ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್‌ ಕೇಸ್​ನ ಸತ್ಯ ಬಯಲು

ಮಂಗಳೂರು ಕುಕ್ಕರ್​ ಬ್ಲಾಸ್ಟ್​ ಕ್ರಿಮಿಗಳ ಬೆನ್ನುಬಿದ್ದ ಇ.ಡಿ ಅಧಿಕಾರಿಗಳು ಭಯಾನಕ ಸತ್ಯವೊಂದನ್ನ ಬಯಲಿಗೆಳೆದಿದ್ದಾರೆ. ಧರ್ಮಸ್ಥಳವೇ ಕುಕ್ಕರ್​ ಕಿರಾತಕರ ಟಾರ್ಗೆಟ್​ ಆಗಿತ್ತು ಅನ್ನೋ ವರದಿಯನ್ನ ಇ.ಡಿ ಬಿಚ್ಚಿಟ್ಟಿದೆ.

author-image
Ganesh
Mangalore cooker case
Advertisment
  • ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋ*ಟಕ್ಕೆ ಸಂಚು
  • 90 ನಿಮಿಷಗಳ ಬದಲಿಗೆ 9 ನಿಮಿಷಗಳಿಗೆ ಕುಕ್ಕರ್ ಬಾಂಬ್​ ಸ್ಫೋ*ಟ
  • ಉಗ್ರರ ಟೈಮರ್​ ಯಡವಟ್ಟಿನಿಂದ ಮಾರ್ಗಮಧ್ಯೆ ಕುಕ್ಕರ್ ಬ್ಲಾಸ್ಟ್

ಮಂಗಳೂರು ಕುಕ್ಕರ್​ ಬ್ಲಾಸ್ಟ್​ ಕ್ರಿಮಿಗಳ ಬೆನ್ನುಬಿದ್ದ ಇ.ಡಿ ಅಧಿಕಾರಿಗಳು ಭಯಾನಕ ಸತ್ಯವೊಂದನ್ನ ಬಯಲಿಗೆಳೆದಿದ್ದಾರೆ. ಧರ್ಮಸ್ಥಳವೇ ಕುಕ್ಕರ್​ ಕಿರಾತಕರ ಟಾರ್ಗೆಟ್​ ಆಗಿತ್ತು ಅನ್ನೋ ವರದಿಯನ್ನ ಇ.ಡಿ ಬಿಚ್ಚಿಟ್ಟಿದೆ. ಕ್ರಿಮಿಗಳ ಕೃತ್ಯಕ್ಕೆ ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಸಂದಾಯ ಆಗಿತ್ತು ಅನ್ನೋದು ದೇಶವನ್ನೇ ಬೆಚ್ಚಿಬೀಳಿಸಿದೆ.

2022ರ ನವೆಂಬರ್​ 19ರಂದು ಮಂಗಳೂರಿನ ಹೊರವಲಯದ ಕಂಕನಾಡಿಯಲ್ಲಿ ಬ್ಲಾಸ್ಟ್​ ಆಗಿದ್ದ ಈ ಆಟೋ ಕೇವಲ ರಾಜ್ಯ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆಟೋದಲ್ಲಿ ಸ್ಫೋ*ಟಗೊಂಡಿದ್ದ ಕುಕ್ಕರ್​ ಬಾಂ*ಬ್​ ಕರಾಳ ಸತ್ಯವೊಂದನ್ನ ಬಿಚ್ಚಿಟ್ಟಿತ್ತು. ಈ ಕುಕ್ಕರ್​ ಬಾಂ*ಬ್​​ ಕ್ರಿಮಿ ಶಾರೀಕ್​ನ ಜಾಡು ಹಿಡಿದು ಹೊರಟ ಇ.ಡಿ ತಂಡದ ಮುಂದೆ ಭಯಾನಕ ಸತ್ಯವೊಂದು ಬಯಲಾಗಿದೆ.

ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ ಕೇಸಲ್ಲಿ ಸ್ಫೋ*ಟಕ ಸತ್ಯ ಬಯಲು

ಆಟೋದಲ್ಲಿ ಕುಕ್ಕರ್​ ಬ್ಲಾಸ್ಟ್​ ಆಗಿ ಪೊಲೀಸರ ಕೈಗೆ ಲಾಕ್ ಆದ ಉಗ್ರ ಮಹಮ್ಮದ್ ಶಾರೀಕ್ ಮತ್ತೊಂದು ಮುಖವಾಡ ಬಯಲಾಗಿದೆ. ಈ ಶಾರಿಕ್​ ಧರ್ಮಸ್ಥಳ ಮಂಜುನಾಥ ದೇಗುಲದ ಬಳಿ ಬ್ಲಾಸ್ಟ್​ ಮಾಡಲು ಸ್ಕೆಚ್ ಹಾಕಿದ್ನಂತೆ. ಆದ್ರೆ ಗುರುವಿಗೆ ತಿರುಮಂತ್ರ ಅನ್ನೋ ಹಾಗೆ ಆ ಬ್ಲಾಸ್ಟ್​ ಪ್ಲಾನ್ ಫೇಲ್ ಆಗಿ ಕುಕ್ಕರ್​ ಮಂಗಳೂರಿನಲ್ಲೇ ಬ್ಲಾಸ್ಟ್​ ಆಗಿತ್ತು.

ಇದನ್ನೂ ಓದಿ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ.. ಧರ್ಮಸ್ಥಳ ಉದ್ವಿಘ್ನ, ಕೇಸ್​ ದಾಖಲು

ಧರ್ಮಸ್ಥಳದಲ್ಲಿ ಸ್ಫೋ*ಟಕ್ಕೆ ಸ್ಕೆಚ್!

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋಟಕ್ಕೆ ಉಗ್ರ ಮಹಮ್ಮದ್ ಶಾರೀಕ್ ಸಂಚು ರೂಪಿಸಿದ್ದ.. ಶಾರಿಕ್​ ಮೂಲಕ ಆಟೋದಲ್ಲಿ ಕುಕ್ಕರ್​ ಬಾಂಬ್​ ಇಟ್ಟು ಐಸಿಸ್ ಉಗ್ರರು ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ರು. ಆದ್ರೆ ಉಗ್ರರ ಟೈಮರ್​ ಯಡವಟ್ಟಿನಿಂದ ಮಾರ್ಗಮಧ್ಯೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು.. 90 ನಿಮಿಷಗಳ ಬದಲಿಗೆ 9 ನಿಮಿಷಗಳಿಗೆ ಕುಕ್ಕರ್ ಬಾಂ*ಬ್​ ಸ್ಫೋಟಗೊಂಡು ಶಾರಿಕ್ ಗಂಭೀರವಾಗಿ ಗಾಯಗೊಂಡಿದ್ದ.

ಕುಕ್ಕರ್​ ಸ್ಫೋ*ಟಕ್ಕೆ ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ! 

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋ*ಟ ನಡೆಸಲು ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ ನೀಡಲಾಗಿತ್ತಂತೆ. ಉಗ್ರ ಶಾರಿಕ್​ಗೆ ಟೆಲಿಗ್ರಾಂ ಆ್ಯಪ್​ ಮೂಲಕ ಐಸಿಸ್ ಉಗ್ರರು ಕುಕ್ಕರ್​ ಬಾಂ*ಬ್​ ತಯಾರಿ ಬಗ್ಗೆ ತರಬೇತಿ ನೀಡಿದ್ರಂತೆ.. ಅಲ್ಲದೇ ಇದಕ್ಕಾಗಿ ಕ್ರಿಪ್ಟೊ ಕರೆನ್ಸಿ ಮೂಲಕ ಶಾರೀಕ್‌ ಹಣ ಸಹ ವರ್ಗಾಯಿಸಿಕೊಂಡಿದ್ದನಂತೆ.. 2 ಲಕ್ಷ 68 ಸಾವಿರ ಹಣವನ್ನ ಕ್ರಿಪ್ಟೋ ಕರೆನ್ಸಿ ಮೂಲಕ ಕಳಿಸಿಕೊಂಡಿದ್ದ ಶಾರಿಕ್, ಈ ಹಣದಿಂದ IED ಬಾಂಬ್ ತಯಾರಿಕೆಗೆ ಬೇಕಾಗಿದ್ದನ್ನ ಖರೀದಿ ಮಾಡಿದ್ದ.. ಮೈಸೂರು, ಕೇರಳ, ತಮಿಳುನಾಡುನಲ್ಲೂ ಬಾಂ*ಬ್ ಇಡಲು ಉಗ್ರರು ಪ್ಲಾನ್ ಮಾಡಿದ್ರಂತೆ.

ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್​ಬಾಸ್​ ಸ್ಪರ್ಧಿ ರಜತ್​ ಕಿಶನ್

ಅದಕ್ಕೂ ಮುನ್ನ ಧರ್ಮಸ್ಥಳ ದೇಗುಲ ಬಳಿ ಬ್ಲಾಸ್ಟ್‌ಗೆ ಪ್ಲಾನ್ ಮಾಡಲಾಗಿತ್ತು.. ಈ ಪ್ರಕರಣದ ಪ್ರಮುಖ ಆರೋಪಿ ಮಾಜ್ ಮುನೀರ್ ಪ್ಲಾನ್ ಸದ್ಯ​ ಇ.ಡಿ ವಿಚಾರಣೆ ವೇಳೆ ಬಯಲಾಗಿದೆ.​ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸೈಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂಪಾಯಿ ಹಣವನ್ನ ಸದ್ಯ ಇ.ಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಒಟ್ನಲ್ಲಿ ಕುಕ್ಕರ್​ ಬಾಂ*ಬ್​ ಕೃತ್ಯದ ಕ್ರಿಮಿಗಳು ಧರ್ಮಸ್ಥಳ ದೇವಸ್ಥಾನದ ಬಳಿ ಬ್ಲಾಸ್ಟ್​ಗೆ ಪ್ಲಾನ್​ ಮಾಡಿದ್ರೂ ಅನ್ನೋ ಸತ್ಯ ನಿಜಕ್ಕೂ ರಾಜ್ಯವನ್ನ ಬೆಚ್ಚಿ ಬೇಳಿಸಿದೆ.. ಇನ್ನೂ ಈ ಕ್ರಿಮಿಗಳಿಂದ ಅದ್ಯಾವ ಸತ್ಯವನ್ನ ಇ.ಡಿ ಅಧಿಕಾರಿಗಳು ಬಾಯ್ಬಿಡಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್​ಐಟಿ ಪ್ಲಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mangalore cooker blast
Advertisment