ಹಾಸನ ದುರಂತದಲ್ಲಿ ಅಣ್ಣನ ಕಳ್ಕೊಂಡು ಒಂಟಿಯಾದ ತಮ್ಮ.. ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಶ್ವಾನ

ಹಾಸನದ ದುರ್ಘಟನೆಯಲ್ಲಿ ಚಿಕ್ಕಮಗಳೂರಿನ ಮಣೆನಹಳ್ಳಿ ಗ್ರಾಮದ ಯುವಕ ಸುರೇಶ್ ಎಂಬಾತ ಮೃತಪಟ್ಟಿದ್ದಾನೆ. 19 ವರ್ಷದ ಸುರೇಶ್ ಹಾಸನದಲ್ಲಿ ಇಂಜಿನೀಯರಿಂಗ್ ಮಾಡ್ತಿದ್ದ. ಮಣೆನಹಳ್ಳಿಯಿಂದ ಇಂಜಿನಿಯರಿಂಗ್​​​ಗೆ ಸೇರಿದ್ದ ಮೊದಲ ಯುವಕನಾಗಿದ್ದ.

author-image
Ganesh Kerekuli
Chikkamaglore suresh (1)
Advertisment

ಹಾಸನದ ದುರ್ಘಟನೆಯಲ್ಲಿ ಚಿಕ್ಕಮಗಳೂರಿನ ಮಣೆನಹಳ್ಳಿ ಗ್ರಾಮದ ಯುವಕ ಸುರೇಶ್ ಎಂಬಾತ ಮೃತಪಟ್ಟಿದ್ದಾನೆ. 19 ವರ್ಷದ ಸುರೇಶ್ ಹಾಸನದಲ್ಲಿ ಇಂಜಿನೀಯರಿಂಗ್ ಮಾಡ್ತಿದ್ದ. ಮಣೆನಹಳ್ಳಿಯಿಂದ ಇಂಜಿನಿಯರಿಂಗ್​​​ಗೆ ಸೇರಿದ್ದ ಮೊದಲ ಯುವಕನಾಗಿದ್ದ. 

ಅಲ್ಲದೇ ಕಾಲೇಜಿಗೇ ಟಾಪರ್ ಆಗಿದ್ದ. ತಂದೆ ರಮೇಶ್ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದರು. ಇದೀಗ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಮೇಶ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ. 

ಇದನ್ನೂ ಓದಿ:ಸ್ನೇಹಾ ಶೆಟ್ಟಿಗೆ ಅಕುಲ್ ಕ್ಲಾಸ್​! ಹಳ್ಳಿ ಪವರ್ ಶೋ ಕ್ವಿಟ್ ಮಾಡಿದ ಇಬ್ಬರು ಸ್ಪರ್ಧಿಗಳು!

Chikkamaglore suresh (2)

ಅಂತ್ಯಕ್ರಿಯೆ ವೇಳೆ ಶ್ವಾನ ಕೂಡ ಕಣ್ಣೀರು ಇಟ್ಟಿದೆ. ಅಂತ್ಯಕ್ರಿಯೆ ಸ್ಥಳಕ್ಕೆ ಬಂದಿದ್ದ ಶ್ವಾನ ಜನರ ಗುಂಪಿನ ಮಧ್ಯೆ ಸುರೇಶ್ ಅಗಲಿಕೆಗೆ ನೋವು ವ್ಯಕ್ತಪಡಿಸಿದೆ. ಇನ್ನು, ಅಣ್ಣ ಸುರೇಶ್​ನನ್ನು ಕಳೆದುಕೊಂಡು ಸಹೋದರ ರಾಜು ಒಂಟಿಯಾಗಿದ್ದಾನೆ. ಅಣ್ಣನ ವಿದ್ಯಾಭ್ಯಾಸಕ್ಕೆ ತಮ್ಮ ರಾಜು ಕೂಡ ಸಾಥ್ ನೀಡಿದ್ದ. ಗಾರೆ ಕೆಲಸ ಮಾಡಿ ಕುಟುಂಬ ಸುರೇಶ್ ವಿದ್ಯಾಭ್ಯಾಸದ ವೆಚ್ಚ ಭರಿಸುತ್ತಿದ್ದ. ತಮ್ಮ ಕೂಡ ಅಣ್ಣನ ವಿಧ್ಯಾಭಸಕ್ಕೆ ತನ್ನ ದುಡಿಮೆಯಲ್ಲಿ ಪಾಲು ನೀಡ್ತಾ ಇದ್ದ. ಸುರೇಶ್​ ವಿದ್ಯಾಭ್ಯಾಸ ಪೂಣರ್ಗೊಂಡ್ರೆ ಕಷ್ಟದ ದಿನಗಳು ಕಳೆಯುತ್ತೆ ಅಂತಾ ತಂದೆ ರಮೇಶ್​ ಕನಸು ಕಂಡಿದ್ದರು. ರಾಜು ಸಣ್ಣ ವಯಸ್ಸಾದ್ರೂ ಅಣ್ಣನ ಕನಸಿಗೆ ಯಜಮಾನನಂತೆ ನಿಂತಿದ್ದ. ಆದ್ರೀಗ ಇದೀಗ ಅಣ್ಣನನ್ನು ಕಳೆದುಕೊಂಡು ಸಹೋದರ ಒಂಟಿಯಾಗಿದ್ದಾನೆ.

ಇದನ್ನೂ ಓದಿ:ದೆಹಲಿಯಲ್ಲಿ ಥಾರ್ ಕಾರ್ ಮೊದಲ ಮಹಡಿಯಿಂದ ಬಿದ್ದಾಗ ಮಹಿಳೆಗೆ ಏನಾಯ್ತು? ಮಹಿಳೆ ಈಗ ಹೇಗಿದ್ದಾರೆ? ಮಹಿಳೆ ಹೇಳಿದ್ದಾರೆ, ಕೇಳಿ.

Chikkamaglore suresh

ಗಣೇಶ ವಿಸರ್ಜನೆ ದುರಂತದಲ್ಲಿ ಮೃತಪಟ್ಟ ಸುರೇಶ್​ ಕುಟುಂಬಕ್ಕೆ ಸಿ.ಟಿ ರವಿ ಸಾಂತ್ವನ ಹೇಳಿದ್ದಾರೆ. ಚಿಕ್ಕಮಗಳೂರು ಮೂಲದ ಸುರೇಶ್ ಹಾಸನದ ಮೊಸಳೆ ಹಳ್ಳಿ ಲಾರಿ ಅಪಘಾತದಲ್ಲಿ ಮೃತಪಟ್ಟಿದ್ದ. ಸುರೇಶ್​ ಮೃತದೇಹ  ಅಂತಿಮ ದರ್ಶನ ಪಡೆದ ಎಂಎಲ್​ಸಿ ಸಿ.ಟಿ ರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಆ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:ಹೂವಿನ ಬಾಣದ ಈ ವೈರಲ್ ಹುಡುಗಿ ಯಾರು..? ಈಗ ಏನ್ ಹೇಳ್ತಿದ್ದಾಳೆ ಇವರು..? VIDEO

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Hassan Hassan Ganesh Procession Tragedy hassan tragedy ಹಾಸನ ದುರಂತ
Advertisment