಹುಲ್ ನಡುವಿನ ಭಾಂಧವ್ಯ. ಕೆ.ಎಲ್.ರಾಹುಲ್ ಜೊತೆ ಉತ್ತಮ ಸಂಬಂಧ ಹೊಂದಿರುವ ಅಭಿಷೇಕ್​ ನಾಯರ್​ಗೆ ಕೆಲಸ ಮಾಡಿದ ಅನುಭವೂ ಇದೆ. ಹೀಗಾಗಿ ಕೆ.ಎಲ್​​​.ರಾಹುಲ್​ನ ಸೆಳೆದ್ರೆ, ಹೆಲ್ತಿ ವಾತಾವರಣ ಸೃಷ್ಟಿಯಾಗುತ್ತೆ ಅನ್ನೋದು ಮ್ಯಾನೇಜ್​ಮೆಂಟ್ ಲೆಕ್ಕಾಚಾರ. ಇದಕ್ಕಾಗಿಯೇ ಅಭಿಷೇಕ್​ ನಾಯರಿಂದಲೇ ನಾಯಕತ್ವದ ಆಫರ್ ಮಾಡಿದೆ. ಕಂಪ್ಲೀಟ್ ಸ್ವತಂತ್ರ್ಯ ನೀಡುವ ಭರವಸೆ ನೀಡಿರುವ ಕೊಲ್ಕತ್ತಾ, ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಕ್ಯಾಚ್​ ಹಿಡಿದು ಬೌಂಡರಿ ಲೈನ್​ ತುಳಿದ ಸಿರಾಜ್​​.. ಫೈನಲ್ ಟೆಸ್ಟ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

kl rahul delhi capitals (1)
ಕೆಎಲ್ ರಾಹುಲ್

ಕೆ.ಎಲ್.ರಾಹುಲ್​​ಗಾಗಿ ಯಾರನ್ನಾದರು ಬಿಡಲು ಕೊಲ್ಕತ್ತಾ ರೆಡಿ..!

ಕೆ.ಎಲ್.ರಾಹುಲ್​​ ಟ್ರೇಡ್​​ಗೆ ಸನ್ನದ್ಧರಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್​, ತನ್ನಲ್ಲಿರುವ ಯಾವುದೇ ಆಟಗಾರನ ಬಿಟ್ಟು ಕೊಡಲು ರೆಡಿಯಾಗಿದ್ಯಂತೆ. ಅಕಸ್ಮತ್ ಆಟಗಾರ ಬೇಡದಿದ್ದಲ್ಲಿ ಬರೋಬ್ಬರಿ 25 ಕೋಟಿ ಹಣ ನೀಡಲು ಕೊಲ್ಕತ್ತಾ ಮುಂದಾಗಿದೆ ಎನ್ನಲಾಗ್ತಿದೆ. ಕೊಲ್ಕತ್ತಾ ಭಾರೀ ಮೊತ್ತವನ್ನು ಕೆ.ಎಲ್.ರಾಹುಲ್​​ಗೆ ಸುರಿಯಲು ರೆಡಿಯಾಗಿರುವುದರ ಹಿಂದೆ ಭಾರೀ ಲೆಕ್ಕಾಚಾರದ ಜೊತೆಗೆ ಕೆಲ ತಂತ್ರಗಳಿವೆ. 

ಕೆ.ಎಲ್.ರಾಹುಲ್​​​​​ಗಾಗಿ ಪಟ್ಟು ಯಾಕೆ..?

  • ಸೀಸನ್​​-18ರಲ್ಲಿ ಕೊಲ್ಕತ್ತಾ ಅಟ್ಟರ್​ ಪ್ಲಾಫ್ ಪರ್ಫಾಮೆನ್ಸ್
  •  ವಿಕೆಟ್ ಕೀಪರ್​ಗಳಾದ  ಡಿಕಾಕ್, ಗುರ್ಬಾಜ್​ ವೈಫಲ್ಯ
  •  ನಾಯಕನಾಗಿ ಅಜಿಂಕ್ಯಾ ರಹಾನೆ ಕಂಪ್ಲೀಟ್​​ ಫೇಲ್ಯೂರ್​
  •  ಕೆ.ಎಲ್.ರಾಹುಲ್​​ ತಂಡಕ್ಕೆ ಬಂದ್ರೆ ಮದ್ದಾಗುವ ನಿರೀಕ್ಷೆ
  •  ಉತ್ತಮ ವಿಕೆಟ್​ ಕೀಪರ್ & ಓಪನಿಂಗ್ ಬ್ಯಾಟರ್
  •  ಕನ್ಸಿಸ್ಟೆನ್ಸಿ, ಕಂಡೀಷನ್ಸ್​ಗೆ ಹೊಂದಿಕೊಳ್ಳುವ ಗುಣ
  •  ಯಾವುದೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ
  •  ಕ್ರೌಂಡ್​ ಫುಲ್​ ಮಾಡುವ ಇಂಡಿಯನ್ ಪ್ಲೇಯರ್
  •  ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ ರಾಹುಲ್
  •  ಪ್ರತಿಯೊಬ್ಬರ ಜೊತೆ ರಾಹುಲ್​ಗೆ ಉತ್ತಮ ಬಾಂಧವ್ಯ

ಇದನ್ನೂ ಓದಿ: ಬುಮ್ರಾಗೆ ಬಿಸಿಸಿಐ ಯಾರ್ಕರ್.. ಟೆಸ್ಟ್​​ ಕ್ರಿಕೆಟ್​​ನಿಂದ ವೇಗಿಗೆ ಗೇಟ್​ಪಾಸ್​..?

ಕೆಕೆಆರ್ ಸಾರಥಿಯಾಗ್ತಾರೆ ರಾಹುಲ್​​​​

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಾಗಿರುವ ಕೆ.ಎಲ್.ರಾಹುಲ್​​ಗಾಗಿ ಕೊಲ್ಕತ್ತಾ ಬಿಗ್​ ಡೀಲ್​ಗೆ ಇಳಿದಿದೆ ಒಕೆ. ಡೆಲ್ಲಿ ಕ್ಯಾಪಿಟಲ್ಸ್​ ಕೆ.ಎಲ್.ರಾಹುಲ್​ನ ಕೈಬಿಡುತ್ತಾ ಅನ್ನೋದೇ ಪ್ರಶ್ನೆ. ಸೀಸನ್​​-18ರಲ್ಲಿ ಡೆಲ್ಲಿ ಸಕ್ಸಸ್​ಗೆ ಕಾರಣವೇ ಕೆ.ಎಲ್.ರಾಹುಲ್. ಕೋಚಿಂಗ್ ಸ್ಟಾಫ್​ ಜೊತೆ ವಿಶೇಷ ಬಾಂಧವ್ಯವೂ ಇದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಟ್ರೇಡ್​ನಲ್ಲಿ ಬಿಟ್ಟುಕೊಡುತ್ತಾ ಅನ್ನೋದೇ ಪ್ರಶ್ನೆ. ಅಕಸ್ಮಾತ್​ ಕೆ.ಎಲ್.ರಾಹುಲ್​, ಹೋಗಲು ಪಟ್ಟು ಹಿಡಿದ್ರೆ, ಕೊಲ್ಕತ್ತಾ ಸೇರೋದ್ರಲ್ಲಿಅನುಮಾನವಿಲ್ಲ. ಆದ್ರೆ ಇದಕ್ಕೆ ರಾಹುಲ್ ಒಪ್ಪಿಗೆ ನೀಡ್ತಾರಾ ಅನ್ನೋದೆ ಡೌಟ್​.

ಇದನ್ನೂ ಓದಿ: ಅನ್ನದಾತರಿಗೆ ಶಾಕಿಂಗ್ ನ್ಯೂಸ್​.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL Rahul
Advertisment