/newsfirstlive-kannada/media/media_files/2025/09/13/hassan-incident-4-2025-09-13-08-14-04.jpg)
ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ದುರಂತ ಅಂದ್ರೆ ಬಲಿಯಾದ ಎಲ್ಲರೂ ಬಾಳಿ ಬದುಕಬೇಕಿದ್ದ ಯುವಕರು. ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ. ಸಿಎಂ ಸಿದ್ದು, ಮಾಜಿ ಪ್ರಧಾನಿ ದೇವೇಗೌಡ್ರು, ಹೆಚ್ಡಿಕೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಬೈಕ್ ಅಡ್ಡ ಬಂದಿದ್ದೇ ಹಾಸನ ದುರಂತಕ್ಕೆ ಕಾರಣ.. 9 ಬಲಿ, 25 ಜನ ಗಂಭೀರ
5 ಲಕ್ಷ ಪರಿಹಾರ
ಹಾಸನದ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಕಂಡು ಕೇಳರಿಯದ ದುರಂತ ನಿನ್ನೆ ನಡೆದೋಗಿದೆ.. ಗಣೇಶ ಮೆರವಣಿಗೆ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.. ಈ ಘಟನೆ ತೀವ್ರ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು, ನೊಂದವರ ಜೊತೆ ನಾವೆಲ್ಲರೂ ನಿಲ್ಲೋಣ ಅಂತ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:2 ವರ್ಷಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ್ದ ಮಣಿಪುರ.. ಇವತ್ತು ಮೋದಿ ಮೊದಲ ಭೇಟಿ
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು.
— Siddaramaiah (@siddaramaiah) September 12, 2025
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ…
ಮೊಸಳೆಹೊಸಹಳ್ಳಿ ಗಣೇಶ ಮೆರವಣಿಗೆ ದುರಂತದಲ್ಲಿ ಮೃತಪಟ್ಟ ಎಲ್ಲ 9 ಮಂದಿ 17ರಿಂದ 25 ವರ್ಷದೊಳಗಿನ ಯುವಕರಾಗಿದ್ದಾರೆ..
9 ಜನರ ಜೀವ ತೆಗೆದ ಟ್ರಕ್!
- ಪ್ರವೀಣ್ ಕುಮಾರ್, BE ಅಂತಿಮ ವರ್ಷದ ವಿದ್ಯಾರ್ಥಿ, ಬಿಹಾರ
- ರಾಜೇಶ್ ಬಿನ್ ಮೂರ್ತಿ, ( 17 ) ಕೆ.ಬಿ. ಪಾಳ್ಯ, ಹೊಳೆನರಸೀಪುರ
- ಈಶ್ವರ್ ಬಿನ್ ರವಿಕುಮಾರ್( 17 ) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ
- ಗೋಕುಲ್ ಬಿನ್ ಸಂಪತ್ ಕುಮಾರ್( 17 ) ಮುತ್ತಿಗೆ ಹಿರೇಹಳ್ಳಿ
- ಕುಮಾರ್ ಬಿನ್ ತಿಮ್ಮಯ್ಯ( 25 ) ಕಬ್ಬಿನಹಳ್ಳಿ, ಹಳೆಕೋಟೆ, ಹೊಳೆನರಸೀಪುರ
- ಪ್ರವೀಣ್ ಬಿನ್ ಹನುಮಯ್ಯ ( 25 ) ಕಬ್ಬಿನಹಳ್ಳಿ, ಹೊಳೆನರಸೀಪುರ
- ಮಿಥುನ್ ಬಿನ್ ವಿಜಯ್ (23 ) ಗವಿಗಂಗಾಪುರ, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ
- ಪ್ರಭಾಕರ್, ಬಂಟರಹಳ್ಳಿ, ಹೊಳೆನರಸೀಪುರ ತಾಲೂಕು
- ಮೃತನ ಹೆಸರು, ವಿಳಾಸ ತಿಳಿದು ಬಂದಿಲ್ಲ
ಪೊಲೀಸರ ನಿರ್ಲಕ್ಷ್ಯ ಎಂದ ಹೆಚ್.ಡಿ.ರೇವಣ್ಣ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಿದ್ರು. ಪೊಲೀಸರ ನಿರ್ಲಕ್ಷ್ಯದಿಂದಲೇ ದುರಂತ ನಡೆದಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಗಣೇಶ ಮೆರವಣಿಗೆ ಬ್ಯಾರಿಕೇಡ್ ಹಾಕಿರಲಿಲ್ಲ.. ಮೆರವಣಿಗೆ ವೇಳೆ ಪೊಲೀಸರೇ ಇರಲಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.. ಮೃತರ ಕುಟುಂಬಗಳಿಗೆ ಕನಿಷ್ಠ 10 ಲಕ್ಷದಿಂದ 15 ಲಕ್ಷ ರೂ. ಪರಿಹಾರ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ..
ದುರಂತಕ್ಕೆ ಹೆಚ್ಡಿಡಿ, ಹೆಚ್ಡಿಕೆ ತೀವ್ರ ಸಂತಾಪ
ದುರಂತಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಸಂತಾಪ ಸೂಚಿಸಿದ್ದಾರೆ.. ಗಣೇಶ ವಿಸರ್ಜನೆ ವೇಳೆ ನಡೆದ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಅಂತ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ನಿಮ್ಮ ಕೈ ನಡುಗುತ್ತಿದೆಯಾ, ರಕ್ತಹೀನತೆ ಕಾಡ್ತಿದೆಯಾ..? ಹಾಗಾದ್ರೆ ನಿಮ್ಗೆ ಈ ವಿಟಮಿನ್ ಬೇಕೇ ಬೇಕು!
ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಭೀಕರ ಅಪಘಾತದಿಂದ 8 ಜನ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ.
— H D Devegowda (@H_D_Devegowda) September 12, 2025
1/2
ಕೇಂದ್ರ ಸಚಿವ ಹೆಚ್.ಡಿ.ಕುಮಾಸ್ವಾಮಿ ಇದು ಅತಿ ದುರ್ದೈವದ ಘಟನೆಯಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.
I am deeply shocked to hear the news of a horrific accident during the Ganapati immersion procession at Mosalehosahalli in Hassan Taluk, where several people lost their lives and more than 20 were seriously injured. It is extremely saddening that devotees lost their lives after…
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 12, 2025
ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತ ಅತ್ಯಂತ ಆಘಾತಕಾರಿಯಾಗಿದ್ದು, ಈ ಘೋರ ದುರ್ಘಟನೆಯ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
— DK Shivakumar (@DKShivakumar) September 12, 2025
ಮೃತರ…
ಅದೇನೇ ಇರಲಿ.. ಇತ್ತೀಚೆಗೆ ನಡೆಯುತ್ತಿರುವ ಗಣೇಶ ಮರವಣಿಗೆಗಳು ಗಲಭೆ, ಗಲಾಟೆ, ದುರಂತದಲ್ಲಿ ಅಂತ್ಯ ಆಗ್ತಿರೋದು ಮಾತ್ರ ನಿಜಕ್ಕೂ ಆಘಾತಕಾರಿ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ