ಕಪ್ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್ಗೆ ತೀವ್ರ ನಿರಾಸೆ
ಹ್ಯಾಟ್ರಿಕ್ ಸೋಲು ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣ
ಬೆಂಗಳೂರು ಟೀಮ್ ಎದುರಿರೋ ಆ ಮೂರು ಚಾಲೆಂಜ್ಗಳೇನು?
ಸತತ 2 ಪಂದ್ಯ ಗೆದ್ದ ಹುರುಪಿನಲ್ಲಿರೋ ಆರ್ಸಿಬಿ ಮುಂದೆ ಇದೀಗ ಬಿಗ್ ಚಾಲೆಂಜ್ ಎದುರಾಗಿದೆ. ಈಗಾಗಲೇ ಹೋಮ್ಗ್ರೌಂಡ್ನಲ್ಲಿ ಹ್ಯಾಟ್ರಿಕ್ ಸೋಲುಂಡು ಆರ್ಸಿಬಿ ಅವಮಾನಕ್ಕೆ ಒಳಗಾಗಿದೆ. ಫ್ಯಾನ್ಸ್ ನಿರಾಶರಾಗಿದ್ದಾರೆ. ಮುಂದಿನ 3 ಪಂದ್ಯಗಳಲ್ಲಿ ಆ ನಿರಾಸೆಗೆ ಬ್ರೇಕ್ ಹಾಕಲು ಚಿನ್ನಸ್ವಾಮಿಯ ಚಿನ್ನ ಪಣ ತೊಟ್ಟಿದ್ದಾರೆ. ಅಭಿಮಾನಿಗಳಿಗಾಗಿ ಕಿಂಗ್ ಕೊಹ್ಲಿ ಶಪಥಗೈದಿದ್ದಾರೆ.
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಫ್ಲೇ ಆಫ್ಗೆ ಎಂಟ್ರಿ ಕೊಡುತ್ತೋ, ಇಲ್ವಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಉಳಿದ ಪಂದ್ಯಗಳನ್ನ ಗೆದ್ರೂ ಕೂಡ ಪ್ಲೇ ಆಫ್ ಡೋರ್ ಓಪನ್ ಆಗಬೇಕಂದ್ರೆ, ಅದೃಷ್ಟ ಕೈ ಹಿಡಿಯಬೇಕಿದೆ. ಇಡೀ ಆರ್ಸಿಬಿ ಕ್ಯಾಂಪ್ ಸದ್ಯ ಅದೃಷ್ಟದ ಹುಡಕಾಟದಲ್ಲಿದೆ.
ಇದನ್ನೂ ಓದಿ: ಕರೆಂಟ್ ಕಂಬಕ್ಕೆ ಕ್ರೂಸರ್ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ
ಹೋಮ್ಗ್ರೌಂಡ್ನಲ್ಲಿ ಹ್ಯಾಟ್ರಿಕ್ ಮುಖಭಂಗ.!
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಟೀಮ್ ಹೋಮ್ಗ್ರೌಂಡ್ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿದೆ. ಕಪ್ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಈ ಸೀಸನ್ನಲ್ಲಿ ಆಡಿದ ಮೊದಲ ಪಂದ್ಯ ಗೆದ್ದಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್ ಸೋಲಿನ ಮುಖಭಂಗ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
ಅಭಿಮಾನಿಗಳಿಗಾಗಿ ಪಣ ತೊಟ್ಟ ಕಿಂಗ್ ಕೊಹ್ಲಿ.!
ಹೈದ್ರಾಬಾದ್ ಬಳಿಕ ಗುಜರಾತ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್, ಬೆಂಗಳೂರಿಗೆ ವಾಪಾಸ್ಸಾಗಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ, ಮುಂದಿನ 3 ಪಂದ್ಯಗಳನ್ನ ಆಡಲಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ತಂಡ ಅಭ್ಯಾಸವನ್ನೂ ಆರಂಭಿಸಿದೆ. ಇದ್ರ ನಡುವೆ ಚಿನ್ನಸ್ವಾಮಿ ಚಿನ್ನ ಕಿಂಗ್ ಕೊಹ್ಲಿ ಫ್ಯಾನ್ಸ್ಗಾಗಿ ಶಪಥಗೈದಿದ್ದಾರೆ. ಹ್ಯಾಟ್ರಿಕ್ ಸೋಲಿನ ನಿರಾಸೆ ಅನುಭವಿಸಿರೋ ಲಾಯಲ್ ಫ್ಯಾನ್ಸ್ ಬೇಸರಕ್ಕೆ ಬ್ರೇಕ್ ಹಾಕಲು ಕಿಂಗ್ ಕೊಹ್ಲಿ ಮುಂದಾಗಿದ್ದಾರೆ.
ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್ ಕಟ್ಟೋ ಹಠ..!
ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಹೀನಾಯ ಪರ್ಫಾಮೆನ್ಸ್ ನೀಡಿದ್ದಾಗಿದೆ. ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್, ಸನ್ರೈಸರ್ಸ್ ಹೈದ್ರಾಬಾದ್ ಮೂರೂ ತಂಡಗಳ ಎದುರು ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್ ಸೋಲು ಕಂಡಿರುವ ಆರ್ಸಿಬಿ ಮುಂದೆ ಇದೀಗ ಮತ್ತೆ ಮೂರು ಸವಾಲುಗಳಿವೆ. ಆ ಸವಾಲುಗಳಲ್ಲಿ ಫ್ಯಾನ್ಸ್ಗೆ ಗೆಲುವಿನ ಗಿಫ್ಟ್ ನೀಡಲು ಕೊಹ್ಲಿ ಪಣತೊಟ್ಟಿದ್ದಾರೆ. ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ಗೆ ಬಿಗ್ ಶಾಕ್.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ
ಕೊಹ್ಲಿ ಏನೋ ಅಭಿಮಾನಿಗಳಿಗಾಗಿ ತಂಡವನ್ನ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಆದ್ರೆ, ಅದು ಅಷ್ಟು ಸುಲಭದ ಟಾಸ್ಕ್ ಅಲ್ಲ. ಬೌಲಿಂಗ್ ವೈಫಲ್ಯ, ಬ್ಯಾಟಿಂಗ್ ಇನ್ಕನ್ಸಿಸ್ಟೆನ್ಸಿ, ಕಳಪೆ ಫೀಲ್ಡಿಂಗ್ನ ಸಮಸ್ಯೆ ಆರ್ಸಿಬಿಯನ್ನ ಕಾಡ್ತಿದೆ. ಆದ್ರೆ, ಆರ್ಸಿಬಿ ಎದುರಿಸೋ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಈ ಮೂರೂ ತಂಡಗಳು ಬಲಿಷ್ಟವಾಗಿವೆ. ಆದ್ರೂ, ಕೊಹ್ಲಿ ಸಖತ್ ಕಾನ್ಫಿಡೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ನೀಡಿರುವ ಪರ್ಫಾಮೆನ್ಸ್.!
ಬೆಂಗಳೂರಿನಲ್ಲಿ ಕೊಹ್ಲಿ ಬೊಂಬಾಟ್ ಪ್ರದರ್ಶನ
ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ 3 ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಶರಣಾಗಿದೆ. ಆದ್ರೆ, ಕಿಂಗ್ ಕೊಹ್ಲಿ ಮಾತ್ರ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್ಡಮ್ ಅನ್ನೋದನ್ನ ಪರ್ಫಾಮೆನ್ಸೇ ಸಾರಿ ಸಾರಿ ಹೇಳ್ತಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?
ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ
ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್ನಲ್ಲಿ 4 ಪಂದ್ಯವನ್ನಾಡಿರುವ ಕೊಹ್ಲಿ 74.66ರ ಸರಾಸರಿಯಲ್ಲಿ 224 ರನ್ ಸಿಡಿಸಿದ್ದಾರೆ. 23 ಬೌಂಡರಿ, 9 ಸಿಕ್ಸರ್ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್ರೇಟ್ 155.55 ಆಗಿದೆ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?
ಕೊಹ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಆದ್ರೆ, ಅದರ ಹೊರತಾಗಿಯು ಆರ್ಸಿಬಿ ಚಿನ್ನಸ್ವಾಮಿ ಅಂಗಳದಲ್ಲಿ ಸೋತಿದೆ. ಮುಂದಿನ 3 ಪಂದ್ಯಗಳಲ್ಲಿ ಕೊಹ್ಲಿ ಸಾಲಿಡ್ ಆಟವಾಡಿದ್ರೂ, ಉಳಿದ ಆಟಗಾರರು ಪರ್ಫಾಮ್ ಮಾಡಬೇಕಿದೆ. ಇಲ್ಲದಿದ್ರೆ, ಅಭಿಮಾನಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯೇ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕಪ್ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್ಗೆ ತೀವ್ರ ನಿರಾಸೆ
ಹ್ಯಾಟ್ರಿಕ್ ಸೋಲು ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣ
ಬೆಂಗಳೂರು ಟೀಮ್ ಎದುರಿರೋ ಆ ಮೂರು ಚಾಲೆಂಜ್ಗಳೇನು?
ಸತತ 2 ಪಂದ್ಯ ಗೆದ್ದ ಹುರುಪಿನಲ್ಲಿರೋ ಆರ್ಸಿಬಿ ಮುಂದೆ ಇದೀಗ ಬಿಗ್ ಚಾಲೆಂಜ್ ಎದುರಾಗಿದೆ. ಈಗಾಗಲೇ ಹೋಮ್ಗ್ರೌಂಡ್ನಲ್ಲಿ ಹ್ಯಾಟ್ರಿಕ್ ಸೋಲುಂಡು ಆರ್ಸಿಬಿ ಅವಮಾನಕ್ಕೆ ಒಳಗಾಗಿದೆ. ಫ್ಯಾನ್ಸ್ ನಿರಾಶರಾಗಿದ್ದಾರೆ. ಮುಂದಿನ 3 ಪಂದ್ಯಗಳಲ್ಲಿ ಆ ನಿರಾಸೆಗೆ ಬ್ರೇಕ್ ಹಾಕಲು ಚಿನ್ನಸ್ವಾಮಿಯ ಚಿನ್ನ ಪಣ ತೊಟ್ಟಿದ್ದಾರೆ. ಅಭಿಮಾನಿಗಳಿಗಾಗಿ ಕಿಂಗ್ ಕೊಹ್ಲಿ ಶಪಥಗೈದಿದ್ದಾರೆ.
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಫ್ಲೇ ಆಫ್ಗೆ ಎಂಟ್ರಿ ಕೊಡುತ್ತೋ, ಇಲ್ವಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಉಳಿದ ಪಂದ್ಯಗಳನ್ನ ಗೆದ್ರೂ ಕೂಡ ಪ್ಲೇ ಆಫ್ ಡೋರ್ ಓಪನ್ ಆಗಬೇಕಂದ್ರೆ, ಅದೃಷ್ಟ ಕೈ ಹಿಡಿಯಬೇಕಿದೆ. ಇಡೀ ಆರ್ಸಿಬಿ ಕ್ಯಾಂಪ್ ಸದ್ಯ ಅದೃಷ್ಟದ ಹುಡಕಾಟದಲ್ಲಿದೆ.
ಇದನ್ನೂ ಓದಿ: ಕರೆಂಟ್ ಕಂಬಕ್ಕೆ ಕ್ರೂಸರ್ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ
ಹೋಮ್ಗ್ರೌಂಡ್ನಲ್ಲಿ ಹ್ಯಾಟ್ರಿಕ್ ಮುಖಭಂಗ.!
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಟೀಮ್ ಹೋಮ್ಗ್ರೌಂಡ್ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿದೆ. ಕಪ್ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಈ ಸೀಸನ್ನಲ್ಲಿ ಆಡಿದ ಮೊದಲ ಪಂದ್ಯ ಗೆದ್ದಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್ ಸೋಲಿನ ಮುಖಭಂಗ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
ಅಭಿಮಾನಿಗಳಿಗಾಗಿ ಪಣ ತೊಟ್ಟ ಕಿಂಗ್ ಕೊಹ್ಲಿ.!
ಹೈದ್ರಾಬಾದ್ ಬಳಿಕ ಗುಜರಾತ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್, ಬೆಂಗಳೂರಿಗೆ ವಾಪಾಸ್ಸಾಗಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ, ಮುಂದಿನ 3 ಪಂದ್ಯಗಳನ್ನ ಆಡಲಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ತಂಡ ಅಭ್ಯಾಸವನ್ನೂ ಆರಂಭಿಸಿದೆ. ಇದ್ರ ನಡುವೆ ಚಿನ್ನಸ್ವಾಮಿ ಚಿನ್ನ ಕಿಂಗ್ ಕೊಹ್ಲಿ ಫ್ಯಾನ್ಸ್ಗಾಗಿ ಶಪಥಗೈದಿದ್ದಾರೆ. ಹ್ಯಾಟ್ರಿಕ್ ಸೋಲಿನ ನಿರಾಸೆ ಅನುಭವಿಸಿರೋ ಲಾಯಲ್ ಫ್ಯಾನ್ಸ್ ಬೇಸರಕ್ಕೆ ಬ್ರೇಕ್ ಹಾಕಲು ಕಿಂಗ್ ಕೊಹ್ಲಿ ಮುಂದಾಗಿದ್ದಾರೆ.
ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್ ಕಟ್ಟೋ ಹಠ..!
ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಹೀನಾಯ ಪರ್ಫಾಮೆನ್ಸ್ ನೀಡಿದ್ದಾಗಿದೆ. ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್, ಸನ್ರೈಸರ್ಸ್ ಹೈದ್ರಾಬಾದ್ ಮೂರೂ ತಂಡಗಳ ಎದುರು ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್ ಸೋಲು ಕಂಡಿರುವ ಆರ್ಸಿಬಿ ಮುಂದೆ ಇದೀಗ ಮತ್ತೆ ಮೂರು ಸವಾಲುಗಳಿವೆ. ಆ ಸವಾಲುಗಳಲ್ಲಿ ಫ್ಯಾನ್ಸ್ಗೆ ಗೆಲುವಿನ ಗಿಫ್ಟ್ ನೀಡಲು ಕೊಹ್ಲಿ ಪಣತೊಟ್ಟಿದ್ದಾರೆ. ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ಗೆ ಬಿಗ್ ಶಾಕ್.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ
ಕೊಹ್ಲಿ ಏನೋ ಅಭಿಮಾನಿಗಳಿಗಾಗಿ ತಂಡವನ್ನ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಆದ್ರೆ, ಅದು ಅಷ್ಟು ಸುಲಭದ ಟಾಸ್ಕ್ ಅಲ್ಲ. ಬೌಲಿಂಗ್ ವೈಫಲ್ಯ, ಬ್ಯಾಟಿಂಗ್ ಇನ್ಕನ್ಸಿಸ್ಟೆನ್ಸಿ, ಕಳಪೆ ಫೀಲ್ಡಿಂಗ್ನ ಸಮಸ್ಯೆ ಆರ್ಸಿಬಿಯನ್ನ ಕಾಡ್ತಿದೆ. ಆದ್ರೆ, ಆರ್ಸಿಬಿ ಎದುರಿಸೋ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಈ ಮೂರೂ ತಂಡಗಳು ಬಲಿಷ್ಟವಾಗಿವೆ. ಆದ್ರೂ, ಕೊಹ್ಲಿ ಸಖತ್ ಕಾನ್ಫಿಡೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ನೀಡಿರುವ ಪರ್ಫಾಮೆನ್ಸ್.!
ಬೆಂಗಳೂರಿನಲ್ಲಿ ಕೊಹ್ಲಿ ಬೊಂಬಾಟ್ ಪ್ರದರ್ಶನ
ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ 3 ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಶರಣಾಗಿದೆ. ಆದ್ರೆ, ಕಿಂಗ್ ಕೊಹ್ಲಿ ಮಾತ್ರ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್ಡಮ್ ಅನ್ನೋದನ್ನ ಪರ್ಫಾಮೆನ್ಸೇ ಸಾರಿ ಸಾರಿ ಹೇಳ್ತಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?
ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ
ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್ನಲ್ಲಿ 4 ಪಂದ್ಯವನ್ನಾಡಿರುವ ಕೊಹ್ಲಿ 74.66ರ ಸರಾಸರಿಯಲ್ಲಿ 224 ರನ್ ಸಿಡಿಸಿದ್ದಾರೆ. 23 ಬೌಂಡರಿ, 9 ಸಿಕ್ಸರ್ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್ರೇಟ್ 155.55 ಆಗಿದೆ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?
ಕೊಹ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಆದ್ರೆ, ಅದರ ಹೊರತಾಗಿಯು ಆರ್ಸಿಬಿ ಚಿನ್ನಸ್ವಾಮಿ ಅಂಗಳದಲ್ಲಿ ಸೋತಿದೆ. ಮುಂದಿನ 3 ಪಂದ್ಯಗಳಲ್ಲಿ ಕೊಹ್ಲಿ ಸಾಲಿಡ್ ಆಟವಾಡಿದ್ರೂ, ಉಳಿದ ಆಟಗಾರರು ಪರ್ಫಾಮ್ ಮಾಡಬೇಕಿದೆ. ಇಲ್ಲದಿದ್ರೆ, ಅಭಿಮಾನಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯೇ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ