ಕೋಟ್ಯಾಂತರ ಭಾರತೀಯರ ಕನಸು ನನಸು ಮಾಡಿದ ಕ್ರಿಕೆಟಿಗ
ನಗುಮುಖದ ಒಡೆಯ ಕಪಿಲ್ ದೇವ್ ಕಣ್ಣೀರು ಹಾಕಿದ್ದು ಯಾಕೆ?
ಮೊದಲು ವಿಶ್ವಕಪ್ಗೆ ಮುತ್ತಿಕ್ಕಿದ ಕಪಿಲ್ ದೇವ್ಗೆ ಏನಾಗಿತ್ತು?
ಮೊದಲ ಬಾರಿ ಭಾರತದ ಮುಡಿಗೆ ವಿಶ್ವಕಪ್ ಕಿರೀಟ ತೊಡಿಸಿದ ಕಪಿಲ್ ದೇವ್, ಭಾರತೀಯರ ಹೆಮ್ಮೆ. ದಿಗ್ಗಜ ಕಪಿಲ್ ದೇವ್ ಎಂದಾಕ್ಷಣ ಸದಾ ಮಂದಹಾಸ ಬೀರುವ ಮುಖ ಕಣ್ಣೆದುರು ಬರುತ್ತೆ. ಆದ್ರೆ, ಈ ನಗುಮುಖದ ಒಡೆಯ ಕಪಿಲ್ ಹಿಂದೊಮ್ಮೆ ಬಿಕ್ಕಿ.. ಬಿಕ್ಕಿ ಅತ್ತಿದ್ರು. ಕಪಿಲ್ ಕಣ್ಣೀರಿಗೆ ಕಾರಣ ಏನು ಅನ್ನೋದೇ ಇವತ್ತಿನ ಸಖತ್ ಸ್ಟೋರಿ.
ಕಪಿಲ್ ದೇವ್.. ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸನ್ನ ನನಸು ಮಾಡಿದ ಕಣ್ಮಣಿ. 1983ರಲ್ಲಿ ವಿಶ್ವದ ಯಾವ ರಾಷ್ಟ್ರ ಕೂಡ ಭಾರತ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ ಎಂದು ಊಹಿಸಿರಲಿಲ್ಲ. ಭಾರತೀಯ ಅಭಿಮಾನಿಗಳು ಕೂಡ ಇಂಥಾ ಚಮತ್ಕಾರ ಆಗುತ್ತೆ ಎಂದುಕೊಂಡಿರಲಿಲ್ಲ. ಆಂಗ್ಲರ ನಾಡಿಗೆ ಹಾರಿದ್ದ ಟೀಮ್ ಇಂಡಿಯಾ ಆಟಗಾರರಲ್ಲೂ ಆ ಕಾನ್ಫಿಡೆನ್ಸ್ ಇರಲಿಲ್ಲ. ಆದ್ರೆ, ತಂಡದ ನಾಯಕ ಕಪಿಲ್ ದೇವ್ ಕಣ್ಣು ಮಾತ್ರ ಟ್ರೋಫಿಯ ಮೇಲಿತ್ತು. ಗೆಲುವಿಗೆ ಪಣ ತೊಟ್ಟಿದ್ದ ಕಪಿಲ್, ಟ್ರೋಫಿಯನ್ನ ಎತ್ತಿ ಹಿಡಿಯುವವರೆಗೂ ಹೋರಾಟ ನಡೆಸಿದ್ದರು.
ಟೀಮ್ ಇಂಡಿಯಾದ ಕೋಚ್ ಆಗಿದ್ದ ಕಪಿಲ್ ದೇವ್..!
ಬಲಾಢ್ಯ ವಿಂಡೀಸ್ ಪಡೆಯನ್ನ ಮಣಿಸಿ ಲಾರ್ಡ್ಸ್ ಅಂಗಳದಲ್ಲಿ ಭಾರತ ಟ್ರೋಫಿ ಗೆದ್ದ ಕ್ಷಣವನ್ನ ಯಾರೂ ಮರೆಯಲು ಸಾಧ್ಯವೇ ಇಲ್ಲ. ಅಂತಾ ಅವಿಸ್ಮರಣೀಯ ಗೆಲುವನ್ನ ದಕ್ಕಿಸಿಕೊಟ್ಟ ಕ್ಯಾಪ್ಟನ್ ಕಪಿಲ್ ದೇವ್, ಹಿಂದೊಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ರು. 1999ರಲ್ಲಿ ಕಪಿಲ್ ದೇವ್ ಟೀಮ್ ಇಂಡಿಯಾದ ಕೋಚ್ ಹುದ್ದೆಗೇರಿದ್ರು. ಈ ವೇಳೆ ಬರಸಿಡಿಲಿನಂತೆ ಆರೋಪವೊಂದು ಕಪಿಲ್ ದೇವ್ ವಿರುದ್ಧ ಕೇಳಿ ಬಂದಿತ್ತು.
1994ರಲ್ಲಿ ಶ್ರೀಲಂಕಾದಲ್ಲಿ ನಡೆದ ಸರಣಿ ವೇಳೆ ಕಪಿಲ್, ನನಗೆ ಲಂಚ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ರು ಅನ್ನೋ ಬಲವಾದ ಆರೋಪವನ್ನ ಮನೋಜ್ ಪ್ರಭಾಕರ್ ಮಾಡಿದರು. ಇದರಿಂದ ನೊಂದ ಕಪಿಲ್ ದೇವ್, ಸಂದರ್ಶನವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಕೊನೆಗೆ ಕೋಚ್ ಹುದ್ದೆಗೂ ಗುಡ್ ಬೈ ಹೇಳಿದರು. ಯಾವ ಕಪಿಲ್ದೇವ್ ವಿಶ್ವಕಪ್ ಗೆದ್ದು ಮುಖದಲ್ಲಿ ಮಂದಹಾಸ ಮೂಡಿಸಿದ್ರೋ ಅದೇ ಕಪಿಲ್ ದೇವ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಇಂದಿಗೂ ಅದು ಅಭಿಮಾನಿಗಳನ್ನ ಕಾಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೋಟ್ಯಾಂತರ ಭಾರತೀಯರ ಕನಸು ನನಸು ಮಾಡಿದ ಕ್ರಿಕೆಟಿಗ
ನಗುಮುಖದ ಒಡೆಯ ಕಪಿಲ್ ದೇವ್ ಕಣ್ಣೀರು ಹಾಕಿದ್ದು ಯಾಕೆ?
ಮೊದಲು ವಿಶ್ವಕಪ್ಗೆ ಮುತ್ತಿಕ್ಕಿದ ಕಪಿಲ್ ದೇವ್ಗೆ ಏನಾಗಿತ್ತು?
ಮೊದಲ ಬಾರಿ ಭಾರತದ ಮುಡಿಗೆ ವಿಶ್ವಕಪ್ ಕಿರೀಟ ತೊಡಿಸಿದ ಕಪಿಲ್ ದೇವ್, ಭಾರತೀಯರ ಹೆಮ್ಮೆ. ದಿಗ್ಗಜ ಕಪಿಲ್ ದೇವ್ ಎಂದಾಕ್ಷಣ ಸದಾ ಮಂದಹಾಸ ಬೀರುವ ಮುಖ ಕಣ್ಣೆದುರು ಬರುತ್ತೆ. ಆದ್ರೆ, ಈ ನಗುಮುಖದ ಒಡೆಯ ಕಪಿಲ್ ಹಿಂದೊಮ್ಮೆ ಬಿಕ್ಕಿ.. ಬಿಕ್ಕಿ ಅತ್ತಿದ್ರು. ಕಪಿಲ್ ಕಣ್ಣೀರಿಗೆ ಕಾರಣ ಏನು ಅನ್ನೋದೇ ಇವತ್ತಿನ ಸಖತ್ ಸ್ಟೋರಿ.
ಕಪಿಲ್ ದೇವ್.. ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸನ್ನ ನನಸು ಮಾಡಿದ ಕಣ್ಮಣಿ. 1983ರಲ್ಲಿ ವಿಶ್ವದ ಯಾವ ರಾಷ್ಟ್ರ ಕೂಡ ಭಾರತ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ ಎಂದು ಊಹಿಸಿರಲಿಲ್ಲ. ಭಾರತೀಯ ಅಭಿಮಾನಿಗಳು ಕೂಡ ಇಂಥಾ ಚಮತ್ಕಾರ ಆಗುತ್ತೆ ಎಂದುಕೊಂಡಿರಲಿಲ್ಲ. ಆಂಗ್ಲರ ನಾಡಿಗೆ ಹಾರಿದ್ದ ಟೀಮ್ ಇಂಡಿಯಾ ಆಟಗಾರರಲ್ಲೂ ಆ ಕಾನ್ಫಿಡೆನ್ಸ್ ಇರಲಿಲ್ಲ. ಆದ್ರೆ, ತಂಡದ ನಾಯಕ ಕಪಿಲ್ ದೇವ್ ಕಣ್ಣು ಮಾತ್ರ ಟ್ರೋಫಿಯ ಮೇಲಿತ್ತು. ಗೆಲುವಿಗೆ ಪಣ ತೊಟ್ಟಿದ್ದ ಕಪಿಲ್, ಟ್ರೋಫಿಯನ್ನ ಎತ್ತಿ ಹಿಡಿಯುವವರೆಗೂ ಹೋರಾಟ ನಡೆಸಿದ್ದರು.
ಟೀಮ್ ಇಂಡಿಯಾದ ಕೋಚ್ ಆಗಿದ್ದ ಕಪಿಲ್ ದೇವ್..!
ಬಲಾಢ್ಯ ವಿಂಡೀಸ್ ಪಡೆಯನ್ನ ಮಣಿಸಿ ಲಾರ್ಡ್ಸ್ ಅಂಗಳದಲ್ಲಿ ಭಾರತ ಟ್ರೋಫಿ ಗೆದ್ದ ಕ್ಷಣವನ್ನ ಯಾರೂ ಮರೆಯಲು ಸಾಧ್ಯವೇ ಇಲ್ಲ. ಅಂತಾ ಅವಿಸ್ಮರಣೀಯ ಗೆಲುವನ್ನ ದಕ್ಕಿಸಿಕೊಟ್ಟ ಕ್ಯಾಪ್ಟನ್ ಕಪಿಲ್ ದೇವ್, ಹಿಂದೊಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ರು. 1999ರಲ್ಲಿ ಕಪಿಲ್ ದೇವ್ ಟೀಮ್ ಇಂಡಿಯಾದ ಕೋಚ್ ಹುದ್ದೆಗೇರಿದ್ರು. ಈ ವೇಳೆ ಬರಸಿಡಿಲಿನಂತೆ ಆರೋಪವೊಂದು ಕಪಿಲ್ ದೇವ್ ವಿರುದ್ಧ ಕೇಳಿ ಬಂದಿತ್ತು.
1994ರಲ್ಲಿ ಶ್ರೀಲಂಕಾದಲ್ಲಿ ನಡೆದ ಸರಣಿ ವೇಳೆ ಕಪಿಲ್, ನನಗೆ ಲಂಚ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ರು ಅನ್ನೋ ಬಲವಾದ ಆರೋಪವನ್ನ ಮನೋಜ್ ಪ್ರಭಾಕರ್ ಮಾಡಿದರು. ಇದರಿಂದ ನೊಂದ ಕಪಿಲ್ ದೇವ್, ಸಂದರ್ಶನವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಕೊನೆಗೆ ಕೋಚ್ ಹುದ್ದೆಗೂ ಗುಡ್ ಬೈ ಹೇಳಿದರು. ಯಾವ ಕಪಿಲ್ದೇವ್ ವಿಶ್ವಕಪ್ ಗೆದ್ದು ಮುಖದಲ್ಲಿ ಮಂದಹಾಸ ಮೂಡಿಸಿದ್ರೋ ಅದೇ ಕಪಿಲ್ ದೇವ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಇಂದಿಗೂ ಅದು ಅಭಿಮಾನಿಗಳನ್ನ ಕಾಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ