ಕನ್ನಡಿಗನಿಗೂ ನಾಯಕತ್ವದಿಂದ ನೀಡ್ತಾರಾ ಕೊಕ್..?
ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಮಾಲೀಕ ಗರಂ
ಕೆ.ಎಲ್.ರಾಹುಲ್ಗೆ ಸಂಜೀವ್ ಗೋಯೆಂಕಾ ತರಾಟೆ
ಐಪಿಎಲ್ ಹಿಸ್ಟರಿಯಲ್ಲೇ ಲಕ್ನೋ ಹೀನಾಯ ಸೋಲು ಕಂಡಿದೆ. ಈ ಹೀನಾಯ ಸೋಲಿಗೆ ಭಾರೀ ದಂಡವನ್ನೇ ತೆತ್ತಿದೆ. ಇದೇ ಸೋಲು ಲಕ್ನೋ ತಂಡದ ಮಾಲೀಕ ಹಾಗೂ ನಾಯಕ ನಡುವಿನ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ.. ಮಾಲೀಕರ ನಡೆ ಭಾರೀ ವಿವಾದಕ್ಕೂ ಕಾರಣವಾಗಿದೆ.
ಕ್ರಿಕೆಟ್.. ಜಂಟಲ್ಮನ್ ಗೇಮ್.. ಈ ಜಂಟಲ್ಮನ್ ಗೇಮ್ನಲ್ಲಿ ಸೋಲು ಹಾಗೂ ಗೆಲುವು ಕಾಮನ್. ಆದ್ರೆ, ಸೋಲು, ಗೆಲುವುಗಳನ್ನ ಸಮನಾಗಿ ಸ್ವೀಕರಿಸುವುದೇ ಆಟಗಾರನ ಲಕ್ಷಣ.. ಸೋತಾಕ್ಷಣ ಕುಗ್ಗುವುದು. ಗೆದ್ದಾಗ ಹಿಗ್ಗುವುದು ಆಟಗಾರನ ಏಳ್ಗೆಗೆ ಒಳಿತಲ್ಲ. ಆದ್ರೆ, ಒಂದೇ ಒಂದು ಹೀನಾಯ ಸೋಲು ಲಕ್ನೋ ಮಾಲೀಕನ ನಿಜಬಣ್ಣ ಬಯಲಾಗಿಸಿದೆ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!
ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 10 ವಿಕೆಟ್ಗಳ ಹೀನಾಯ ಸೋಲು ಕಾಣ್ತು. ಇದರೊಂದಿಗೆ ಲಕ್ನೋ ಪ್ಲೇ ಆಫ್ ಹಾದಿಯೂ ದುರ್ಗಮವಾಗಿದೆ. ಇದೇ ವಿಚಾರ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾರ ಪಿತ್ತ ನೆತ್ತಿಗೇರಿಸಿದೆ.
ಕೆ.ಎಲ್.ರಾಹುಲ್ಗೆ ಸಂಜೀವ್ ಗೋಯೆಂಕಾ ತರಾಟೆ
ಸನ್ ರೈಸರ್ಸ್ ಎದುರಿನ ಪಂದ್ಯ ಲಕ್ನೋ ಪಾಲಿಗೆ ಮಹತ್ವದ್ದಾಗಿತ್ತು. ಆದ್ರೆ, ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಲಕ್ನೋ, ಕನಿಷ್ಠ ಪಕ್ಷ ಪ್ರತಿರೋಧವನ್ನು ತೋರದೆ ಶರಣಾಯ್ತು. 9.4 ಓವರ್ಗಳಲ್ಲೇ ಸೋಲು ಒಪ್ಪಿಕೊಳ್ಳುವ ಮೂಲಕ ಹೀನಾಯ ದಾಖಲೆ ಬರೆಯಿತು. ಆದ್ರೆ, ಲಕ್ನೋ ತಂಡದ ಈ ಸೋಲು ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:KL ರಾಹುಲ್ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!
ಪಂದ್ಯದ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಕೆ.ಎಲ್.ರಾಹುಲ್, ಮಾಲೀಕ ಸಂಜೀವ್ ಗೋಯೆಂಕಾರನ್ನ ಭೇಟಿಯಾದರು. ಈ ವೇಳೆ ಸಾರ್ವಜನಿಕವಾಗೇ ಕೆ.ಎಲ್.ರಾಹುಲ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆನ್ಫೀಲ್ಡ್ನಲ್ಲಾದ ತಪ್ಪುಗಳ ಬಗ್ಗೆ ಕಿಡಿಕಾರಿದ್ದಾರೆ. ಕನ್ನಡಿಗನ ಮಾತನ್ನು ಕೇಳಿಸಿಕೊಳ್ಳುವ ಸಂಯಮ ತೋರದ ಗೋಯೆಂಕಾ, ಏರುಧ್ವನಿಯಲ್ಲೇ ರಾಹುಲ್ನ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೆಲ ಕಾಮೆಂಟೇಟರ್ಗಳು ಪ್ರತಿಕ್ರಿಯೆ ನೀಡಿದ್ದಾರೆ.
ಚರ್ಚೆ ಆರೋಗ್ಯಕವಾಗಿರಬೇಕು..!
ಚರ್ಚೆಗಳು ಯಾವಾಗಲೂ ಆರೋಗ್ಯಕರವಾಗಿರುತ್ತವೆ. ಆದರೆ, ಅದು ಖಾಸಗಿ ಸ್ಥಳದಲ್ಲಿ ನಡೆದರೆ ಉತ್ತಮವಾಗಿರುತ್ತೆ-ಎಸ್.ಬದ್ರಿನಾಥ್, ಮಾಜಿ ಕ್ರಿಕೆಟರ್
LSG ತೊರೆದು RCB ಸೇರುವಂತೆ ಫ್ಯಾನ್ಸ್ ಮನವಿ
ಕೆ.ಎಲ್.ರಾಹುಲ್ ಜೊತೆ ಸಂಜೀವ್ ಗೋಯೆಂಕಾ ನಡೆದುಕೊಂಡ ವರ್ತನೆ ಬಗ್ಗೆ ಫ್ಯಾನ್ಸ್ ಕಿಡಿಕಾರಿದ್ದಾರೆ. ಕ್ರಿಕೆಟ್ನ ಗಂಧಗಾಳಿಯೇ ಗೊತ್ತಿಲ್ಲದ ಗೋಯೆಂಕಾ, ತಂಡದ ಮಾಲೀಕನಾಗಲು ಅರ್ಹನಲ್ಲ ಎಂದು ಕಿಡಿಕಾರಿದ್ದಾರೆ. ನಾಯಕನ ಮೇಲೆ ಕೂಗಾಡೋದು ಸರಿಯಲ್ಲ ಎಂದಿರುವ ಅಭಿಮಾನಿಗಳು, ಡ್ರೆಸ್ಸಿಂಗ್ ರೂಮ್ನಲ್ಲಿ ಚರ್ಚಿಸಿದ್ದರೆ, ನಿಮಗೊಂದು ಘನತೆ ಇರುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ.! ಮೆಗಾ ಹರಾಜಿನ ವೇಳೆ ತಂಡವನ್ನ ತೊರೆಯುವಂತೆ ಕೆ.ಎಲ್.ರಾಹುಲ್ಗೆ ಸಲಹೆ ನೀಡಿರುವ ಫ್ಯಾನ್ಸ್, ಆರ್ಸಿಬಿಗೆ ಬರುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಧೋನಿಯಂತೆಯೇ ಆಗುತ್ತಾ ಕೆ.ಎಲ್.ರಾಹುಲ್ ಹಣೆಬರಹ..?
2016ರ ಐಪಿಎಲ್ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದ ಮಾಲೀಕರಾಗಿದ್ದ ಸಂಜಯ್ ಗೋಯೆಂಕಾ, 2017ರಲ್ಲಿ ಧೋನಿಯನ್ನ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿದ್ರು. ಇದಕ್ಕೆ ಕಾರಣ 2016ರಲ್ಲಿ ರೈಸಿಂಗ್ ಪುಣೆ ನೀಡಿದ್ದ ಪರ್ಪಾಮೆನ್ಸ್ ಆಗಿತ್ತು. 2016ರಲ್ಲಿ ಧೋನಿ ನಾಯಕತ್ವದಲ್ಲಿ 14 ಪಂದ್ಯಗಳ ಪೈಕಿ 5 ಪಂದ್ಯಗಳನ್ನಷ್ಟೇ ಗೆದ್ದು 7ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಇದಕ್ಕೆ ಕುಪಿತರಾಗಿದ್ದ ಸಂಜಯ್ ಗೋಯೆಂಕಾ, ಧೋನಿಯನ್ನ ನಾಯಕತ್ವದ ಪಟ್ಟದಿಂದಲೇ ಕೆಳಗಿಳಿಸಿ ಸ್ಟೀವ್ ಸ್ಮಿತ್ಗೆ ನಾಯಕನ ಪಟ್ಟ ಕಟ್ಟಿತ್ತು. ಇದೀಗ ಲಕ್ನೋ ಫ್ರಾಂಚೈಸಿ ಮಾಲೀಕ ಅಂದು ತಾಳಿದ ನಿಲುವನ್ನೇ ರಾಹುಲ್ ವಿಚಾರ ತಾಳುತ್ತಾರಾ ? ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕನ್ನಡಿಗನಿಗೂ ನಾಯಕತ್ವದಿಂದ ನೀಡ್ತಾರಾ ಕೊಕ್..?
ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಮಾಲೀಕ ಗರಂ
ಕೆ.ಎಲ್.ರಾಹುಲ್ಗೆ ಸಂಜೀವ್ ಗೋಯೆಂಕಾ ತರಾಟೆ
ಐಪಿಎಲ್ ಹಿಸ್ಟರಿಯಲ್ಲೇ ಲಕ್ನೋ ಹೀನಾಯ ಸೋಲು ಕಂಡಿದೆ. ಈ ಹೀನಾಯ ಸೋಲಿಗೆ ಭಾರೀ ದಂಡವನ್ನೇ ತೆತ್ತಿದೆ. ಇದೇ ಸೋಲು ಲಕ್ನೋ ತಂಡದ ಮಾಲೀಕ ಹಾಗೂ ನಾಯಕ ನಡುವಿನ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ.. ಮಾಲೀಕರ ನಡೆ ಭಾರೀ ವಿವಾದಕ್ಕೂ ಕಾರಣವಾಗಿದೆ.
ಕ್ರಿಕೆಟ್.. ಜಂಟಲ್ಮನ್ ಗೇಮ್.. ಈ ಜಂಟಲ್ಮನ್ ಗೇಮ್ನಲ್ಲಿ ಸೋಲು ಹಾಗೂ ಗೆಲುವು ಕಾಮನ್. ಆದ್ರೆ, ಸೋಲು, ಗೆಲುವುಗಳನ್ನ ಸಮನಾಗಿ ಸ್ವೀಕರಿಸುವುದೇ ಆಟಗಾರನ ಲಕ್ಷಣ.. ಸೋತಾಕ್ಷಣ ಕುಗ್ಗುವುದು. ಗೆದ್ದಾಗ ಹಿಗ್ಗುವುದು ಆಟಗಾರನ ಏಳ್ಗೆಗೆ ಒಳಿತಲ್ಲ. ಆದ್ರೆ, ಒಂದೇ ಒಂದು ಹೀನಾಯ ಸೋಲು ಲಕ್ನೋ ಮಾಲೀಕನ ನಿಜಬಣ್ಣ ಬಯಲಾಗಿಸಿದೆ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!
ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 10 ವಿಕೆಟ್ಗಳ ಹೀನಾಯ ಸೋಲು ಕಾಣ್ತು. ಇದರೊಂದಿಗೆ ಲಕ್ನೋ ಪ್ಲೇ ಆಫ್ ಹಾದಿಯೂ ದುರ್ಗಮವಾಗಿದೆ. ಇದೇ ವಿಚಾರ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾರ ಪಿತ್ತ ನೆತ್ತಿಗೇರಿಸಿದೆ.
ಕೆ.ಎಲ್.ರಾಹುಲ್ಗೆ ಸಂಜೀವ್ ಗೋಯೆಂಕಾ ತರಾಟೆ
ಸನ್ ರೈಸರ್ಸ್ ಎದುರಿನ ಪಂದ್ಯ ಲಕ್ನೋ ಪಾಲಿಗೆ ಮಹತ್ವದ್ದಾಗಿತ್ತು. ಆದ್ರೆ, ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಲಕ್ನೋ, ಕನಿಷ್ಠ ಪಕ್ಷ ಪ್ರತಿರೋಧವನ್ನು ತೋರದೆ ಶರಣಾಯ್ತು. 9.4 ಓವರ್ಗಳಲ್ಲೇ ಸೋಲು ಒಪ್ಪಿಕೊಳ್ಳುವ ಮೂಲಕ ಹೀನಾಯ ದಾಖಲೆ ಬರೆಯಿತು. ಆದ್ರೆ, ಲಕ್ನೋ ತಂಡದ ಈ ಸೋಲು ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:KL ರಾಹುಲ್ ಕ್ಯಾಪ್ಟನ್ಸಿಗೆ ಕೊಕ್ ನೀಡುವ ಬಗ್ಗೆ ಮೌನ ಮುರಿದ LSG ಮ್ಯಾನೇಜ್ಮೆಂಟ್..!
ಪಂದ್ಯದ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಕೆ.ಎಲ್.ರಾಹುಲ್, ಮಾಲೀಕ ಸಂಜೀವ್ ಗೋಯೆಂಕಾರನ್ನ ಭೇಟಿಯಾದರು. ಈ ವೇಳೆ ಸಾರ್ವಜನಿಕವಾಗೇ ಕೆ.ಎಲ್.ರಾಹುಲ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆನ್ಫೀಲ್ಡ್ನಲ್ಲಾದ ತಪ್ಪುಗಳ ಬಗ್ಗೆ ಕಿಡಿಕಾರಿದ್ದಾರೆ. ಕನ್ನಡಿಗನ ಮಾತನ್ನು ಕೇಳಿಸಿಕೊಳ್ಳುವ ಸಂಯಮ ತೋರದ ಗೋಯೆಂಕಾ, ಏರುಧ್ವನಿಯಲ್ಲೇ ರಾಹುಲ್ನ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೆಲ ಕಾಮೆಂಟೇಟರ್ಗಳು ಪ್ರತಿಕ್ರಿಯೆ ನೀಡಿದ್ದಾರೆ.
ಚರ್ಚೆ ಆರೋಗ್ಯಕವಾಗಿರಬೇಕು..!
ಚರ್ಚೆಗಳು ಯಾವಾಗಲೂ ಆರೋಗ್ಯಕರವಾಗಿರುತ್ತವೆ. ಆದರೆ, ಅದು ಖಾಸಗಿ ಸ್ಥಳದಲ್ಲಿ ನಡೆದರೆ ಉತ್ತಮವಾಗಿರುತ್ತೆ-ಎಸ್.ಬದ್ರಿನಾಥ್, ಮಾಜಿ ಕ್ರಿಕೆಟರ್
LSG ತೊರೆದು RCB ಸೇರುವಂತೆ ಫ್ಯಾನ್ಸ್ ಮನವಿ
ಕೆ.ಎಲ್.ರಾಹುಲ್ ಜೊತೆ ಸಂಜೀವ್ ಗೋಯೆಂಕಾ ನಡೆದುಕೊಂಡ ವರ್ತನೆ ಬಗ್ಗೆ ಫ್ಯಾನ್ಸ್ ಕಿಡಿಕಾರಿದ್ದಾರೆ. ಕ್ರಿಕೆಟ್ನ ಗಂಧಗಾಳಿಯೇ ಗೊತ್ತಿಲ್ಲದ ಗೋಯೆಂಕಾ, ತಂಡದ ಮಾಲೀಕನಾಗಲು ಅರ್ಹನಲ್ಲ ಎಂದು ಕಿಡಿಕಾರಿದ್ದಾರೆ. ನಾಯಕನ ಮೇಲೆ ಕೂಗಾಡೋದು ಸರಿಯಲ್ಲ ಎಂದಿರುವ ಅಭಿಮಾನಿಗಳು, ಡ್ರೆಸ್ಸಿಂಗ್ ರೂಮ್ನಲ್ಲಿ ಚರ್ಚಿಸಿದ್ದರೆ, ನಿಮಗೊಂದು ಘನತೆ ಇರುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ.! ಮೆಗಾ ಹರಾಜಿನ ವೇಳೆ ತಂಡವನ್ನ ತೊರೆಯುವಂತೆ ಕೆ.ಎಲ್.ರಾಹುಲ್ಗೆ ಸಲಹೆ ನೀಡಿರುವ ಫ್ಯಾನ್ಸ್, ಆರ್ಸಿಬಿಗೆ ಬರುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಧೋನಿಯಂತೆಯೇ ಆಗುತ್ತಾ ಕೆ.ಎಲ್.ರಾಹುಲ್ ಹಣೆಬರಹ..?
2016ರ ಐಪಿಎಲ್ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದ ಮಾಲೀಕರಾಗಿದ್ದ ಸಂಜಯ್ ಗೋಯೆಂಕಾ, 2017ರಲ್ಲಿ ಧೋನಿಯನ್ನ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿದ್ರು. ಇದಕ್ಕೆ ಕಾರಣ 2016ರಲ್ಲಿ ರೈಸಿಂಗ್ ಪುಣೆ ನೀಡಿದ್ದ ಪರ್ಪಾಮೆನ್ಸ್ ಆಗಿತ್ತು. 2016ರಲ್ಲಿ ಧೋನಿ ನಾಯಕತ್ವದಲ್ಲಿ 14 ಪಂದ್ಯಗಳ ಪೈಕಿ 5 ಪಂದ್ಯಗಳನ್ನಷ್ಟೇ ಗೆದ್ದು 7ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಇದಕ್ಕೆ ಕುಪಿತರಾಗಿದ್ದ ಸಂಜಯ್ ಗೋಯೆಂಕಾ, ಧೋನಿಯನ್ನ ನಾಯಕತ್ವದ ಪಟ್ಟದಿಂದಲೇ ಕೆಳಗಿಳಿಸಿ ಸ್ಟೀವ್ ಸ್ಮಿತ್ಗೆ ನಾಯಕನ ಪಟ್ಟ ಕಟ್ಟಿತ್ತು. ಇದೀಗ ಲಕ್ನೋ ಫ್ರಾಂಚೈಸಿ ಮಾಲೀಕ ಅಂದು ತಾಳಿದ ನಿಲುವನ್ನೇ ರಾಹುಲ್ ವಿಚಾರ ತಾಳುತ್ತಾರಾ ? ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್