ರಸಮಲೈ, ಬಿರಿಯಾನಿ, ಫ್ರೈಡ್ ಚಿಕನ್ಗೆ ಯಂಗ್ ಪ್ಲೇಯರ್ ಕೊಕ್.!
ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿ ಮನೆಯೂಟ ತಿನ್ನುತ್ತಿದ್ದ ಪಂತ್
ಎನ್ಸಿಎನಲ್ಲಿ ಫಿಟ್ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್, IPLನಲ್ಲಿ ಅಬ್ಬರ
ಭೀಕರ ಕಾರು ಅಪಘಾತದಲ್ಲಿ ಸಿಲುಕಿದ ರಿಷಬ್ ಪಂತ್ರ ಕ್ರಿಕೆಟ್ ಕರಿಯರ್ ಮುಗಿದೆ ಹೋಯ್ತು ಅಂತಾ ಬಹುತೇಕರು ಫಿಕ್ಸ್ ಆಗಿದ್ರು. ಆದ್ರೆ ಎಲ್ಲರ ಊಹೆಯನ್ನ ರಿಷಬ್ ಪಂತ್ ಸುಳ್ಳಾಗಿಸಿದ್ದಾರೆ. ಅಷ್ಟಕ್ಕೂ ಈ ಪಂತ್ ಸಾವನ್ನ ಗೆದ್ದು ಬಂದಿದ್ದೇಗೆ.? ಆಕ್ಸಿಡೆಂಟ್ ಬಳಿಕ ಪಂತ್ ಲೈಫ್ ಎಷ್ಟು ಬದಲಾಗಿದೆ?. ಫೈಟರ್ ಪಂತ್ರ ಕಮ್ಬ್ಯಾಕ್ ಆಗಿದ್ದೇಗೆ?.
ಡಿಸೆಂಬರ್ 30, 2022… ಇಡೀ ಕ್ರಿಕೆಟ್ ಲೋಕಕ್ಕೆ ಶಾಕ್ ಕೊಟ್ಟ ದಿನ ಇದು. ಬೆಳ್ಳಬೆಳಂಗ್ಗೆ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಟೀಮ್ ಇಂಡಿಯಾ ಡೈನಾಮಿಕ್ ಬ್ಯಾಟ್ಸ್ಮನ್ ರಿಷಬ್ ಪಂತ್ರ ಕಾರು ಧಗಧನೇ ಉರೀತಾ ಇತ್ತು. ಸದಾ ನಗುವೇ ತುಂಬಿರ್ತಾ ಇದ್ದ ಪಂತ್ ಮುಖ ಸಂಪೂರ್ಣ ರಕ್ತಸಿಕ್ತವಾಗಿತ್ತು.
ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ
ಇದನ್ನೂ ಓದಿ: ಸಲ್ಮಾನ್ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?
ಅಂದು ಭೀಕರ ಅಫಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್ ಆದ ಪಂತ್, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್ ಅಖಾಡಕ್ಕೆ ಮರಳಿರುವ ಪಂತ್, ಬ್ಯಾಟ್ ಹಿಡಿದು ಘರ್ಜಿಸ್ತಾ ಇದ್ದಾರೆ. ವಿಕೆಟ್ ಹಿಂದೆಯೂ ಕೂಡ ಮ್ಯಾಜಿಕ್ ಮಾಡ್ತಿದ್ದಾರೆ. ತಮ್ಮ ಸಾಲಿಡ್ ಪರ್ಫಾಮೆನ್ಸ್ನಿಂದ ಗಮನ ಸೆಳೆದಿರೋ ಪಂತ್, ಮುಂಬರೋ ಟಿ20 ವಿಶ್ವಕಪ್ ತಂಡಕ್ಕೂ ರಾಯಲ್ ಎಂಟ್ರಿ ಕೊಟ್ಟಿದ್ದಾರೆ.
ಕಮ್ಬ್ಯಾಕ್ ಮಾಡಲು ರಿಷಭ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ.!
ಆ್ಯಕ್ಸಿಡೆಂಟ್ ಆದ ದಿನವೇ ಅದೆಷ್ಟೋ ಜನ ಪಂತ್ ಕರಿಯರ್ ಖತಃ ಎಂದು ಭವಿಷ್ಯ ನುಡಿದಿದ್ರು. ಆದ್ರೆ, ಎಲ್ಲರ ಭವಿಷ್ಯವನ್ನ ಸುಳ್ಳಾಗಿಸಿದ ಪಂತ್ ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಆಕ್ಸಿಡೆಂಟ್ಗೂ ಮುನ್ನ ತನ್ನ ದೇಹದ ತೂಕದ ಕಾರಣಕ್ಕೆ ಸಿಕ್ಕಾಪಟ್ಟೆ ಟೀಕೆಗೊಳಗಾಗಿದ್ರು. ಫಿಟ್ನೆಸ್ ಅನ್ನ ಹಲವರು ಪ್ರಶ್ನೆ ಮಾಡಿದ್ರು. ಅಂದು ಟೀಕಿಸಿದವರೆಲ್ಲರೂ ಇಂದಿನ ಪಂತ್ ನೋಡಿ ಶಾಕ್ ಆಗಿದ್ದಾರೆ. ಫ್ಯಾಟಿ ಪಂತ್ ಇದೀಗ ಫುಲ್ ಸ್ಲಿಮ್ & ಟ್ರಿಮ್ ಆಗಿದ್ದಾರೆ.
13+9 = 22.. ಬರೋಬ್ಬರಿ 22KG ತೂಕ ಇಳಿಸಿಕೊಂಡ ಪಂತ್..!
ಅಚ್ಚರಿ ಅನ್ನಿಸಿದ್ರು ಇದನ್ನ ನಂಬಲೇ ಬೇಕು. ಅಫಘಾತದಿಂದ ಚೇತರಿಸಿಕೊಳ್ತಾ ಇದ್ದ ವೇಳೆ ಪಂತ್ ದೇಹಕ್ಕೆ ದಿನವೊಂದಕ್ಕೆ ಕನಿಷ್ಟ 1400 ಕ್ಯಾಲೊರಿಯ ಫುಡ್ ಬೇಕಿತ್ತಂತೆ. ಕಾಲಿನ ಮೇಜರ್ ಸರ್ಜರಿಗೆ ಒಳಗಾಗಿದ್ದರಿಂದ, ಮಸಲ್ ಬ್ಯುಲ್ಡ್ ಮಾಡಬೇಕಾದ ಸವಾಲಿತ್ತು. ಆದ್ರೆ, ಆ ಸಮಯದಲ್ಲಿ ಕಠಿಣ ನಿರ್ಧಾರ ಕೈಗೊಂಡ ಪಂತ್, ಕೇವಲ 1,000 ಕ್ಯಾಲೋರಿಯಷ್ಟು ಪ್ರಮಾಣದಲ್ಲಿ ಮಾತ್ರ ಫುಡ್ ಸೇವಿಸ್ತಿದ್ರಂತೆ. ಇದ್ರ ಪರಿಣಾಮವೇ ಐಪಿಎಲ್ಗೂ ಮುನ್ನ 13 ಕೆಜಿ, ಇದೀಗ ಐಪಿಎಲ್ ನಡುವೆ 9 ಕೆಜಿ ಒಟ್ಟಾರೆ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ತೂಕ ಇಳಿಸಿಕೊಂಡಿದ್ರ ಹಿಂದಿದೆ ಆಲಿವ್ ಎಣ್ಣೆಯ ಸೀಕ್ರೆಟ್.!
ಆಕ್ಸಿಡೆಂಟ್ಗೂ ಮುನ್ನ ಪಂತ್ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ನೀಡ್ತಾ ಇರಲಿಲ್ಲ. ಆದ್ರೆ, ಚೇತರಿಕೆಯ ಹಂತದಲ್ಲಿ ಕಟ್ಟು ನಿಟ್ಟಿನ ಡಯಟ್ ಪಾಲಿಸಿದ್ರು. ಅತಿ ಹೆಚ್ಚು ಇಷ್ಟ ಪಡ್ತಿದ್ದ ರಸಮಲೈ, ಬಿರಿಯಾನಿ, ಫ್ರೈಡ್ ಚಿಕನ್ ಅನ್ನ ಆ ಬಳಿಕ ತಿಂದೇ ಇಲ್ವಂತೆ. ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದ ವೇಳೆ ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿದ್ದ ಪಂತ್, ಮನೆಯೂಟವನ್ನೇ ಮಾಡ್ತಿದ್ರು. ತೂಕ ಇಳಿಸಿಕೊಳ್ಳೋ ಗುರಿ ಇಟ್ಟುಕೊಂಡಿದ್ದ ಪಂತ್, ಪ್ರತಿ ಅಡಿಗೆಯಲ್ಲೂ 5ML ಹೆಚ್ಚೇ OLIVE OIL ಬಳಸ್ತಿದ್ರು. ಪ್ರೋಟಿನ್ಗಾಗಿ ಚಿಲ್ಲಿ ಚಿಕನ್ ತಿಂತಿದ್ದ ಪಂತ್, ಅದಕ್ಕೂ ಹೆಚ್ಚಿನ OLIVE OIL ಬಳಸ್ತಿದ್ರು.
ನಿದ್ದೆಯಲ್ಲೂ ನೋ ಕಾಂಪ್ರಮೈಸ್ ಎಂದಿದ್ದ ಪಂತ್.!
ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದ ವೇಳೆ ಊಟ -ತಿಂಡಿ ವಿಚಾರದಲ್ಲಿ ಮಾತ್ರವಲ್ಲ.. ನಿದ್ದೆಯ ವಿಚಾರದಲ್ಲೂ ಪಂತ್ ನೋ ಕಾಂಪ್ರಮೈಸ್ ಎಂದಿದ್ರು. ಮೊಬೈಲ್, ಟಿವಿ, ಐಪ್ಯಾಡ್ ಎಲ್ಲವನ್ನೂ ಬದಿಗಿರಿಸಿ ರಾತ್ರಿ ಸರಿಯಾಗಿ 11 ಗಂಟೆಗೆ ಮಲಗಿ ಬಿಡ್ತಿದ್ರು. 8 ರಿಂದ 9 ಗಂಟೆಗಳ ಕಾಲ UNINTERRUPTED ನಿದ್ದೆ ಮಾಡ್ತಿದ್ರು. ದೇಹಕ್ಕೆ ನೀಡ್ತಾ ಇದ್ದ ಈ ವಿಶ್ರಾಂತಿ ಕೂಡ ಬಹುಬೇಗ ಚೇತರಿಸಿಕೊಳ್ಳಲು ಸಹಾಯ ಮಾಡ್ತು ಅನ್ನೋದು ಎನ್ಸಿಎ ಡಾಕ್ಟರ್ಸ್ ಹೇಳೋ ಮಾತಾಗಿದೆ.
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ಗೆ ಬಿಗ್ ಶಾಕ್.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ
ಬಹುತೇಕ ಫಿಟ್ ಆದ ಬಳಿಕ ಅಭ್ಯಾಸದ ಅಖಾಡಕ್ಕೆ ಎಂಟ್ರಿ.!
ಕಟ್ಟು ನಿಟ್ಟಿನ ಡಯಟ್ನಿಂದಾಗಿ ವೇಗವಾಗಿ ಚೇತರಿಸಿಕೊಂಡ ಪಂತ್, ಬಹುತೇಕ ಫಿಟ್ ಆದ ಬೆನ್ನಲ್ಲೇ ಅಭ್ಯಾಸ ಕಣಕ್ಕೆ ಧುಮುಕಿದ್ರು. ಫಿಟ್ನೆಸ್ ಸಾಧಿಸುವ ಹಂತದಲ್ಲಿ ದಿನಕ್ಕೆ 2ವರೆ ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ರು. ಬಳಿಕ ಹತ್ತಿರವಾದ ಸಂದರ್ಭದಲ್ಲಿ 45 ನಿಮಿಷಗಳ ಕಾಲ ಕೀಪಿಂಗ್ ಅಭ್ಯಾಸವನ್ನೂ ನಡೆಸಿದ್ರು. ಬಳಿಕ ಎನ್ಸಿಎನಲ್ಲಿ ಫಿಟ್ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್, ಇದೀಗ ಐಪಿಎಲ್ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ.
ಇದನ್ನೂ ಓದಿ: ಕರೆಂಟ್ ಕಂಬಕ್ಕೆ ಕ್ರೂಸರ್ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ
ಮೊದಲು ಪಂತ್ ಆನ್ಫೀಲ್ಡ್ನಲ್ಲಿ ಕೆಚ್ಚೆದೆಯ ಹೋರಾಟವನ್ನ ಇಡೀ ಕ್ರಿಕೆಟ್ ಲೋಕವೇ ನೋಡಿತ್ತು. ಇದೀಗ ಸಾವಿನ ವಿರುದ್ಧ ಸಮರ ಸಾರಿ ಗೆದ್ದು ಪಂತ್ರನ್ನ ನೋಡಿದ್ದಾಗಿದೆ. ಸಾವನ್ನೇ ಗೆದ್ದು ಬಂದಿರೋ ಪಂತ್ರ ಸೆಕೆಂಡ್ ಇನ್ನಿಂಗ್ಸ್ ಅದ್ಭುತವಾಗಿರಲಿ. ಆನ್ & ಆಫ್ ಫೀಲ್ಡ್ನಲ್ಲಿ ಅಭಿಮಾನಿಗಳನ್ನ ರಂಜಿಸಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ರಸಮಲೈ, ಬಿರಿಯಾನಿ, ಫ್ರೈಡ್ ಚಿಕನ್ಗೆ ಯಂಗ್ ಪ್ಲೇಯರ್ ಕೊಕ್.!
ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿ ಮನೆಯೂಟ ತಿನ್ನುತ್ತಿದ್ದ ಪಂತ್
ಎನ್ಸಿಎನಲ್ಲಿ ಫಿಟ್ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್, IPLನಲ್ಲಿ ಅಬ್ಬರ
ಭೀಕರ ಕಾರು ಅಪಘಾತದಲ್ಲಿ ಸಿಲುಕಿದ ರಿಷಬ್ ಪಂತ್ರ ಕ್ರಿಕೆಟ್ ಕರಿಯರ್ ಮುಗಿದೆ ಹೋಯ್ತು ಅಂತಾ ಬಹುತೇಕರು ಫಿಕ್ಸ್ ಆಗಿದ್ರು. ಆದ್ರೆ ಎಲ್ಲರ ಊಹೆಯನ್ನ ರಿಷಬ್ ಪಂತ್ ಸುಳ್ಳಾಗಿಸಿದ್ದಾರೆ. ಅಷ್ಟಕ್ಕೂ ಈ ಪಂತ್ ಸಾವನ್ನ ಗೆದ್ದು ಬಂದಿದ್ದೇಗೆ.? ಆಕ್ಸಿಡೆಂಟ್ ಬಳಿಕ ಪಂತ್ ಲೈಫ್ ಎಷ್ಟು ಬದಲಾಗಿದೆ?. ಫೈಟರ್ ಪಂತ್ರ ಕಮ್ಬ್ಯಾಕ್ ಆಗಿದ್ದೇಗೆ?.
ಡಿಸೆಂಬರ್ 30, 2022… ಇಡೀ ಕ್ರಿಕೆಟ್ ಲೋಕಕ್ಕೆ ಶಾಕ್ ಕೊಟ್ಟ ದಿನ ಇದು. ಬೆಳ್ಳಬೆಳಂಗ್ಗೆ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಟೀಮ್ ಇಂಡಿಯಾ ಡೈನಾಮಿಕ್ ಬ್ಯಾಟ್ಸ್ಮನ್ ರಿಷಬ್ ಪಂತ್ರ ಕಾರು ಧಗಧನೇ ಉರೀತಾ ಇತ್ತು. ಸದಾ ನಗುವೇ ತುಂಬಿರ್ತಾ ಇದ್ದ ಪಂತ್ ಮುಖ ಸಂಪೂರ್ಣ ರಕ್ತಸಿಕ್ತವಾಗಿತ್ತು.
ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ
ಇದನ್ನೂ ಓದಿ: ಸಲ್ಮಾನ್ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?
ಅಂದು ಭೀಕರ ಅಫಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್ ಆದ ಪಂತ್, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್ ಅಖಾಡಕ್ಕೆ ಮರಳಿರುವ ಪಂತ್, ಬ್ಯಾಟ್ ಹಿಡಿದು ಘರ್ಜಿಸ್ತಾ ಇದ್ದಾರೆ. ವಿಕೆಟ್ ಹಿಂದೆಯೂ ಕೂಡ ಮ್ಯಾಜಿಕ್ ಮಾಡ್ತಿದ್ದಾರೆ. ತಮ್ಮ ಸಾಲಿಡ್ ಪರ್ಫಾಮೆನ್ಸ್ನಿಂದ ಗಮನ ಸೆಳೆದಿರೋ ಪಂತ್, ಮುಂಬರೋ ಟಿ20 ವಿಶ್ವಕಪ್ ತಂಡಕ್ಕೂ ರಾಯಲ್ ಎಂಟ್ರಿ ಕೊಟ್ಟಿದ್ದಾರೆ.
ಕಮ್ಬ್ಯಾಕ್ ಮಾಡಲು ರಿಷಭ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ.!
ಆ್ಯಕ್ಸಿಡೆಂಟ್ ಆದ ದಿನವೇ ಅದೆಷ್ಟೋ ಜನ ಪಂತ್ ಕರಿಯರ್ ಖತಃ ಎಂದು ಭವಿಷ್ಯ ನುಡಿದಿದ್ರು. ಆದ್ರೆ, ಎಲ್ಲರ ಭವಿಷ್ಯವನ್ನ ಸುಳ್ಳಾಗಿಸಿದ ಪಂತ್ ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಆಕ್ಸಿಡೆಂಟ್ಗೂ ಮುನ್ನ ತನ್ನ ದೇಹದ ತೂಕದ ಕಾರಣಕ್ಕೆ ಸಿಕ್ಕಾಪಟ್ಟೆ ಟೀಕೆಗೊಳಗಾಗಿದ್ರು. ಫಿಟ್ನೆಸ್ ಅನ್ನ ಹಲವರು ಪ್ರಶ್ನೆ ಮಾಡಿದ್ರು. ಅಂದು ಟೀಕಿಸಿದವರೆಲ್ಲರೂ ಇಂದಿನ ಪಂತ್ ನೋಡಿ ಶಾಕ್ ಆಗಿದ್ದಾರೆ. ಫ್ಯಾಟಿ ಪಂತ್ ಇದೀಗ ಫುಲ್ ಸ್ಲಿಮ್ & ಟ್ರಿಮ್ ಆಗಿದ್ದಾರೆ.
13+9 = 22.. ಬರೋಬ್ಬರಿ 22KG ತೂಕ ಇಳಿಸಿಕೊಂಡ ಪಂತ್..!
ಅಚ್ಚರಿ ಅನ್ನಿಸಿದ್ರು ಇದನ್ನ ನಂಬಲೇ ಬೇಕು. ಅಫಘಾತದಿಂದ ಚೇತರಿಸಿಕೊಳ್ತಾ ಇದ್ದ ವೇಳೆ ಪಂತ್ ದೇಹಕ್ಕೆ ದಿನವೊಂದಕ್ಕೆ ಕನಿಷ್ಟ 1400 ಕ್ಯಾಲೊರಿಯ ಫುಡ್ ಬೇಕಿತ್ತಂತೆ. ಕಾಲಿನ ಮೇಜರ್ ಸರ್ಜರಿಗೆ ಒಳಗಾಗಿದ್ದರಿಂದ, ಮಸಲ್ ಬ್ಯುಲ್ಡ್ ಮಾಡಬೇಕಾದ ಸವಾಲಿತ್ತು. ಆದ್ರೆ, ಆ ಸಮಯದಲ್ಲಿ ಕಠಿಣ ನಿರ್ಧಾರ ಕೈಗೊಂಡ ಪಂತ್, ಕೇವಲ 1,000 ಕ್ಯಾಲೋರಿಯಷ್ಟು ಪ್ರಮಾಣದಲ್ಲಿ ಮಾತ್ರ ಫುಡ್ ಸೇವಿಸ್ತಿದ್ರಂತೆ. ಇದ್ರ ಪರಿಣಾಮವೇ ಐಪಿಎಲ್ಗೂ ಮುನ್ನ 13 ಕೆಜಿ, ಇದೀಗ ಐಪಿಎಲ್ ನಡುವೆ 9 ಕೆಜಿ ಒಟ್ಟಾರೆ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ತೂಕ ಇಳಿಸಿಕೊಂಡಿದ್ರ ಹಿಂದಿದೆ ಆಲಿವ್ ಎಣ್ಣೆಯ ಸೀಕ್ರೆಟ್.!
ಆಕ್ಸಿಡೆಂಟ್ಗೂ ಮುನ್ನ ಪಂತ್ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ನೀಡ್ತಾ ಇರಲಿಲ್ಲ. ಆದ್ರೆ, ಚೇತರಿಕೆಯ ಹಂತದಲ್ಲಿ ಕಟ್ಟು ನಿಟ್ಟಿನ ಡಯಟ್ ಪಾಲಿಸಿದ್ರು. ಅತಿ ಹೆಚ್ಚು ಇಷ್ಟ ಪಡ್ತಿದ್ದ ರಸಮಲೈ, ಬಿರಿಯಾನಿ, ಫ್ರೈಡ್ ಚಿಕನ್ ಅನ್ನ ಆ ಬಳಿಕ ತಿಂದೇ ಇಲ್ವಂತೆ. ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದ ವೇಳೆ ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿದ್ದ ಪಂತ್, ಮನೆಯೂಟವನ್ನೇ ಮಾಡ್ತಿದ್ರು. ತೂಕ ಇಳಿಸಿಕೊಳ್ಳೋ ಗುರಿ ಇಟ್ಟುಕೊಂಡಿದ್ದ ಪಂತ್, ಪ್ರತಿ ಅಡಿಗೆಯಲ್ಲೂ 5ML ಹೆಚ್ಚೇ OLIVE OIL ಬಳಸ್ತಿದ್ರು. ಪ್ರೋಟಿನ್ಗಾಗಿ ಚಿಲ್ಲಿ ಚಿಕನ್ ತಿಂತಿದ್ದ ಪಂತ್, ಅದಕ್ಕೂ ಹೆಚ್ಚಿನ OLIVE OIL ಬಳಸ್ತಿದ್ರು.
ನಿದ್ದೆಯಲ್ಲೂ ನೋ ಕಾಂಪ್ರಮೈಸ್ ಎಂದಿದ್ದ ಪಂತ್.!
ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದ ವೇಳೆ ಊಟ -ತಿಂಡಿ ವಿಚಾರದಲ್ಲಿ ಮಾತ್ರವಲ್ಲ.. ನಿದ್ದೆಯ ವಿಚಾರದಲ್ಲೂ ಪಂತ್ ನೋ ಕಾಂಪ್ರಮೈಸ್ ಎಂದಿದ್ರು. ಮೊಬೈಲ್, ಟಿವಿ, ಐಪ್ಯಾಡ್ ಎಲ್ಲವನ್ನೂ ಬದಿಗಿರಿಸಿ ರಾತ್ರಿ ಸರಿಯಾಗಿ 11 ಗಂಟೆಗೆ ಮಲಗಿ ಬಿಡ್ತಿದ್ರು. 8 ರಿಂದ 9 ಗಂಟೆಗಳ ಕಾಲ UNINTERRUPTED ನಿದ್ದೆ ಮಾಡ್ತಿದ್ರು. ದೇಹಕ್ಕೆ ನೀಡ್ತಾ ಇದ್ದ ಈ ವಿಶ್ರಾಂತಿ ಕೂಡ ಬಹುಬೇಗ ಚೇತರಿಸಿಕೊಳ್ಳಲು ಸಹಾಯ ಮಾಡ್ತು ಅನ್ನೋದು ಎನ್ಸಿಎ ಡಾಕ್ಟರ್ಸ್ ಹೇಳೋ ಮಾತಾಗಿದೆ.
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ಗೆ ಬಿಗ್ ಶಾಕ್.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ
ಬಹುತೇಕ ಫಿಟ್ ಆದ ಬಳಿಕ ಅಭ್ಯಾಸದ ಅಖಾಡಕ್ಕೆ ಎಂಟ್ರಿ.!
ಕಟ್ಟು ನಿಟ್ಟಿನ ಡಯಟ್ನಿಂದಾಗಿ ವೇಗವಾಗಿ ಚೇತರಿಸಿಕೊಂಡ ಪಂತ್, ಬಹುತೇಕ ಫಿಟ್ ಆದ ಬೆನ್ನಲ್ಲೇ ಅಭ್ಯಾಸ ಕಣಕ್ಕೆ ಧುಮುಕಿದ್ರು. ಫಿಟ್ನೆಸ್ ಸಾಧಿಸುವ ಹಂತದಲ್ಲಿ ದಿನಕ್ಕೆ 2ವರೆ ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ರು. ಬಳಿಕ ಹತ್ತಿರವಾದ ಸಂದರ್ಭದಲ್ಲಿ 45 ನಿಮಿಷಗಳ ಕಾಲ ಕೀಪಿಂಗ್ ಅಭ್ಯಾಸವನ್ನೂ ನಡೆಸಿದ್ರು. ಬಳಿಕ ಎನ್ಸಿಎನಲ್ಲಿ ಫಿಟ್ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್, ಇದೀಗ ಐಪಿಎಲ್ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ.
ಇದನ್ನೂ ಓದಿ: ಕರೆಂಟ್ ಕಂಬಕ್ಕೆ ಕ್ರೂಸರ್ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ
ಮೊದಲು ಪಂತ್ ಆನ್ಫೀಲ್ಡ್ನಲ್ಲಿ ಕೆಚ್ಚೆದೆಯ ಹೋರಾಟವನ್ನ ಇಡೀ ಕ್ರಿಕೆಟ್ ಲೋಕವೇ ನೋಡಿತ್ತು. ಇದೀಗ ಸಾವಿನ ವಿರುದ್ಧ ಸಮರ ಸಾರಿ ಗೆದ್ದು ಪಂತ್ರನ್ನ ನೋಡಿದ್ದಾಗಿದೆ. ಸಾವನ್ನೇ ಗೆದ್ದು ಬಂದಿರೋ ಪಂತ್ರ ಸೆಕೆಂಡ್ ಇನ್ನಿಂಗ್ಸ್ ಅದ್ಭುತವಾಗಿರಲಿ. ಆನ್ & ಆಫ್ ಫೀಲ್ಡ್ನಲ್ಲಿ ಅಭಿಮಾನಿಗಳನ್ನ ರಂಜಿಸಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ