38 ವರ್ಷಗಳ ಹಿಂದಿನ ಧರ್ಮಸ್ಥಳ ಪದ್ಮಲತಾ ಕೇಸ್​​ಗೆ ಟ್ವಿಸ್ಟ್​.. SIT ಮುಂದೆ ಸಹೋದರಿ ಇಟ್ಟ ಬೇಡಿಕೆ ಏನು?

ಧರ್ಮಸ್ಥಳದ ಸುತ್ತಮುತ್ತಲ ಕಾನನದಲ್ಲಿ ಅಸ್ಥಿಪಂಜರಕ್ಕಾಗಿ ಎಸ್​ಐಟಿ ಶೋಧ ಮುಂದುವರಿದಿದೆ. 3-4 ದಿನಗಳಿಂದ ಎಲ್ಲರ ಗಮನ ಸೆಳೆದಿರುವ ಪಾಯಿಂಟ್​ 13ರ ರಹಸ್ಯ ಇವತ್ತು ಕೂಡ ಬಯಲಾಗಿಲ್ಲ. ಜಿಪಿಆರ್​ ವ್ಯವಸ್ಥೆ ಮಾಡಿದ್ರೂ.. ಮರ-ಗಿಡಗಳಿಂದಾಗಿ, ನಾಳೆಗೆ ಪೋಸ್ಟ್​ಪೋನ್​ ಆಗಿದೆ.

author-image
Ganesh
Dharmastala padmalata
Advertisment

ಧರ್ಮಸ್ಥಳದ ಸುತ್ತಮುತ್ತಲ ಕಾನನದಲ್ಲಿ ಅಸ್ಥಿಪಂಜರಕ್ಕಾಗಿ ಎಸ್​ಐಟಿ ಶೋಧ ಮುಂದುವರಿದಿದೆ. 3-4 ದಿನಗಳಿಂದ ಎಲ್ಲರ ಗಮನ ಸೆಳೆದಿರುವ ಪಾಯಿಂಟ್​ 13ರ ರಹಸ್ಯ ಇವತ್ತು ಕೂಡ ಬಯಲಾಗಿಲ್ಲ. ಜಿಪಿಆರ್​ ವ್ಯವಸ್ಥೆ ಮಾಡಿದ್ರೂ.. ಮರ-ಗಿಡಗಳಿಂದಾಗಿ, ನಾಳೆಗೆ ಪೋಸ್ಟ್​ಪೋನ್​ ಆಗಿದೆ. ಇದರ ಮಧ್ಯೆ 39 ವರ್ಷಗಳ ಹಿಂದಿನ ಅಸಹಜ ಸಾ*ವಿನ ಕೇಸ್​​ ಮತ್ತೆ ಮುನ್ನಲೆಗೆ ಬಂದಿದ್ದು, ಮರು ತನಿಖೆಗೆ ಒತ್ತಾಯ ಕೇಳಿ ಬಂದಿದೆ.

ಜಿಪಿಆರ್​ ಯಂತ್ರ​ ಬಂದ್ರೂ ಸ್ಪಾಟ್​ 13ರಲ್ಲಿ ನಡೆಯದ ಪರಿಶೋಧನೆ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಸದ್ಯ ಎಲ್ಲರ ಕುತೂಹಲ ಕೆರಳಿಸಿರುವ ಪಾಯಿಂಟ್​ 13ರ ಸ್ಥಳದಲ್ಲಿ ಇವತ್ತು ಕೂಡ ಸ್ಥಳಮಹಜರು ನಡೆದಿಲ್ಲ. ಜಿಪಿಆರ್​ ಯಂತ್ರ ಬಂದ್ರೂ 13ನೇ ಪಾಯಿಂಟ್​​ನಲ್ಲಿ  ಅಸ್ಥಿಪಂಜರಕ್ಕಾಗಿ ಉತ್ಖನನ ನಾಳೆಗೆ ಮುಂದೂಡಿಕೆ ಆಗಿದೆ. 

ಇದನ್ನೂ ಓದಿ:ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್‌ ಕೇಸ್​ನ ಸತ್ಯ ಬಯಲು

dharmasthala case
ಅನಾಮಿಕ ದೂರುದಾರನ ಜೊತೆ ಎಸ್​ಐಟಿ ತಂಡ

ಮಾಸ್ಕ್​ಮಾನ್​.. ಅನಾಮಿಕ ದೂರುದಾರ ಈ ಮೊದಲು 13 ಸ್ಥಳಗಳನ್ನು ಗುರುತಿಸಿದ್ದ. ಈ ಪೈಕಿ 12 ಪಾಯಿಂಟ್​ಗಳಲ್ಲಿ ಮಹಜರು ಮಾಡಲಾಗಿದೆ. ಇದರಲ್ಲಿ 6ನೇ ಸ್ಥಳ ಬಿಟ್ಟರೆ ಬೇಱವುದರಲ್ಲೂ ಕಳೇಬರ ಸಿಕ್ಕಿಲ್ಲ. 13ನೇ ಸ್ಥಳ ಬಿಟ್ಟು ಹೊಸ ಹೊಸ ಸ್ಥಳಗಳಲ್ಲಿ ಶೋಧ ಮಾಡಿದ್ರೂ ಒಂದೇ ಒಂದು ಮೂಳೆ ಕೂಡ ಸಿಗ್ತಿಲ್ಲ.. ಹೀಗಾಗಿ.. ಎಲ್ಲರ ಚಿತ್ತ ಇದೀಗ ಪಾಯಿಂಟ್​ 13ರ ಮೇಲಿದೆ. ಈ ಸ್ಥಳದಲ್ಲಿ 15 ಅಡಿ ಆಳದಲ್ಲಿ ಹಲವು ಶವಗಳನ್ನು ಹೂತಿರೋದಾಗಿ ಅನಾಮಿಕ ವ್ಯಕ್ತಿ ಹೇಳಿದ್ದ.. ಈ ಕಾರಣಕ್ಕಾಗಿ ಎಸ್​ಐಟಿ ಅಧಿಕಾರಿಗಳ ತಂತ್ರಜ್ಞಾನದ ಮೊರೆ ಹೋಗಿದ್ದರು. ಡ್ರೋನ್ ರಾಡಾರ್ ಬಳಸಿ ಜಿಪಿಆರ್​ ವ್ಯವಸ್ಥೆ ಮೂಲಕ ಮಣ್ಣಿನೊಳಗೆ ಏನಿದೆ ಅಂದು ಪತ್ತೆ ಹಚ್ಚಲು ಕಾದು ಕುಳಿತಿದ್ರು.. ಇದೀಗ ಜಿಪಿಆರ್​​ ಯಂತ್ರ ಕೂಡ ಎಸ್​ಐಟಿ ಕೈ ಸೇರಿದೆ. ಆದ್ರೆ, ಇವತ್ತೂ ಕೂಡತ್ತು ಪಾಯಿಂಟ್​ 13ರಲ್ಲಿ ಪರಿಶೋಧನೆ ನಡೆದಿಲ್ಲ..

ಇದನ್ನೂ ಓದಿ:ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅನ್ನು ಪೊಲೀಸ್ ಠಾಣೆ ಎಂದು ಘೋಷಿಸಿದ ಸರ್ಕಾರ

dharmasthala case

ಜಿಪಿಆರ್​ ವ್ಯವಸ್ಥೆ ಬಳಕೆಗೆ ಪ್ರದೇಶ ಕ್ಲಿಯರ್​ ಆಗಿರಬೇಕು.. ಸಣ್ಣ ಅಡಚಣೆ ಆದ್ರೂ, ಶೋಧ ಕಾರ್ಯಕ್ಕೆ ಅಡ್ಡಿ ಆಗಲಿದೆ. ಸದ್ಯ ಪಾಯಿಂಟ್​ 13ರಲ್ಲಿ ಮರ, ಗಿಡಗಂಡೆಗಳು ಹೆಚ್ಚಾಗಿರುವ ಕಾರಣ, ಅವುಗಳನ್ನು ತೆರವು ಮಾಡಲಾಗ್ತಿದೆ. ಈ ಹಿನ್ನೆಲೆ ಇವತ್ತಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ನಾಳೆ ಜಿಪಿಆರ್​ ಮೂಲಕ ಸ್ಥಳ ಪರಿಶೋಧನೆಗೆ ಎಸ್​ಐಟಿ ತೀರ್ಮಾನಿಸಿದೆ.

38 ವರ್ಷಗಳ ಹಿಂದಿನ ಅಸಹಜ ಸಾವಿನ ಕೇಸ್​ಗೆ ಮರಜೀವ

ಧರ್ಮಸ್ಥಳ ಗ್ರಾಮದ ಸುತ್ತ ಶವ ಹೂತಿಟ್ಟ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇಷ್ಟು ದಿನ ಮಣ್ಣಲ್ಲಿ ಮರೆಯಾಗಿರುವ ರಹಸ್ಯವನ್ನು ಎಸ್​ಐಟಿ ಕೆದಕುತ್ತಿದ್ದಂತೆ.. ಹಳೆ ಪ್ರಕರಣಗಳಿಗೂ ಮರು ಜೀವ ಬರತೊಡಗಿವೆ.. 38 ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಪದ್ಮಲತಾ ಸಾ*ವಿನ ಪ್ರರಣದ ಮರು ತನಿಖೆಗೆ ಆಗ್ರಹ ಕೇಳಿ ಬಂದಿದೆ.


ಯಾರು ಈ ಪದ್ಮಲತಾ?

  • ಬೆಳ್ತಂಗಡಿ ತಾ. ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ
  • 1986 ಡಿಸೆಂಬರ್​ 22 ರಂದು ಕಾಲೇಜಿನಿಂದ ವಾಪಸ್​ ಬಂದಿದ್ರು
  • ಧರ್ಮಸ್ಥಳ ಗ್ರಾಮದವರೆಗೆ ಬಂದು ನಾಪತ್ತೆಯಾಗಿದ್ದ ಪದ್ಮಲತಾ
  • ನಾಪತ್ತೆಯಾದ 56 ದಿನಗಳ ಬಳಿಕ ನೇತ್ರಾವತಿ ತೀರದಲ್ಲಿ ಶ*ವ ಪತ್ತೆ
  • 1987 ಫೆಬ್ರವರಿ 17ರಂದು ನದಿ ತೀರದಲ್ಲಿ ಕೊಳತೆ ಸ್ಥಿತಿಯಲ್ಲಿ ಪತ್ತೆ
  • ಡ್ರಸ್, ವಾಚ್ ಮೂಲಕ ಪದ್ಮಲತಾ ಎಂದು ಗುರುತಿಸಿದ್ದ ಕುಟುಂಬ
  • ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಿದ್ದರೂ ಪತ್ತೆಯಾಗದ ಕೇಸ್

ಇದೀಗ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣವನ್ನು ಎಸ್​ಐಟಿ ಕೈಗೆತ್ತಿಕೊಂಡಿದ್ದು, ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆಯಿಂದ.. ಪದ್ಮಲತಾ ಸಹೋದರಿಂದ ಇಂದ್ರಾವತಿ, ಸಿಪಿಐಎಂ ಮುಖ್ಯಸ್ಥ ಬಿ ಎಂ ಭಟ್ ನೇತೃತ್ವದಲ್ಲಿ ಆಗಮಿಸಿ ಎಸ್​ಐಟಿಗೆ ದೂರು ಸಲ್ಲಿಸಿದ್ದಾರೆ. ಇನ್ನು ತನಿಖಾ ದೃಷ್ಟಿಯಿಂದ ನಾವು ಶವವನ್ನು ಹೂತಿಟ್ಟಿದ್ದು, ಅದರ ಮರು ತನಿಖೆ ಮಾಡುವಂತೆ ಪಾಂಗಳ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ 6 ಜನರ ಬಂಧನ.. ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ ಪೊಲೀಸರು

dharmasthala case

ಒಟ್ಟಾರೆ.. ಧರ್ಮಸ್ಥಳದಲ್ಲಿ ಮಣ್ಣು ಸೇರಿರುವ ನಿಗೂಢ ಸಾವಿನ ಪ್ರಕರಣಗಳು ಒಂದೊಂದಾಗೇ ಮರು ಜೀವ ಪಡೆದುಕೊಳ್ತಿವೆ. ಕಲ್ಲೇರಿಯ 14 ವರ್ಷದ ಬಾಲಕಿ ಆಯ್ತು.. ಈಗ 39 ವರ್ಷಗಳ ಹಿಂದಿನ ಪದ್ಮಲತಾ ಪ್ರಕರಣವೂ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಗೋಚರಿಸಿದೆ.

ಇದನ್ನೂ ಓದಿ:ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳ ಬೆನ್ನೇರಿ SIT; ಸರ್ಕಾರದ ನಡೆ ಪ್ರಶ್ನಿಸಿದ ಕಾಂಗ್ರೆಸ್​ ಹಿರಿಯ ನಾಯಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case
Advertisment